ವೇಣೂರು ಕಂಬಳದಲ್ಲಿ ನಿರೂಪಕರ ಮಾತಿಗೆ ಆಕ್ಷೇಪ: ಛಾಯಾಗ್ರಾಹಕರಿಂದ ಮನವಿ
ಬಂಟ್ವಾಳ: ವೇಣೂರು ಕಂಬಳ ಕಾರ್ಯಕ್ರಮದಲ್ಲಿ ನಿರೂಪಕರೊಬ್ಬರು ಛಾಯಾಗ್ರಾಹಕರ ವೃತ್ತಿಯ ಕುರಿತು ಆಕ್ಷೇಪಾರ್ಹ ಪದ ಬಳಕೆ ಮಾಡಿದ ಹಿನ್ನೆಲೆ ಉಭಯ ಜಿಲ್ಲೆಯ ಛಾಯಾಗ್ರಾಹಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. South Canara Photographers Association ಅಧ್ಯಕ್ಷ ನವೀನ್ ರೈ ಪಂಜಳ ಅವರ ನೇತೃತ್ವದಲ್ಲಿ ಛಾಯಾಗ್ರಾಹಕರ ಪ್ರತಿನಿಧಿಗಳು ಕಂಬಳ ಸಮಿತಿ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ವೇಣೂರು ಕಂಬಳದಲ್ಲಿ ನಿರೂಪಕರಾಗಿದ್ದ ರಾಜೀವ್ ಶೆಟ್ಟಿ ಅವರು ಛಾಯಾಗ್ರಾಹಕರ ವೃತ್ತಿಯ ಬಗ್ಗೆ ಅವಮಾನಕಾರಿ ಹಾಗೂ ಅಗೌರವಪೂರ್ಣ ಮಾತುಗಳನ್ನು ಆಡಿದ್ದಾರೆ…