Headlines

ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಮೀಲಾದ್ ಆಚರಣೆ.

ಪುಚ್ಚತ್ತವಯಲ್: ಪ್ರವಾದಿ ಹಜ್ರತ್ ಮುಹಮ್ಮದ್ ಮುಸ್ತಫಾ (ಸ.ಅ) ಅವರ 1500ನೇ ಜನ್ಮದಿನಾಚರಣೆ ಅಂಗವಾಗಿ ಹಯಾತುಲ್ ಇಸ್ಲಾಂ ಮದ್ರಸ, ಪುಚ್ಚತ್ತವಯಲ್‌ನಲ್ಲಿ ಭಕ್ತಿಪೂರ್ಣ ಮೀಲಾದ್ ರ‍್ಯಾಲಿ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಮಾಅತ್ ಖತೀಬ್ ಉಮರುಲ್ ಫಾರೂಖ್ ಹನೀಫಿ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ಮದ್ರಸ ವಿದ್ಯಾರ್ಥಿಗಳು ವರ್ಣರಂಜಿತ ಘೋಷಯಾತ್ರೆಯಲ್ಲಿ ಭಾಗವಹಿಸಿದರು. ದಫ್, ಸ್ಕೌಟ್ ಮತ್ತು ಹೂವಿನಿಂದ ಅಲಂಕರಿಸಿದ ಫ್ಲವರ್‌ಶೋಗಳು ಮೀಲಾದ್ ರ‍್ಯಾಲಿಗೆ ಮೆರುಗು ನೀಡಿದವು. ಮೀಲಾದ್ ರ‍್ಯಾಲಿಯು ಮಚ್ಚಂಬಾಡಿ ಜುಮಾ ಮಸೀದಿಯಿಂದ ಕೋಡಿ…

Read More

ಓಣಂ

ಓಣಂ ಹಬ್ಬವನ್ನು ಮಲಯಾಳಿಗಳು ಆಚರಿಸುವಂತಹ ವಿಶಿಷ್ಟ ಬಗೆಯ ಹಬ್ಬವಾಗಿದೆ . ಕರಾವಳಿ ಜಿಲ್ಲೆಗಳಲ್ಲಿಯೂ ಈ ಹಬ್ಬದ ಆಚರಣೆಯನ್ನು ತುಂಬಾನೇ ಸಂಭ್ರಮದಿಂದ ಆಚರಿಸುತ್ತಾರೆ . ಈ ಹಬ್ಬವು ಮಹಾಬಲಿ ಚಕ್ರವರ್ತಿ ಅಥವಾ ಮಾವೇಲಿ ಎಂದು ಕರೆಯುವ ಮಹಾರಾಜನೊಂದಿಗೆ ನಂಟನ್ನು ಆತನ ನೆನೆಪಿಗಾಗಿ ಆಚರಣೆಯನ್ನು ಮಾಡುವ ದೇವರ ನಾಡಿನ ಹಬ್ಬವಾಗಿದೆ . ಈ ಹಬ್ಬ ತನ್ನದೇ ಆದ ಹಿನ್ನಲೆಯನ್ನು ಹೊಂದಿದೆ , ತಲೆ ತಲೆ ಮಾರುಗಳ ಹಿಂದೆ ಮಲಯಾಳಂ ನಾಡನ್ನು ಮಹಾಬಲಿ ಎಂಬ ಅಸುರರಾಜನು ಆಳುತ್ತಿದ್ದನು .ಆತ ಅಸುರನಾದರೂ ಅತ್ಯಂತ…

Read More

ಕಾಞಂಗಾಡ್ ಭಾಗದಲ್ಲಿ ಓಣಂ ಹಬ್ಬದ ಅಂಗವಾಗಿ-ಹೂವಿನ ಮಾರಾಟದ ಝಲಕ್

ಕಾಸರಗೋಡು ಜಿಲ್ಲೆಯ ಪ್ರಮುಖ ನಗರಗಳಲ್ಲಿ ಒಂದಾದ ಕಾಞಂಗಾಡ್ ಭಾಗದಲ್ಲಿ ಓಣಂ ಹಬ್ಬದ ಅಂಗವಾಗಿ ಹೂವಿನ ಮಾರಾಟ ಜಬರ್ದಸ್ತ್ ಆಗಿತ್ತು. ನಗರದ ಬಸ್ ನಿಲ್ದಾಣ ದಲ್ಲಿ ಹೂವು ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು. ಕರ್ನಾಟಕದ ಘಟ್ಟ ಪ್ರದೇಶಗಳಲ್ಲಿನ ಹೂವು ವ್ಯಾಪಾರಿಗಳು ಇಲ್ಲಿಗೆ ಬಂದು ವ್ಯಾಪಾರ ಮಾಡಿದ್ದರು. ವಿಸ್ತಾರವಾದ ಪ್ರದೇಶದಲ್ಲಿ ಹೂವನ್ನು ಮಾರಾಟಕ್ಕೆಂದು ಹರಡಿತ್ತು. ಇದು ನೋಡುಗರ ಕಣ್ಣನ್ನು ಸೆಳೆಯುತ್ತಿತ್ತು. ಪುಷ್ಪ ಕಾಶಿಯೇ ಈ ಭಾಗದಲ್ಲಿ ಮೇಳೈಸ್ತ ಇರುವುದು ಕಂಡು ಬಂದಿದೆ. ಕೇರಳ ದಾದಂತ್ಯ ಇಂದು ಓಣಂ ಹಬ್ಬವನ್ನು ಮಹಾಬಲಿಯ ಸ್ಮರಣಾರ್ಥಕವಾಗಿ…

Read More

ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಫೈನಲ್ ಪಿಚ್ ಡೇ’

ಮಂಗಳೂರು:ಕೆನರಾ ಎಂಜಿನಿಯರಿಂಗ್ ಕಾಲೇಜಿನ ಉದ್ಯಮಶೀಲತಾ ಅಭಿವೃದ್ಧಿ ಕೋಶ (ಇ.ಡಿ.ಸಿ.) ವತಿಯಿಂದ ಎಕ್ಸ್‌ಪ್ಲೋರಿಂಗ್ ಎಂಟ್ರಪ್ರಿನರ್ಶಿಪ್ ಪ್ರೋಗ್ರಾಂನ ಫೈನಲ್ ಪಿಚ್ ಡೇ ಆಯೋಜಿಸಲಾಯಿತು. ಉಡುಪಿ ಎಸ್.ಎಂ.ವಿ.ಐ.ಟಿ.ಎಂ. ಮತ್ತು ಮಂಗಳೂರು ಕೆನರಾ ಎಂಜಿನಿಯರಿಂಗ್ ಕಾಲೇಜುಗಳಿಂದ ಆಯ್ಕೆಯಾದ 14 ವಿದ್ಯಾರ್ಥಿ ತಂಡಗಳು ತಮ್ಮ ಸ್ಟಾರ್ಟ್‌ಅಪ್ ಕಲ್ಪನೆಗಳನ್ನು ಸೆಕ್ಷನ್ ಇನ್ಫಿನ್–8 ಫೌಂಡೇಶನ್ (ಎಸ್‌.ಐ.–8) ನೇಮಕ ಮಾಡಿದ ತೀರ್ಪುಗಾರರ ಮುಂದಿಡಿದರು. ತೀರ್ಪುಗಾರರಾಗಿ ಶ್ರೀ ಅಜಯ್ ಪ್ರಭು, ವ್ಯವಸ್ಥಾಪಕ ನಿರ್ದೇಶಕ, ಕೆ.ವಿ.ಪಿ. ಬಿಸಿನೆಸ್ ಸೊಲ್ಯೂಶನ್ಸ್, ಶ್ರೀ ಪುನೀತ್ ರೈ, ಇಂಕ್ಯುಬೇಶನ್ ಮ್ಯಾನೇಜರ್, ಅಟಲ್ ಇಂಕ್ಯುಬೇಶನ್ ಸೆಂಟರ್, ನಿಟ್ಟೆ,…

Read More

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಕಟಿತ ಪುಸ್ತಕ- ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಿಗೆ ಉಚಿತವಾಗಿ ವಿತರಣೆ

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ಕೇರಳದ ಶ್ರೀಮದ್ ಎಡನೀರು ಮಠ, ಕಾಸರಗೋಡು ಇವರ ಸಹಯೋಗದೊಂದಿಗೆ ದಿನಾಂಕ:03.09.2025ರಂದು ಸಂಜೆ 7.15 ಗಂಟೆಗೆ ಕಾಸರಗೋಡು ಜಿಲ್ಲೆಯ ಗಡಿ ಭಾಗದ ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಎಲ್ಲಾ ಕನ್ನಡ ಶಾಲೆಗಳಿಗೆ ಹಾಗೂ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳನ್ನು ವಿತರಿಸಲಾಯಿತು. ಪ್ರೋ. ಕೆ.ಸಿ ಶಿವಪ್ಪನವರು ರಚಿಸಿದ ಮುದ್ದುರಾಮನ 10 ಆವೃತ್ತಿ ಕೃತಿಗಳನ್ನು ಕೂಡ ಈ ಸಂದರ್ಭದಲ್ಲಿ ವಿತರಿಸಲಾಯಿತು. ಹೊರನಾಡು ಗಡಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ಹೊರತಂದಿರುವ…

Read More

ಮೋದಿ ಸರ್ಕಾರದಿಂದ ಜನತೆಗೆ ಐತಿಹಾಸಿಕ ಕೊಡುಗೆ :- ಶಾಸಕ ಕಾಮತ್

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಿಎಸ್‌ಟಿಯನ್ನು ಮತ್ತಷ್ಟು ಜನಸ್ನೇಹಿ ಹಾಗೂ ಸರಳೀಕರಣಗೊಳಿಸುವ ಮೂಲಕ ದೇಶದ ಆರ್ಥಿಕತೆಗೆ ನವಚೈತನ್ಯ ತುಂಬಿದ್ದಲ್ಲದೇ, ಜನರ ಜೀವನ ಸುಧಾರಣೆಗೆ ಮಹತ್ವದ ಕ್ರಮ ಕೈಗೊಂಡಿದೆ. ಆ ಮೂಲಕ ನವ ಭಾರತದ ನಿರ್ಮಾಣಕ್ಕೆ ಮುಂದಡಿಯಿಟ್ಟಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು. ಅಮೆರಿಕಾದಂತಹ ಜಾಗತಿಕ ಮಟ್ಟದ ದೈತ್ಯ ರಾಷ್ಟ್ರಗಳ ಸವಾಲುಗಳನ್ನು ಮೆಟ್ಟಿ ನಿಂತು ದೇಶ ಅಭಿವೃದ್ಧಿಯೆಡೆಗೆ ಸಾಗುತ್ತಿದ್ದು ಈ ಐತಿಹಾಸಿಕ ನಿರ್ಧಾರದಿಂದಾಗಿ ದೈನಂದಿನ, ಶೈಕ್ಷಣಿಕ, ಆರೋಗ್ಯ, ರಕ್ಷಣಾ, ಕೃಷಿ, ಆಟೋಮೊಬೈಲ್, ಎಲೆಕ್ಟ್ರಾನಿಕ್, ಹೀಗೆ ಜನಸಾಮಾನ್ಯರ…

Read More

ವೆನ್ಲಾಕ್ ಆಸ್ಪತೆಯ ಮೂಲ ಸೌಕರ್ಯವನ್ನು ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡುವ ಉದ್ದೇಶದಿಂದ ವಿಭಾಗೀಯ ಆಸ್ಪತ್ರೆಯನ್ನಾಗಿ ಮಾಡಲು ಕ್ರಮವನ್ನು ಶೀಘ್ರವೇ ಕೈಗೊಳ್ಳಲಾಗುವುದು -ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ

ವೆನ್ಲಾಕ್ ಆಸ್ಪತೆಯ ಮೂಲ ಸೌಕರ್ಯವನ್ನು ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡುವ ಉದ್ದೇಶದಿಂದ ವಿಭಾಗೀಯ ಆಸ್ಪತ್ರೆಯನ್ನಾಗಿ ಮಾಡಲು ಕ್ರಮವನ್ನು ಶೀಘ್ರವೇ ಕೈಗೊಳ್ಳಲಾಗುವುದೆಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಹೇಳಿದರು. ಅವರು ಮನಪಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ , ವೆನ್ಲಾಕ್ ಆಸ್ಪತೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಮಾಡಿದರೆ ಈಗ ಇರುವ ೪೦೦ ಸಿಬ್ಬಂದಿಗಳು ೮೦೦ ಸಿಬ್ಬಂದಿಗೆ ಹೆಚ್ಚಳವಾಗುತ್ತಾರೆ . ಇದರ ಜೊತೆಗೆ ಆಡಳಿತ ಅಧಿಕಾರಿ , ಹಣಕಾಸು ಅಧಿಕಾರಿಗಳು ಇಲ್ಲಿಗೆ ಬರುತ್ತಾರೆ . ಒಂದು ಕೊಠಡಿಯಿಂದ ಇನ್ನೊಂದು ಕೊಠಡಿ…

Read More

ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಕೂಡಲೇ ಕೇಂದ್ರ ಸರಕಾರ ಸೇರಿಸಬೇಕು – ವಿಧಾನ ಪರಿಷತ್ ನ ಶಾಸಕರಾದ ಐವನ್ ಡಿಸೋಜ

ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಕೂಡಲೇ ಕೇಂದ್ರ ಸರಕಾರ ಸೇರಿಸಬೇಕೆಂದು ವಿಧಾನ ಪರಿಷತ್ ನ ಶಾಸಕರಾದ ಐವನ್ ಡಿಸೋಜ ತಿಳಿಸಿದರು . ಅವರು ಮನಪಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಕೂಡಲೇ ಸೇರಿಸುವ ಬಗ್ಗೆ ದಕ್ಷಿಣ ಕನ್ನಡ ಸಂಸದರು ಪಾರ್ಲಿಮೆಂಟ್ ನಲ್ಲಿ ಕೇಂದ್ರ ಸಾಮಾಜಿಕ ಅಭಿವೃದ್ಧಿ ಮಂತ್ರಿಗಳಲ್ಲಿ ಪ್ರಶ್ನೆಯನ್ನು ಕೇಳುತ್ತಾರೆ . ಆಗ ರಾಜ್ಯದಿಂದ ಯಾವುದೇ ಶಿಫಾರಸ್ಸು ಬಂದಿಲ್ಲ ಎಂದು ಸಿಗುತ್ತೆ . ಅನುಚ್ಛೇದ ೩೪೧ (೨)…

Read More

ಧ್ಯಾನಯೋಗದಿಂದ ಜೀವನದ ಸವಾಲುಗಳನ್ನು ದೂರ ಮಾಡಬಹುದು

ಮಂಗಳೂರು: ಜೀವನದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಧ್ಯಾನಯೋಗದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ಹಿನ್ನೆಲೆಯಲ್ಲಿ “ಉತ್ತಮ ಜೀವನ ನಿರ್ವಹಣೆಗಾಗಿ ಹಿಮಾಲಯದ ಧ್ಯಾನಯೋಗ” ಎಂಬ ವಿಷಯದ ಕುರಿತು ಪರಮ ವಂದನೀಯ ಗುರುಮಾ ಅವರಿಂದ ವಿಶೇಷ ಪ್ರವಚನ ಮಂಗಳೂರಿನಲ್ಲಿ ನಡೆಯಲಿದೆ ಎಂದು ಆಯೋಜಕರಾದ ಚಂದ್ರಶೇಖರ ತಿಳಿಸಿದರು . ನಗರದ ಪತ್ರಿಕಾಭವನದಲ್ಲಿ ಮಾತಾಡಿದ ಅವರು, ಸೆಪ್ಟೆಂಬರ್ 9, 2025 ರಂದು ಸಂಜೆ 5 ಗಂಟೆಗೆ ಮಣ್ಣಗುಡ್ಡೆಯ ಸಂಘನಿಕೇತನ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಲಿದ್ದು, ಎಲ್ಲಾ ವಯಸ್ಸಿನ ಜನರಿಗೆ ಮುಕ್ತವಾಗಿದೆ ಎಂದರು….

Read More

ಪ್ರಶಾಂತಿ ವಿದ್ಯಾ ಕೇಂದ್ರ, ಬಾಯಾರು — ಓಣಂ ಹಬ್ಬದ ಸಂಭ್ರಮ

ಬಾಯಾರು: ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ 04-09-2025 ರಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಓಣಂ ಆಚರಣೆಯ ಮಹತ್ವದ ಮಾತಿನೊಂದಿಗೆ ಪ್ರಾರಂಭವಾಗಿ ಸೊಗಸಾದ ಓಣಂ ಪೂಕಳಂ ರಚಿಸಿ ಅಲಂಕಾರ ದ ವೇದಿಕೆಯಲ್ಲಿ ಈ ತಿಂಗಳ ಮಾಸಪತ್ರಿಕೆಯನ್ನು ಬಿಡುಗಡೆ ಗೊಳಿಸಿದ ಅತಿಥಿಗಳಾದ ಪೆಳತ್ತಡ್ಕ ಶ್ರೀ ರಾಮಕೃಷ್ಣ ಭಟ್ ,ವ್ಯವಸ್ಥಾಪಕರಾದ ಶ್ರೀ ಎಚ್ ಮಹಾಲಿಂಗ ಭಟ್ , ಟ್ರಸ್ಟ್ ಸದಸ್ಯರಾದ ಪಯ್ಯರಕೋಡಿ ಶ್ರೀ ಸದಾಶಿವ ಭಟ್ , ಶಾಲಾ ಪ್ರಾಂಶುಪಾಲರಾದ ಶ್ರೀ ವಾಮನನ್,ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಾಕ್…

Read More
error: Content is protected !!