ಕೊಂಡೆವೂರು ಶ್ರೀಗಳ 22ನೇ ಚಾತುರ್ಮಾಸ್ಯವ್ರತ ಸಂಕಲ್ಪ

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಪೂಜ್ಯ ಶ್ರೀಗಳು ತಮ್ಮ 22 ನೇ ಚಾತುರ್ಮಾಸ್ಯವ್ರತ ಸಂಕಲ್ಪವನ್ನು ಗುರುಪೂರ್ಣಿಮೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೈಗೊಂಡರು. ಬಳಿಕ ಬೆಳಿಗ್ಗೆ 9.00ಕ್ಕೆ ಗಣಹೋಮ, ಶ್ರೀ ನಿತ್ಯಾನಂದ ಗುರುಗಳಿಗೆ ಪಂಚಾಮೃತಾಭಿಷೇಕ ವಿಶೇಷ ಸೀಯಾಳಭಿಷೇಕ, 10:30 ರಿಂದ ವ್ಯಾಸವಪೂಜೆ 12:30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಯಿತು. ಸಂಜೆ 5 ಗಂಟೆ ಗೆ 108 ದಿನಗಳ ಸಂಧ್ಯಾ ಭಜನೆಗೆ ಪರಮಪೂಜ್ಯ ಶ್ರೀಗಳು ಚಾಲನೆ ನೀಡಿದರು.ಸಂಜೆ 6:30ಕ್ಕೆ ಮಹಾಪೂಜೆಯನಂತರ ಶ್ರೀ ಗುರುಪಾದುಕಾಪೂಜೆ ನಡೆದು ಬಳಿಕ…

Read More

ವರ್ಕಾಡಿ ಕಜೆ ಪದವು ಅಂಗನವಾಡಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

ಮಂಜೇಶ್ವರ : ವರ್ಕಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಕಜೆ ಪದವು ಎಂಬಲ್ಲಿ ಚಿಣ್ಣರ ಬೆಳವಣಿಗೆಗೆ ಆಧುನಿಕ ಸೌಕರ್ಯಗಳೊಂದಿಗೆ ಕೂಡಿದ ಸ್ಮಾರ್ಟ್ ಅಂಗನವಾಡಿ ಕಟ್ಟಡಕ್ಕೆ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಕಟ್ಟಡಕ್ಕೆ ಮಂಜೇಶ್ವರ ಶಾಸಕರು ಶಂಕು ಸ್ಥಾಪನೆ ನಡೆಸಿದರು.ವರ್ಕಾಡಿ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ಎಸ್ ಅಧ್ಯಕ್ಷತೆ ವಹಿಸಿದರು. ಗ್ರಾಮೀಣ ಪ್ರದೇಶವಾಗಿರುವ ಇಲ್ಲಿಯ ಚಿಣ್ಣರಿಗೆ ಶೈಕ್ಷಣಿಕ ಹಾಗೂ ಆಟದ ಸೌಲಭ್ಯಗಳನ್ನು ಒದಗಿಸುವ ಜೊತೆಯಾಗಿ ಸುರಕ್ಷಿತ ಹಾಗೂ ಆಧುನಿಕ ವಾತಾವರಣದಲ್ಲಿ ಚಿಣ್ಣರ ಬೆಳವಣಿಗೆಗೆ ಸಹಕಾರಿಯಾಗಲು ಹಾಗೂ ಸ್ಮಾರ್ಟ್…

Read More

ಸನಾತನ ಸಂದೇಶ ಯಾತ್ರೆಗೆ ಸ್ವಾಗತ ಸಮಿತಿ ರೂಪಿಕರಣ.

ಅಕ್ಟೋಬರ್ 7 ರಿಂದ 21 ರವರೆಗೆ ಕಾಸರಗೋಡಿನಿಂದ ತಿರುವನಂತಪುರಕ್ಕೆ ನಡೆಯಲಿರುವ ಸನಾಧನ ಸಂದೇಶ ಯಾತ್ರೆಗೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯ ಸ್ವಾಗತ ಸಮಿತಿ ರಚನೆ ಸಭೆಯು ಮಾರ್ಗ ದರ್ಶಕ ಮಂಡಲ ಕೇರಳ ಘಟಕದ ನೇತೃತ್ವದಲ್ಲಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಚಿನ್ಮಯ ಸಿಬಿಸಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಚಿನ್ಮಯ ಕೇರಳ ಘಟಕದ ಮುಖ್ಯಸ್ಥ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮಿ ವಹಿಸಿದ್ದರು ಮತ್ತು ಎಡನೀರು ಮಠಾದಿಶ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ…

Read More

ಮತೀಯ ಶಕ್ತಿಗಳ ಅಟ್ಟಹಾಸ ಕೊನೆಗೊಳಿಸಲು ಸಂಕಲ್ಪ -ಕಾಂಗ್ರೆಸ್

ರಾಜಕೀಯ ಅಧಿಕಾರ ಗಳಿಸುವ ದುರುದ್ದೇಶದಿಂದ ಮತೀಯ ಶಕ್ತಿಗಳು ದೇಶದಲ್ಲಿ ಇನ್ನಿಲ್ಲದ ದ್ವೇಷದ ರಾಜಕಾರಣದಲ್ಲಿ ನಿರತವಾಗಿದ್ದು, ಈ ಶಕ್ತಿಗಳನ್ನು ಹಿಮ್ಮೆಟ್ಟಿಸಿ ದೇಶದಲ್ಲಿ ಜಾತ್ಯಾತೀತತೆ ಹಾಗೂ ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಪಕ್ಷವು ಪ್ರತಿಜ್ಞಾ ಬದ್ಧವಾಗಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ. ಮಂಗಲ್ಪಾಡಿ ಮಂಡಲದ ಹದಿನೈದನೇ ಒಳಯಂ ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಣ ಸಭೆ ಹಾಗೂ ಮಹಾತ್ಮಾ ಗಾಂಧಿ ಕುಟುಂಬ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಮುಹಮ್ಮದ್ ಮೇರ್ಕಳರ ಅಧ್ಯಕ್ಷತೆಯಲ್ಲಿ ನಡೆದ…

Read More

ಸಂಯುಕ್ತ ಟ್ರೇಡ್ ಯೂನಿಯನ್‌ಗಳು ಕರೆ ನೀಡಿರುವ ರಾಷ್ಟ್ರೀಯ ಭಾರತ ಬಂದ್ ಯಶಸ್ವಿ

ಮಂಜೇಶ್ವರ: ಕೇಂದ್ರ ಸರಕಾರದ ಕಾರ್ಮಿಕ ಹಾಗೂ ಕೃಷಿಕ ವಿರೋಧಿ ನೀತಿಗಳಿಗೆ ವಿರೋಧವಾಗಿ ಸಂಯುಕ್ತ ಟ್ರೇಡ್ ಯೂನಿಯನ್‌ಗಳು ಕರೆ ನೀಡಿರುವ ರಾಷ್ಟ್ರೀಯ ಭಾರತ ಬಂದ್ ಮಂಜೇಶ್ವರದಲ್ಲಿ ಬಹುತೇಕ ಪೂರ್ಣಗೊಂಡಿದೆ.ಮಂಗಳವಾರ ರಾತ್ರಿ 12ರಿಂದ ಬುಧವಾರ ರಾತ್ರಿ 12ರವರೆಗೆ 24 ಗಂಟೆಗಳ ಕಾಲ ಮುಷ್ಕರವಾಗಿದ್ದು, ಈ ಅವಧಿಯಲ್ಲಿ ಮಂಜೇಶ್ವರ ಸಂಪೂರ್ಣ ಸ್ಥಬ್ಧವಾಗಿದೆ. ಖಾಸಗಿ ಬಸ್‌ಗಳ ಜೊತೆ ಜೆ.ಎಸ್.ಆರ್.ಟಿ.ಸಿ ಕೂಡ ಭಾರತ ಬಂದ್ ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬೆಳಿಗ್ಗೆಯಿಂದ ಕರ್ನಾಟಕ ಕೆ.ಎಸ್.ಆರ್.ಟಿ.ಸಿ ಬಸ್‌ಗಳೂ ರಸ್ತೆಗಿಳಿದಿಲ್ಲ. ಇವು ಎಲ್ಲವೂ…

Read More

ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಸ್ವರ್ಗ ಇದರ ಆಶ್ರಯದಲ್ಲಿ ಆಯೋಜಿಸಿದ “ಕೆಸರು ಗದ್ದೆಯಲ್ಲಿ ಒಂದು ದಿನ”

ಪೆರ್ಲ : ಪರಂಪರಾಗತ ಬತ್ತ ಗದ್ದೆಗಳನ್ನು ಆಚಾರ ವಿಚಾರಗಳನ್ನು ಯುವ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಸ್ವರ್ಗ ಇದರ ಆಶ್ರಯದಲ್ಲಿ ಆಯೋಜಿಸಿದ “ಕೆಸರು ಗದ್ದೆಯಲ್ಲಿ ಒಂದು ದಿನ” ಎಂಬ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಪ್ರಾಯ ಬೇಧ ಮರೆತು ಒಗ್ಗೂಡಿ ಕುಣಿದು ಕುಪ್ಪಳಿಸಿ ಅವಿಸ್ಮರಣೀಯ ಕಾರ್ಯಕ್ರಮವಾಯಿತು. ಬಜಕುಡೆ ದಿ.ಕೊರಗಪ್ಪ ನಾಯ್ಕರವರ ಬಯಲು ಗದ್ದೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಕೆ ಉದ್ಘಾಟಿಸಿದರು.ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದ ಅಧ್ಯಕ್ಷ…

Read More

ಪಾವೂರು ಕೇರಳ ಗ್ರಾಮೀಣ ಬ್ಯಾಂಕಿನ 13ನೇ ವಾರ್ಷಿಕೋತ್ಸವ ಆಚರಣೆ

ಮಂಜೇಶ್ವರ :ಪಾವೂರು ಕೇರಳ ಗ್ರಾಮೀಣ ಬ್ಯಾಂಕಿನ 13ನೇ ವಾರ್ಷಿಕೋತ್ಸವವನ್ನು ಪಾವೂರು ಗ್ರಾಮೀಣ ಬ್ಯಾಂಕಿನಲ್ಲಿ ಆಚರಣೆ ಮಾಡಲಾಯಿತು. ಶಾಖಾ ಮೆನೇಜರ್ ಶ್ರುತಿಯವರು ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮವನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ತ್ಯಂಪಣ್ಣ ರೈ ಮುಟ್ಲ ಇಸ್ಮಾಯಿಲ್ ಜಮಾಲ್ಅಸಿಸ್ಟೆಂಟ್ ಮೆನೇಜರ್ ರಾಜಿನ್ ,ಬ್ಯಾಂಕ್ ಸಿಬ್ಬಂದಿಗಳಾದ ಶಾನೇಶ್ ,ವೀಣಾ ,ಅಶೋಕ ಆಚಾರ್ಯ ಹಾಗೂ ಸಾರ್ವಜನಿಕರು ಭಾಗವಹಿಸಿದರು. 13ನೇ ವಾರ್ಶಿಕೋತ್ಸವವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಯಿತು

Read More

ಬಡವರನ್ನು ಮರೆತು ಬಂಡವಾಳಶಾಹಿಗಳ ಸೇವೆಯಲ್ಲಿ ನಿರತವಾದ ಎಡರಂಗ ಸರಕಾರ -ಕಾಂಗ್ರೆಸ್

ಕೇರಳದ ಎಡರಂಗ ಸರಕಾರವು ಬಡಜನರ ಹಿತಾಸಕ್ತಿ ಕಾಯುವ ತನ್ನ ಘೋಷಿತ ನೀತಿಯಿಂದ ಹಿನ್ನಡೆದು ಅದಾನಿ, ಸ್ಯಾಂಟಿಯಾಗೋ ಮಾರ್ಟಿನ್ ಮುಂತಾದ ಬಹುಕೋಟಿ ವ್ಯವಹಾರಗಳ ಶ್ರೀಮಂತ ಕುಳಗಳ ಸೇವೆಯಲ್ಲಿ ನಿರತವಾಗಿದೆಯೆಂದು ಕಾಂಗ್ರೆಸ್ ಆರೋಪಿಸಿದೆ. ಆಡಳಿತದ ಸಕಲ ವಲಯಗಳಲ್ಲೂ ಸಂಪೂರ್ಣ ವಿಫಲವಾದ ಎಡರಂಗ ಸರಕಾರವು ಪೊಳ್ಳು ಭರವಸೆ ಮತ್ತು ಅತಿರಂಜಿತ ಪ್ರಚಾರಗಳನ್ನು ನಡೆಸುತ್ತಾ ಕಾಲ ಕಳೆಯುತ್ತಿದೆ. ಹೇಳತಕ್ಕ ಯಾವ ಒಳಿತಿನ ಕಾರ್ಯ ನಡೆಸದಿದ್ದರೂ, ತೆರಿಗೆ ಭಯೋತ್ಪಾದನೆ ಹಾಗೂ ದಂಡ ವಸೂಲಿ ಮಾತ್ರ ನಿರಂತರ ನಡೆಸುತ್ತಿದೆ. ಜನರಿಗೆ ಜನರಿಗೆ ಹೊರೆಯಾಗಿ ಮಾರ್ಪಟ್ಟ ಈ…

Read More

ನಗರಸಭೆಯ ಭ್ರಷ್ಟಾಚಾರ ಪ್ರತಿಭಟಿಸಿ ಬಿಜೆಪಿ ಮಾರ್ಚ್ ಪೋಲೀಸರಿಂದ ಸತತ ಎರಡನೇ ದಿನವೂ ಜಲಫಿರಂಗಿ ಪ್ರಯೋಗ.

ಕಾಸರಗೋಡು ನಗರದಲ್ಲಿ ಸತತ ಎರಡನೆಯ ದಿನವೂ ಬಿಜೆಪಿ ಪ್ರತಿಭಟನಾ ಮಾರ್ಚ್ ವಿರುದ್ಧ ಪೋಲೀಸ್ ಜಲಫಿರಂಗಿ ಪ್ರಯೋಗ ನಡೆಯಿತು. ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಗೆ ನಡೆಸಿದ ಮಾರ್ಚ್ ವಿರುದ್ದ ಜಲಫಿರಂಗಿ ಪ್ರಯೋಗ ನಡೆದರೆ ಇಂದು ಬೆಳಿಗ್ಗೆ ನಗರಸಭಾ ಕಾರ್ಯಾಲಯಕ್ಕೆ ನಡೆಸಿದ ಮಾರ್ಚ್ ತಡೆದು ಜಲಫಿರಂಗಿ ಪ್ರಯೋಗ ನಡೆಯಿತು. ಕಾಸರಗೋಡು ನಗರಸಭೆಯ ಅಭಿವೃದ್ಧಿ ರಹಿತ ಭಷ್ಟಾಚಾರಗಳಿಂದ ಕಂಗೆಟ್ಟ ಮುಸ್ಲಿಂಲೀಗ್ ಆಡಳಿತವನ್ನು ಪ್ರತಿಭಟಿಸಿ ಬಿಜೆಪಿ ಪ್ರತಿಭಟನಾ ಮಾರ್ಚ್ ಹಮ್ಮಿಕೊಂಡಿತ್ತು. ನಗರದ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಮಾರ್ಚ್ ಆರಂಭಗೊಂಡಿತು. ನಗರಸಭಾ ಕಾರ್ಯಾಲಯದ ಗೇಟಿನ…

Read More

ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ವಾಚನ ಪಕ್ಷಾಚರಣೆ ಸಮಾರೋಪ, ಐ. ವಿ .ದಾಸ್ ಸಂಸ್ಕರಣೆ

ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ನೇತೃತ್ವದಲ್ಲಿ ಯುವಶಕ್ತಿ ಫ್ರೆಂಡ್ಸ್ ಗ್ರಂಥಾಲಯ ಸುಭಾಷ್ ನಗರದ ಸಹಯೋಗದೊಂದಿಗೆ ಜಿ.ಯಚ್. ಎಸ್ .ಎಸ್ ಬೇಕೂರಿನಲ್ಲಿ ತಾಲೂಕು ಮಟ್ಟದ ವಾಚನ ಪಕ್ಷಾಚರಣೆಯ ಸಮಾರೋಪ ಹಾಗೂ ಐವಿ ದಾಸ್ ರ ಸಂಸ್ಕರಣೆಯು ನಡೆಯಿತು. ರಾಜ್ಯ ಲೈಬ್ರರಿ ಕೌನ್ಸಿಲ್ ನ ಕಾರ್ಯದರ್ಶಿಯಾಗಿದ್ದ ನ್ಯಾಯವಾದಿ ಪಿ ಅಪ್ಪು ಕುಟ್ಟನ್ ರವರು ಉದ್ಘಾಟಿಸಿದರು. ಕೇರಳ ರಾಜ್ಯ ಲೈಬ್ರರಿಯ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಮಾಸ್ಟರ್ ಸಂಸ್ಕರಣೆ ನಡೆಸಿದರು….

Read More
error: Content is protected !!