ಹೊಳೆಗೆ ಬಿದ್ದ ವಿದ್ಯುತ್ ತಂತಿ ಮರುಜೋಡಣೆ – ಪುತ್ತೂರಿನಲ್ಲಿ ಮೆಸ್ಕಾಂ ಸಿಬ್ಬಂದಿಯ ಸಾಹಸಮಯ ಕರ್ತವ್ಯ

ಪುತ್ತೂರು: ಹೊಳೆಗೆ ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮೆಸ್ಕಾಂ ಲೈನ್‌ಮ್ಯಾನ್‌ವೊಬ್ಬರು ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಈಜಿ ತೆರಳಿ ಮರುಜೋಡಿಸಿದ ಸಾಹಸಮಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬೆಟ್ಟಂಪಾಡಿಯ ಧೂಮಡ್ಕದಲ್ಲಿ ನಡೆದಿದೆ.

ಧೂಮಡ್ಕದಲ್ಲಿ ಹರಿಯುವ ಸೀರೆ ಹೊಳೆಗೆ ವಿದ್ಯುತ್ ತಂತಿ ಬಿದ್ದಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಟ್ಟಂಪಾಡಿ ಮೆಸ್ಕಾಂ ಸಿಬ್ಬಂದಿ ಬಂದೇ ನವಾಜ್ ಅವರು, ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಈಜಿ ತೆರಳಿ ವಿದ್ಯುತ್ ತಂತಿಯನ್ನು ಮರುಜೋಡಿಸಿದ್ದಾರೆ.

ಸಾಹಸಮಯವಾಗಿ ಕರ್ತವ್ಯ ನಿರ್ವಹಿಸಿದ ಲೈನ್‌ಮ್ಯಾನ್‌ ಅವರ ಕರ್ತವ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

SHARE
Loading spinner

One thought on “ಹೊಳೆಗೆ ಬಿದ್ದ ವಿದ್ಯುತ್ ತಂತಿ ಮರುಜೋಡಣೆ – ಪುತ್ತೂರಿನಲ್ಲಿ ಮೆಸ್ಕಾಂ ಸಿಬ್ಬಂದಿಯ ಸಾಹಸಮಯ ಕರ್ತವ್ಯ

Leave a Reply

Your email address will not be published. Required fields are marked *

error: Content is protected !!