ವಿಟ್ಲ: ವಿಠಲ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಹಿರಿಯರು ಹಾಗೂ ದಾನಿಗಳಾದ ಕೃಷ್ಣಪ್ರಸಾದ್ ಅವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದಕ್ಕೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ವಿಠಲ ಎಜುಕೇಶನ್ ಸೊಸೈಟಿಯ ಸಂಚಾಲಕರಾದ ಎಂ. ರಾಧಾಕೃಷ್ಣ ನಾಯಕ್, ಆಡಳಿತ ಮಂಡಳಿ ಸದಸ್ಯರಾದ ಎಂ. ನಿತ್ಯಾನಂದ ನಾಯಕ್, ಕೌನ್ಸಿಲ್ ಸದಸ್ಯರಾದ ಸುದರ್ಶನ್ ಪಡಿಯರ್ ಹಾಗೂ ವಿಟ್ಲ ಬಾಬು ಕೆ., ಅಧ್ಯಾಪಕರಾದ ಮೋಹನ್, ಬಿ.ಎನ್.ಸಿ.ಸಿ. ಮುಖ್ಯಸ್ಥ ಶ್ರೀನಿವಾಸ್, ಶಿಕ್ಷಕ ವೃಂದ, ಸ್ಕೌಟ್–ಗೈಡ್ಸ್ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿ ವತಿಯಿಂದ ನೀಡಲಾದ ಸಸಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣದ ಸಂದೇಶವನ್ನು ಸಾರುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

