ಅಯ್ಯಾಯಿರಂಪಟ್ಟಂ ಸ್ವರೂಪ ನಾಡಿನ ಅತ್ಯಂತ ಪುರಾತನ, ಋಷಿಮುನಿಗಳ ತಪೋ ಭೂಮಿ, ಉಪ್ಪಳ 25 ವಿಲ್ಲು ಶ್ರೀ ಭಗವತಿ ಕ್ಷೇತ್ರದ ಮಹಾಶಕ್ತಿ ಐವರ್ ಭಗವತಿ ಮಾತೆಯ ಪ್ರಧಾನ ತರವಾಡು, ತುರ್ತಿ ಶ್ರೀ ವಿಷ್ಣುಮೂರ್ತಿ, ವಯನಾಟ್ಟು ಕುಲವನ್ ಮಹಾಮಲರಾಯ ದೈವಸ್ಥಾನ, ತಾರವಡ್ ಉತ್ಸವಸ್ಥಾನದಲ್ಲಿ ಪಡೆoಕುಡಿ ತೀಯಾ (ಕೋಟ್ಯಾನ್ ) ತರವಾಡಿನಲ್ಲಿ ಮಹಾ ಉತ್ಸವ ನಡೆಯಲಿದೆ .
ಇದರ ಪೂರ್ವ ಭಾವಿಯಾಗಿ ಸೀಮೆಯ ದೈವ ದೇವಾದಿಗಳಿಗೆ ನೈವೇದ್ಯಕ್ಕೆ ಭತ್ತ ಅಳಿಯಿವುದು ಕೂವಂ ಅಳಕ್ಕಲ್ ಹಾಗು ಅಡಯಾಳo ಕಾರ್ಯಕ್ರಮ ಇಂದು ವಿಜೃಂಭಣೆಯಿಂದ ಜರಗಿತು .
ಅದೇ ರೀತಿ 2026 ಏಪ್ರಿಲ್ 9, 10, 11, 12 ದಿನಾಂಕಗಳಂದು ಶ್ರೀ ವಯನಾಟ್ಟು ಕುಲವನ್ ತೆಯ್ಯಂಕೆಟ್ಟ್ ಮಹೋತ್ಸವವನ್ನು ಭಕ್ತಿ ಪೂರ್ವಕವಾಗಿ ನಡೆಯಲಿದೆವಿಷ್ಣು ಮೂರ್ತಿ ತೆಯ್ಯo , ಮಲರಾಯ ಬಂಟ ನೇಮೋತ್ಸವ , ಕೊರತ್ತಿಯಮ್ಮನ ಕೋಲ , ಗುಳಿಗನ ಕೋಲ , ವಯನಾಟ್ಟು ಕುಲವನ್ ತೆಯ್ಯo , ಕಾಂಡನರ್ ಕೇಳನ್ ತೆಯ್ಯo ವೆಲ್ಲಾಟಂ ಹೀಗೆ 4 ದಿನಗಳಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ