ಶಾಹುಲ್ ಹಮೀದ್ ತಂಗಳ್ ಸ್ಮರಣಾರ್ಥ ಪ್ರಾರ್ಥನಾ ಸಭೆ
ದುಬೈ ಮಲಬಾರ್ ಕಲಾಸಾಂಸ್ಕೃತಿಕ ವೇದಿಕೆ ವತಿಯಿಂದ ಕಾಸರಗೋಡು ಮೂಲದ ಖ್ಯಾತ ಸಮಾಜಸೇವಕ ಶಾಹುಲ್ ಹಮೀದ್ ತಂಗಳ್ ಅವರ ಸ್ಮರಣಾರ್ಥ ಪ್ರಾರ್ಥನಾ ಸಭೆಯನ್ನು ಕುಂಬಳೆ ರಾಯಲ್ ಖುಬಾ ರೆಸ್ಟೋರಂಟ್ನಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಮಾಜಿ ಶಾಸಕ ಎಂ.ಸಿ. ಕಮರುದ್ದೀನ್ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಅವರು, ಕುಂಬಳ ಸಾರ್ವಜನಿಕ ಕ್ಷೇತ್ರದಲ್ಲಿ ಶಾಹುಲ್ ಹಮೀದ್ ತಂಗಳ್ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದು, ಅವರ ಅಕಾಲಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಪ್ರಾರ್ಥನಾ ಸಭೆಗೆ ಸಯ್ಯಿದ್ ಯಾಹಿಯ ತಂಗಳ್…