ಕುಂಜತ್ತೂರಿನಲ್ಲಿ ಅಪರೂಪದ ಹಣ್ಣುಗಳ ತೋಟ – ಪ್ರವಾಸಿ ಸನ ಸಲೀಂ ಅವರ ಹಸಿರು ಸಾಧನೆ
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಜತ್ತೂರಿನಲ್ಲಿ ಅಪರೂಪದ ಹಣ್ಣುಗಳ ತೋಟವು ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಶಿಷ್ಟ ತೋಟವು ಸ್ಥಳೀಯ ಉದ್ಯಮಿ ಹಾಗೂ ಪ್ರವಾಸಿ ಸನಾ ಸಲೀಂ ಅವರ ಮನೆಯ ಆವರಣದಲ್ಲಿ ಬೆಳೆದು ನಿಂತಿದೆ. ಇಲ್ಲಿ ಕಣ್ಣಿಗೆ ಹಬ್ಬದಂತೆ ಕಾಣುವ ಈಂತಪ್ಪಳ (ಖರ್ಜೂರ) ಮರಗಳು ತುಂಬು ಫಲಗಳಿಂದ ಕಂಗೊಳಿಸುತ್ತಿವೆ. ಈ ತೋಟದಲ್ಲಿ ಬದಾಮ್ ಮಾವು, ಮಲ್ಲಿಕಾ ಮಾವು, ಕಾಲಪ್ಪಾಡಿ ಮಾವು, ಕೆನಿಯನ್ ಮಾವು ಸೇರಿದಂತೆ ವಿವಿಧ ಮಾವಿನ ತಳಿಗಳು ಬೆಳೆಸಲಾಗಿದೆ. ಜೊತೆಗೆ ಚಾಂಪೆ, ಮಲ್ಬೆರಿ, ಮಿರಾಕಲ್ ಫ್ರೂಟ್…