ದುರಾಡಳಿತ, ಭ್ರಷ್ಟಾಚಾರ ಆರೋಪ: ಮಂಗಳೂರು ಪಾಲಿಕೆ ಎದುರು ಬಿಜೆಪಿ ಪ್ರತಿಭಟನೆ

ಮಂಗಳೂರು: Mangaluru City Corporation ನಲ್ಲಿ ದುರಾಡಳಿತ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳು ಜಾರಿಯಲ್ಲಿವೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಾಲಿಕೆ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಬಿಜೆಪಿ, ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಮಂಡಲಗಳ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಆಕ್ರೋಶ ವ್ಯಕ್ತಪಡಿಸಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಜನರ ಸಮಸ್ಯೆಗಳಿಗೆ ಪಾಲಿಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್…

Read More

ಚಾಂದ್ರಮಾನ ಯುಗಾದಿ

[ಕಾಲಚಕ್ರದ ನವೋದಯ ಮತ್ತು ಸಾಂಸ್ಕೃತಿಕ ವೈಭವ] ​ಭಾರತೀಯ ಸನಾತನ ಪರಂಪರೆಯಲ್ಲಿ ಕಾಲಗಣನೆಗೆ ಕೇವಲ ಅಂಕಿ-ಅಂಶಗಳ ಬೆಲೆ ಮಾತ್ರವಲ್ಲ, ಅದಕ್ಕೊಂದು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನವಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನತೆಗೆ ಹೊಸ ವರ್ಷದ ಮುನ್ನುಡಿಯೇ ಚಾಂದ್ರಮಾನ ಯುಗಾದಿ.​ಯುಗಾದಿ: ಪದದ ಅರ್ಥ ವಿಸ್ತಾರ‘ಯುಗಾದಿ’ ಎನ್ನುವ ಪದವು ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಎಂಬ ಎರಡು ಶಬ್ದಗಳಿಂದ ನಿಷ್ಪನ್ನವಾಗಿದೆ. ‘ಯುಗ’ ಎಂದರೆ ಒಂದು ಕಾಲಘಟ್ಟ ಅಥವಾ ನಿರ್ದಿಷ್ಟ ಕಾಲಾವಧಿ, ‘ಆದಿ’ ಎಂದರೆ ಆರಂಭ. ಅಂದರೆ, ಹೊಸ ಕಾಲದ ಉದಯ…

Read More

ಕೊಣಾಜೆ ವ್ಯಾಪ್ತಿಯಲ್ಲಿ 9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಆಶೀಶ್ ಪೂಜಾರಿ (33) ಎಂದು ಗುರುತಿಸಲಾಗಿದ್ದು, ಮಡ್ಯಾರ್ ನಿವಾಸಿಯಾಗಿದ್ದಾನೆ. ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿಯು ಬಾಲಕನನ್ನು ಹಣ ಹಾಗೂ ತಿಂಡಿ ನೀಡುವ ನೆಪದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅಸಭ್ಯ ಕ್ರಿಯೆಗಳಿಗೆ ಪ್ರೇರೇಪಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ….

Read More

ಹೊಸ ವರ್ಷದ ಮೊದಲ ಯುಗಾದಿ  

ಭಾರತದ ವಿವಿಧ ಕಡೆಗಳಲ್ಲಿ ಈ ದಿನ ಹೊಸ ವರ್ಷವನ್ನಾಗಿ ಯುಗಾದಿಯನ್ನು ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆ ಎಂದರೆ  ಬೇವು ಬೆಲ್ಲದ ಸವಿಯ ತಿಂದು ಜೀವನದಲ್ಲಿ ಬರುವಂತಹ ಸಿಹಿ ಕಹಿ ಘಟನೆಗಳನ್ನು ಸಮನಾಗಿ ಸ್ವೀಕರಿಸಬೇಕು  ಅವುಗಳನ್ನು ಸಮನಾಗಿ ಅನುಭವಿಸಬೇಕು ಎನ್ನುವ ತಾತ್ವಿಕ ಅವಕಾಶಗಳು ಅದರಲ್ಲಿ ಅಡಕವಾಗಿರುವುದು ವಿಶೇಷ.   ಪ್ರತಿಯೊಬ್ಬರ ಮನೆಯಲ್ಲಿ ಹೆಣ್ಣು ಮಕ್ಕಳು ಮುಂಜಾನೆ ಎದ್ದು, ಮನೆಯ ಅಂಗಳವನ್ನು ಸ್ವಚಮಾಡಿ, ರಂಗು ರಂಗಿನ ರಂಗೋಲಿಯನ್ನು  ಮನೆ ಮುಂದೆ ಬಿಡಿಸಿ,  ಮಾವಿನ ಎಲೆಯ ಜೊತೆಗೆ ಬೇವಿನ ಎಲೆಯ ತೋರಣವನ್ನು ಬಾಗಿಲಿಗೆ ಕಟ್ಟಿ ಸಂಭ್ರಮ ಪಡುತ್ತಾರೆ.  ಈ ದಿನ…

Read More

ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಎ ಕೆ ಎಂ ಅಶ್ರಫ್‌ಗೆ ಭರ್ಜರಿ ಸ್ವಾಗತ

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ AKM Ashraf ಅವರಿಗೆ ಮಿಂಜಾ ಪಂಚಾಯತ್ ವ್ಯಾಪ್ತಿಯಲ್ಲಿ ಭರ್ಜರಿ ಸ್ವಾಗತ ದೊರೆಯಿತು. ಅಶ್ರಫ್ ಅವರು ಮಿಂಜಾ ಪಂಚಾಯತ್ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯರು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಉತ್ಸಾಹದಿಂದ ಬರಮಾಡಿಕೊಂಡರು. ಮನ್ನಾಥ್ ಅಳುವ ಅಜೀಸ್ ಆಜಿ ಮೇರಿಕೆ , .ಎ.ಕೆ. ಆರಿಫ್ ಸೇರಿದಂತೆ ಹಲವು ಪ್ರಮುಖರು ಅವರೊಂದಿಗೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೋಡ್‌ಶೋ ಹಾಗೂ ಜನಸಂಪರ್ಕ ಕಾರ್ಯಕ್ರಮವೂ ನಡೆಯಿತು. ಯುಡಿಎಫ್ ಪರ ಮತದಾರರನ್ನು ಸೆಳೆಯುವ ಉದ್ದೇಶದಿಂದ…

Read More

ಕಾಸರಗೋಡು ಜಿಲ್ಲೆಯ ಕುಲಾಲ ಸಮಾಜದ ಮಕ್ಕಳಿಗೆ ಸವಲತ್ತುಗಳನ್ನು ಮರು ಸ್ಥಾಪಿಸಿದ ಕೇರಳ ಸರಕಾರ

ಕಳೆದ ವರ್ಷದಿಂದ ಕೇರಳ ಸರಕಾರದ e-disrict OEC portal ನಲ್ಲಿ ಕುಲಾಲ ಹೆಸರು ಕೈ ಬಿಟ್ಟ ಕಾರಣ ಜಾತಿ ಪ್ರಮಾಣಪತ್ರ ನೀಡಲು ಸಂಬಂಧಪಟ್ಟ ಅಧಿಕಾರಿಗಳು ನಿರಾಕರಿಸುತ್ತಿದ್ದರು. ಇದರಿಂದ ಕುಲಾಲ ಸಮಾಜದ ಮಕ್ಕಳಿಗೆ ಸರಕಾರದಿಂದ ಯಾವುದೇ ಸವಲತ್ತುಗಳು ಸಿಗುತ್ತಿರಲಿಲ್ಲ. ಇದನ್ನು ಮನಗಂಡು ಕುಲಾಲ ವೇದಿಕೆ ಮಂಜೇಶ್ವರದ ನೇತೃತ್ವದಲ್ಲಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಈ ಮನವಿಯ ಒಂದು ಪ್ರತಿಯನ್ನು ಸಿಪಿಐಎಂ ನೇತಾರ ಕೆ ಆರ್ ಜಯಾನಂದರವರಿಗೂ ನೀಡಿದ್ದರು. ಈ ಮನವಿಯನ್ನು ಪುರಸ್ಕರಿಸಿ ಜಯಾನಂದರವರು ಸರಕಾರವನ್ನು ಒತ್ತಾಯಿಸಿ ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ…

Read More

ಕೇರಳ ವಿಧಾನಸಭಾ ಚುನಾವಣೆ: ಕಾಸರಗೋಡು ಕ್ಷೇತ್ರದಲ್ಲಿ ಅಶ್ವಿನಿ ಎಂ.ಎಲ್‌ಗೆ ಬಿಜೆಪಿ ಅವಕಾಶ

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದ್ದು, ಕಾಸರಗೋಡು ಕ್ಷೇತ್ರಕ್ಕೆ M L Ashwini ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದಕ್ಕೂ ಮೊದಲು ಬಿಡುಗಡೆಗೊಂಡ ಮೊದಲ ಪಟ್ಟಿಯಲ್ಲಿ ಮಂಜೇಶ್ವರ ಕ್ಷೇತ್ರಕ್ಕೆ K Surendran ಅವರನ್ನು ಕಣಕ್ಕಿಳಿಸಲಾಗಿದ್ದು, ಇದೀಗ ಕಾಸರಗೋಡು ಕ್ಷೇತ್ರದಲ್ಲಿ ಅಶ್ವಿನಿ ಎಂ.ಎಲ್ ಹೆಸರು ಪ್ರಮುಖವಾಗಿ ಹೊರಹೊಮ್ಮಿದೆ. ಬಿಜೆಪಿ ರಾಜ್ಯ ಘಟಕದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅಶ್ವಿನಿ, ಕಾಸರಗೋಡು ಜಿಲ್ಲಾ ಅಧ್ಯಕ್ಷೆಯಾಗಿ ಗುರುತಿಸಿಕೊಂಡಿದ್ದು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆಯಾಗಿಯೂ ಸೇವೆ…

Read More

ಕೊಳ್ನಾಡು: ಜಮಾಅತ್ ಇಸ್ಲಾಮಿ ಸಮಾಜಸೇವಾ ಘಟಕದಿಂದ ನೀರಿನ ಸಂಕಷ್ಟಕ್ಕೆ ಪರಿಹಾರ: ಮಂಚಿ ನೂಜಿಬೈಲ್‌ನಲ್ಲಿ ಸಾರ್ವಜನಿಕ ಕೊಳವೆ ಬಾವಿ ಉದ್ಘಾಟನೆ;

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ 8ರ ಮಂಚಿ ನೂಜಿಬೈಲ್‌ನ ಕಟ್ಟಪುಣಿ ಪ್ರದೇಶದಲ್ಲಿ, ಜಮಾಅತೆ ಇಸ್ಲಾಮಿ ಹಿಂದ್‌, ಸಮಾಜಸೇವಾ ಘಟಕದ ವತಿಯಿಂದ ನೂತನ ಸಾರ್ವಜನಿಕ ಕೊಳವೆ ಬಾವಿಯ ಹಸ್ತಾಂತರ ಕಾರ್ಯಕ್ರಮ 18/03/2026 ರಂದು ಸರಳವಾಗಿ ನಡೆಯಿತು. ಸ್ಥಳೀಯ ಜನರ ಬಹುಕಾಲದ ನೀರಿನ ಅವಶ್ಯಕತೆಯನ್ನು ಮನಗಂಡು ಈ ಸೇವಾ ಕಾರ್ಯ ಕೈಗೊಳ್ಳಲಾಗಿದ್ದು, ಕಾರ್ಯಕ್ರಮವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಪ್ರದೇಶದಲ್ಲಿ 20 ಕ್ಕಿಂತ ಹೆಚ್ಚು ಕುಟುಂಬಗಳು ಕುಡಿಯುವ ನೀರಿನ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ…

Read More

ಮೈಸೂರಿನ ನಾ. ನಾಗಚಂದ್ರರಿಗೆ ಕಾಸರಗೋಡಿನಲ್ಲಿ “ಕನ್ನಡ ಪಯಸ್ವಿನಿ ಪ್ರಶಸ್ತಿ”

ಕಾಸರಗೋಡು: ಮೈಸೂರಿನ ಖ್ಯಾತ ನಟ, ನಾಟಕಕಾರ, ನಿರ್ದೇಶಕ ಹಾಗೂ ರಂಗ ಸಂಘಟಕರಾದ ನಾ . ನಾಗಚಂದ್ರ ಅವರಿಗೆ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಅಂತರ್‌ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ” ಪ್ರದಾನ ಮಾಡಲಾಗುತ್ತಿದೆ. ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಅಂಡ್ ಲೈಬ್ರರಿ y ಕಾಸರಗೋಡ್ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ Dr ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಈ ಗೌರವ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಮಾರ್ಚ್…

Read More

​ಕುಂಬ್ಳೆ: ಎ.ಕೆ.ಪಿ.ಎ ವತಿಯಿಂದ ಐಡಿ ಕಾರ್ಡ್ ವಿತರಣೆ ಹಾಗೂ ಇಫ್ತಾರ್ ಕೂಟ

​ಮಂಜೇಶ್ವರ: ಎ.ಕೆ.ಪಿ.ಎ (AKPA) ಕುಂಬ್ಳೆ ವಲಯದ ಆಭಿಮುಖದಡಿಯಲ್ಲಿ ಐಡಿ ಕಾರ್ಡ್ ವಿತರಣೆ ಮತ್ತು ಇಫ್ತಾರ್ ಕಾರ್ಯಕ್ರಮವನ್ನು ಮಾರ್ಚ್ 18 ರಂದು ಹೊಸಂಗಡಿಯ ಅಲೋರ್ ಪಾರ್ಟಿ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ​ವಲಯದ ಅಧ್ಯಕ್ಷರಾದ ಕರೀಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷರಾದ ಸುಗುಣನ್ ಇರಿಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರಜಿತ್ ಮತ್ತು ಇನ್-ಚಾರ್ಜ್ ಮನು ಎಲ್ಲೋರ ಅವರು ಮಾತನಾಡಿದರು.​ಕಾರ್ಯಕ್ರಮದಲ್ಲಿ ಹೊಸ ಸದಸ್ಯರಾದ ದೀಪಕ್, ಕಲರ್ ಜಯಪ್ರಕಾಶ್ ಮತ್ತು ವಿನ್ಸನ್ ಕಯ್ಯಾರ್ ಅವರಿಗೆ ಐಡಿ…

Read More
error: Content is protected !!