ಜಾನಪದ ಕಂಬಳ ಟೀಕೆ ಟಿಪ್ಪಣಿಗಳಿಗೆ ಮುನ್ನುಡಿಯನ್ನು ಬರೆಯದಿರಲಿ , ಇತಿಹಾಸದ “ಅಸ್ಮಿತೆಯನ್ನು” ಕಾಪಾಡುವಂತಾಗಲಿ… !
ಮಂಗಳೂರು: ಕಂಬಳ ಈ ನಾಡಿನ ಪರಂಪರಾಗತವಾದ ಜಾನಪದ ಕ್ರೀಡೆ . ಇದು ಕರಾವಳಿ ಜನರ ನಾಡಿಮಿಡಿತದ ಪ್ರತಿಧ್ವನಿ . ಇದರ ಆಚರಣೆಗೆ ಅದರದ್ದೇ ಆದ ನೀತಿ ನಿಯಮಗಳಿವೆ. ಇಂಥಹಾ ಪರಂಪರಾಗತ ಕಂಬಳದ ಉಳಿವಿಗಾಗಿ ಅದೆಷ್ಟೋ ತೌಳವ ನಾಡಿದ ಮಹನೀಯರು ಶ್ರಮವನ್ನು ಪಟ್ಟಿದ್ದಾರೆ . ಆ ಸಾಲಿನಲ್ಲಿ ಅಗ್ರಗಣ್ಯರು, ಕಂಬಳದ ಭೀಷ್ಮ ಖ್ಯಾತಿಯ ಗುಣಪಾಲ ಕಡಂಬರು ಕೂಡ ಒಬ್ಬರು ಎನ್ನುವ ಸಂಗತಿ ಸರ್ವರಲ್ಲಿಯೂ ಜಗತ್ ಜಾಹಿರ. ಇತ್ತೀಚಿಗೆ ನಡೆದ ಕೆಲವು ಘಟನೆಗಳು ಕಂಬಳದ ಆಚರಣೆಗೆ ಧಕ್ಕೆಯನ್ನು ತಂದಿತೇ ಎನ್ನುವ…