ಬದಿಯಡ್ಕದಲ್ಲಿ ಗೃಹಿಣಿ ಹತ್ಯೆ: ಕೃತ್ಯದ ಸಂಪೂರ್ಣ ವಿವರ ನೀಡಿದ ಆರೋಪಿ

ಬದಿಯಡ್ಕ:ಕುಂಡಾಜೆ ಅಜಿಲದಲ್ಲಿ ಗೃಹಿಣಿ ಪುಷ್ಪಲತಾ ವಿ. ಶೆಟ್ಟಿ (70) ಅವರನ್ನು ಹತ್ಯೆ ಮಾಡಿ ಚಿನ್ನದ ಸರ ಕಳವು ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಡು ಕಡಿತ ಕಾರ್ಮಿಕ ಪರಮೇಶ್ವರ ಕೆ. (ರಮೇಶ್ ನಾಯ್ಕ್–48) ಅವರನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಕಾಸರಗೋಡು ನ್ಯಾಯಾಲಯವು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಹತ್ಯೆ ನಡೆದ ಪುಷ್ಪಲತಾ ಶೆಟ್ಟಿ ಅವರ ಮನೆಗೆ ಕರೆತಂದು ಪೊಲೀಸರು ಸ್ಥಳ ಮಹಜರು ಹಾಗೂ ಸಾಕ್ಷ್ಯ ಸಂಗ್ರಹ ನಡೆಸಿದರು.ಹತ್ಯೆಯನ್ನು ಹೇಗೆ ನಡೆಸಿದ್ದಾನೆ ಎಂಬುದನ್ನು ಆರೋಪಿಯು…

Read More

ಬದಿಯಡ್ಕದಲ್ಲಿ ಮದುವೆ ಭರವಸೆ ನೀಡಿ ಗಲ್ಫ್ ಉದ್ಯೋಗಿಯ ಪತ್ನಿಗೆ ಕಿರುಕುಳ: ಮೀನು ವ್ಯಾಪಾರಿ ಬಂಧನ

ಬದಿಯಡ್ಕ: ಬದಿಯಡ್ಕದಲ್ಲಿ ಗಲ್ಫ್ ಉದ್ಯೋಗಿಯ ಪತ್ನಿಗೆ ಮದುವೆ ಭರವಸೆ ನೀಡಿ ಕಿರುಕುಳ ನೀಡಿದ ಆರೋಪದ ಮೇಲೆ ಮೀನು ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ನೀರ್ಚಾಲು ಬೀಜಂತಡ್ಕ ನಿವಾಸಿ ಅಬ್ದುಲ್ ಖಾದರ್ (45) ಬಂಧಿತ ಆರೋಪಿ. 38 ವರ್ಷದ ಯುವತಿಯ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿದ್ದಾರೆ. 2025 ಆಗಸ್ಟ್ 1ರಿಂದ ಆರೋಪಿಯು ಮದುವೆ ಭರವಸೆ ನೀಡಿ ಕಿರುಕುಳ ನೀಡಿದ್ದು, ದೃಶ್ಯಗಳನ್ನು ಪತಿಗೆ ಕಳುಹಿಸುವುದಾಗಿ ಬೆದರಿಸಿದ್ದಾನೆ ಎಂದು ದೂರಲಾಗಿದೆ. ನ್ಯಾಯಾಲಯ ಆರೋಪಿಗೆ ಎರಡು ವಾರಗಳ ರಿಮಾಂಡ್ ವಿಧಿಸಿದೆ.

Read More

ಕಾಂಗ್ರೆಸ್ ನ ಹಿಂದೂ ವಿರೋಧಿ ಮನಸ್ಥಿತಿ ಬಹಿರಂಗವಾಗುತ್ತಿದೆ:- ಶಾಸಕ ಕಾಮತ್

ಹಿರಿಯ ಹಿಂದೂ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ರವರ ಮೇಲೆ ಕೋಮು ಪ್ರಚೋದನೆ ಎಂಬ ಕಪೋಲಕಲ್ಪಿತ ಆರೋಪ ಹೊರಿಸಿ ಪ್ರಕರಣ ದಾಖಲಿಸಿರುವುದು, ಉಡುಪಿ ಪರ್ಯಾಯದಲ್ಲಿ ಕೇಸರಿ ಧ್ವಜ ಕುರಿತಾಗಿ ವಿವಾದ ಎಬ್ಬಿಸಿರುವುದು ಕಾಂಗ್ರೆಸ್ಸಿನ ಹಿಂದೂ ವಿರೋಧಿ ಮನಸ್ಥಿತಿಯನ್ನು ಬಹಿರಂಗಗೊಳಿಸುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಲ್ಲಡ್ಕ ಪ್ರಭಾಕರ ಭಟ್ ರವರು ಕಾರ್ಯಕ್ರಮವೊಂದರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಇತಿಹಾಸ ಹಾಗೂ ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ಅನೇಕ ಗಂಭೀರ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದರು. ಅದನ್ನೇ…

Read More

ರಾಜ್ಯಪಾಲರಿಗೆ ಸದನದಲ್ಲಿ ಅಗೌರವ ತೋರಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ನಡೆ ಖಂಡನೀಯ : ವಿಧಾನ ಪರಿಷತ್ ನಾಯಕ ಕಿಶೋರ್ ಕುಮಾರ್ ಪುತ್ತೂರು

ಬೆಂಗಳೂರು:”ರಾಜ್ಯದ ಪ್ರಥಮ ಪ್ರಜೆ, ಗೌರವಾನ್ವಿತ ರಾಜ್ಯಪಾಲರಿಗೆ ಸದನದಲ್ಲಿ ಅಡ್ಡಿಪಡಿಸಿ, ಅವರ ದಾರಿಯನ್ನು ಅಡ್ಡಗಟ್ಟಿ ದೈಹಿಕವಾಗಿ ಹಲ್ಲೆಗೆ ಯತ್ನಿಸಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ನಡೆ ಅತ್ಯಂತ ಹೇಯ ಮತ್ತು ಖಂಡನೀಯ. ಇದು ಪ್ರಜಾಪ್ರಭುತ್ವದ ಕರಾಳ ದಿನ,” ಎಂದು ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ಸಿಗರ ಗೂಂಡಾ ವರ್ತನೆ ಮತ್ತು ಕೀಳುಮಟ್ಟದ ರಾಜಕೀಯದ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಕೃಪಾಪೋಷಿತ ಸುಳ್ಳನ್ನು ಓದದಿದ್ದಕ್ಕೆ ರಾಜ್ಯಪಾಲರ…

Read More

ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ(ನೋಂ) ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 28 ರಂದು ಸಾರ್ವತ್ರಿಕ ಮುಷ್ಕರ … !

ಮಂಗಳೂರು:ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ(ನೋಂ) ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ (ನೋಂ) ಸಂಘಟನೆಗಳ ಮುಖ್ಯಸ್ಥರು ಬುದ್ದಿಮಾಂದ್ಯತೆ, ಆಟಿಸಂ, ಮೆದುಳಿನ ಪಾಶ್ವ, ಬಹುವಿಧ ನ್ಯೂನತೆ, ನಿರ್ದಿಷ್ಟ ಕಲಿಕೆಯ ಸಮಸ್ಯೆ, ಶ್ರವಣ ದೋಷ ಹಾಗೂ ದೃಷ್ಟಿ ಮಾಂದ್ಯತೆ ಇರುವ ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಸರಕಾರದಿಂದ ಸೂಕ್ತ ಸ್ಪಂದನೆ, ಹಾಗೂ ಕ್ಲಪ್ತ ಸಮಯಕ್ಕೆ ಅನುದಾನ ಬಾರದೆ ಸಮಸ್ಯೆಯನ್ನು ಈ ಶಾಲೆಗಳು ಎದುರಿಸುತ್ತಿದ್ದು ಈ ಬಗ್ಗೆ ಸರಕಾರ ಕೋರಿಕೆಗೆ ಈಡೇರಿಸಬೇಕ್ಕೆನ್ನುವ…

Read More

ಪ್ರಿಯಕರನೊಂದಿಗೆ ಸರಸದ ಜೀವನಕ್ಕಾಗಿ ಒಂದೂವರೆ ವರ್ಷದ ಕಂದಮ್ಮನನ್ನು ಸಮುದ್ರಕ್ಕೆ ಎಸೆದು ಕೊಂದ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಕಣ್ಣೂರು:ಪ್ರಿಯಕರನೊಂದಿಗೆ ಮೋಜಿನ ಜೀವನ ಸಾಗಿಸುವ ಉದ್ದೇಶದಿಂದ ಒಂದೂವರೆ ವರ್ಷದ ಬಾಲಕನನ್ನು ಸಮುದ್ರಕ್ಕೆ ಎಸೆದು ಕೊಂದ ಪ್ರಕರಣದಲ್ಲಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ತಳಿಪರಂಬ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಥೈಯಿಲ್ ಬೀಚ್ ನಿವಾಸಿ ಶರಣ್ಯಗೆ ಶಿಕ್ಷೆ ವಿಧಿಸಿದೆ. ಮಗುವನ್ನು ಕೊಂದ ಪ್ರಕರಣದಲ್ಲಿ ತಾಯಿ ತಪ್ಪಿತಸ್ಥೆ ಎಂದು ನ್ಯಾಯಾಲಯವು ಈ ಹಿಂದೆ ಘೋಷಿಸಿತ್ತು. ಪಿತೂರಿ ಮತ್ತು ಪ್ರಚೋದನೆಯನ್ನು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಶರಣ್ಯಳ ಸ್ನೇಹಿತ ನಿತಿನ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿತು. ಪೊಲೀಸರು ಮತ್ತು ಪ್ರಾಸಿಕ್ಯೂಷನ್ ಪುರಾವೆಗಳನ್ನು ಕಂಡುಹಿಡಿಯಲು ವಿಫಲವಾಗಿದೆ ಎಂದು…

Read More

ಕಾಸರಗೋಡು-ಮಂಗಳೂರು ಕೆ.ಎಸ್ಸಾರ್ಟಿಸಿ ಪ್ರಯಾಣಿಕರಿಗೆ ಟೋಲ್ ಬಿಸಿ ತಟ್ಟತೊಡಗಿದೆ. ಬಸ್ ದರ 7 ರೂ.ಹೆಚ್ಚಳ

ಮಂಗಳೂರು : ಕಾಸರಗೋಡು-ಮಂಗಳೂರು ಕೆ.ಎಸ್ಸಾರ್ಟಿಸಿ ಪ್ರಯಾಣಿಕರಿಗೆ ಟೋಲ್ ಬಿಸಿ ತಟ್ಟತೊಡಗಿದೆ. ಬಸ್ ದರ 7 ರೂ.ಹೆಚ್ಚಾಗಿದೆ .ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್ ಸಂಗ್ರಹ ಆರಂಭವಾದ ಹಿನ್ನೆಲೆಯಲ್ಲಿ ಕಾಸರಗೋಡು-ಮಂಗಳೂರು ನಡುವೆ ಸಂಚರಿಸುವ ಕರ್ನಾಟಕ ಸಾರಿಗೆ (KSRTC) ಬಸ್ ದರವನ್ನು ಹೆಚ್ಚಿಸಲಾಗಿದ್ದು, ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಅಂತರರಾಜ್ಯ ಹೆದ್ದಾರಿಯ ಟೋಲ್ ಬೂತ್ ಮೂಲಕ ಹಾದುಹೋಗುವ ಪ್ರತಿ ಪ್ರಯಾಣಿಕರು ಈಗ ಮೂಲ ದರಕ್ಕಿಂತ ಹೆಚ್ಚುವರಿಯಾಗಿ 7 ರೂಪಾಯಿ ಪಾವತಿಸಬೇಕಾಗುತ್ತದೆ. ಈವರೆಗೆ ಕಾಸರಗೋಡಿನಿಂದ ಮಂಗಳೂರಿಗೆ 81 ರೂಪಾಯಿ ಇದ್ದ ಟಿಕೆಟ್ ದರವು ಇದೀಗ…

Read More

ಜನವರಿ 31 ರೊಳಗೆ ಮದುವೆ ಆಗುವಂತೆ ಜಗನ್ನಿವಾಸ್ ರಾವ್ ಮಗ ಕೃಷ್ಣ ಜೆ ರಾವ್ ಒಪ್ಪಿಗೆ : ಹಿಂದುಳಿದ ವರ್ಗಗಳ ಅಯೋಗದ ಸದಸ್ಯೆ ಪ್ರತಿಭಾ ಕುಳಾಯಿ

ಮಂಗಳೂರು : ಪುತ್ತೂರಿನಲ್ಲಿ ಬೆಳಕಿಗೆ ಬಂದಿರುವ ‘ಲವ್–ಸೆಕ್ಸ್–ಧೋಖಾ’ ಪ್ರಕರಣ ಸಂಧಾನ ಹಂತಕ್ಕೆ ಬಂದಿದ್ದು ಮದುವೆಯಾಗುವುದಾಗಿ ಕೃಷ್ಣನ ಕುಟುಂಬದವರು ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂಬುದಾಗಿ ಈಗಾಗಲೇ ತಿಳಿದು ಬಂದಿದೆ . ಕೃಷ್ಣ ಜಿ ರಾವ್ ಜನವರಿ 31ರೊಳಗೆ ಮದುವೆ ಆಗದಿದ್ದರೆ ಫೆಬ್ರವರಿ 7ರಂದು ನಾಮಕರಣ ಕಾರ್ಯಕ್ರಮ ನಡೆಯಲಿದೆ .ನಂತರ ಯಾವುದೇ ಸಂಧಾನ ಇಲ್ಲ ಎಂದು ಹಿಂದುಳಿದ ವರ್ಗಗಳ ಅಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಎಚ್ಚರಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಜನವರಿ 24ರಂದು ಕಲ್ಲಡ್ಕದಲ್ಲಿ ಮಗುವಿಗೆ ನಾಮಕರಣಕ್ಕೆ ದಿನ ನಿಗದಿಪಡಿಸಲಾಗಿತ್ತು….

Read More

ವೇತನ ಪಾವತಿ ವಿಳಂಬ ಖಂಡಿಸಿ ಬಂಟ್ವಾಳ ಪುರಸಭೆ ಎದುರು ಕನಿಷ್ಠ ವೇತನ–ಹೊರಗುತ್ತಿಗೆ ನೌಕರರ ಮರು ಪ್ರತಿಭಟನೆ, ಕುಡಿಯುವ ನೀರಿಗೆ ಸಂಕಷ್ಟ

ಬಂಟ್ವಾಳ: ಬಂಟ್ವಾಳ ಪುರಸಭಾ ಕಾರ್ಯಾಲಯದಲ್ಲಿ 2025 ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ಪಾವತಿಸದಿರುವ ಬಗ್ಗೆ ಕನಿಷ್ಠ ವೇತನ ಮತ್ತು ಹೊರಗುತ್ತಿಗೆ ನೌಕರರರಿಂದ ಪುರಸಭೆಯ ಬಾಗಿಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.ಕಳೆದ ಜ.6 ರಂದು ಕಾರ್ಮಿಕರ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು.ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರುಗಳು ಪ್ರತಿಭಟನೆಗೆ ಸಾಥ್ ನೀಡಿದ್ದು, ಕಾರ್ಮಿಕರ ಪರವಾಗಿ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರ ಜೊತೆ ಮಾತುಕತೆ ನಡೆಸಿದರು.ಈ ವೇಳೆ ಕಾರ್ಮಿಕರಿಗೆ ವೇತನ ನೀಡುವ ಭರವಸೆಯನ್ನು ನೀಡಿದ್ದು,ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದಕ್ಕೆ,…

Read More

ಜನವರಿ 24ರಂದು : ಲಯನ್ಸ್ ಜಿಲ್ಲೆ 317D, ಪ್ರಾಂತ III ವತಿಯಿಂದ ‘ಪರಿಕ್ರಮ’ ಪ್ರಾಂತೀಯ ಸಮ್ಮೇಳನ*

ಮಂಗಳೂರು : ಲಯನ್ಸ್ ಜಿಲ್ಲೆ 317D, ಪ್ರಾಂತ್ಯ III, ಪ್ರಾಂತೀಯ ಸಮ್ಮೇಳನ ‘ಪರಿಕ್ರಮ’ ಸಮಾರಂಭವು ಜನವರಿ 24ರಂದು ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಇವರ ಆತಿಥ್ಯದಲ್ಲಿ ನಗರದ ಸುಲ್ತಾನ್ ಬತ್ತೇರಿ ಬಳಿ ಇರುವ ಸ್ವಸ್ತಿಕಾ ವಾಟರ್ ಫಂಟ್ ಇಲ್ಲಿ ಸಂಜೆ 3:30 ರಿಂದ ನಡೆಯಲಿದೆ ಎಂದು ಪ್ರಾಂತ್ಯ IIIರ ಪ್ರಾಂತೀಯ ಅಧ್ಯಕ್ಷೆ ಗಾಯತ್ರಿ ಅರವಿಂದ ರಾವ್ ಕೇದಿಗೆ ಹೇಳಿದರು. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್  200ಕ್ಕೂ ಹೆಚ್ಚು ದೇಶಗಳಲ್ಲಿ…

Read More
error: Content is protected !!