ವ್ಯಾಪಕಗೊಂಡ ಅನಧಿಕೃತ ಮರಳು ಸಾಗಾಟ : ಇತಿಹಾಸದಲ್ಲೇ ಮೊಟ್ಟ ಮೊದಲಾಗಿ ಇಬ್ಬರನ್ನು ಜಾಮೀನು ರಹಿತ ಕೇಸು ದಾಖಲಿಸಿ ಜೈಲಿಗಟ್ಟಿದ ಕುಂಬಳೆ ಪೊಲೀಸರು

ಮಂಜೇಶ್ವರ : ಮಂಜೇಶ್ವರ ಹಾಗೂ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಾಗಾಟ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊತ್ತ ಮೊದಲಾಗಿ ಕುಂಬಳೆ ಪೊಲೀಸರು ಮರಳು ಸಾಗಾಟ ಮಾಡುವವರ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಿದ್ದಾರೆ. ಮರಳು ಸಾಗಾಟ ಮಾಡಲು ಉಪಯೋಗಿಸಿದ ಓಮ್ನಿ ವ್ಯಾನ್ ವಶಕ್ಕೆ ತೆಗೆಯಲಾಗಿದೆ. ಅರಿಕ್ಕಾಡಿ ನಿವಾಸಿ ಮನ್ಸೂರ್ ಅಲಿ (31) ಹಾಗೂ ಕುಂಬಳೆ ಪೆರ್ವಾಡ್ ನಿವಾಸಿ ಜುಸೈರ್ (33) ಬಂಧಿತ ಆರೋಪಿಗಳು. ಆರಿಕ್ಕಾಡಿಯಲ್ಲಿ ಅನಧಿಕೃತ ಕಡವಿನಿಂದ ಓಮ್ನಿ ವ್ಯಾನ್ ನಲ್ಲಿ 25 ಗೋಣಿ ಮರಳು…

Read More

ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಓಣಂ ಹಬ್ಬ ಆಚರಣೆ.

ಮಂಜೇಶ್ವರ : ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಆಗಸ್ಟ್ 29ರ ಶುಕ್ರವಾರದಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಶುಭ ಹಾರೈಸಿದರು. ವೈವಿಧ್ಯಮಯ ಪೂಕಳಂಗಳನ್ನು ರಚಿಸಿದ ನಂತರ ಶಿಕ್ಷಕಿಯರು ಕೈಕೊಟ್ಟಿಕಲಿ ನೃತ್ಯವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಎಲ್ಲರಿಗೂ ಓಣಂ ಸದ್ಯವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಎಸ್ಎಂಸಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Read More

ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಒಗ್ಗಟ್ಟಿನ ಸಂಕಲ್ಪ–ಎಡನೀರು ಮಠದಲ್ಲಿ ಭಕ್ತರ ಮಹಾಸಭೆ.

ಕಾಸರಗೋಡು ಎಡನೀರು ಮಠದಲ್ಲಿ ಧರ್ಮಸ್ಥಳ ಕ್ಷೇತ್ರ ಭಕ್ತರು ಮತ್ತು ಅಭಿಮಾನಿಗಳ ಮಹತ್ವದ ಸಭೆ ನಿನ್ನೆ ನಡೆಯಿತು. ಈ ಸಭೆಯಲ್ಲಿ ನೂರಾರು ಭಕ್ತರು, ಮಾತೆಯರು, ಗಣ್ಯರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು. ಸಭೆಯ ಉದ್ದೇಶ, ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯವನ್ನು ಕಾಪಾಡುವುದು ಹಾಗೂ ಕ್ಷೇತ್ರಾಧೀಶರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಮಾನಹಾನಿಕರ ಕೃತ್ಯಗಳಿಗೆ ಸಂಘಟಿತ ಪ್ರತಿಕ್ರಿಯೆ ನೀಡುವುದಾಗಿತ್ತು. ಚರ್ಚೆಯ ಅಂತ್ಯದಲ್ಲಿ, ಅಕ್ಟೋಬರ್ 26ರಂದು ಭಾನುವಾರ ಬೃಹತ್ ಪ್ರತಿಭಟನೆ ಹಾಗೂ ಧಾರ್ಮಿಕ ಸಮ್ಮೇಳನ ಹಮ್ಮಿಕೊಳ್ಳಲು ಮಹತ್ವದ…

Read More

ಕಾಲುವೆಯಲ್ಲಿ ನೀರಿನ ಹರಿವಿಗೆ ಸಿಲುಕಿ ಆರನೇ ತರಗತಿ ವಿದ್ಯಾರ್ಥಿಯ ದಾರುಣ ಅಂತ್ಯ

ಕಾಸರಗೋಡು : ಚೆರ್ಕಳ ಪಾಡಿಯಲ್ಲಿ ಆರನೇ ತರಗತಿ ವಿದ್ಯಾರ್ಥಿಯೊಬ್ಬ ನೀರಿನ ಹರಿವಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ.ಮುಟ್ಟತ್ತೋಡಿ ಗ್ರಾಮದ ಕಲ್ಲಕಟ್ಟ ಬೆಳ್ಳೂರಡ್ಕ ನಿವಾಸಿ ಹಸೈನಾರ್ ಎಂಬವರ ಪುತ್ರ ಮಿತ್ಲಾಜ್ (11) ಸಾವನ್ನಪ್ಪಿದ ದುರ್ದೈವಿ.ಈತ ಆಲಂಪಾಡಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿ.ಶನಿವಾರ ಸಂಜೆ ಶಾಲೆಯ ಸಹಪಾಠಿಗಳೊಂದಿಗೆ ಕಾಲುವೆಯಲ್ಲಿ ಸ್ನಾನಕ್ಕೆ ಹೋಗಿರುವುದಾಗಿ ಪ್ರಾಥಮಿಕ ಮಾಹಿತಿ. ಈ ಸಂದರ್ಭ ನೀರಿನ ಹರಿವಿಗೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ.ವಿದ್ಯಾನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕನ ಶವ ಶರೀರವನ್ನು ಪತ್ತೆ…

Read More

ಜನಪ್ರಿಯ ಕಂಪನಿಯೊಂದರ ಹೆಸರಿನಲ್ಲಿ ನಕಲಿ ಮಾಲುಗಳನ್ನು ಖರೀದಿ-ಪಂಚಾಯತು ಹಾಗೂ ಐಸಿಡಿಎಸ್ ಅಧಿಕಾರಸ್ಥರ ವಿರುದ್ಧ ವ್ಯಾಪಕ ಆಕ್ರೋಶ.

ಮಂಜೇಶ್ವರ : 2020 – 21 ರ ಆರ್ಥಿಕ ವರ್ಷದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತು ಮೀಸಲಿಟ್ಟ 4 ಲಕ್ಷ ರೂಪಾಯಿ ಹಾಗೂ ಐಸಿಡಿಎಸ್ ವತಿಯಿಂದ ಮಂಜೂರಾದ 1 ಲಕ್ಷ ರೂಪಾಯಿಯೊಂದಿಗೆ ಮಹಿಳಾ ಮೀಸಲಾತಿ ನಿಧಿಯಿಂದ ಸ್ಟ ಉದ್ಯೋಗ ಹೊಲಿಗೆ ಘಟಕ ಸ್ಥಾಪಣೆಗೆ ಜನಪ್ರಿಯ ಕಂಪನಿಯೊಂದರ ಹೆಸರಲ್ಲಿ ಕಳಪೆ ಗುಣಮಟ್ಟದ ಹೊಲಿಗೆ ಯಂತ್ರಗಳನ್ನು ಖರೀದಿಸಿ ಅವುಗಳು ಉಪಯೋಗಕ್ಕೆ ಬಾರದೆ ಐಸಿಡಿಎಸ್ ಕಚೇರಿಯ ಕೊಠಡಿಯೊಳಗೆ ಮೂಲೆ ಪಾಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.ಜನಪ್ರಿಯ ಕಂಪನಿಯೊಂದರ ಹೆಸರಿನಲ್ಲಿ ನಕಲಿ ಮಾಲುಗಳನ್ನು ಖರೀದಿಸಿರುವ ಬಗ್ಗೆ…

Read More

ಪಾಂಗೋಡು ನವರಾತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆ.

ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ವರ್ಷಮ್ಪ್ರತಿ ನಡೆಯುವ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆ ಶ್ರೀ ಕ್ಷೇತ್ರ ಪಾತ್ರಿಗಳಾದ ಪಾಂಗೋಡು ಪ್ರವೀಣ್ ನಾಯಕ್ ಬಿಡುಗಡೆ ಗೊಳಿಸಿದರು. ಕ್ಷೇತ್ರ ಕುಟುಂಬಸ್ಥರು ಹಾಗೂ ಭಕ್ತ ಭಾಂದವರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Read More

ಕೇಂದ್ರ ಹಾಗೂ ಕೇರಳ ಸರಕಾರಗಳ ದುರಾಡಳಿತಗಳಿಂದ ಜನಸಾಮಾನ್ಯರು ತೊಂದರೆಯಲ್ಲಿ -ಮುಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳು ನೆಲ ಕಚ್ಚಲಿವೆ- ಶ್ರೀ ಸುಂದರ ಆರಿಕ್ಕಾಡಿ

ಕೇಂದ್ರ ಹಾಗೂ ಕೇರಳ ಸರಕಾರಗಳ ದುರಾಡಳಿತಗಳಿಂದ ಜನಸಾಮಾನ್ಯರು ರೋಸಿ ಹೋಗಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ನೆಲ ಕಚ್ಚಲಿವೆ ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸುಂದರ ಆರಿಕ್ಕಾಡಿ ಹೇಳಿದ್ದಾರೆ.ವರ್ಕಾಡಿ ಮಂಡಲ ಕಾಂಗ್ರೆಸ್ ವತಿಯಿಂದ ಶ್ರೀ ಉಮ್ಮರ್ ಬೋರ್ಕಳರ ನಿವಾಸದಲ್ಲಿ ನಡೆದ ಮಂಡಲ ಮಟ್ಟದ ಕಾಂಗ್ರೆಸ್ ಗೃಹಸಂದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಗೃಹಸಂದರ್ಶನ ಕಾರ್ಯಕ್ರಮದ ಉದ್ದೇಶಗಳ ಕುರಿತು ವಿವರಣೆ…

Read More

ಕೇಂದ್ರ-ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳಿಗೆದುರು ನಿರಂತರ ಹೋರಾಟ- ಕಾಂಗ್ರೆಸ್

ಕೇಂದ್ರದ ಮೋದಿ ಸರಕಾರ ಹಾಗೂ ಕೇರಳದ ಎಡರಂಗ ಸರಕಾರಗಳು ಜನತೆಗೆ ಕಿರುಕುಳ ನೀಡುವಲ್ಲಿ ಪರಸ್ಪರ ಸ್ಪರ್ಧಿಸುತ್ತಿದ್ದು, ಜನರ ಪ್ರತಿಭಟನೆಯ ಹಾದಿ ತಪ್ಪಿಸಲು ಮಹಿಳೆಯರನ್ನು ಮುಂದಿಟ್ಟು ಅಪವಾದ ಪ್ರಚಾರದಲ್ಲಿ ನಿರತವಾಗಿದ್ದು, ಇವುಗಳ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ, ಅದರ ಭಾಗವಾಗಿ ಗೃಹಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನತೆಯ ಆಶೀರ್ವಾದ ಬಯಸುತ್ತಿದ್ದೇವೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ. ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಶ್ರೀ ಅಶ್ರಫ್ ಮುಟ್ಟಂ ಅವರ ನಿವಾಸದಲ್ಲಿ ನಡೆದ…

Read More

ಎಡಬಿಡದೆ ಸುರಿಯುತ್ತಿರುವ ವರುಣಾರ್ಭಟ-ಕಾಸರಗೋಡಿನ ಮಧೂರು ಶ್ರೀ ಸಿದ್ದಿ ವಿನಾಯಕ ಕ್ಷೇತ್ರ ಸಂಪೂರ್ಣ ಜಲಾಮಯ

ಕಾಸರಗೋಡು: ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ವರುಣಾರ್ಭಟಕ್ಕೆ ಕಾಸರಗೋಡಿನ ಮಧೂರು ಶ್ರೀ ಸಿದ್ದಿ ವಿನಾಯಕ ಕ್ಷೇತ್ರ ಸಂಪೂರ್ಣ ಜಲಾಮಯವಾಗಿದೆ . ಈ ಮೂಲಕ ಸತತ ಮೂರನೇ ಬಾರಿಗೆ ಮಳೆಯಿಂದ ಮಧು ವಾಹಿನಿ ನದಿ ಉಕ್ಕೇರಿ ಹರಿದು ದೇವಾಲಯ ಜಲಾಮಯವಾಗಿದೆ . ಮಳೆಯಿಂದಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಕೊಂಚ ಮಟ್ಟಿಗೆ ಕಿರಿಕಿರಿಯನ್ನೇ ಉಂಟು ಮಾಡಿದೆ . ಹೀಗಾಗಿ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತು . ಆದ್ರೆ ಇದೀಗ ಮಳೆ ಆರ್ಭಟ ಕಮ್ಮಿಯಾಗಿದ್ದು ದೇವಾಲಯಕ್ಕೆ…

Read More

ಕಣ್ಣೂರು, ಕನ್ನಪುರಂ ಬಾಡಿಗೆ ಮನೆಯಲ್ಲಿ ಬಾಂಬ್ ಸ್ಪೋಟ, ಓರ್ವ ಮೃತ್ಯು

ಕಣ್ಣೂರು: ಕಣ್ಣೂರಿನ ಕನ್ನಪುರಂ ಬಾಡಿಗೆ ಮನೆಯೊಂದರಲ್ಲಿ ಬಾಂಬ್ ಸ್ಪೋಟಗೊಂಡು ವ್ಯತಿಯೋರ್ವನು ಮೃತ ಪಟ್ಟಿರುವಂತಹ ಘಟನೆಯೊಂದು ಮಧ್ಯರಾತ್ರಿ ೨ ಗಂಟೆಯ ಸುಮಾರಿಗೆ ನಡೆದಿದೆ . ಬಾಂಬು ಅಥವಾ ಸ್ಪೋಟಕ ವಸ್ತು ನಿರ್ಮಾಣದ ವೇಳೆ ಸ್ಪೋಟಗೊಂಡಿರಬೇಕು ಎಂದು ಅನುಮಾನವಿದೆ . ಭಾರೀ ಸ್ಪೋಟದ ಶಬ್ದ ಕೇಳಿ ಎಚ್ಚರಗೊಂಡು ಓಡಿ ಬ೦ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ಗೋವಿ೦ದನ್ ಎ೦ಬವರ ಮಾಲಕತ್ವದ ಮನೆ ಇದಾಗಿದ್ದು ಅನೂಪ್ ಎಂಬವರಿಗೆ…

Read More
error: Content is protected !!