ಜೋಡಿ ಕೊಲೆಗೆ ಬೆಚ್ಚಿ ಬಿದ್ದ ಮಂಜೇಶ್ವರ …! : ಮಗಳ ಹತ್ಯೆ ತಡೆಯಲು ಹೋದ ಚಿಕ್ಕಪ್ಪನ ಪ್ರಾಣ ಹಾರಿತು ….?
ಕಾಸರಗೋಡು:ಮಂಜೇಶ್ವರ ತಾಲೂಕಿನ ತೂಮಿನಾಡು ಪ್ರದೇಶದಲ್ಲಿ ನಡೆದ ಭೀಕರ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹದಿಹರೆಯದ ಮಗಳನ್ನು ಚಾಕುವಿನಿಂದ ಕೊಂದಿದ್ದು, ಆ ದಾಳಿಯನ್ನು ತಡೆಯಲು ಯತ್ನಿಸಿದ ಚಿಕ್ಕಪ್ಪನೂ ಗಂಭೀರ ಗಾಯಗಳಿಂದ ಇದೀಗ ಮೃತಪಟ್ಟಿದ್ದಾರೆ. ಇದರಿಂದ ಪ್ರಕರಣ ಜೋಡಿ ಕೊಲೆಯಾಗಿ ಮಾರ್ಪಟ್ಟಿದೆ. ಸೋಮವಾರ ಸಂಜೆ ನಡೆದ ಈ ಘಟನೆಯಲ್ಲಿ, ಉಮ್ಮರ್ ಫಾರೂಕ್ ಎಂಬವರು ತಮ್ಮ ಪುತ್ರಿ ಕೆ.ಯು. ಮರಿಯಮತ್ ಜುಮೈಲಾ (18) ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ವೇಳೆ ದಾಳಿಯನ್ನು ತಡೆಯಲು ಮುಂದಾದ ಷೇಕುಂಞ (50) ಎಂಬವರು…