Avatar

NAMMA MEDIA 24X7

ಸಿಪಿಎಂ ಪಕ್ಷದ ಕುಂಬಳೆ ಏರಿಯಾ ಸೆಕ್ರೆಟರಿ ಮುಸ್ಲಿಂ ಲೀಗ್ ಏಜೆಂಟ್.-ಆದರ್ಶ ಬಿ ಎಂ

ಮಂಜೇಶ್ವರ: ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್, ಬಿಜೆಪಿ ಮದ್ಯೆ ಪೈಪೋಟಿ, ಆದರೂ 2006ರಲ್ಲಿ ಸಿ ಎಚ್ ಕುಂಞಬುಅನಿರೀಕ್ಷಿತ ವಾಗಿ ಗೆದ್ದ ಇತಿಹಾಸ ಇರುವ ಮಂಜೇಶ್ವರ ಮಂಡಲ ದಲ್ಲಿ ಈಗಿನ ಎಡರಂಗ ಗೆಲ್ಲುವ ಪ್ರಯತ್ನ ಮಾಡುತ್ತಿಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಗಂಭೀರ ಆರೋಪ.. ಕುಂಬಳೆ ಏರಿಯಾ ಸೆಕ್ರೆಟರಿ ಎಡರಂಗ ಸ್ಪರ್ದಿಸಲು ಟಿಕೇಟ್ ನೀಡಿದರು ಸ್ಪರ್ಧೆಗೆ ಇಳಿಯಲ್ಲ ಎಂದು ಎಡರಂಗದ ನೇತಾರ ರೆ ಹೇಳುತ್ತಾರೆ..ಯಾಕೆಂದರೆ ಮಂಜೇಶ್ವರ ಹಾಗೂ ಕಾಸರಗೋಡು ಮಂಡಲ ಗಳಲ್ಲಿ ಮುಸ್ಲಿಂ ಲೀಗ್…

Read More

ಬೆಳ್ಳೂರು ಕಲ್ಲಗ ಪಡ್ಡಾಯಿ ಮೂಲೆ ಅಪಘಾತ ವಲಯ: ಮನೆ ಮೇಲ್ಚಾವಣಿಗೆ ಕಾರು ಮಗುಚಿ ಇಬ್ಬರಿಗೆ ಗಾಯ

ಬೆಳ್ಳೂರು: ಇಲ್ಲಿನ ಕಲ್ಲಗ ಪಡ್ಡಾಯಿ ಮೂಲೆ ತಿರುವು ಪದೇ ಪದೇ ವಾಹನ ಅಫಘಾತದ ಅಸುರಕ್ಷಿತ ಪ್ರದೇಶವಾಗಿ ಬದಲಾಗಿದೆ. ನಿನ್ನೆ ಕಾರೊಂದು ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದು ದುರ್ಘಟನೆ ನಡೆದ ಇದೇ ಸ್ಥಳದಲ್ಲಿ ಎರಡುಸತಿಂಗಳ ಹಿಂದೆಯೂ ಕಾರೊಂದು ಮಗುಚಿತ್ತು. ಎರಡೂ ಘಟನೆಗಳಲ್ಲಿ ಜೀವಾಪಾಯ ಸಂಭವಿಸದೇ ಇದ್ದರೂ ಈ ಪ್ರದೇಶ ಅಪಘಾತ ವಲಯವಾಗಿ ಬದಲಾಗಿದೆ ಎಂದು ನಾಗರಿಕರು ಆತಂಕ ಪ್ರಕಟಿಸಿದ್ದಾರೆ. ನಿನ್ನೆ ಅಪರಾಹ್ನ ಕರ್ನಾಟಕ ಭಾಗಕ್ಕೆ ಅಡಿಕೆ ಹೇರಿ ಕೊಂಡೊಯ್ಯುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮನೆಯ ಮೇಲೆ ಮಗುಚಿ…

Read More

ಕಾಸರಗೋಡಿಗೆ ನೂತನ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡ್ಯನ್ ನೇಮಕ – ಇಂಬುಶೇಖರ್ ಕೆ. ವರ್ಗಾವಣೆ

ಕಾಸರಗೋಡು: ವಿಧಾನಸಭಾ ಪೂರ್ವಭಾವಿಯಿಗಿ ಕಾಸರಗೋಡು ಜಿಲ್ಲಾಧಿಕಾರಿ ಇಂಬುಶೇಖ‌ರ್ ಕೆ. ಅವರನ್ನು ವರ್ಗಾಯಿಸಲಾಗಿದ್ದು, ನೂತನ ಜಿಲ್ಲಾಧಿಕಾರಿಯಿಗಿ ತ್ರಿಶೂರು ಜಿಲ್ಲಾಧಿಕಾರಿಯಾಗಿದ್ದ ಅರ್ಜುನ್ ಪಾಂಡ್ಯನ್ ಅವರನ್ನು ಕಾಸರಗೋಡಿಗೆ ನೇಮಿಸಿ ಆದೇಶವಾಗಿದೆಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಅರ್ಜುನ್ ಪಾಂಡ್ಯನ್ ಅವರ ಜೀವನಗಾಥೆ ಯುವ ಪೀಳಿಗೆಗೆ ದೊಡ್ಡ ಪ್ರೇರಣೆ. ಇಡುಕ್ಕಿಯ ಸಾಧಾರಣ ಕೃಷಿಕ ಮತ್ತು ಅಂಗನವಾಡಿ ಶಿಕ್ಷಕಿಯ ಮಗನಾದ ಇವರು, ಬಾಲ್ಯದಲ್ಲಿ ಚಹಾ ಎಲೆಯ ಚೀಲ ಹೊತ್ತು, ಟ್ಯಾಕ್ಸಿ ಚಾಲಕರಾಗಿ ದುಡಿದು ಬಡತನದ ವಿರುದ್ಧ ಹೋರಾಡಿದವರು. ​ಬಿ.ಟೆಕ್ ನಂತರ ಐಟಿ ಉದ್ಯೋಗ ಸಿಕ್ಕರೂ,…

Read More

ಡಾ.ಬಾಲಕೃಷ್ಣl ಎಸ್.ಮದ್ದೋಡಿ ಅವರಿಗೆ ಶ್ರೀ ಶ್ರೀ ಬಿಕ್ಷು ಲಕ್ಷ್ಮಾನಂದ ಸ್ವಾಮೀಜಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ

ಕೇರಳ ರಾಜ್ಯದ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದಂಗವಾಗಿ ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ ತಂತ್ರಜ್ಞಾನ ಸಂಸ್ಥೆಯ ಖ್ಯಾತ ಪರಿಸರವಾದಿ ಹಾಗೂ ಸಮಾಜ ಸೇವಾ ಕಾರ್ಯಕರ್ತ ಪ್ರಾಧ್ಯಾಪಕ ಡಾ.ಬಾಲಕೃಷ್ಣl ಎಸ್.ಮದ್ದೋಡಿ ಅವರಿಗೆ ಶ್ರೀ ಶ್ರೀ ಬಿಕ್ಷು ಲಕ್ಷ್ಮಾನಂದ ಸ್ವಾಮೀಜಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಕಾರ್ಯಕ್ರಮದಲ್ಲಿ ಶ್ರೀ ಮದಡೆನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಪಾದಂಗಳು, ಗೋನಾಳದ ರಮೇಶ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಕೃಷ್ಣಪ್ರಸಾಧ ಕೂಡ್ಲು,ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ…

Read More

ಕಾಸರಗೋಡು -ಕರ್ನಾಟಕ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ನಾಡೋಜ, ನೇತ್ರಾಲಯ ಡಾ. ಕೃಷ್ಣಪ್ರಸಾದ್ ಕೂಡ್ಲು ರೀಗೆ ಕನ್ನಡ ಭವನದಿಂದ ವಿಶೇಷ ಗೌರವಾರ್ಪಣೆ,

ಕಾಸರಗೋಡು : ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಸರ್ವಧ್ಯಕ್ಷರಾದ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು, ಅವರೀಗೆ ಸಮ್ಮೇಳನ ಪ್ರಯೋಜಕರಾದ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ವೆಂಕಟ್ರಮಣ ಹೊಳ್ಳ ಮುತುವರ್ಜಿಯಲ್ಲಿ ವಿಶೇಷ ಸನ್ಮಾನ, ಗೌರವಾರ್ಪಣೆ ನಡೆಯಿತು. ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಶಾಲು ಹೊದಿಸಿ, ಗದಗ ಗೋವಿನಾಳದ ಶ್ರೀ ಶ್ರೀ ರಮೇಶ ಮಹಾ ಸ್ವಾಮಿಗಳು ಸ್ಮರಣಿಕೆ ನೀಡಿ, ಡಾ. ವಾಮನ್ ರಾವ್…

Read More

ಮಂಗಳೂರು ಸರ್ಕ್ಯೂಟ್ ಹೌಸ್ ನಲ್ಲಿ ಕರ್ನಾಟಕ ಸಭಾಧ್ಯಕ್ಷರನ್ನು ಭೇಟಿ ಮಾಡಿದ ಪವನ್ ಕುಮಾರ್ ಶಿರ್ವ

ಮಂಗಳೂರು: ಇಲಾಖೆಯ ನಿರ್ಲಕ್ಷ್ಯದಿಂದ ಉಂಟಾದ ಅವ್ಯವಸ್ಥೆಯ ಪರಿಣಾಮ ವಿದ್ಯುತ್ ಕಂಬ ಬಿದ್ದು ಮೃತಪಟ್ಟ ಕಾರ್ಮಿಕ ಮುರುಗನ್ ಅವರ ಕುಟುಂಬಕ್ಕೆ ತುರ್ತಾಗಿ ಪರಿಹಾರ ಘೋಷಿಸಬೇಕೆಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರಿಗೆ ಭೋವಿ ಸಮಾಜದ ಮುಖಂಡ ಪವನ್ ಕುಮಾರ್ ಶಿರ್ವ ಮನವಿ ಸಲ್ಲಿಸಿದರು. ತಮಿಳುನಾಡು ಮೂಲದ ಮುರುಗನ್ ಅವರು ಸುಮಾರು 12 ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಸಂಭವಿಸಿದ ದುರ್ಘಟನೆಯಲ್ಲಿ ವಿದ್ಯುತ್ ಕಂಬ ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಇಲಾಖೆಯ ನಿರ್ಲಕ್ಷ್ಯ ಹಾಗೂ ಸರಿಯಾದ…

Read More

ಅವ್ಯಸ್ಧೆಯಿಂದ ಸಾವು, ಕೂಡಲೇ ಪರಿಹಾರ ಘೋಷಿಸಿ-ಭೋವಿ ಮುಖಂಡ ಪವನ್ ಕುಮಾರ್ ಶಿರ್ವ

ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದಿರುವ ತಮಿಳುನಾಡು ಕಾರ್ಮಿಕನ ಸಾವಿಗೆ ಸರ್ಕಾರದ ಅವ್ಯವಸ್ಥೆಯೇ ನೇರ ಕಾರಣ… ಈ ಘಟನೆ ನಡೆದು ಎರಡು ದಿನಗಳಾದರೂ ಯಾವುದೇ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಪರಿಹಾರದ ಭರವಸೆ ನೀಡಿಲ್ಲ… ಇಂಥ ನಿರ್ಲಕ್ಷ ಸಲ್ಲದು.. ಅಲ್ಲಿರುವ ಅವ್ಯವಸ್ಥೆಯನ್ನು ಸರ್ಕಾರ ಮತ್ತು ಮೀನುಗಾರಿಕೆ ಇಲಾಖೆ ಕೂಡಲೇ ಸರಿಪಡಿಸಬೇಕು.. ಅಲ್ಲಿ ಎಲ್ಲಾ ಬಡ ಜನಾಂಗದವರೇ ನಾ ಹೊಟ್ಟೆಪಾಡಿಗೆ ದುಡಿದುಕೊಂಡಿದ್ದು ಸರ್ಕಾರದ ಅಭಿವೃದ್ಧಿಯ ವೈಫಲ್ಯದಿಂದ ಜನರು ಸಾವಿಗೀಡಾಗಬೇಕಾಗಿದೆ.. ಈ ಸಮಸ್ಯೆಯಿಂದ ಇನ್ನಷ್ಟು ಜೀವ ಬಳಿ ಪಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಮೃತ…

Read More

ಬೇಕೂರು ಬ್ರಹ್ಮಶ್ರೀ ಮೊಗೇರ ದೈವಸ್ಥಾನದಲ್ಲಿ ಫೆ.28-ಮಾ.1ರಂದು ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವ

ಉಪ್ಪಳ : ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಬೇಕೂರು ಇದರ ನವೀಕೃತ ದೈವಸ್ಥಾನದ ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವವು ಫೆಬ್ರವರಿ 28 ಮತ್ತು ಮಾರ್ಚ್ 1, 2026ರಂದು ಭಕ್ತಿ ಭಾವಪೂರ್ಣವಾಗಿ ಜರುಗಲಿದೆ. ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಪಚ್ಲಂಪಾರೆ ಇದರ ಗೌರವಾಧ್ಯಕ್ಷರು,ಚೌಡಿ ಚಾಮುಂಡೇಶ್ವರಿ ಆರಾಧಕರು ಹಾಗು ಶ್ರೀ ದೈವದ ಮಧ್ಯಸ್ಥರಾದ ಶ್ರೀ ಬಾಬು ಯು. ಪಚ್ಲಂಪಾರೆ ಅವರ ಕಾರ್ಮಿಕತ್ವದಲ್ಲಿ ನವೀಕೃತ ದೈವಸ್ಥಾನದ ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವ ನಡೆಯಲಿದ್ದು. ಫೆಬ್ರವರಿ 28ರಂದು ಬೆಳಿಗ್ಗೆ 7 ಗಂಟೆಗೆ ಗಣಹೋಮ ,…

Read More

ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡ್ ನಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ: ಕಟ್ಟುನಿಟ್ಟಿನ ಕ್ರಮಕ್ಕೆ ಸ್ಥಳೀಯರ ಆಗ್ರಹ

ಬಂದ್ಯೋಡ್: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡ್ ಪ್ರದೇಶದಲ್ಲಿ ಕಟ್ಟಡ ಮಾಲೀಕರು ಮತ್ತು ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿರುವ ಪರಿಣಾಮ ಸಾರ್ವಜನಿಕರಿಗೆ ನಡೆದು ಹೋಗಲು ತೀವ್ರ ತೊಂದರೆ ಉಂಟಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಇದರಿಂದ ಜನರು ರಸ್ತೆ ಮೇಲೆ ಇಳಿದು ನಡೆದು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಅಂಗಡಿ ಮಾಲೀಕರು ಅಂಗಡಿಗಳ ಒಳಗೆ ಇರಬೇಕಾದ ವಸ್ತುಗಳನ್ನು ಹೊರಗೆ ಇಟ್ಟು ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಪಾದಚಾರಿ ಮಾರ್ಗ ಬಳಕೆ ಅಸಾಧ್ಯವಾಗಿದ್ದು, ಅಪಘಾತದ ಭೀತಿ ಹೆಚ್ಚಾಗಿದೆ…

Read More

ಸಾರ್ವಜನಿಕ ಚರಂಡಿಗೆ ವಸತಿ ಸಮುಚ್ಚಯದ ಶೌಚಾಲಯ ತ್ಯಾಜ್ಯ: ಸತ್ಯಾಂಶವನ್ನು ಮುಚ್ಚಿ ಹಾಕಲು ಚರಂಡಿಯ ಮೇಲೆ ರಾತ್ರೋರಾತ್ರಿ ಕಾಂಕ್ರೀಟ್ : ಅಧಿಕಾರಿಗಳಿಗೆ ಕಣ್ಣಿದ್ದೂ ಜಾಣ ಕುರುಡುತನ

​ಮಂಜೇಶ್ವರ: ಮಂಜೇಶ್ವರ ಒಳಪೇಟೆಯ ದಕ್ಷಿಣ ಭಾಗದಲ್ಲಿ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಸ್ಥಳದಲ್ಲಿರುವ ಚರಂಡಿಗೆ ಖಾಸಗಿ ವಸತಿ ಸಮುಚ್ಚಯವೊಂದರ ಶೌಚಾಲಯದ ತ್ಯಾಜ್ಯ ನೀರನ್ನು ನೇರವಾಗಿ ಹರಿಬಿಡಲಾಗುತ್ತಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಆರೋಗ್ಯಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಹಲವು ರೀತಿಯ ಅನುಮಾನಕ್ಕೆ ಕಾರಣವಾಗಿದೆ. ಮಂಜೇಶ್ವರ ಒಳಪೇಟೆಯ ದಕ್ಷಿಣ ಭಾಗದ ಅಂಗಡಿ ಮುಂಭಾಗ…

Read More
error: Content is protected !!