ನದಿಯಾಗಿ ಹರಿದು ಕಡಲು ಸೇರಲೇ ಇಲ್ಲ ನಮ್ಮೀ ಪ್ರೀತಿ

ನನ್ನ ನಿನ್ನ ಭೇಟಿ ಆಕಸ್ಮಿಕವೇ ಆದರೂ ಅದು ಸಂಬಂಧದಲ್ಲಿ ಕೊನೆಗೊಂಡಿದ್ದು ಮಾತ್ರ ವಿಪರ್ಯಾಸ. ಆಕಸ್ಮಿಕ ಭೇಟಿ ಮಾತಿನ ಮೂಲಕ ಮುಂದುವರಿದು, ಗೆಳೆತನ ಚಿಗುರೊಡೆಯಿತು. ಹೀಗೆ ನಮ್ಮ ನಡುವೆ ಬಾಂಧವ್ಯ ಬೆಳೆದದ್ದೇ ತಿಳಿಯಲಿಲ್ಲ. ಅಷ್ಟು ಬೇಗ ನಮ್ಮ ನಡುವೆ ಸಲುಗೆ ಹುಟ್ಟಿತು. ಆ ಮೊದಲ ಭೇಟಿಯ ಸವಿನೆನಪು ಮನಸ್ಸಿನಲ್ಲಿ ಇಂದಿಗೂ ಹಸಿರಾಗಿಯೇ ಉಳಿದಿದೆ. ಅಂದು ಮಳೆ ರಚ್ಚೆ ಹಿಡಿದಂತೆ ಸುರಿಯುತ್ತಿತ್ತು. ಮಳೆ ನಡುವೆಯೇ ಗಾಳಿ, ಚಳಿಯ ಮಧ್ಯೆಯೇ ನಿನ್ನ ಭೇಟಿ ಬೆಚ್ಚನೆಯ ಭಾವ ನೀಡಿತ್ತು. ನಮ್ಮ ನಡುವೆ ಮಾತು…

Read More

ಏಳ್ ಬೂಡುದ ಸತ್ಯ ಶ್ರೀ ವರ್ಣಾರ ಪಂಜುರ್ಲಿ ದೈವ 🙏

ಈ ದೈವವು ಬೆಳ್ಳಿ ಬಂಗಾರಕ್ಕೆ ಬಯಸಿದ ದೈವ 🙏 ಈ ದೈವಕ್ಕೆ ಆವರ ತೆಗೆದು ಕೊಳ್ಳುವವರೆಗೆ ಬಾಯಿ ಬರುವುದಿಲ್ಲ, ಅಬೂಬ ಅಬೂಬ ಅಂತ ಹೇಳುತ್ತದೆ, ಆವರದ ನಂತರ, ಪಟ್ಟದ ಆಯುಧ ಕೈಗೆತ್ತಿದ ಮೇಲೆ ಮಾತನಾಡುತ್ತದೆ 🙏 ಮಲಾರ್ ಬೂಡುವಿನಲ್ಲಿದ್ದ ಮಲಾರ ಪಂಜುರ್ಲಿ ದೈವವು ವರ್ಣಾರ ಬೂಡುಗೆ ದೃಷ್ಟಿ ಹಾಕುತ್ತದೆ ಅಲ್ಲಿಗೆ ಹೋಗಬೇಕೆಂದು ಜೋಗಿ ಪುರುಷನ ಒರುವಾಗುತ್ತದೆ 🙏 ವರ್ಣಾರ ಬೂಡುವಿನಲ್ಲಿ ಎತ್ತುಗಳು ಇಲ್ಲದ ಕಾರಣ, ಬೂಡು ಅರಸರು(ಬಳ್ಳಾಕ್ಲು )ವರ್ಣಾರ ಬೀಮು ಎಂಬವನನ್ನು ಸುಬ್ರಮಣ್ಯಕ್ಕೆ ಎತ್ತುಗಳನ್ನು ತರಲು ಕಳುಹಿಸುತ್ತಾರೆ…

Read More

ಪದಿನಾಜಿ ಅವತಾರದ ದೈವಶ್ರೀ ಕುಪ್ಪೆ ಪಂಜುರ್ಲಿ

ಬಡಕಾಯಿ ರಾಜ್ಯೋ, ಬಳ್ಳಾಲ್ ಗಂಗೆಡ್ , ಗಿರಿಟ್ ಗಿರಿಮುಟ್ಟು ಸ್ವಾಮಿ, ಗದ್ದಿಗೆಡ್ ಗದ್ದಿಗೆದ ಬಂಟೆ, ವರಾಹ ಮೂರ್ತಿ ದೈವ ಕುಪ್ಪೆ ಪಂಜುರ್ಲಿ 🙏 ಈ ದೈವಕ್ಕೆ ಹರಕೆ ಹೇಳಿದರೆ, ಕೋರ್ಟು ಕಚೇರಿ, ನ್ಯಾಯ ಕೂಟದ, ವಿಷಯಗಳು ಇದ್ದರೆ ಪರಿಹಾರ ಆಗುತ್ತದೆ ಎಂಬ ನಂಬಿಕೆ 🙏 ಕಾಡ್ ಕಪ್ಪಾನಗ, ಊರು ಬೊಲ್ಪಾನಗ, ಕಾಡ್ ಸೇರುವೆ ಪಂದ್ ಕಟ್ಟಿ ಕೋಲದಲ್ಲಿ ದೈವ ಮೊಗವನ್ನು ಕಲಚದೇ, ಸೂರ್ಯ ಉದಯಿಸುವ ಮುನ್ನ ದೈವ ನೇಮ ಬಿರಿಯುವುದು ಪದ್ಧತಿ 🙏 ಎಲ್ಲಾ ದೈವಗಳು ಒಂದೇ…

Read More

ಮಹಾ ಕಾಳಿ ಸ್ವರೂಪದ ಗ್ರಂಥ ಪೂಜೆ

ಕಾಸರಗೋಡು ಇಲ್ಲಿಯ ಆಚಾರ ವಿಚಾರ ಎಷ್ಟು ಸೊಗಸೋ ಕೆಲವು ವಿಚಾರಗಳು ರಹಸ್ಯವಾಗಿಯೇ ಇರುತ್ತದೆ. ಅಂತಹಾ ಪೂಜಾಧಿಕಾರ್ಯವನ್ನು ಕೇವಲ ಈ ಭಾಗದಲ್ಲಿ ಮಾತ್ರವೇ ನೋಡಲು ಸಾಧ್ಯ ಎಂದು ಕೆಲವೊಮ್ಮೆ ಪ್ರಶ್ನೆಯು ಮೂಡುತ್ತದೆ.ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ಗ್ರಾಮದ ಪಾರೇಕಡವು ಎಂಬಲ್ಲಿ ಭಂಡಾರ ಮನೆಯಿದ್ದು ಅಲ್ಲಿ ಅನಾದಿಕಾಲದಿಂದಲೂ ಸಂರಕ್ಷಿಸಿಕೊಂಡು ಬಂದಿರುವ ತಾಳೆ ಗರಿಯ ಗ್ರಂಥವಿದ್ದು ಅದಕ್ಕೆ ವಾರದ ಮಂಗಳವಾರ ಮತ್ತು ಶುಕ್ರವಾರದ ದಿನಗಳಂದು ಪೂಜೆಗಳು ನಡೆಯುತ್ತದೆ. ಸೋಣ ಸಂಕ್ರಮಣದಂದು ವಿಶೇಷ ಪೂಜೆ ಹಾಗೂ ದೇವ ದರುಶನ ಸಹಿತ ಮಹಾ…

Read More

“ನಾನೇ ಸಾಕಿದ ಗಿಣಿ, ನನ್ನ ಮುದ್ದಿನಾ ಗಿಣಿ”

ರಾಯರು ಬೆಳ್ಳಂಬೆಳಗ್ಗೆ, ಬಿಸಿ ಕಾಫಿಯನ್ನು ಹೀರುತ್ತಾ, ತನ್ನ ಪತ್ನಿಯನ್ನು ಕರೆದು ಹೇಳುತ್ತಾರೆ, ಮಗಳು ದೊಡ್ಡವಳಾಗುತ್ತಾ, ಬರ್ತಿದ್ದಾಳೆ, ನನ್ನ ಎಲ್ಲಾ ಆಸ್ತಿಯನ್ನು, ಅವಳಿಗೆ ಬರೀಬೇಕು, ವಕೀಲರನ್ನು ಕರೆಸು ಎಂದು. ಅದಕ್ಕೆ ಹೆಂಡತಿ ನಯವಾಗಿ ಹೇಳುತ್ತಾಳೆ, ಅದಕ್ಕೆ ಯಾಕೆ ಅವಸರ,?….. ಅವಾಗ ರಾಯರು, ಛೆ ಹಾಗಲ್ಲ, ಈಗಿನ ಮನುಷ್ಯನ ಮರಣ ಹೇಗೆ ಅಂತ ಹೇಳಲು ಆಗೋದಿಲ್ಲ..ಅದಕ್ಕೆ … ಛೆ…. ಬಿಡ್ತು ಅನ್ನಿ ಅಂತ ಕಾಫಿ ಕಪ್ಪನ್ನು ಕೈಗೆತ್ತಿ, ಒಳನಡೆದಳು. ಹೊರಗೆ ಕಾರಿನ ಸ್ವರ ಕೇಳಿದ ಕೂಡಲೇ ಎದ್ದು, ಹೊರಗೆ ಹೋದರು,…

Read More

ಅನುಭವ ಲೇಖನ

ಬದಲಾದ ಬದುಕು ಆಗ ಅವಳಿಗೆ ಆರು ವರುಷ ಅವಳ ಅಜ್ಜ ಆವತ್ತು ತೀರಿಕೊಂಡಿದ್ದರು.ಅಜ್ಜ ಅಂದರೆ ತಾಯಿಯ ತಂದೆ.ಸಾವಿನ ಮನೆಯಲ್ಲಿ ಎಲ್ಲರೂ ಅಳುತ್ತಿದ್ದರು.ಅವಳು ತುಂಬಾನೇ ಹೆದರಿ ಹೋಗಿದ್ದಳು.ಅಜ್ಜ ತೀರಿಕೊಂಡರು ಇನ್ನು ನನ್ನ ಅಮ್ಮನಿಗೆ ಏನು ಆಗುತ್ತೋ… ಅಜ್ಜನ ಸಾವಿನ ನೋವಲ್ಲಿ ನನ್ನ ಅಮ್ಮನಿಗೆ ಏನಾದರೂ ಸಂಭವಿಸಬಹುದೋ ಅನ್ನೋ ಭಯ ಈ ಪುಟ್ಟ ಮನಸನ್ನು ಕಾಡುತ್ತಾ ಇತ್ತು.ಅಷ್ಟೇ ಅಲ್ಲ ಕೈಕಾಲು ನಡುಕ…ಹೊಟ್ಟೆ ತೊಳೆಸಿದಂತೆ ಅನುಭವ…ಮೈಯೆಲ್ಲ ತಣ್ಣಗಾಗಿ ನಾನೇಕೆ ಈ ಭೂಮಿ ಮೇಲೆ ಬದುಕಿರುವೆ ಅನ್ನೋ ಭಾವನೆ.ಏನೋ ಒಂಥರಾ ಹೇಳೋಕೆ ಆಗದೇ…

Read More

ಶ್ರೀ ಕೋಮರಾಯ ದೈವಕ್ಕೆ ಸಂಬಂಧಪಟ್ಟ, ಮಾಕುರ ಕರಿಯ ಎಂಬ ಸ್ಥಳ

ಕೋಮರಾಯ ದೈವವು ಸ್ತ್ರೀ ರೂಪ ಹೊತ್ತು, ಉದಿಪು ಸ್ಥಾನ ಏನಿಯರ್ಪು ಎಂಬ ಸ್ಥಳದಿಂದ, ಹೊರಟು,ಕನ್ಯಾರ, ಛತ್ರo ಪಲ್ಲ, ಅಂಬಿಲಡ್ಕ, ಚೂರಿತಡ್ಕ, ಬಂಬ್ರಾಣ, ಮಾಕುರ ಕರಿಯಕ್ಕೆ ತಲುಪುವಾಗ, ಮಧ್ಯರಾತ್ರಿ 12 ಗಂಟೆಯಾಗಿರುತ್ತದೆ. ಈ ದಡದಿಂದ, ಆ ದಡಕ್ಕೆ ಹೋಗಲುದೋಣಿ ಬಿಡಲು ಹೇಳಿದಾಗ ನಾವಿಕ ಹಿಂಜರಿಯುತ್ತಾನೆ, ಕೊನೆಗೆ ಪಟ್ಟು ಹಿಡಿದು, ಕಲ್ಯಾಣಿ ಮದಿಮಾಲ್ ರೂಪದಲ್ಲಿ ಇದ್ದ ದೈವ, ದೋಣಿ ಏರಿ ಕುಳಿತುಕೊಳ್ಳುತ್ತದೆ, ದೋಣಿ ಮಧ್ಯ ಬಾಗಕ್ಕೆ ತಲುಪುವಾಗ,ದೈವ ದೋಣಿಯನ್ನು ಮಗುಜಿ ಹಾಕಿ ನಾವಿಕನನ್ನು ಮುಳುಗಿಸುತ್ತದೆ, ನಂತರ, ಇಚ್ಲ oಗೋಡು, ಎಂಬ…

Read More

ಇನ್ನು ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಒಂದು ತಲೆಮಾರಿನ ಜನ ಸಂಪೂರ್ಣವಾಗಿ ಕಾಣೆಯಾಗುತ್ತಾರೆ

ರಾತ್ರಿ ಬೇಗ ಮಲಗುವವರು..ಬೆಳಿಗ್ಗೆ ಬೇಗ ಏಳುವವರು…ನಸುಕಿನಲ್ಲಿ ವಾಯುವಿಹಾರಮಾಡುವವರು..ಅಂಗಳ ಹಾಗೂ ಗಿಡಬಳ್ಳಿಗಳಿಗೆನೀರುಣಿಸುವವರು…ಮುಂಜಾನೆ ದೇವರ ಪೂಜೆಗೆಹೂ ಕೊಯ್ಯುವವರು..ಪ್ರತಿದಿನ ದೇವಸ್ಥಾನ, ಮಂದಿರಗಳಿಗೆ ಹೋಗುವವರು..ದಾರಿಯಲ್ಲಿ ಕಂಡಾಗ ಆತ್ಮೀಯವಾಗಿ ಮುಗುಳ್ನಗುವವರು..ಜನರ ಸುಖ ದುಃಖಗಳನ್ನು ವಿಚಾರಿಸುವವರು..ಎರಡೂ ಕೈಗಳಿಂದ ಆತ್ಮೀಯ ವಾಗಿ ನಮಸ್ಕರಿಸುವವರು…. ಹಳೆಯ ಟೆಲಿಫೋನ್ಬಳಸುವವರು….ದಿನಚರಿ ಬರೆಯುವವರು…Wrong ನಂಬರ್ ಕರೆಬಂದರೂ ಸೌಜನ್ಯದಿಂದ ಒಂದೆರಡು ಮಾತುಗಳನ್ನುಆಡುವವರು…ವರ್ತಮಾನ ಪತ್ರಿಕೆಯನ್ನುಓದುವವರು…ವ್ರತ ನಿಯಮ ಪಾಲಿಸುವವರು.ಸಮಾಜಕ್ಕೆ ಹೆದರುವವರು….ಹಳೆಯ ಚೆಡ್ಡಿ, ಪಂಚೆ, ಚಪ್ಪಲಿ,ಬನಿಯನ್ ಧರಿಸುವವರು..ಮನೆಯಲ್ಲಿಯೇ ಅಡಿಗೆ ಮಾಡಿ ಊಟ ಮಾಡುವವರು,ಉಪ್ಪಿನಕಾಯಿ, ಹಪ್ಪಳ, ಸಂಡಿಗೆಮನೆಯಲ್ಲೇ ಮಾಡುವವರು..ಮನೆಯಲ್ಲೇ ಮಸಾಲೆರುಬ್ಬುವವರು….ಕುಂಕುಮದ ನೀರಲ್ಲಿ ದೃಷ್ಟಿ ತೆಗೆಯುವವರು..ಬೀದಿ ಬದಿಯ ವ್ಯಾಪಾರದವರೊಡನೆ ಚೌಕಾಸಿ ಮಾಡುವವರು……

Read More

ಒಗಟುಗಳು

ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು -ಉತ್ತರ – ನವಿಲು ಒಂದು ಹಸ್ತಕ್ಕೆ ನೂರೆಂಟು ಬೆರಳು ಉತ್ತರ – ಬಾಳೆಗೊನೆ ಸಾಗರ ಪುತ್ರ, ಸಾರಿನ ಮಿತ್ರ ಉತ್ತರ – ಉಪ್ಪು ಅಮ್ಮನ ಆಕಾಶ ವಾಣಿ ನಾನು ಉತ್ತರ – ಮಗು ಚಿಕ್ಕಕ್ಕ ನಿಗೆ ಪುಕ್ಕುದ್ದ ಉತ್ತರ- ಸೌಟು ಅಕ್ಕನ ಮೇಲೆ ಛತ್ರಿ ಉತ್ತರ – ರೆಪ್ಪೆ ಒಂದು ಹಪ್ಪಳ ಉರಿಗೆಲ್ಲ ಊಟ ಉತ್ತರ – ಚಂದ್ರ ಬೆಳ್ಳಿ ಸಮುದ್ರ ದಲ್ಲಿ ಕಪ್ಪು ಸೂರ್ಯ ಉತ್ತರ – ಕಣ್ಣು…

Read More

ಹುಳಿ ಹಿಂಡುವ ವಿಷಯದಲ್ಲಿ ಹಾಲಿನ ಕಥೆ

“ಮನುಷ್ಯನಿಗೆ ಪ್ರೇರಣೆ” ಒಂದು ಸಲ ಹಾಲು ತುಂಬಾ ಬೇಜಾರ್ ಮಾಡಿತ್ತಂತೆ, ನಾನು, ಕುಡಿಯಲು, ದೇವರ ಪೂಜೆಗೆ, ಚಾ, ಕಾಫಿಗೆ, ಇನ್ನಿತರ ಆಹಾರ ಪದಾರ್ಥ ಗಳಿಗೆ ಬೇಕು, ಆದ್ರೆ ರಾತ್ರಿಯಾಗ ಬೇಕಾದ್ರೆ ನನಗೆ ಹುಳಿ ಹಿಂಡಿ ಬಿಡ್ತಾರೆ, ಇದು ಯಾಕೆ ಹೀಗೆ ಅಂತ ದೇವರಲ್ಲಿ ಹೇಳಿ ಕೊಳ್ತದೆ. ಅದಕ್ಕೆ ದೇವರು ನಕ್ಕು ತುಂಬಾ ನಯವಾಗಿ ಹೇಳಿದರಂತೆ…. ನೋಡು ನಿನ್ನ ಮೇಲೆ ಹುಳಿ ಹಿಂಡಿದರೆ ನೀನು ಮೊಸರು ಆಗುತ್ತಿ, ನಂತರ, ಪಣ್ಣೀರ್,ಮಜ್ಜಿಗೆ, ಬೆಣ್ಣೆ, ತುಪ್ಪ, ಆಗುತ್ತಿ….. ನಿನ್ನ ಬೆಲೆ ಜಾಸ್ತಿ…

Read More
error: Content is protected !!