ಕಟ್ಟೆ ಪ್ರೆಂಡ್ಸ್ ಮತ್ತು ಅಡ್ಕ ಕಟ್ಟೆ sc ಗ್ರಾಮ ಕ್ಷೇಮ ಸಮಿತಿ ನೇತೃತ್ವ ದಲ್ಲಿ ಓಣಂ ಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಅಡ್ಕ ಶ್ರೀ ಚಕ್ರಪತಿ ಬೀರಮಾರ್ಲರ್ ಮಾಡ ಪರಿಸರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೈವದ ಪಾತ್ರಿ ರಾಧಾಕೃಷ್ಣ ಅಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು .ಸಂಸ್ಥೆಯ ಅಧ್ಯಕ್ಷರಾದ ಸಂಜೀವ ವೀರನಗರ ಅಧ್ಯಕ್ಷತೆ ವಹಿಸಿದ್ದರು. ಶಾಂತಾರಾಮ್ ಶೆಟ್ಟಿ,ಭಗವಾನ್ ದಾಸ್ ಶೆಟ್ಟಿ ಉಪಸ್ಥಿತರಿದ್ದರು. ಸ್ಪರ್ಧೆಯ ನಂತರ ಬಹುಮಾನ ವಿತರಣೆಯು ನಡೆಯಿತು .ಕಾರ್ಯಕ್ರಮವನ್ನು ಬಾಲಕೃಷ್ಣ ವಿ ಎನ್ ನಿರೂಪಿಸಿದರು.