ಡಾ. ಆರ್. ಎ. ದಯಾನಂದಮೂರ್ತಿಗೆ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.ಆಯ್ಕೆ

ಕಾಸರಗೋಡು: ಡಾ. ಆರ್. ಎ. ದಯಾನಂದಮೂರ್ತಿ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಇದೇ ಬರುವ ಜನವರಿ 18ಕ್ಕೆ ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನಡೆಯುವ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

Read More

ಕೋಟ್ಯಾಂತರ ಖರ್ಚಿನ ಕಾಮಗಾರಿಯಲ್ಲಿ ವನಿತಾ ಹಾಸ್ಟೆಲ್ ಕಟ್ಟಡ ಉದ್ಘಾಟನೆಗೊಂಡರೂ ಕಾರ್ಯಾಚರಣೆಗೆ ಮೀನ ಮೇಷ ಎಣಿಸುತ್ತಿರುವ ಅಧಿಕಾರಿಗಳು

ಮಂಜೇಶ್ವರ: ಸೀಮಾವರ್ತಿ ಪ್ರದೇಶವಾದ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಸರ್ಕಾರಿ, ಅರ್ಧಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳ ವಸತಿಗಾಗಿ ನಿರ್ಮಿಸಲಾದ ಹಾಸ್ಟೆಲ್ ಕಟ್ಟಡವು ಉದ್ಘಾಟನೆಯಾದರೂ ಇನ್ನೂ ಬಳಕೆಗೆ ತೆರೆಯಲಾಗಿಲ್ಲ. ಇದರಿಂದಾಗಿ ದೂರದ ಪ್ರದೇಶಗಳಿಂದ ಆಗಮಿಸುವ ಮಹಿಳಾ ನೌಕರರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಂಜೇಶ್ವರ ಬ್ಲಾಕ್ ಪಂಚಾಯತ್ ನೇತೃತ್ವದಲ್ಲಿ ಈ ಹಾಸ್ಟೆಲ್ ಅನ್ನು ನಿರ್ಮಿಸಲಾಗಿದ್ದು, ವೊರ್ಕಾಡಿ ಗ್ರಾಮದ ಮಜೀರ್ಪಳ್ಳ ಧರ್ಮನಗರದಲ್ಲಿ, ಮಲಯೋರ ಹೆದ್ದಾರಿಗೆ ಸಮೀಪ ಬ್ಲಾಕ್ ಪಂಚಾಯತ್‌ಗೆ ಸೇರಿದ ಒಂದು ಏಕರೆ ಭೂಮಿಯಲ್ಲಿ…

Read More

ಉದ್ಯಾವರ ಶ್ರೀ ದೈವಗಳ ಹಾಗೂ ಶ್ರೀ ಭಗವತಿ ಮಾತೆಯ ಭೇಟಿ, ಪೂಮುಡಿ ಉತ್ಸವ ಮತ್ತು ಶ್ರೀ ಬಬ್ಬರ್ಯ ದೈವದ ಉತ್ಸವ

ಮಂಜೇಶ್ವರ: ಉದ್ಯಾವರ ಶ್ರೀ ಭಗವತಿ ಕ್ಷೇತ್ರವು ಬಬ್ಬರ್ಯ ದೈವದ ಜಾತ್ರೆ ಮತ್ತು ಪೂಮುಡಿ ಕಳಿಯಾಟ ಮಹೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಸಿದ್ಧವಾಗಿದ್ದು ,ಉದ್ಯಾವರ ಶ್ರೀ ದೈವಗಳ ಹಾಗೂ ಶ್ರೀ ಭಗವತಿ ಮಾತೆಯ ಭೇಟಿ, ಪೂಮುಡಿ ಉತ್ಸವ ಮತ್ತು ಶ್ರೀ ಬಬ್ಬರ್ಯ ದೈವದ ಉತ್ಸವವು ಇದೇ ಬರುವ ತಾರೀಕು 02-01-2026 ನೇ ಶುಕ್ರವಾರದಂದು ಮಂಜೇಶ್ವರದ‌ ಅಳಿವೆ ಬಾಗಿಲಿನಲ್ಲಿ ವಿಜೃಂಭಣೆಯಿಂದ ನಡೆಯಲಿರುವುದು.

Read More

ಕೊಂಡೆವೂರು ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಚಕ್ರ ನವಾವರಣ ಪೂಜೆ

ಮಂಜೇಶ್ವರ : ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಧನುರ್ಮಾಸ 19 ಸಲುವ ಪೌಷ ಮಾಸ ಪೌರ್ಣಮಿ ತಿಥಿ ದಿನಾಂಕ 03 -01 -2026 ನೇ ಶನಿವಾರದಂದು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡಿಯೂರು ಮಠ ಉಪ್ಪಳದಲ್ಲಿ ಪರಮ ಪೂಜೆ ಶ್ರೀ ಶ್ರೀ ಯೋಗಾನಂದ ಪರಮ ಪೂಜ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮ ಶ್ರೀ ವಿನೀತ್ ಭಟ್ ತಿರುವನಂತಪುರರವರ ಆಚಾರ್ಯತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಚಕ್ರ ನವಾವರಣ ಪೂಜೆ ಜರುಗಲಿರುವುದು. ಅಂದು ಬೆಳಗ್ಗೆ ಗಣಪತಿ ಹವನ, ಶ್ರೀ ಚಕ್ರ…

Read More

ಶ್ರೀಲಂಕಾದ ಮಾಧ್ಯಮ ತಜ್ನರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನ.

ಕಾಸರಗೋಡು : ಇತಿಹಾಸ , ಸಂಸ್ಕೃತಿ , ಸಮಾಜದ ಬಗ್ಗೆ ಅಧ್ಯಯನ ನಡೆಸುತ್ತಾ ಕಾಸರಗೋಡಿಗಾಗಮಿಸಿದ ಶ್ರೀಲಂಕಾದ ಆರು ಮಂದಿ ಮಾಧ್ಯಮ ತಜ್ನರಿಗೆ ಅವರ ಸಾಧನೆಗಳನ್ನು ಗುರುತಿಸಿ ಕಾಸರಗೋಡು ಕನ್ನಡಭವನದ ಕನ್ನಡ ಪಯಸ್ವಿನಿ ಪ್ರಶಸ್ತಿ ನೀಡಲಾಯಿತು.ಕನ್ನಡಭವನ ಗ್ರಂಥಾಲಯದ ಸಂಸ್ಥಾಪಕ ವಾಮನರಾವ್ ಬೇಕಲ್ ಮತ್ತು ನಿರ್ದೇಶಕಿ ಸಂಧ್ಯಾ ರಾಣಿ ಟೀಚರ್ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀಲಂಕಾ ಸರಕಾರದ ಸಾರ್ವಜನಿಕ ಸಂಪರ್ಕ ಇಲಾಖೆ , ವಾರ್ತಾ ಇಲಾಖೆ , ಅಲ್ಲಿನ ಕೇಂದ್ರ ಸಚಿವರುಗಳ ಮಾಧ್ಯಮ ಕಾರ್ಯದರ್ಶಿಗಳು ಪ್ರಶಸ್ತಿ ಸ್ವೀಕರಿಸಿದರು. ಸರ್ವಶ್ರೀಗಳಾದ ಪಾಟುಮ್…

Read More

ಕಾರ್ಗಿಲ್ ಯೋಧ, ಸಾಹಿತಿ, ಸಮಾಜ ಸೇವಕ ಚನ್ನಬಸಪ್ಪ ಬಳಗಾರ ಬಾಗಲಕೋಟ ಇವರು ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ “2026.ಕ್ಕೆ ಆಯ್ಕೆ… !

ಕಾಸರಗೋಡು:ಕಾರ್ಗಿಲ್ ಯೋಧ, ಸಾಹಿತಿ, ಸಮಾಜ ಸೇವಕ ಚನ್ನಬಸಪ್ಪ ಬಳಗಾರ ಬಾಗಲಕೋಟ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಜನವರಿ 18ಕ್ಕೆ ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿನಲ್ಲಿ ನಡೆಯಲಿರುವ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ, ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ನಮಾಜಿಗೆ ತೆರಳುತ್ತಿರುವ ಮಧ್ಯೆ ವಾಹನ ಢಿಕ್ಕಿ ಹೊಡೆದು ಪಂಡಿತ ಸಾವು

ಮಂಜೇಶ್ವರ : ತರವಾಡು ಮನೆಗೆ ಕಾರ್ಯಕ್ರಮಕ್ಕೆಂದು ತೆರಳಿದ ಪಂಡಿತರೊಬ್ಬರು ಮಸೀದಿಯಲ್ಲಿ ನಮಾಜಿಗಾಗಿ ತೆರಳುತ್ತಿರುವ ಮಧ್ಯೆ ವಾಹನ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.ಕಟ್ಟತ್ತಡ್ಕ ಮುಹಿಮ್ಮಾತ್ ನಗರದಲ್ಲಿ ವಾಸಿಸುವ ಅಬ್ದುಲ್ ಖಾದರ್ ಸಖಾಫಿ (54) ಸಾವನ್ನಪ್ಪಿದ ದುರ್ದೈವಿ. ಆತೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮಸೀದಿಯಲ್ಲಿ ನಮಾಜಿಗಾಗಿ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಇವರಿಗೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಶವ ಶರೀರ ಕಟ್ಟತ್ತಡ್ಕದ ಮನೆಗೆ ತಲುಪಿದೆ….

Read More

ಬೇಕಲ ಬೀಚ್ ಫೆಸ್ಟ್‌ನಲ್ಲಿ ನಡೆದ ವೇಡನ್‌ರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ತಲುಪಿದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರೈಲು ಢಿಕ್ಕಿ ಹೊಡೆದು ಸಾವು

ಮಂಜೇಶ್ವರ / ಕಾಸರಗೋಡು: ಬೇಕಲ ಬೀಚ್ ಫೆಸ್ಟ್‌ನಲ್ಲಿ ನಿನ್ನೆ ರಾತ್ರಿ ನಡೆದ ವೇಡನ್‌ರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ತಲುಪಿದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಪೊಯಿನಾಚಿ ಪರಂಬ್ ಶಿವಮಂ ಹೌಸ್‌ನ ವೇಣುಗೋಪಾಲನ್ ನಾಯರ್ ರ ಪುತ್ರ ಎಂ. ಶಿವನಂದನ್ (19) ಸಾವನ್ನಪ್ಪಿದ ದುರ್ದೈವಿ. ಇವರು ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು.ಸ್ನೇಹಿತನೊಂದಿಗೆ ಶಿವನಂದನ್ ಪಳ್ಳಿಕ್ಕೆರೆ ಬೀಚ್‌ಗೆ ರೈಲ್ವೇ ಹಳಿ ಸಮೀಪದಲ್ಲಾಗಿ ನಡೆದು ಹೋಗುತ್ತಿರುವ ಮಧ್ಯೆ ಕಣ್ಣೂರು ಭಾಗದಿಂದ ಬಂದ ರೈಲು ಶಿವನಂದನ್‌ಗೆ ಢಿಕ್ಕಿ ಹೊಂದಿರುವುದಾಗಿ ಬೇಕಲ ಪೊಲೀಸರು…

Read More

ಮಂಜೇಶ್ವರ: ಬೈಕ್‌ ತಡೆದು ನಿಲ್ಲಿಸಿ ವ್ಯಕ್ತಿಗೆ ಇರಿದು ಗಾಯಗೊಳಿಸಿದ ಪ್ರಕರಣ . ಇಬ್ಬರು ಆರೋಪಿಗಳ ಬಂಧನ

ಮಂಜೇಶ್ವರ: ಬೈಕ್‌ ತಡೆದು ನಿಲ್ಲಿಸಿ ವ್ಯಕ್ತಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕರ್ನಾಟಕದ ತೌಡುಗೋಳಿ ನಿವಾಸಿ ಅಬ್ದುಲ್ ಖಾದರ್ ತನ್ನೀಫ್ (26) ಹಾಗೂ ಕಡಂಬಾರ್‌ನ ಅಬ್ದುಲ್ ರಜಾಕ್ (40) ಬಂಧಿತ ಆರೋಪಿಗಳು.ಇವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದ ಸ್ಪೆಷಲ್ ಸ್ಕ್ಯಾಡ್ ಕರ್ನಾಟಕದ ತೌಡುಗೋಳಿಯಿಂದ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಸೆರೆಹಿಡಿಯಲಾಗಿದೆ. ಕಾರನ್ನು ಪೊಲೀಸರು ಪರಿಶೀಲಿಸಿದಾಗ ಅದರೊಳಗೆ ಮಾರಕಾಯುಧಗಳು ಪತ್ತೆಯಾಗಿದೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಪ್ಪಳ ಕೋಡಿಬೈಲ್ ನಿವಾಸಿ ಝಕರಿಯ (61) ಎಂಬವರಿಗೆ ಇರಿದ ಪ್ರಕರಣಕ್ಕೆ ಸಂಬಂಧಿಸಿ…

Read More

ವಚನಕಾರ್ತಿ ಸಮಾಜಸೇವಕಿ ಶಿವಶರಣಿ ರೂಪಾ ಬಿ. ನಾಟೀಕಾರ ರೀಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.

ಕಾಸರಗೋಡು: ವಚನಕಾರ್ತಿ ಸಮಾಜಸೇವಕಿ ಶಿವಶರಣಿ ರೂಪಾ ಬಿ. ನಾಟೀಕಾರ ರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಜನವರಿ 18 ರಂದು ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

Read More
error: Content is protected !!