ಬೀದಿ ನಾಯಿಗಳ ಅಟ್ಟಹಾಸಕ್ಕೆ ನಾಗರಿಕರ ಮುಗಿಲು ಮುಟ್ಟಿದ ಆಕ್ರಂಧನ: ಅಧಿಕಾರಸ್ಥರ ಮಡುಗಟ್ಟಿದ ಮೌನದ ವಿರುದ್ಧ ಮುಸ್ಲಿಂ ಲೀಗ್ ನಿಂದ ಬೃಹತ್ ಪ್ರತಿಭಟನೆ.
ಮಂಜೇಶ್ವರ, ಆಗಸ್ಟ್ 22 – ಬೀದಿ ನಾಯಿಗಳ ಅಟ್ಟಹಾಸದಿಂದ ತತ್ತರಿಸಿರುವ ಮಂಜೇಶ್ವರ ಗ್ರಾಮಸ್ಥರ ಮುಗಿಲು ಮುಟ್ಟಿದ ಆಕ್ರಂಧನಕ್ಕೆ ಕಿಂಚತ್ತೂ ಬೆಲೆ ಕಲ್ಪಿಸಿದ ಮಂಜೇಶ್ವರ ಗ್ರಾಮ ಪಂಚಾಯತು ಅಧಿಕಾರಸ್ಥರ ಮಡುಗಟ್ಟಿದ ಮೌನದ ವಿರುದ್ಧ ನಾಗರಿಕರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಿನ ರೀತಿಯಲ್ಲಿ ಸ್ಪೋಟಕಗೊಳ್ಳುತ್ತಿರುವ ದೃಶ್ಯ ಕಂಡು ಬರುತ್ತಿದೆ.ಶುಕ್ರವಾರದಂದು ಪಂಚಾಯತು ಅಧಿಕಾರಸ್ಥರ ವಿರುದ್ಧ ಅವರ ನಿರ್ಲಕ್ಷ್ಯವನ್ನು ವಿರೋಧಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮಂಜೇಶ್ವರ ಪಂಚಾಯತು ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಯಿತು. ಪಕ್ಷದ…
