ಅವಕಾಶಕ್ಕಾಗಿ ಹೊಂಚು ಹಾಕುತ್ತಿರುವ ಮತೀಯ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ಕರೆ
ವರ್ಕಾಡಿ- ಜನತೆಗೆ ಯಾವುದೇ ಉಪಯೋಗಕಾರಿ ಕೆಲಸಗಳನ್ನು ಮಾಡದೆ ಏಕೋದರ ಸಹೋದರರಂತೆ ಬಾಳುತ್ತಿರುವ ಜನರನ್ನು ಧರ್ಮ, ಆಹಾರ, ವಸ್ತ್ರ, ಆಚರಣೆಗಳ ಹೆಸರಲ್ಲಿ ಪರಸ್ಪರ ಕಚ್ಚಾಡಿಸಿ ಅಧಿಕಾರಕ್ಕೇರಲು ಮತೀಯ ಶಕ್ತಿಗಳು ಸಂಚು ರೂಪಿಸುತ್ತಿದ್ದು, ನಾಡಿನ ಅಭಿವೃದ್ಧಿ ಮತ್ತು ನೆಮ್ಮದಿಯ ಜೀವನ ಬಯಸುವ ಸಜ್ಜನ ನಾಗರಿಕರು ಈ ಶಕ್ತಿಗಳನ್ನು ದೂರವಿಡಲು ಸಿದ್ಧರಾಗಬೇಕೆಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಕರೆ ನೀಡಿದ್ದಾರೆ. ಅವರು ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪುರುಷೋತ್ತಮ…
