ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ಸಭಾಭವನದಲ್ಲಿ ಕಲಾ ಸೌರಭ ಸಂಗೀತ ವಿದ್ಯಾರ್ಥಿಗಳ ಕಲಾ ಸಂಭ್ರಮ

ಭಟ್ಕಳ- ತಾಲೂಕಿನ ಪ್ರಸಿದ್ದ ಶಿಕ್ಷಣ ಸಂಸ್ಥೆ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ನ್ಯೂ ಇಂಗ್ಲೀಷ್ ಸಭಾಭವನದಲ್ಲಿ ಶನಿವಾರ ಸಂಗೀತ ವಿದ್ಯಾರ್ಥಿಗಳ ಅದ್ಬುತ ಕಲಾ ಪ್ರದರ್ಶನ ನಡೆಯಿತು.ಕಲಾ ಸೌರಭ ಸಂಗೀತ ಶಾಲೆ ಹಾಗೂ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ಇದರ ಸಹಯೋಗದಲ್ಲಿ ಶನಿವಾರ ಸಂಗೀತ ಹಾಗೂ ತಬಲ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಎಪರ್ಡಿಸಲಾಗಿತ್ತು. ಕಾರ್ಯಕ್ರಮವನ್ನು ಕಲಾ ಸೌರಭ ಹಾಗೂ ಭಟ್ಕಳ ಎಜ್ಯುಕೇಷನ್ ಸಂಸ್ಥೆಯ ಮುಖ್ಯಸ್ಥರಾದ ಕೇದಾರ ಕೊಲ್ಲೆ ಹಾಗೂ ರಾಜೇಶ ನಾಯಕ ಅವರು ಉದ್ಘಾಟಿಸಿದರು.ಗಣಪತಿ ಶಿರೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಾವು…

Read More

ಎಲ್‌ಡಿಎಫ್ ಉತ್ತರ ವಲಯ ಜಾಥಾಗೆ ಕುಂಬಳೆಯಿಂದ ಚಾಲನೆ; ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ:

ಕಾಸರಗೋಡು: ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರ ಸಾರಥ್ಯದಲ್ಲಿ ನಡೆಯುವ ಎಲ್‌ಡಿಎಫ್ ಉತ್ತರ ವಲಯ ಜಾಥೆಗೆ ತುಳುನಾಡಿನ ನೆಲ ಕುಂಬಳೆಯಿಂದ ಆದಿತ್ಯವಾರ ಚಾಲನೆ ದೊರಕಿತು. ಜಾಥಾ ನಾಯಕ ಎಂ.ವಿ. ಗೋವಿಂದನ್ ಅವರಿಗೆ ಕೇರಳಾಭಿವೃದ್ಧಿಯ ಮಿನಿಯೇಚರ್ ನೀಡಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜಾಥಾವನ್ನು ಉದ್ಘಾಟಿಸಿದರು. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕಳೆದ ಹತ್ತು ವರ್ಷಗಳ ಎಡರಂಗ ಸರ್ಕಾರದ ಸಾಧನೆಗಳನ್ನು ವಿವರಿಸಿ, ಕೇಂದ್ರ ಸರ್ಕಾರ ಕೇರಳದ ವಿರುದ್ಧ ತೋರಿಸುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಕೇರಳವನ್ನು…

Read More

ಹಕ್ಕುಗಳ ಘೋಷಣೆ ಯಾತ್ರೆ ಮುಕ್ತಾಯ-ಏಕತೆ ಮತ್ತು ರಾಜಕೀಯ ಅಧಿಕಾರ ಈ ಹೊತ್ತಿನ ಅಗತ್ಯಃ ತೀಯಾ ವೆಲ್ಫೇರ್ ಸೊಸೈಟಿ:

ತಿರುವನಂತಪುರಂಃ ತೀಯಾ ಸಮುದಾಯದ ಏಕತೆ ಮತ್ತು ರಾಜಕೀಯ ಬಲವು ಇಂದಿನ ಅಗತ್ಯವಾಗಿದೆ.ತೀಯಾ ಸಮುದಾಯದ ಹಕ್ಕುಗಳನ್ನು ಪುನರ್ಸ್ಥಾಪಿಸಲು ಮತ್ತು ಸಾಮಾಜಿಕ-ರಾಜಕೀಯ ಜಾಗೃತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿ ತೀಯಾ ವೆಲ್ಫೇರ್ ಸೊಸೈಟಿ ಆಯೋಜಿಸಿದ್ದ ಹಕ್ಕುಗಳ ಘೋಷಣೆ ಯಾತ್ರೆಯು ತ್ರಿಕ್ಕರಿಪ್ಪೂರಿನಲ್ಲಿ ಮುಕ್ತಾಯಗೊಂಡಿತು. ಜನವರಿ 25ರಂದು ಕುಂಬಳೆ ಶ್ರೀ ಸದ್ಗುರು ನಿತ್ಯಾನಂದ ಮಠದಿಂದ ಪ್ರಾರಂಭವಾದ ಯಾತ್ರೆಯನ್ನು ತೀಯಾ ಕ್ಷೇಮಾ ಸಭೆಯ ರಾಜ್ಯ ಅಧ್ಯಕ್ಷ ರವಿ ಕುಲಂಗರ ಅವರ ನೇತೃತ್ವದಲ್ಲಿ ತೀಯಾ ವೆಲ್ಫೇರ್ ಅಸೋಸಿಯೇಶನ್ನ ಅಧ್ಯಕ್ಷ ಗಣೇಶ್ ಪಾವೂರ್ ಉದ್ಘಾಟಿಸಿದ್ದರು. ಜಿಲ್ಲೆಯ ವಿವಿಧ ಕ್ಷೇತ್ರಗಳ…

Read More

ಕುಂಬಳೆ ಆರಿಕ್ಕಾಡಿಯಲ್ಲಿ ಶ್ರೀಉಳ್ಳಾಲ್ತಿ ನಾಗಬ್ರಹ್ಮ 18 ದೈವಸ್ಥಾನದ ದೈವದ ಪಾತ್ರಿ–ಕಾನಾ೯ವರ ಒಕ್ಕೂಟದ 2ನೇ ವಾರ್ಷಿಕೋತ್ಸವ:

ಶ್ರೀಉಳ್ಳಾಲ್ತಿ ನಾಗಬ್ರಹ್ಮ18 ದೈವಸ್ಥಾನದ ದೈವದ ಪಾತ್ರಿ ಮತ್ತು ಕಾನಾ೯ವರ ಒಕ್ಕೂಟ (ರಿ) ಇದರ 2ನೇ ವರ್ಷದ ವಾರ್ಷಿಕೋತ್ಸವವು ನಿನ್ನೆ ಕುಂಬಳೆಯ ಆರಿಕ್ಕಾಡಿ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ ಶಂಕರ ಅಡ್ಕ ವಹಿಸಿದ್ದರು. ಪ್ರಧಾನ ಭಾಷಣಗಾರರಾದ ಶ್ರೀ ನವೀನ್ ಸೂರಿಂಜೆ ,ಶ್ರೀ ಹರೀಶ್ ಶೆಟ್ಟಿ ಮಾಡ,ಶ್ರೀ ಸದಾನಂದ ಕಾರ್ನವರು,ಶ್ರೀ ಸುರೇಶ ದೈವದ ಪಾತ್ರಿ,ಶ್ರೀ ಆನಂದ ದೈವದ ಪಾತ್ರಿ,ಶ್ರಿ ಬಾಬು ಕುಬನೂರು,ಶ್ರೀ ನವೀನ್ ಮಂಗಳೂರು,ಸಮಾಜದ ಕೇಂದ್ರ ಸಮಿತಿಯ ಅಧ್ಯಕ್ಷ ತುಳಸಿದಾಸ್ ,ಶ್ರೀವಿಜಯ ಪಂಡಿತ್,…

Read More

ಶ್ರೀ ವಿದ್ಯಾವರ್ಧಕ ಶಾಲೆ–ಮಾಸ್ಟರ್ಸ್ ಕ್ಲಬ್ ನೇತೃತ್ವದಲ್ಲಿ ಮೀಯಪದವಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ :

ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆ, ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಮೀಯಪದವು,ಮಾಸ್ಟರ್ಸ್ ಆರ್ಟ್ಸ್ &ಸ್ಪೋರ್ಟ್ಸ್ ಕ್ಲಬ್,(ರಿ)ವಿಕಾಸ ಮೀಯಪದವು ಇದರ ನೇತೃತ್ವದಲ್ಲಿ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠo ಚಾರಿಟೇಬಲ್ ಟ್ರಸ್ಟ್ ಕೊಂಡೆವೂರು ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ,ಡಾ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಒನ್ ಸೈಟ್ ಎಸ್ಸಿ ಲೋರ್ ಲಕ್ಸೋಟಿಕ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ…

Read More

ಚೇವಾರು ಶ್ರೀ ಶಾರದಾ ಎ.ಯು.ಪಿ. ಶಾಲೆಯಲ್ಲಿ ಸಂಭ್ರಮದ ‘ಶಾಲಾ ವಾರ್ಷಿಕೋತ್ಸವ’

ಮಂಜೇಶ್ವರ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಶಾಲಾ ಆವರಣದಲ್ಲಿ ಬಹಳ ಸಂಭ್ರಮದಿಂದ ಜರುಗಿತು.ಸಂಜೆ 6:30ಕ್ಕೆ ಆರಂಭಗೊಂಡ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೈವಳಿಕೆ ಪಂಚಾಯತ್‌ನ ಚೇವಾರು ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಅಸೀಸ್ ಸಿ. ಎಂ. ಅವರು ವಹಿಸಿದ್ದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕೆ.ಎಂ. ಅಶ್ರಫ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲೆಯ ಬೆಳವಣಿಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬದ್ರುನ್ನಿಸಾ ಸಲೀಂ, ಮಂಜೇಶ್ವರ…

Read More

ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕುರಿತು ಜಾಗೃತಿ ಮೂಡಿಸುವ ‘ಆಯುಷ್ ಹಬ್ಬ- 2026’ ಕ್ಕೆ ಚಾಲನೆ …..!

ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕುರಿತು ಜಾಗೃತಿ ಮೂಡಿಸುವ ‘ಆಯುಷ್ ಹಬ್ಬ- 2026’ ಕ್ಕೆ ಇಂದು ಮಂಗಳೂರು ನಗರದ ಡಾ.ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಚಾಲನೆ ಸಿಕ್ಕಿತು.ಆಯುಷ್ ಇಲಾಖೆ, ಎಲ್ಲ ಆಯುಷ್ ಆಸ್ಪತ್ರೆಗಳು ಮತ್ತು ಕಾಲೇಜುಗಳು, ಆಯುಷ್ ಫೌಂಡೇಶನ್ ಸಹಯೋಗದಲ್ಲಿ ಆಯುಷ್ ಹಬ್ಬವನ್ನು ಆಯೋಜಿಸಿತ್ತು.ನೋಂದಾಯಿಸಿಕೊಂಡವರಿಗೆ ಉಚಿತವಾಗಿ ನಾಡಿ ಪರೀಕ್ಷೆ ಜತೆಗೆ ಉಚಿತ ಆರೋಗ್ಯ ಶಿಬಿರ ನಡೆಸಲಾಯಿತು. ಜತೆಗೆ ಹಿರಿಯ ನಾಗರಿಕರಿಗೆ ಆಯುಷ್ ಆರೈಕೆ, ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಬೇಕಾದ ಜೀವನಶೈಲಿ ಮತ್ತು ಒತ್ತಡ ನಿರ್ವಹಣಾ ಶಿಬಿರಗಳು, ಆರೋಗ್ಯಕ್ಕೆ ಅಗತ್ಯವಾದ…

Read More

ಫೆ.1ರಂದು ಪುತ್ತೂರಿನಲ್ಲಿ ದ್ವಾರಕೋತ್ಸವ–2026; ಸನ್ಮಾನ, ಸಾಂಸ್ಕೃತಿಕ ವೈಭವ

ಪುತ್ತೂರು: ದ್ವಾರಕಾ ಪ್ರತಿಷ್ಠಾನ ಪುತ್ತೂರು ಇದರ ವತಿಯಿಂದ ದ್ವಾರಕೋತ್ಸವ-೨೦೨೬ ಕಾರ್ಯಕ್ರಮವು ಫೆ.೧ ರಂದು ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ ಎಂದು ದವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಾರಕೋತ್ಸವವು ವರ್ಷಂಪ್ರತಿ ಆಚರಿಸುತ್ತಿರುವ ಗ್ರಾಹಕರ ಹಾಗೂ ಸಮಾಜದ ಸಕಲ ಬಂಧುಗಳ ಸಮ್ಮಿಲನ ದ್ವಾರಕೋತ್ಸವದಲ್ಲಿ ಸಾಧಕರಿಗೆ ಸನ್ಮಾನ, ಕಲಾಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ, ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸುತ್ತಿರುವ ಎಳೆಯರ ರಾಮಾಯಣ, ಕಿಶೋರ ಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನದೊಂದಿಗೆ ನಡೆಯಲಿದೆ…

Read More

ಕಾಂಬೋಡಿಯಾದಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದ ಮಂಗಳೂರು ಮೂಲದ ಐವರ ಸಹಿತ 37 ಮಂದಿ ರಕ್ಷಣೆ…. !

ಮಂಗಳೂರು:ಉದ್ಯೋಗಕ್ಕೆಂದು ತೆರಳಿ ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಜಾಲದಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದ ಮಂಗಳೂರು ಮೂಲದ ಐವರು ಯುವಕರ ಸಹಿತ 37 ಮಂದಿಯನ್ನು ರಕ್ಷಿಸಿ ತಾಯ್ತಾಡಿಗೆ ಕರೆತರಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಉದ್ಯೋಗದ ಭರವಸೆಯೊಂದಿಗೆ ಕಾಂಬೋಡಿಯಾಗೆ ತೆರಳಿ ಕಳೆದ ಹಲವು ತಿಂಗಳಿನಿಂದ ನರಕಯಾತನೆ ಅನುಭವಿಸುತ್ತಿದ್ದ ಜಿಲ್ಲೆಯ ಐದು ಮಂದಿ ಸೇರಿ ಒಟ್ಟು 37 ಮಂದಿ ಭಾರತೀಯರು ಕೇಂದ್ರ ಸರಕಾರದ ಸತತ ಮಧ್ಯಸ್ಥಿಕೆ ಪರಿಣಾಮ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ವಿದೇಶಾಂಗ ಸಚಿವಾಲಯದ ಮೂಲಕ ಕಾಂಬೋಡಿಯಾದ ರಾಜತಾಂತ್ರಿಕ ಇಲಾಖೆಗಳ…

Read More

ಕುಂದಾಪುರ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ: ನೋಡು ನೋಡುತ್ತಿದ್ದಂತೆ ಸುಟ್ಟು ಕರಕಲಾದ ಕಾರು!

ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನೋಡು ನೋಡುತ್ತಿದ್ದಂತೆ ಕಾರು ಸಂಪೂರ್ಣಚಾಗಿ ಬೆಂಕಿಗಾಹುತಿಯಾದ ಘಟನೆ ಹೆಮ್ಮಾಡಿ–ಕೊಲ್ಲೂರು ರಾಜ್ಯ ಹೆದ್ದಾರಿಯ ವಂಡ್ಸೆ ಗ್ರಾಮದ ಶಾರ್ಕೆ ಕ್ರಾಸ್ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಬೀಜಾಡಿ ನಿವಾಸಿ ಭಾಸ್ಕರ್ ಆಚಾರ್ ಅವರಿಗೆ ಸೇರಿದ ಕಾರು ಇದಾಗಿದ್ದು, ಕಾರ್ಯನಿಮಿತ್ತ ಬೆಳಿಗ್ಗೆ ಆಲೂರಿಗೆ ತೆರಳಿದ್ದ ಅವರು ಸುಮಾರು 10 ಗಂಟೆಯ ವೇಳೆಗೆ ಅಲ್ಲಿಂದ ಕುಂದಾಪುರದತ್ತ ಮರಳುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದಿಂದ ಶಬ್ದ ಸಹಿತ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಭಾಸ್ಕರ್ ಆಚಾರ್…

Read More
error: Content is protected !!