ಮಂಜೇಶ್ವರ: ಜನಪ್ರತಿನಿಧಿಗಳ ತರ್ಕಕ್ಕೆ ಬಲಿಯಾಯಿತೇ ಚೌಕಿ ರಸ್ತೆ? 15 ವರ್ಷಗಳಿಂದ ದುರಸ್ತಿಯಾಗದ ರಸ್ತೆಗೆ ಮುಕ್ತಿ ಯಾವಾಗ?

​ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿನ 8 ಹಾಗೂ 9ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಬರುವ ಚೌಕಿ ಪ್ರದೇಶದ ಸುಮಾರು 400 ಮೀಟರ್ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ಸಂಕಷ್ಟ ತಂದೊಡ್ಡಿದೆ.

​ಈ ರಸ್ತೆಯ ದುರಸ್ಥಿ ಕಾಣದಿರಲು ಎರಡೂ ವಾರ್ಡ್‌ಗಳ ಜನಪ್ರತಿನಿಧಿಗಳ ಉದಾಸೀನತೆಯೇ ಪ್ರಮುಖ ಕಾರಣ ಎಂಬ ಆರೋಪ ಕೇಳಿಬಂದಿದೆ. “ನಮ್ಮ ವಾರ್ಡ್‌ಗೆ ಸೇರುವುದಿಲ್ಲ, ಅವರ ವಾರ್ಡ್‌ಗೆ ಸೇರಿದ್ದು” ಎಂಬ ನೆಪ ಹೇಳಿಕೊಂಡು ಜಾರಿಕೊಳ್ಳುತ್ತಿರುವುದರಿಂದ ಕಳೆದ 15 ವರ್ಷಗಳಿಂದ ಈ ರಸ್ತೆಗೆ ಕಾಯಕಲ್ಪ ಸಿಕ್ಕಿಲ್ಲ.

ಸುತ್ತಮುತ್ತಲಿನ ಸಂಪರ್ಕ ರಸ್ತೆಗಳು ಕಾಂಕ್ರೀಟೀಕರಣಗೊಂಡು ಸುಸಜ್ಜಿತವಾಗಿದ್ದರೂ, ಈ 400 ಮೀಟರ್ ರಸ್ತೆ ಮಾತ್ರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಡೆಗಣನೆಗೆ ಒಳಗಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.


​ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಉದ್ಯೋಗಿಗಳು, ವೃದ್ಧರು ಹಾಗೂ ಗರ್ಭಿಣಿಯರು ಪ್ರತಿದಿನ ಹೊಂಡ-ಗುಂಡಿ ಬಿದ್ದ ಈ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಸ್ಥಿತಿ ಇದೆ.

​ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯ ದುಸ್ಥಿತಿ ಕಂಡು ಆಟೋ ರಿಕ್ಷಾ ಹಾಗೂ ಆಂಬ್ಯುಲೆನ್ಸ್ ಚಾಲಕರು ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

​ತುರ್ತು ಸಂದರ್ಭದಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಸಿಗದೆ ಚೌಕಿ ನಿವಾಸಿಗಳು ಹೈರಾಣಾಗಿದ್ದಾರೆ.

ಸಂಬಂಧಪಟ್ಟ ಗ್ರಾಮ ಪಂಚಾಯತ್ ಆಡಳಿತ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

SHARE
Loading spinner

One thought on “ಮಂಜೇಶ್ವರ: ಜನಪ್ರತಿನಿಧಿಗಳ ತರ್ಕಕ್ಕೆ ಬಲಿಯಾಯಿತೇ ಚೌಕಿ ರಸ್ತೆ? 15 ವರ್ಷಗಳಿಂದ ದುರಸ್ತಿಯಾಗದ ರಸ್ತೆಗೆ ಮುಕ್ತಿ ಯಾವಾಗ?

Leave a Reply

Your email address will not be published. Required fields are marked *

error: Content is protected !!