ಮರಣದವಡೆಗೆ ದಾರಿಮಾಡಿಕೊಟ್ಟ ತಲಪಾಡಿ ಟೋಲ್ ಅಕ್ಕಪಕ್ಕ: ರಸ್ತೆ ಒತ್ತುವರಿ ಮಾಡಿ ನಿಲ್ಲುವ ಘನ ವಾಹನಗಳು, ಕಣ್ಣುಮುಚ್ಚಿ ಕುಳಿತ ಆಡಳಿತ
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಟೋಲ್ ಗೇಟ್ ದಾಟಿ ಸ್ವಲ್ಪ ಮುನ್ನಡೆದರೆ ಸಾಕು, ಅಲ್ಲಿ ಸಾವಿನ ದೂತರು ಹೊಂಚುಹಾಕಿ ಕುಳಿತಿರುವ ದೃಶ್ಯ ಕಣ್ಣಿಗೆ ರಾಚುತ್ತದೆ. ರಸ್ತೆಯ ಎಡಭಾಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ರಾತ್ರಿ ಹಾಗೂ ಹಗಲು ಎನ್ನದೆ ಮನಸೋಇಚ್ಛೆ ನಿಲ್ಲಿಸಲಾಗುತ್ತಿರುವ ಘನ ವಾಹನಗಳು ಇಂದು ಸ್ಥಳೀಯರಿಗೆ ಮತ್ತು ಸವಾರರಿಗೆ ದೊಡ್ಡ ಶಾಪವಾಗಿ ಪರಿಣಮಿಸಿವೆ.ಟೋಲ್ ಗೇಟ್ನ ಸಮೀಪವಿರುವ ಹೋಟೆಲ್ಗಳು ಮತ್ತು ಇತರ ವ್ಯಾಪಾರ ಕೇಂದ್ರಗಳಿಗೆ ಬರುವ ಗ್ರಾಹಕರು ಹಾಗೂ ಕಾಸರಗೋಡು ಕಡೆಗೆ ಮರಳುವ ವಾಹನ ಸವಾರರಿಗೆ ಈ ನಿಂತಿರುವ ಬೃಹತ್…
