ಸೃಜನಶೀಲತೆಯ ಸಾರ್ಥಕ ಪಥ: ಶ್ರೀನಿವಾಸ ಪೆರಿಕ್ಕಾನರ ಕಲಾ ಜೀವನಯಾನ
(”+ಸೃಷ್ಟಿಯ ಮೌನಕ್ಕೆ ಕಲೆಯ ಭಾಷೆ ನೀಡುವ ಮಾಂತ್ರಿಕ…”)ನಿಸರ್ಗದ ಮಡಿಲಲ್ಲಿ ಮನುಷ್ಯ ಜನ್ಮವು ಇತರ ಜೀವಿಗಳಿಗಿಂತ ಭಿನ್ನವಾಗಿ ನಿಲ್ಲುವುದು ಅವನಲ್ಲಿರುವ ‘ಸೃಜನಶೀಲತೆ’ ಎಂಬ ದಿವ್ಯ ಚೈತನ್ಯದಿಂದಾಗಿ. ಬದುಕಿನ ಸುದೀರ್ಘ ಪಯಣದಲ್ಲಿ ವಾಸ್ತವವನ್ನು ಕೇವಲ ಕಣ್ಣಿನಿಂದ ಸವಿಯದೇ, ಅಂತರಂಗದ ದಿವ್ಯ ಚಕ್ಷುವಿನಿಂದ ಕಂಡು, ಸಹಜತೆಯ ಆಳಕ್ಕಿಳಿದು ಹೊಸತನ್ನು ಅನ್ವೇಷಿಸುವ ಅಪರೂಪದ ವ್ಯಕ್ತಿತ್ವ ಶ್ರೀನಿವಾಸ ಪೆರಿಕ್ಕಾನ ಅವರದ್ದು. ಅವರು ಯಶಸ್ಸನ್ನು ಅರಸಿ ಹೋದ ಹರಿಕಾರನಲ್ಲ; ಬದಲಾಗಿ ಅವರ ಕರ್ತೃತ್ವ ಶಕ್ತಿಯೇ ಕಾಲದ ಕರೆಗೆ ಓಗೊಟ್ಟು, ಎದುರಾದ ಸವಾಲುಗಳನ್ನೇ ಸುಂದರ ಕಲಾತ್ಮಕ ಅವಕಾಶಗಳನ್ನಾಗಿ…