ನಾಗರಕಟ್ಟೆ ಯಲ್ಲಿನ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ, ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕಕ್ಕೆ ಪ್ರಾರ್ಥನಾ ಮಂಟಪ ಲೋಕಾರ್ಪಣೆ … !

ಕಾಸರಗೋಡು ಕೋಟೆಯ ಪೂರ್ವ ಭಾಗದಲ್ಲಿ ಸ್ಥಿತಿ ಗೊಂಡಿರುವ ನಾಗರಕಟ್ಟೆ ಯಲ್ಲಿನ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ, ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕಕ್ಕೆ ಪ್ರಾರ್ಥನಾ ಮಂಟಪ ನಿರ್ಮಿಸಿ ಸಮರ್ಪಿಸಲಾಯಿತು. ಕನ್ನಡ ಭವನದ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್, ಸನತ್ ಕುಮಾರ್ ಬಿ. ಇ. ಕಾರ್ತಿಕ್ ಕಾಸರಗೋಡು ಬಿ. ಇ. ಇವರ ಆರ್ಥಿಕ ವಿನಿಯೋಗದಲ್ಲಿ ಪ್ರಾರ್ಥನಾ ಮಂಟಪ ಅತೀ ಸುಂದರ, ಭವ್ಯವಾಗಿ ಮೂಡಿ ಬಂದಿದೆ. ಎಡನೀರು ಮಠ ಅದೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ದೀಪ ಬೆಳಗಿಸಿ ಧ್ಯಾನ ಮಂಟಪ ಉದ್ಘಾಟಿಸಿದರು.

ಭಿಕ್ಷು ಅಮೃತ ಶಿಲಾ ಪ್ರತಿಮೆಗೆ ತುಳಸೀ ಹಾರಾರ್ಪಣೆ ಮಾಡಿದ ಶ್ರೀಗಳು, ಭಿಕ್ಷು ಸ್ಥಾಪಿತ ಶ್ರೀ ಶಾರದಾ ಭಜನಾಶ್ರಮದ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ನಾಗರಕಟ್ಟೆ ಇವರೀಗೆ ಕಟ್ಟಡದ ಚಿತ್ರ ಫಲಕ ನೀಡಿ ಪ್ರಾರ್ಥನಾ ಮಂಟಪ ಹಾಸ್ತಾಂತರಿಸಿದರು. ಡಾ. ವಾಮನ್ ರಾವ್ ಬೇಕಲ್ ಅದ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು ಕನ್ನಡ ಭವನದ ಪದಾಧಿಕಾರಿಗಳಾದ ಸಂದ್ಯಾ ರಾಣಿ ಟೀಚರ್, ಪ್ರಾಂಶುಪಾಲ ರಾಜೇಶ್ ಚಂದ್ರ ಕೆ. ಪಿ. ಡಾ. ಎಚ್ ಪ್ರಭಾಕರ್, ಡಾ. ರವೀಂದ್ರ ಜೆಪ್ಪು. ರೇಖಾ ಸುದೇಶ್ ರಾವ್ ಮಂಗಳೂರು, ಪ್ರದೀಪ್ ನಾಯ್ಕ್, ನವೀನ್ ನಾಯ್ಕ್, ನಾಗರಕಟ್ಟೆ, ಹಾಗೂ ದೇವಸ್ಥಾನ ಸಮಿತಿಯ ಲಕ್ಷ್ಮಣ ಬೀರಂತಬಯಲ್, ನಿರಂಜನ್ ಕೊರಕೋಡು, ಪ್ರದಾನ ಕಾರ್ಯದರ್ಶಿ ದಿನೇಶ್ ನಾಗರಕಟ್ಟೆ, ಮೋಹನ್ ದಾಸ್, ರೋಹಿತಾಕ್ಷ, ಪ್ರಕಾಶ್ ಚಂದ್ರ ಉಳ್ಳಾಲ ರಾಜ್ ಕುಮಾರ್ ನಾಗರಕಟ್ಟೆ ಉದಯ, ವಿನೋದ್ ನಾಗರಕಟ್ಟೆ ಮುಂತಾದವರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!