ರಂಗಸ್ಥಳದಲ್ಲಿ ಮಹಿಷಾಸುರನ ರೌದ್ರಾವತಾರ: ಕಲಾವಿದನ ವರ್ತನೆಗೆ ಪರ-ವಿರೋಧ ಚರ್ಚೆ
ಉಡುಪಿ, ಏಪ್ರಿಲ್ 3: ಯಕ್ಷಗಾನ ರಂಗಸ್ಥಳದಲ್ಲಿ ಮಹಿಷಾಸುರನ ಪಾತ್ರಧಾರಿ ತೋರಿದ ಅತಿರೇಕದ ಆವೇಶ ಇದೀಗ ವಿವಾದಕ್ಕೆ ಕಾರಣವಾಗಿದೆ. ಯಕ್ಷಗಾನ ಸೇವೆಯ ವೇಳೆ ಶ್ರೀಕ್ಷೇತ್ರ ಮಾರಣಕಟ್ಟೆ ಮೇಳದ ಮಹಿಷಾಸುರ ಪಾತ್ರಧಾರಿ ರಂಗಮಂಟಪದಲ್ಲಿ ಅಬ್ಬರಿಸುವ ಸಂದರ್ಭದಲ್ಲಿ ಕಂಬಕ್ಕೆ ತಲೆಯನ್ನು ಜೋರಾಗಿ ಗುದ್ದಿಕೊಂಡ ಘಟನೆ ಪ್ರೇಕ್ಷಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿವೆ. ಕೆಲವರು ಕಲಾವಿದನ ತೀವ್ರ ಅಭಿವ್ಯಕ್ತಿಯನ್ನು ಪಾತ್ರಕ್ಕೆ ಜೀವ ತುಂಬುವ ಕಲೆ ಎಂದು ಮೆಚ್ಚಿಕೊಂಡಿದ್ದಾರೆ. ಇನ್ನೊಂದೆಡೆ,…