ಮಂಜೇಶ್ವರ: ಸ್ಥಳೀಯಡಳಿತ ಚುನಾವಣೆ ಬಿಜೆಪಿ ಯ ಶಕ್ತಿ ಯನ್ನು ಕೇರಳದಲ್ಲಿ ಅನಾವರಣ ಮಾಡಲಿದೆ.
ಕಾಂಗ್ರೆಸ್ ಇಂದು ಮುಸ್ಲಿಂ ಜಿಹಾದಿಗಳ ಹಿಡಿತದಲ್ಲಿದೆ, ಪಿನರಾಯಿ ಸರಕಾರ ಶಬರಿಮಲೆ ಅಯ್ಯಪ್ಪ ಸ್ವಾಮಿಯನ್ನೇ ದೋಚಿದೆ.
ಸ್ಥಳೀಯ ಅಭಿವೃದ್ಧಿ ಗೆ ಪಿನರಾಯಿ ಸರಕಾರ ಹಿಂದೇಟು ಹಾಕುತ್ತಿದೆ.ಚುನಾವಣೆ ಸಂದರ್ಭದಲ್ಲಿ ಪಂಚಾಯತ್ ಹಾಗೂ ಬ್ಲಾಕ್ ಪಂಚಾಯತ್ ಅಧಿಕಾರಿಗಳನ್ನು ಬದಲಾಯಿಸಿ ಸ್ಥಳೀಯಡಳಿತ ದಲ್ಲಿ ತ್ವರಿತ ವಾಗಿ ಆಗಬೇಕಾದರೆ ಕಾಮಗಾರಿ, ಕೆಲಸ ಗಳನ್ನು ಉದ್ದೇಶ ಪೂರ್ವಕ ತಡೆ ಹಿಡಿಯುತಿದೆ.ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಅಬ್ದುಲ್ಲ ಕುಟ್ಟಿ ಹೇಳಿದರು.
.ಪ್ರಧಾನಿಗಳ ಮನ್ ಕೀ ಬಾತ್ ಕಾರ್ಯಕ್ರಮ ಮಂಜೇಶ್ವರ ಪಂಚಾಯತ್ ಬೂತ್ 8 ಕುಂಜತೂರು ನಲ್ಲಿ ವೀಕ್ಷಿಸಿ ಕಾರ್ಯಕರ್ತರು ಗಳನ್ನು ಉದ್ದೇಶೀಶಿಸಿ ಮಾತನಾಡಿದರು..ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ,ಮುಖಂಡರಾದ ಹರಿಶ್ಚಂದ್ರ ಎಂ, ಯಾದವ ಬಡಾಜೆ ರಾಜೇಶ್ ಮಜಲು, ಗೋಪಾಲ್ ಶೆಟ್ಟಿ ಅರಿಬೈಲು, ರಾಕೇಶ್ ಕೆ ಪಿ,ಮೊದಲದವರು ನೇತೃತ್ವ ನೀಡಿದರು. ಲತೀಶ್ ಕುಚ್ಚಿಕಾಡ್ ಸ್ವಾಗತಿಸಿ ವಂದಿಸಿದರು.