ನಂಬಿ ಕೆಡಬೇಡಿ …. ನಂಬಿ ಮೂರ್ಖನಾಗಬೇಡಿ….!
ಮೋಸ ಹೋಗುವ ಮನಸಿನವರು ಪ್ರತಿ ಬಾರಿ ಮೋಸ ಹೋಗ್ತಾನೇ ಇರುತ್ತಾರೆ. ಅದು ತಿಳಿಯದೆ, ಅರಿಯದೆ, ಎಂಬುದಕ್ಕಿಂದ ಅತಿಯಾದ ವಿಶ್ವಾಸದಿಂದಲೇ ಆಗಿರುತ್ತದೆ. ಅದು ಅರಿವಿಗೆ ಬಂದಾಗ ಮನಸ್ಸಿಗೆ ತೀವ್ರ ಘಾಸಿಯಾಗುತ್ತದೆ. ಅದು ಕನಸಿನ ಕೋರಿಕೆಗೆ, ಮನಸ್ಸಿನ ಬೇಡಿಕೆಗೆ, ತನುವಿನ ಉಲ್ಲಾಸಕ್ಕೆ ತಣ್ಣೀರು ಎರಚುವುದಂತೂ ಖಂಡಿತಾ. ಕೆಲವು ಸಾರಿ ಅರಿಯದೆ, ಯಾರನ್ನೋ ಅರಿತುಕೊಳ್ಳಬೇಕೆನ್ನುವ ಮಹದಾಸೆಯಿಂದ ಗೆಳೆತನ ಮಾಡಿಬಿಡುತ್ತೇವೆ. ಆದರೆ ಮುಂದೆ ಗೊತ್ತಾಗುವಾಗ ತಡವಾಗುತ್ತದೆ, ಆ ಪರಿಚಯವೇ ಬಾಳಿಗೆ ಮುಳುವಾಗಿರುತ್ತದೆ. ಪ್ರತಿ ಬಾರಿಯೂ ಹಾಗೆಂದಲ್ಲ, ಆದರೆ ಅನೇಕರಿಗೆ ಇದರ ಅನುಭವ ಆಗಿಯೇ…