ತಲಪಾಡಿ : ಸಂಚಾರಕ್ಕೆ ಯೋಗ್ಯವಲ್ಲದ KSRTC BUS .ಆರು ಮಂದಿಯ ಸಾವಿಗೆ ಕಾರಣ.
ಗುರುವಾರ ಚಾಲಕನ ಅಜಾಗರೂಕತೆ ಹಾಗೂ ಬಸ್ನ ಸವೆದ ಚಕ್ರದಿಂದ ತಲಪಾಡಿಯಲ್ಲಿ ಉಂಟಾದ ಭೀಕರ ಅಪಘಾತದಲ್ಲಿ ಆರು ಮಂದಿ ದುರ್ಮರಣಕ್ಕೀಡಾದ ಘಟನೆ ರಾಜ್ಯಾದ್ಯಂತ ಶೋಕ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಊರವರು ಇಂದು ಬೆಳಿಗ್ಗೆ ಗಡಿ ಪ್ರದೇಶದಲ್ಲಿರುವ ಮುಖ್ಯ ರಸ್ತೆಯಲ್ಲಿ ಸಾರಿಗೆ ಬಸ್ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಮುಖ್ಯವಾಗಿ ಸವೆದ ಚಕ್ರಗಳುಳ್ಳ ಹಾಗೂ ಸಾರಿ ಹೋಗಿರುವ ಬಸ್ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಲುಪಿದ ಪೊಲೀಸರು ಹಾಗೂ ಮೋಟಾರು…
