ಮಂಜೇಶ್ವರ ಗ್ರಾಮ ಪಂಚಾಯತು ಹಾಗೂ ಕೃಷಿಭವನದ ಸಂಯುಕ್ತಾಶ್ರಯದಲ್ಲಿ ಕೃಷಿಕ ದಿನಾಚರಣೆ.

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ಹಾಗೂ ಕೃಷಿಭವನದ ಸಂಯುಕ್ತಾಶ್ರಯದಲ್ಲಿ ಕೃಷಿಕ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಂಜೇಶ್ವರ ಕಲಾಸ್ಪರ್ಶಂ ಆಡಿಯಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಂಜೇಶ್ವರ ವಿಧಾನಸಭಾ ಸದಸ್ಯ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿ ಮಾತನಾಡಿದರು. ನಂತರ, ಅವರು ವಿವಿಧ ವರ್ಗಗಳ ಕೃಷಿಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೇರೋ ವಹಿಸಿದ್ದರು. ಕೃಷಿ ಅಧಿಕಾರಿ ಶ್ರೀ ಶ್ರೀನಾಥ್ ಸ್ವಾಗತ ಭಾಷಣ ನೀಡಿದರು. ವೇದಿಕೆಯಲ್ಲಿ ಪಂಚಾಯತು ಉಪಾಧ್ಯಕ್ಷ…

Read More

ಮುಗ್ಡಾಲ್ ಗುಡ್ಡೆ: ‘5ನೇ ವರ್ಷದ ಆಟಿಡೊಂಜಿ ದಿನ’ಆಟಿದ ಅಟ್ಟನೆ’.

ಬಂಟ್ವಾಳ: ‘ ಮುಗ್ಡಾಲ್ ಗುಡ್ಡೆ’ ವತಿಯಿಂದ 5 ನೇ ವರ್ಷದ’ಆಟಿಡೊಂಜಿ ದಿನ ಕಾರ್ಯಕ್ರಮ”ಆಟಿದ ಅಟ್ಟನೆ “ವಿವಿಧ, ಸಂಸ್ಕೃತಿ ಸಂಸ್ಕಾರದ ಆಹಾರ ತಿಂಡಿ ತಿನಸಿನ ಜೊತೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಧನೆಯನ್ನು ಮಾಡಿದ ಸಾಧಕರಿಗೆ ಸನ್ಮಾನದೊಂದಿಗೆ ವಿಜೃಂಭನೆಯಿಂದ ಜರಗಿತು.ಸ್ಥಳೀಯ ಹಿರಿಯರಜೊತೆ ವಠಾರದ ಮಾತೆಯರು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳುನಾಡಿನ ಸಾಂಸ್ಕೃತಿಕ ನೃತ್ಯಗಳು, ಆಟಿಕಳಂಜ ನಲಿಕೆ, ತುಳುಪದಕೊಲಿಕೆ ಆಟ, ಕಂಡಡೊಂಜಿ ದಿನ ಸ್ಪರ್ಧೆ ನಡೆಸಿದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ, ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಪಡದ ವಿದ್ಯಾರ್ಥಿಗಳನ್ನು ತುಳುನಾಡ ಶಾಲು ಹೊದಿಸಿ…

Read More

ಶಿರಿಯ ಪ್ರಗತಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮೊಸರು ಕುಡಿಕೆ ಉತ್ಸವ.

ಉಪ್ಪಳ ಮುಟ್ಟಂ ಶಿರಿಯ ಪ್ರಗತಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ಬಿನ ವತಿಯಿಂದ 28 ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ ಹಾಗೂ ಮಕ್ಕಳಿಗೆ ವಿವಿಧ ಅತೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಮದ್ಯಾನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಯು.ಎಮ್ ಮೂಲ್ಯ ಧಾರ್ಮಿಕ ಭಾಷಣ ಮಾಡಿದರು. ಶಶಿ ಆರ್.ಕೆ ಅಧ್ಯಕ್ಷತೆ ವಹಿಸಿದ ಸಭೆ ಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರಾಷ್ಟ್ರಿಯ ಪ್ರಶಸ್ತಿ ಪಡೆದ ಡಾ. ವಿಜಯ್ ಪಂಡಿತ್…

Read More

ಕೃಷ್ಣ ಜನ್ಮಾಷ್ಟಮಿ ಸಮಿತಿ ಇಡಿಯ ಕಡಂಬಾರಿನಲ್ಲಿ 22ನೇ ವರ್ಷದ ಮೊಸರುಕುಡಿಕೆ ಉತ್ಸವ ಆಚರಣೆ

ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಇಡಿಯ ಕಡಂಬಾರು ಇಲ್ಲಿ 22ನೇ ವರ್ಷದ ಮೊಸರುಕುಡಿಕೆ ಉತ್ಸವನ್ನು ಅದ್ದೂರಿಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ದೂಮ ಪೂಜಾರಿ ಅವರು ಉದ್ಘಾಟಿಸಿದರು.ಕಾರ್ಯಕ್ರಮದ ಅಂಗವಾಗಿ ಮಕ್ಕಳು,ಮಹಿಳೆಯರು ಹಾಗು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು . ಸಾಯಂಕಾಲ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷ ಸ್ಥಾನವನ್ನು ಜನ ಜಾಗೃತಿ ವೇದಿಕೆ ಮಂಜೇಶ್ವರ ಇದರ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಮಾಡ ವಹಿಸಿದರು .ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಂಬಾರು ಮಂಗಲ್ಪಾಡಿ ಇದರ ಮುಖ್ಯಸ್ಥರು ಹಾಗು ಧಾರ್ಮಿಕ ಮುಂದಾಳು ಡಾ ವಿಜಯ ಪಂಡಿತ್…

Read More

ಜಿ.ಎಲ್.ಪಿ.ಶಾಲೆ ವಾಮಂಜೂರಿನಲ್ಲಿ 79ನೇ ಸ್ವಾತಂತ್ರ್ಯೋತ್ಸವ

ವಾಮಂಜೂರು : ಜಿ.ಎಲ್.ಪಿ.ಶಾಲೆ ವಾಮಂಜೂರಿನಲ್ಲಿ 79ನೇ ಸ್ವಾತಂತ್ರ್ಯೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸಿಲ್ವಿಯಾ ಟೀಚರ್ ಧ್ವಜಾರೋಹಣಗೈದರು.ವಾರ್ಡ್ ಮೆಂಬರ್ ಶ್ರೀಯುತ ಆದರ್ಶ ಬಿ.ಯಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಿ.ಟಿ.ಎ.ಅಧ್ಯಕ್ಷರಾದ ಶ್ರೀಯುತ ಕಲಂದರ್ ತಾಜುದ್ದೀನ್ ಇವರ ಅಧ್ಯಕ್ಷತೆಯಲ್ಲಿ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯರಾದ ಶ್ರೀಯುತ ಅಬ್ದುಲ್ ಹಮೀದ್,ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾದ ಶ್ರೀಯುತ ಶೇಖ್ ಉಸ್ಮಾನ್, ಶಾಲಾ ಹಳೆ ವಿದ್ಯಾರ್ಥಿಗಳಾದ ಶ್ರೀಯುತ ಅಝೀಝ್, ಶ್ರೀಯುತ ಮೊಯಿದೀನ್, ಶ್ರೀಯುತ ಬಶೀರ್,ಶ್ರೀಯುತಹನೀಫ್,ಶ್ರೀಮತಿ ಫಾಮೀದ ಬಾನು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,…

Read More

ಬಜಾಲ್ ನಂತೂರ್ ನಲ್ಲಿ ಜೆ.ಎಫ್ ಅಸೋಸಿಯೇಷನ್ ನಿಂದ 79ನೇ ಸ್ವಾತಂತ್ರ್ಯೋತ್ಸವ.

ಮಂಗಳೂರು: ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಎಲ್ಲ ಮಹಾತ್ಮಾರನ್ನು ನಾವು ಸ್ಮರಿಸಬೇಕು. ಸ್ವಾತಂತ್ರ್ಯವನ್ನು ಪಡೆಯಲು ಅವರು ಮಾಡಿದ ತ್ಯಾಗದಿಂದ ನಾವು ಇಂದು ನೆಮ್ಮದಿಯ ಉಸಿರಾಡುತ್ತಿದ್ದೇವೆ ಎಂದು ಮ.ನ.ಪಾ ನಿಕಟ ಪೂರ್ವ ಸದಸ್ಯ ಹಾಗೂ ಬಜಾಲ್ ನಂತೂರ್ ಬದ್ರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ರವೂಫ್ ಹೇಳಿದ್ದಾರೆ.79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜೆ.ಎಫ್ ಅಸೋಸಿಯೇಷನ್ (ರಿ) ಬಜಾಲ್ ನಂತೂರ್ ಇದರ ವತಿಯಿಂದ ಶುಕ್ರವಾ ಚೌಕ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಗೈದು ಬಳಿಕ ಅವರು ಮಾತನಾಡುತ್ತಿದ್ದರು. ಜೆ.ಎಫ್.ಎ ಸಂಸ್ಥೆ ಹಲವಾರು ಜನಪರ…

Read More

ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ 21ನೇ ಪದವಿ ಪ್ರಧಾನ ಸಮಾರಂಭ.

“ಸಂಸ್ಥೆಯ ಹೆಮ್ಮೆಯ ಸಾಧನೆಗಳಲ್ಲಿ ನೀವು ಪಾಲುದಾರರು ” – ವಾಸುದೇವ ಕಾಮತ್ಮಂಗಳೂರು, ಆ. 16: “ನಮ್ಮ ಕಾಲೇಜಿನಲ್ಲಿ ನಿರ್ಮಿಸಿದ ಆಧುನಿಕ ಸೌಲಭ್ಯಗಳು, ಈ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ದೊರಕಿದ ಸ್ವಾಯತ್ತ ಸ್ಥಾನಮಾನ, NAAC ಮಾನ್ಯತೆ, ಅನೇಕ ಶ್ರೇಣಿಗಳು ಹಾಗೂ ಚಿನ್ನದ ಪದಕ ಇವು ಸಂಸ್ಥೆಯ ಹೆಮ್ಮೆಯ ಸಾಧನೆಗಳು. ಈ ಸಾಧನೆಗಳ ಸಹಯಾತ್ರಿಗಳೆಂದರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು. ಬರುವ ಡಿಸೆಂಬರ್ 24, 2025ರಂದು ಜರುಗುವ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶದಲ್ಲಿ ಪ್ರತಿಯೊಬ್ಬ ಪದವೀಧರರೂ ಪಾಲ್ಗೊಳ್ಳಿ, ಸಂಸ್ಥೆಯ ಶಕ್ತಿಯನ್ನು ವಿಶ್ವಮಟ್ಟದಲ್ಲಿ…

Read More

ಮಂಗಲ್ಪಾಡಿಯಲ್ಲಿ ಮೇಲೈಸಿದ ಬಂಟರ ಆಟಿದ ಕೂಟ.

ಉದ್ಯಮಿ,ಕೊಡುಗೈ ದಾನಿ ಕಾಸರಗೋಡು ಜಿಲ್ಲಾ ಬಂಟರ ಭವನ ಕಟ್ಟಡ ಸಮಿತಿಯ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ, ಕುಳೂರು ಕನ್ಯಾನ ಇವರ ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಮಂಗಲ್ಪಾಡಿ ಮನೆಯ ಗದ್ದೆಯಲ್ಲಿ ಕಾಸರಗೋಡು ಜಿಲ್ಲಾ ಬಂಟರ ಸಮ್ಮಿಲನ ಹಾಗೂ ಆಟಿದ ಕೂಟ ಕಾರ್ಯಕ್ರಮ ಅದ್ದೂರಿಯಿಂದ ಜರುಗಿತು.ಜಿಲ್ಲೆಯ ಬಂಟರ ಸಂಘ, ಫಿರ್ಕಾ ಬಂಟರ ಸಂಘಗಳು, ಪಂಚಾಯತ್ ಮಟ್ಟದ ಎಲ್ಲಾ ಬಂಟರ ಸಂಘದ ಸಹಯೋಗದೊಂದಿಗೆ ಜರಗಿದ ಈ ಕಾರ್ಯಕ್ರಮದಲ್ಲಿ ಆಟಿದ ಕೂಟದ ಸಲುವಾಗಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಹಾಗೂ ಸ್ಪರ್ಧೆಗಳನ್ನು ಮನೋರಂಜನಾ ಕಾರ್ಯಕ್ರಮಗಳನ್ನು…

Read More

ಐಟೆಕ್ ಕುಂಬ್ಳೆಯಲ್ಲಿ ಸ್ವಾತಂತ್ರ್ಯೋತ್ಸವ.

ಕುಂಬಳೆ:: 79ನೇ ಸ್ವಾತಂತ್ರ್ಯೋತ್ಸವವನ್ನು ಐಟೆಕ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಕುಂಬಳೆಯಲ್ಲಿ ಆಚರಿಸಲಾಯಿತು. ಕುಂಬಳೆ ಗ್ರಾಮ ಪಂಚಾಯತ್ ಸದಸ್ಯೆಯಾದ ಶ್ರೀಮತಿ ವಿದ್ಯಾಪೈ ಧ್ವಜರೋಹಣಗೈದು ಶುಭ ಹಾರೈಕೆ ಮಾಡಿದರು. ಮಹಮ್ಮಾಯ ಟ್ರೇಡರ್ಸ್ ಮಾಲಕರಾದ ಸಂದೇಶ ಭಟ್, ವೈದ್ಯರಾದ ಗಣೇಶ್, ಕುಂಬಳೆ ಮಾಸ್ಟರ್ ಬುಕ್ ಹೌಸಿನ ಮಾಲಕೀಯರಾದ ಶ್ರೀಮತಿ ರಾಜೇಶ್ವರಿ, ವ್ಯಾಪಾರಸ್ಥರಾದ ಗೋಕುಲ್ ದಾಸ್ ರವರು ಉಪಸ್ಥಿತರಿದ್ದರು. ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲರಾದ ರವಿ ಮುಡಿಮಾರು ಸ್ವಾಗತಿಸಿ ವಂದಿಸಿದರು.

Read More

ಹಬ್ಬ ಹರಿದಿನಗಳ ಆಚರಣೆ ಮುಂದಿನ ಪೀಳಿಗೆಗೆ ಆದರ್ಶ – ಹರಿನಾಥ ಭಂಡಾರಿ.

ಉಪ್ಪಳ : ಇಲ್ಲಿಗೆ ಸಮೀಪದ ಮುಳಿಂಜ ಮದ್ದಪವಳ್ಳಚ್ಚಲ್ ಮಹಾನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವವು ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.ಮುಳಿಂಜ ಗುತ್ತು ಶ್ರೀ ನಂದರಾಜ ಭಂಡಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಶ್ರೀ ಹರಿನಾಥ ಭಂಡಾರಿ ತೆಂಗಿನಕಾಯಿ ಒಡೆಯುವ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಬಳಿಕ ಮಕ್ಕಳಿಗೆ, ಯುವಕ-ಯುವತಿಯರಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯನ್ನು ನಡೆಸಲಾಯಿತು. ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಯುವಶಕ್ತಿ…

Read More
error: Content is protected !!