ಬಂದ್ಯೋಡ್ನಲ್ಲಿ ಭೀಕರ ಅಪಘಾತ: ಯುವಕ ಸಾವು, ಇಬ್ಬರಿಗೆ ಗಂಭೀರ ಗಾಯ
ಮಂಜೇಶ್ವರ: ಕುಂಬಳೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡ್ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕರ್ನಾಟಕದ ಪಡುಬಿದ್ರಿ ಬಂಕೆರೆ ರಸ್ತೆಯ ಅಬ್ದುಲ್ ರಹೀಂ ಎಂಬುವವರ ಪುತ್ರ ಮುಹಮ್ಮದ್ ರಾಹಿಲ್ (34) ಸಾವನ್ನಪ್ಪಿದ ದುರ್ದೈವಿ. ಸ್ಕೂಟರ್ನಲ್ಲಿದ್ದ ಅವರ ಸ್ನೇಹಿತರಾದ ಅಬ್ದುಲ್ ಜಸೀರ್ ಮತ್ತು ಮುಹಮ್ಮದ್ ರೈಸ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಳ ಭಾಗದಿಂದ ಬಂದ್ಯೋಡ್ ಕಡೆಗೆ ಸ್ಕೂಟರ್ನಲ್ಲಿ ಮೂವರು ಪ್ರಯಾಣಿಸುತ್ತಿದ್ದಾಗ, ಅದೇ ದಿಕ್ಕಿನಿಂದ…