ಯೂತ್ ಕಾಂಗ್ರೆಸ್ ನಾಯಕ ಫರ್ಸೀನ್ ಮಜೀದ್‌ಗೆ ಜೀವ ಬೆದರಿಕೆ; ಮುಖ್ಯಮಂತ್ರಿ ವಿ.ಡಿ. ಸತೀಶನ್‌ಗೆ ದೂರು

ಇಂಡಿಗೋ ವಿಮಾನದಲ್ಲಿ ನಡೆದ ಪ್ರತಿಭಟನೆಯ ಪ್ರಕರಣದ ಬಳಿಕ ತಮ್ಮ ಜೀವಕ್ಕೆ ಬೆದರಿಕೆ ಬರುತ್ತಿದೆ ಎಂದು ಯೂತ್ ಕಾಂಗ್ರೆಸ್ ನಾಯಕ ಫರ್ಸೀನ್ ಮಜೀದ್ ಆರೋಪಿಸಿದ್ದಾರೆ. ಈ ಕುರಿತು ಅವರು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ದೂರು ಸಲ್ಲಿಸಿದ್ದಾರೆ. ಕಣ್ಣೂರು ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಫರ್ಸೀನ್ ಮಜೀದ್, ಜುಲೈ 1ರ ಮುಂಜಾನೆ ಗಲ್ಫ್ ದೇಶದ ದೂರವಾಣಿ ಸಂಖ್ಯೆಯಿಂದ ಮತ್ತೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಸಿಪಿಐ(ಎಂ) ಕಾರ್ಯಕರ್ತರಿಂದ ಹತ್ಯೆಯಾದ ಶುಹೈಬ್ ಅವರ ಸ್ಥಿತಿಯೇ ನಿನಗೂ ಆಗಲಿದೆ…

Read More

11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; ನಿವೃತ್ತ ಪೊಲೀಸ್ ಸಿಬ್ಬಂದಿ ಬಂಧನ

ಕಾಸರಗೋಡು:ಆಟವಾಡಲು ಹೋದ ಹನ್ನೊಂದರ ಬಾಲಕಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನೀಡಿದ ಘಟನೆ ವರದಿ. ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ಪೊಲೀಸ್ ನೌಕರನನ್ನು ಪೋಕ್ಸೋ ಕೇಸು ದಾಖಲಿಸಿ ಬಂಧಿಸಲಾಗಿದೆ. ಪಯ್ಯನ್ನೂರಿನ ಕಾಪುಮ್ಮೇಲ್ ಇಳಯಡತ್ತ್ ನಿವಾಸಿ ಇ. ವಿ. ಗೋಪಿನಾಥ್ (62) ಬಂಧಿತ ವ್ಯಕ್ತಿ. ಪರಿಯಾರಂ ಪೊಲೀಸ್ ಇನ್ಸ್ಪೆಕ್ಟರ್ ಕೆ. ಪಿ. ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬಂಧಿತ ವ್ಯಕ್ತಿಯು ಸುದೀರ್ಘ ಕಾಲ ಪೊಲೀಸ್ ಇಲಾಖೆಯಲ್ಲಿ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದನು.ಬುಧವಾರ ಮಧ್ಯಾಹ್ನ ಈ ಅಮಾನುಷ ಕೃತ್ಯ ನಡೆದಿದೆ…

Read More

ಬೆಂಗಳೂರು ಇಸ್ರೋ ಕೇಂದ್ರಕ್ಕೆ ಬಾಂಬ್ ಬೆದರಿಕೆ; ಸಿಬ್ಬಂದಿಯನ್ನು ತುರ್ತಾಗಿ ಸ್ಥಳಾಂತರ

ಬೆಂಗಳೂರು: ಬೆಂಗಳೂರಿನ ಇಸ್ರೋ (ISRO) ಮುಖ್ಯ ಕಚೇರಿಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಕಚೇರಿಯಿಂದ ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಲಾಗಿದೆ. ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಇಸ್ರೋ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಹಾಗೂ ಸಂಸ್ಥೆಯನ್ನು ಸ್ಫೋಟಿಸುವುದಾಗಿ ಅದರಲ್ಲಿ ಉಲ್ಲೇಖಿಸಲಾಗಿದೆ. ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸುತ್ತಿದ್ದಾರೆ. ಈ ಬೆದರಿಕೆ ಸಂದೇಶವು ನಕಲಿಯೇ ಎಂಬ ಅನುಮಾನವೂ ಪೊಲೀಸರಿಗೆ ಇದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

Read More

ಅಧಿಕಾರ ವ್ಯಾಪ್ತಿಗೆ ಹೊರಗಿನ ವಿಷಯ; ಮಧ್ಯಪ್ರವೇಶ ಸಾಧ್ಯವಿಲ್ಲ ಎಂದ ಕೇರಳ ಹೈಕೋರ್ಟ್ – ಕುಂಭಮೇಳ ವೈರಲ್ ಯುವತಿಯ ವಿವಾಹ ಪ್ರಕರಣದಲ್ಲಿ ಪತಿಗೆ ಹಿನ್ನಡೆ

ಕೊಚ್ಚಿ: ಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿಯ ವಿವಾಹ ಪ್ರಕರಣದಲ್ಲಿ ಪತಿ ಮೊಹಮ್ಮದ್ ಫರ್ಹಾನ್ ಅವರಿಗೆ ಕಾನೂನು ಹಿನ್ನಡೆಯಾಗಿದೆ. ಬಂಧನಕ್ಕೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ. ಪ್ರಕರಣವು ಮಧ್ಯಪ್ರದೇಶ ಹೈಕೋರ್ಟ್ ವ್ಯಾಪ್ತಿಗೆ ಸೇರಿರುವುದರಿಂದ, ಕೇರಳ ಹೈಕೋರ್ಟ್‌ಗೆ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಅಧಿಕಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದ್ದರಿಂದ ಮಧ್ಯಪ್ರದೇಶ ಹೈಕೋರ್ಟ್‌ನನ್ನೇ ಸಂಪರ್ಕಿಸುವಂತೆ ಸೂಚಿಸಿದೆ. ಈ ಮೊದಲು ಫರ್ಹಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶದ ವಿಶೇಷ ನ್ಯಾಯಾಲಯ ಕೂಡ ತಿರಸ್ಕರಿಸಿತ್ತು. ಅದರ ನಂತರ ಅವರು ಮತ್ತೆ…

Read More

ಕಾಸರಗೋಡಿನಲ್ಲಿ ಕನ್ನಡ ಪತ್ರಿಕಾ ದಿನಾಚರಣೆ; ಹಿರಿಯ ವಿತರಕ ಶ್ಯಾಮಪ್ರಸಾದ್‌ಗೆ ‘ಪತ್ರಿಕಾ ದಿನ’ ಪ್ರಶಸ್ತಿ

ವಸ್ತುನಿಷ್ಠ ವರದಿಗಾರಿಕೆ ಪತ್ರಿಕೆಗಳ ಹೊಣೆಗಾರಿಕೆ: ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಕಾಸರಗೋಡು, ಜು. 2: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ಹಾಗೂ ‘ಪತ್ರಿಕಾ ದಿನ’ ಪ್ರಶಸ್ತಿ ಪ್ರದಾನ ಸಮಾರಂಭವು ಕುಂಬಳೆ ಸಮೀಪದ ನಾಯ್ಕಾಪುವಿನ ಲಿಟಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ…

Read More

ಆಘಾತಕಾರಿ ಅಂಕಿಅಂಶ! ಬಿಡುಗಡೆಯ ಮುನ್ನವೇ ‘ಜನನಾಯಕನ್’ ಚಿತ್ರವನ್ನು 1.2 ಕೋಟಿ ಮಂದಿ ವೀಕ್ಷಣೆ; ವಿಜಯ್‌ಗೆ ಭಾರಿ ಹೊಡೆತ

ಸೆನ್ಸಾರ್ ಮಂಡಳಿಯೊಂದಿಗೆ ನಡೆದ ಕಾನೂನು ವಿವಾದದಿಂದ ನಟ ವಿಜಯ್ ಅಭಿನಯದ ‘ಜನನಾಯಕನ್’ ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿಲ್ಲ. ಆದರೆ ಬಿಡುಗಡೆಯಾಗುವ ಮುನ್ನವೇ ಚಿತ್ರದ ಪೈರಸಿ ಪ್ರತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ. ಬಿಡುಗಡೆಯಾಗದ ಈ ಚಿತ್ರವನ್ನು ಈಗಾಗಲೇ 1.2 ಕೋಟಿ ಮಂದಿ ಆನ್‌ಲೈನ್‌ನಲ್ಲಿ ವೀಕ್ಷಿಸಿದ್ದಾರೆ ಎಂದು ಪೊಲೀಸರು ಮದ್ರಾಸ್ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಪೈರಸಿ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ವೇಳೆ ಈ ಮಾಹಿತಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯನ್ನು…

Read More

ಬೆಳ್ತಂಗಡಿ ಗುರುವಾಯನಕೆರೆಯಲ್ಲಿ ಅನುಮಾನಾಸ್ಪದ ಮೃತದೇಹ ಪತ್ತೆ; ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬ

27 ವರ್ಷದ ಲಾರಿ ಚಾಲಕ ಮೃತ್ಯು; ಪೊಲೀಸರು ಸ್ಥಳ ಪರಿಶೀಲನೆ, ತನಿಖೆ ಆರಂಭ ಬೆಳ್ತಂಗಡಿ, ಜು. 2: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. ಕುವೆಟ್ಟು ಗ್ರಾಮದ ಶಕ್ತಿನಗರ ಸಮೀಪದ ಯನೋಪೊಯೋ ವಿದ್ಯುತ್ ಸಬ್ ಸ್ಟೇಷನ್ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರನ್ನು ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಶರೀಫ್ ಕೆ ಅವರ ಪುತ್ರ ಮುಸ್ತಾಕ್ (27) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದರು. ಘಟನೆ ಕುರಿತು…

Read More

ಪ್ರವಾಸಿಗಳಿಗೆ ಭಾರಿ ಹೊಡೆತ: ಸೌದಿಯಲ್ಲಿ 30% ಎಂಜಿನಿಯರಿಂಗ್ ಹುದ್ದೆಗಳಿಗೆ ಸೌದೀಕರಣ ಜಾರಿ

ರಿಯಾದ್: ಸೌದಿ ಅರೇಬಿಯಾದ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಎಂಜಿನಿಯರ್‌ಗಳಿಗೆ ದೊಡ್ಡ ಆಘಾತ ಎದುರಾಗಿದೆ. ಪ್ರಮುಖ 46 ಎಂಜಿನಿಯರಿಂಗ್ ಹುದ್ದೆಗಳಲ್ಲಿ 30% ಸೌದೀಕರಣ (Saudization) ಕಡ್ಡಾಯಗೊಳಿಸುವ ಹೊಸ ನಿಯಮ ಜಾರಿಗೆ ಬಂದಿದೆ. ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ವಸತಿ ಸಚಿವಾಲಯದ ಸಹಯೋಗದಲ್ಲಿ ಹೊರಡಿಸಿರುವ ಈ ಆದೇಶವು 2026ರ ಜೂನ್ 30ರಿಂದ ದೇಶಾದ್ಯಂತ ಜಾರಿಯಾಗಿದೆ. ಈ ಹೊಸ ನಿಯಮದಿಂದ ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 30% ವಿದೇಶಿ ಎಂಜಿನಿಯರ್‌ಗಳು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ…

Read More

SIR ಪ್ರಕ್ರಿಯೆಗೆ ಅಗತ್ಯವಾದ ಎನ್ಯೂಮರೇಷನ್ ಫಾರ್ಮ್‌ಗಳ, BLO ಗಳ ಕೊರತೆ ; ಮತದಾರರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು : ಎಸ್ ಡಿ ಪಿ ಐ

ಮಂಗಳೂರು : ಕರ್ನಾಟಕ ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭಗೊಂಡಿರುವ ಸಂದರ್ಭದಲ್ಲಿ, ಮತದಾರರಿಗೆ ವಿತರಿಸಬೇಕಾದ ಎನ್ಯೂಮರೇಷನ್ ಫಾರ್ಮ್‌ಗಳು (Enumeration Forms) ಸಾಕಷ್ಟು ಪ್ರಮಾಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳ (BLO) ಬಳಿ ಲಭ್ಯವಿಲ್ಲ ಎಂಬ ಮಾಹಿತಿ ವಿವಿಧ ಭಾಗಗಳಿಂದ ಕೇಳಿ ಬರುತ್ತಿದೆ. ಹಲವಾರು ಬೂತ್‌ಗಳಲ್ಲಿ ಒಬ್ಬ BLOಗೆ ಶೇ.50 ರಷ್ಟು ಫಾರ್ಮ್‌ಗಳಷ್ಟೇ ನೀಡಲಾಗಿದೆ ಎನ್ನುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಮನೆ – ಮನೆಗೆ ತೆರಳಿ ಮತದಾರರಿಗೆ ನಮೂನೆಗಳನ್ನು ವಿತರಿಸುವ ಹಾಗೂ ಭರ್ತಿ ಮಾಡಿಸಿಕೊಂಡು ಸಂಗ್ರಹಿಸುವ…

Read More

ಆಪರೇಷನ್ ತೂಫಾನ್: ಮಲಪ್ಪುರಂ ಅರೀಕೋಡ್‌ನಲ್ಲಿ ಭಾರಿ ಕಾರ್ಯಾಚರಣೆ; 254 ಗ್ರಾಂ ಎಂಡಿಎಂಎ, ₹5 ಲಕ್ಷ ನಗದು ವಶ, ಯುವಕ ಬಂಧನ

ಮಲಪ್ಪುರಂ : ‘ಆಪರೇಷನ್ ತೂಫಾನ್’ ಕಾರ್ಯಾಚರಣೆಯಡಿ ಅರೀಕೋಡ್ ಪೊಲೀಸರು ಹಾಗೂ ಮಲಪ್ಪುರಂ ಜಿಲ್ಲಾ ಡ್ಯಾನ್‌ಸಾಫ್ (DANSAF) ತಂಡ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ಮಾದಕ ವಸ್ತು ಸಂಗ್ರಹ ಪತ್ತೆಯಾಗಿದೆ. ಅರೀಕೋಡ್‌ನ ಮುಂಡಂಪರಂಬ್ ನಿವಾಸಿ ಪಂತಕ್ಕಾತ್ತೊಡಿ ಅಬ್ದುಲ್ ನಾಸರ್ (36) ಅವರನ್ನು ಬಂಧಿಸಲಾಗಿದೆ. ಆತ ಮಾದಕ ವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಸದಸ್ಯನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನ ಮನೆಯಿಂದ ಮಾರುಕಟ್ಟೆ ಮೌಲ್ಯ ಲಕ್ಷಾಂತರ ರೂಪಾಯಿ ಇರುವ 254 ಗ್ರಾಂ ಎಂಡಿಎಂಎ (MDMA), ₹5 ಲಕ್ಷ ನಗದು…

Read More
error: Content is protected !!