ಕಾಟಿಪಳ್ಳ ನಿವಾಸಿ ಆಟೋ ಚಾಲಕ ವಿಘ್ನೇಶ್ ಕಾಣೆ: ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು
ಮಂಗಳೂರು- ನಗರದ ಕೃಷ್ಣಪುರ ಕಾಟಿಪಳ್ಳ ನಿವಾಸಿ ವಿಘ್ನೇಶ್ (40) ಬಾಡಿಗೆ ಆಟೋರಿಕ್ಷಾ ಚಾಲಕರಾಗಿ ಕೆಲಸವನ್ನು ಮಾಡಿಕೊಂಡಿದ್ದರು. ಸಾಲವನ್ನು ಪಡೆದುಕೊಂಡಿದ್ದ ಅವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದರು. ಫೆಬ್ರವರಿ 7 ರಂದು ಬಾಡಿಗೆ ಆಟೋರಿಕ್ಷಾ ತರಲು ಹಾಗೂ ಆರ್.ಟಿ.ಒ ಕಛೇರಿಗೆ ಪರವಾನಿಗೆ ಪಡೆಯುವ ಬಗ್ಗೆ ಮಂಗಳೂರಿಗೆ ತೆರಳಿರುವುದಾಗಿ ತಿಳಿಸಿ ಹೋದವರು ಈವರೆಗೆ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದವರ ಚಹರೆ : ಎತ್ತರ ಸುಮಾರು 5.2 ಅಡಿ,…