ಆಟೋ ಗ್ಯಾಸ್ ದರ ಏರಿಕೆ ಆರೋಪ: ರಿಕ್ಷಾ ಚಾಲಕರ ಹಠಾತ್ ಪ್ರತಿಭಟನೆ
ಬಂಟ್ವಾಳ: ಇಲ್ಲಿನ ತಲಪಾಡಿ ಪ್ರದೇಶದಲ್ಲಿರುವ ಆಟೋ ಗ್ಯಾಸ್ ಪಂಪ್ನಲ್ಲಿ ಏಕಾಏಕಿ ಯಾವುದೇ ಸೂಚನೆ ನೀಡದೇ ರೂ.10 ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿ ರಿಕ್ಷಾ ಚಾಲಕರು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ. ಬಂಟ್ವಾಳ ತಾಲೂಕಿನ ಕೈಕಂಬ ಸಮೀಪದ ತಲಪಾಡಿ ಮಹಾಲಕ್ಷ್ಮಿ ಆಟೋ ಗ್ಯಾಸ್ ಪಂಪ್ನಲ್ಲಿ ಕೆ.ಜಿ.ಗೆ ನಿಗದಿತ ದರಕ್ಕಿಂತ ರೂ.10 ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ರಿಕ್ಷಾ ಚಾಲಕರ-ಮಾಲಕರ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಅವರ ನೇತೃತ್ವದಲ್ಲಿ ಚಾಲಕರು ಪಂಪ್ ಎದುರು ಪ್ರತಿಭಟನೆ ನಡೆಸಿದರು….