Avatar

NAMMA MEDIA 24X7

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ

ಪುತ್ತೂರು: ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿಗೆ ಗಡಿಪಾರು ಆದೇಶ ಜಾರಿಗೊಳಿಸಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ i ಅವರಿಗೆ ಹೈ ಕೋರ್ಟ್ ಒಫ್ ಕರ್ನಾಟಕ ಆದೇಶದಂತೆ ಆರು ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿದೆ. ಈ ಕುರಿತು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಆದೇಶ ಹೊರಡಿಸಿದ್ದು, ಗಡಿಪಾರು ಅವಧಿ ಮಾರ್ಚ್ 16ರಿಂದ ಸೆಪ್ಟೆಂಬರ್ 16ರವರೆಗೆ ಜಾರಿಯಲ್ಲಿರಲಿದೆ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ…

Read More

ಉಡುಪಿ ಕಟಪಾಡಿ ಹೆದ್ದಾರಿಯಲ್ಲಿ ಮಗುಚಿದ ಗ್ಯಾಸ್ ಟ್ಯಾಂಕರ್ ತೆರವು: 16 ಗಂಟೆಗಳ ಕಾರ್ಯಾಚರಣೆಯ ಬಳಿಕ ಸಂಚಾರ ಪುನರಾರಂಭ

ಉಡುಪಿ: ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿಬಿದ್ದ ಗ್ಯಾಸ್ ಟ್ಯಾಂಕರ್ ಅನ್ನು ಸತತ 16 ಗಂಟೆಗಳ ಕಾರ್ಯಾಚರಣೆಯ ಮೂಲಕ ಅಧಿಕಾರಿಗಳು ಯಶಸ್ವಿಯಾಗಿ ತೆರವುಗೊಳಿಸಿದರು. ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಪುನರಾರಂಭಿಸಲಾಯಿತು. ಟ್ಯಾಂಕರ್ ಮಗುಚಿದ ಸಂದರ್ಭದಲ್ಲಿ ಎಲ್‌ಪಿಜಿ ಅನಿಲ ಸೋರಿಕೆ ಸಂಭವಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಕಾರ್ಯಾಚರಣೆಯ ಭಾಗವಾಗಿ ಮಂಗಳೂರಿನಿಂದ ಭಾರತ್ ಗ್ಯಾಸ್‌ನ…

Read More

ದೇವರಿಗಿಲ್ಲ ಗುರು-ದಕ್ಷಿಣೆ:ಆದರೂ ಬರುವರಲ್ಲ ಪ್ರದಕ್ಷಿಣೆ….

ಓಂ ಶ್ರೀ ಸಾಯಿರಾಂ “ಜ್ಞಾನಭಂಡಾರದಲಿ ವಜ್ರವ,ಮುತ್ತುರತ್ನವ ಪೋಣಿಸಿದ ಅಕ್ಷರಧಾರೆ ಪರಿಚಯಿಸಿದ ಗುರುಗಳು,ಸಹಾನುಭೂತಿಯ ದ್ಯೋತಕ, ನಿಷ್ಟೆಯಿಂದ ತನ್ನ ಕಾರ್ಯವನ್ನು ಸಫಲತೆಯ ಕಡೆಗೆ ಸಾಗಿಸುವ ಪ್ರಯತ್ನ,ಶ್ರಮಿಸಿದರೆ ಯಾವ ಕಾರ್ಯವೂ ಕಠಿಣವಲ್ಲ ಎಂದು ಮನದಟ್ಟು ಮಾಡುವ ಯುವ ಹುಮ್ಮಸ್ಸು,ಸಹೃದಯಿ,ಮನುಷ್ಯ ಸ್ವಭಾವದ ಮನಸ್ಸಿಗೆ ನಿಮ್ಮ ಸೇವಾಮನೋಭಾವ ವೇ ಮಾದರಿ. ಸತತ ಪರಿಶ್ರಮ ದ ಉತ್ತುಂಗ ಆಲೋಚನೆಯ ನಿಮ್ಮ ವಿದ್ಯಾಕ್ಷೇತ್ರದ ಸೇವೆ ಅಪಾರ. ನಿಮ್ಮ ಕಠಿಣ ಪರಿಶ್ರಮದ ರೀತಿನೀತಿ ಅನುಸರಿಸಿದರೆ ವಿದ್ಯಾರ್ಥಿ ಜೀವನದಲ್ಲೂ ಉನ್ನತಿಯ ಸ್ಥಾನ ಅಲಂಕರಿಸಬಲ್ಲ ಎಂದರೆ ಸಂಶಯವಿಲ್ಲ.ನಿಮ್ಮ ಜೊತೆ ಸೇವೆ ಮಾಡಿದ…

Read More

ರೋಟರಿ ವಂದನಾ ಪ್ರಶಸ್ತಿಗೆ ಹಸಿರು ಕ್ರಾಂತಿಕಾರ ” ಡಾ. ಆರ್. ಕೆ. ನಾಯರ್” ಆಯ್ಕೆ

ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 21 ರಂದು ಸಂಜೆ 07.30 ರಿಂದ ರಾಜ್ಯ ಮಟ್ಟದ “ವಂದನಾ ಪ್ರಶಸ್ತಿ – 2026″ ನಗರದ ಹೊಟೇಲ್ ಸೀ ವ್ಯೂವ್‌ನ ಸಭಾಂಗಣದಲ್ಲಿ ನಡೆಯಲಿದ್ದುಪ್ರಶಸ್ತಿಯನ್ನು ಈ ಬಾರಿ ಹಸಿರು ಕ್ರಾಂತಿಕಾರ ಡಾ. ಆರ್. ಕೆ. ನಾಯರ್ ಅವರಿಗೆ ನೀಡಲಾಗುವುದೆಂದು ರೋಟರಿ ಸಂಸ್ಥೆಯ ಅಧ್ಯಕ್ಷ, ರೋ। ಭಾಸ್ಕರ್ ರೈ ಕಟ್ಟಾ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ…

Read More

ಬೆಳಿಂಜದಲ್ಲಿ ಕಿನ್ನಿಮಾಣಿ ಯುವಕೇಂದ್ರದ 44ನೇ ವಾರ್ಷಿಕೋತ್ಸವ: ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು

ಬೆಳಿಂಜ: ಶ್ರೀ ಪೂಮಾಣಿ ಕಿನ್ನಿಮಾಣಿ ಯುವಕೇಂದ್ರದ 44ನೇ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಬೆಳಂಜ ಕಿನ್ನಿಗೋಳಿ ಮಾಡದ ಜಾತ್ರೋತ್ಸವದ ಸುಸಂದರ್ಭದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾರ್ಚ್ 22 ಮತ್ತು 23ರಂದು ಆಯೋಜಿಸಲಾಗಿದೆ. ಮಾರ್ಚ್ 22, ಭಾನುವಾರ ಬೆಳಿಗ್ಗೆ 8.30ಕ್ಕೆ ದೀಪಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಬಳಿಕ ಬೆಳಿಗ್ಗೆ 9 ಗಂಟೆಯಿಂದ ಶ್ರೀ ಮಹಾವಿಷ್ಣು ಭಜನಾ ಸಂಘ, ಆಲಿಂಜ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭವಾಗಲಿದ್ದು, ಮಧ್ಯಾಹ್ನ…

Read More

ಪುರಾಣ ಪ್ರಸಿದ್ಧ ಕಳವಾರು ಶ್ರೀ ಬೆಂಕಿನಾಥೇಶ್ವರ ಕ್ಷೇತ್ರದಲ್ಲಿ ಮಾರ್ಚ್ 20ರಿಂದ 29ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ

ಪುರಾಣ ಪ್ರಸಿದ್ಧ ಕಳವಾರು ಶ್ರೀ ಬೆಂಕಿನಾಥೇಶ್ವರ ಕ್ಷೇತ್ರದಲ್ಲಿ ಮಾರ್ಚ್ 20ರಿಂದ 29ರ ವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಾಲಯದಲ್ಲಿ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಗಳು ನಡೆಯಲಿದ್ದು. ಮಾರ್ಚ್ 27 ಶುಕ್ರವಾರದಂದು ಬೆಳಿಗ್ಗೆ ಗಂಟೆ 10-51ಕ್ಕೆ ಒದಗುವ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ಎಡಪದವು ರಾಧಾಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಬೆಂಕಿನಾಥೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಬಿ.ರವೀಂದ್ರ ರಾವ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,…

Read More

ಮಂಜೇಶ್ವರದಲ್ಲಿ ಲೈಲತುಲ್ ಖದ್ರ್ ಆಚರಣೆ – ಮಸೀದಿಗಳಲ್ಲಿ ಭಕ್ತರ ಸಾಗರ

ಮಂಜೇಶ್ವರ: ಪವಿತ್ರ ರಂಜಾನ್ ಮಾಸದ 27ನೇ ರಾತ್ರಿಯಾದ ‘ಲೈಲತುಲ್ ಖದ್ರ್’ ಸಂದರ್ಭದಲ್ಲಿ ಮಂಜೇಶ್ವರದ ವಿವಿಧ ಮಸೀದಿಗಳಲ್ಲಿ ಭಕ್ತಿಭಾವದಿಂದ ಕೂಡಿದ ವಿಶೇಷ ಪ್ರಾರ್ಥನಾ ಸಭೆಗಳು ಮತ್ತು ಧಾರ್ಮಿಕ ಪ್ರಭಾಷಣಗಳು ನಡೆದವು. ಸಾವಿರ ತಿಂಗಳುಗಳಿಗಿಂತಲೂ ಶ್ರೇಷ್ಠವೆಂದು ಪರಿಗಣಿಸಲ್ಪಡುವ ಈ ರಾತ್ರಿಯ ಪುಣ್ಯವನ್ನು ಅರಸಿ ಸಾವಿರಾರು ವಿಶ್ವಾಸಿಗಳು ಮಸೀದಿಗಳಲ್ಲಿ ಜಮಾಯಿಸಿದ್ದರು. ​ಕುಂಜತ್ತೂರು ತೂಮಿನಾಡು ಮಸ್ಜಿದ್ ನೂರ್‌ನಲ್ಲಿ ನಡೆದ ವಿಶೇಷ ಸಮಾರಂಭವು ಭಕ್ತರ ಗಮನ ಸೆಳೆಯಿತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಹಿರಿಯ ವಿದ್ವಾಂಸರಾದ ಕೆ.ಟಿ. ಸಿರಾಜ್ ಅವರು ಆಗಮಿಸಿದ್ದರು.ಕೆ.ಟಿ. ಸಿರಾಜ್ ಅವರು…

Read More

ಮಾರ್ಚ್ 24ರಂದು ಶ್ರೀ ಉಳ್ಳಾಲ್ತಿ ನಾಗಬ್ರಹ್ಮ ಕಾಳಿಚಾಮುಂಡಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಹೇರೂರು: ಶ್ರೀ ಉಳ್ಳಾಲ್ತಿ ನಾಗಬ್ರಹ್ಮ ಕಾಳಿಚಾಮುಂಡಿ ದೈವಸ್ಥಾನ ಹೇರೂರು ಇಲ್ಲಿ ನಾಗದೇವರ ಪ್ರತಿಷ್ಠಾ ದಿನಾಚರಣೆ ಹಾಗೂ ನಾಗತಂಬಿಲ ಸೇವೆ ಮತ್ತು ವರ್ಷಾವಧಿ ನೇಮೋತ್ಸವವು ಭಕ್ತಿಭಾವದಿಂದ ಜರುಗಲಿದೆ.ಮಾರ್ಚ್ 24ರಂದು ಆರಂಭವಾಗುವ ಈ ಧಾರ್ಮಿಕ ಕಾರ್ಯಕ್ರಮವು ಮಾರ್ಚ್ 25ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿವರ್ಯರ ಉಪಸ್ಥಿತಿಯಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿವೆ.ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಹೋಮ, ನಾಗದೇವರಿಗೆ ನಾಗತಂಬಿಲ ಸೇವೆ, ಸಂಜೆ ಭಂಡಾರ ಏರಿಸುವುದು ಹಾಗೂ ವಿವಿಧ ದೈವಗಳ ನೇಮೋತ್ಸವಗಳು ನಡೆಯಲಿವೆ. ರಾತ್ರಿ ಉಳ್ಳಾಲ್ತಿ ದೈವ, ಬಿಲ್ಲಾರ,…

Read More

ಎಕ್ಸೈಸ್ ಚೆಕ್‌ಪೋಸ್ಟ್ ಬಳಿ ಸಾಮೂಹಿಕ ಇಫ್ತಾರ್ ಕೂಟ : ಐಕ್ಯತೆಗೆ ಸಂದೇಶ

ಉಪ್ಪಳ: ಹೊಸಂಗಡಿ ಎಕ್ಸೈಸ್ ಚೆಕ್‌ಪೋಸ್ಟ್ ಸಮೀಪ ಗೋಟ್ಸ್ ಎಫ್‌ಸಿ ಸಂಘಟನೆಯ ವತಿಯಿಂದ ಸಾಮೂಹಿಕ ಇಫ್ತಾರ್ ಕಾರ್ಯಕ್ರಮವನ್ನು ಭಕ್ತಿಪೂರ್ವಕವಾಗಿ ಹಾಗೂ ಸೌಹಾರ್ದತೆಯ ವಾತಾವರಣದಲ್ಲಿ ಆಯೋಜಿಸಲಾಯಿತು. ಪವಿತ್ರ ರಂಜಾನ್ ತಿಂಗಳ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಿ, ಪರಸ್ಪರ ಸೌಹಾರ್ದತೆಯನ್ನು ಬಲಪಡಿಸಿದರು. ಉಪವಾಸ ಮುರಿಯುವ ಮೊದಲು ಪ್ರಾರ್ಥನೆ ಸಲ್ಲಿಸಲಾಗಿದ್ದು, ನಂತರ ಎಲ್ಲರೂ ಒಂದೇ ಸ್ಥಳದಲ್ಲಿ ಕುಳಿತು ಇಫ್ತಾರ್ ಸ್ವೀಕರಿಸಿದರು. ಸಮಾಜದಲ್ಲಿ ಐಕ್ಯತೆ, ಶಾಂತಿ ಮತ್ತು ಪರಸ್ಪರ ವಿಶ್ವಾಸವನ್ನು ಕಾಪಾಡಿಕೊಳ್ಳಲು ಇಂತಹ…

Read More

ಜೀವನದಲ್ಲಿ ವ್ಯಾಯಾಮದ ಮಹತ್ವ

ಇಂದಿನ ಆಧುನಿಕ ಯುಗದಲ್ಲಿ ಮಾನವ ಜೀವನ ಬಹಳಷ್ಟು ಸುಲಭವಾಗಿರುವುದರಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಯಂತ್ರಾಧಾರಿತ ಜೀವನಶೈಲಿ, ಕಚೇರಿ ಕೆಲಸ, ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆ ಹೆಚ್ಚಾದ ಕಾರಣ ಬಹುತೇಕ ಜನರು ಕುಳಿತಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಿಂದೆ ಜನರು ತಮ್ಮ ದಿನನಿತ್ಯದ ಕೆಲಸಗಳ ಮೂಲಕವೇ ಸಾಕಷ್ಟು ದೈಹಿಕ ಚಟುವಟಿಕೆಗಳನ್ನು ಹೊಂದಿದ್ದರೆ, ಇಂದಿನ ಕಾಲದಲ್ಲಿ ಅದನ್ನು ಬದಲಿಸಲು ವ್ಯಾಯಾಮ ಅನಿವಾರ್ಯವಾಗಿದೆ. ಆರೋಗ್ಯಕರ ಜೀವನ ನಡೆಸಲು ಆಹಾರ ಮತ್ತು ವಿಶ್ರಾಂತಿ…

Read More
error: Content is protected !!