ತಲಪಾಡಿ ಅಪಘಾತಕ್ಕೆ ಬ್ರೇಕ್ ವೈಫಲ್ಯ ಕಾರಣವಲ್ಲ, ಚಾಲಕನ ಅತೀಯಾದ ವೇಗವೇ ಕಾರಣ ; ಕರ್ನಾಟಕ ಸಾರಿಗೆ ಸ್ಪಷಣೆ
ತಲಪಾಡಿ ಟೋಲ್ಗೇಟ್ ಸಮೀಪ ಸಂಭವಿಸಿದ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ‘ಬ್ರೇಕ್ ವೈಫಲ್ಯ’ ಎಂಬ ವದಂತಿಗಳು ಹರಡುತ್ತಿದ್ದರೂ, ಕೆಎಸ್ಆರ್ಟಿಸಿ ಈ ಅಪಘಾತಕ್ಕೆ ಬಸ್ನ ತಾಂತ್ರಿಕ ದೋಷ ಅಥವಾ ಬ್ರೇಕ್ ವೈಫಲ್ಯ ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ. ಇಲಾಖೆಯ ತಾಂತ್ರಿಕ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಬಸ್ ಸಂಪೂರ್ಣವಾಗಿ ಫಿಟ್ ಆಗಿತ್ತು ಹಾಗೂ ಇತ್ತೀಚೆಗೆ ಎಫ್ಸಿ ನವೀಕರಣವೂ ಮಾಡಿಕೊಂಡಿತ್ತು ಎಂಬುದು ದೃಢವಾಗಿದೆ. ಬಸ್ ಚಾಲಕನ ಅಜಾಗರೂಕ, ನಿರ್ಲಕ್ಷ್ಯಪೂರ್ಣ ಹಾಗೂ ಅತಿವೇಗದ ಚಾಲನೆಯೇ ಈ ದುರ್ಘಟನೆಗೆ…