Avatar

NAMMA MEDIA 24X7

ಪ್ರಕೃತಿ ವಿಕೋಪದಿಂದ ಮಾಜಿ ಸೈನಿಕರ ಸಂಘದ ಕಟ್ಟಡಕ್ಕೆ ಕುಸಿತ ಭೀತಿ: ತಡೆಗೋಡೆ ನಿರ್ಮಾಣಕ್ಕೆ ನೆರವು ಕೋರಿಕೆ

ನಗರದ ಲೈಟ್‌ ಹೌಸ್‌ಹಿಲ್ ರಸ್ತೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ (DKESMA) ಕಟ್ಟಡವು ಪ್ರಕೃತಿ ವಿಕೋಪದಿಂದಾಗಿ ಕುಸಿಯುವ ಭೀತಿಯಲ್ಲಿದ್ದು, ಕಟ್ಟಡದ ರಕ್ಷಣೆಗಾಗಿ ತಡೆಗೋಡೆ ನಿರ್ಮಿಸಲು ಸಂಘವು ಸಾರ್ವಜನಿಕರ ಮತ್ತು ದಾನಿಗಳ ನೆರವು ಅಗತ್ಯ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರಾದ ಕರ್ನಲ್ ಜಯಚಂದ್ರ ಎ ಕೆ ತಿಳಿಸಿದರು . ಅವರು ನಗರದ ಪತ್ರಿಕಾಭವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಳೆದ ಮೇ 28, 2025ರಂದು ಸಂಭವಿಸಿದ ಭಾರಿ ಮಳೆಗೆ…

Read More

ಮೇ 3 ರಂದು ಕೆಸಿ ನಗರದಲ್ಲಿ ಸಲಫಿ ಸಮ್ಮೇಳನ

ಉಳ್ಳಾಲ,ಕರ್ನಾಟಕ ಸಲಫಿ ಎಸೋಸಿಯೇಷನ್ (ರಿ), ಮಂಗಳೂರು ಮತ್ತು ವಿಶ್ವಮ್ ಇಸ್ಲಾಮಿಕ್ ಆರ್ಗನೈಝೇಷನ್ ಇವುಗಳ ಜಂಟಿ ಆಶ್ರಯದಲ್ಲಿ ತಲಪಾಡಿ, ಕೆ ಸಿ ನಗರದಲ್ಲಿ “ತೌಹೀದ್ ಇಸ್ಲಾಮಿನ ಬುನಾದಿ; ಇದು ಪ್ರವಾದಿ ಗಳ ಹಾವಿ” ಎಂಬ ಮಹತ್ವದ ಧೈಯ ವಾಕ್ಯದೊಂದಿಗೆ ಸಲಫಿ ಸಮ್ಮೇಳನವು 2026ರ ಮೇ 3 ರಂದು ಭಾನುವಾರ ಸಂಜೆ 4 ಗಂಟೆಗೆ ತಲಪಾಡಿಯ ಕೆ ಸಿ ನಗರದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಲಫಿ ಎಸೋಸಿಯೇಷನ್ ನ ಅಧ್ಯಕ್ಷ ಡಾ.ಮುಹಮ್ಮದ್ ಹಫೀಝ್ ಹೇಳಿದರು. ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್…

Read More

ಯುಡಿಎಫ್ ಬಂದರೆ ಮಹಿಳೆಯರಿಗೆ ಉಚಿತ ಪ್ರಯಾಣ: ಹೊಸ ತಂತ್ರದೊಂದಿಗೆ ಕುಂಬಳೆ ಮರ್ಚೆಂಟ್ ಯೂತ್ ವಿಂಗ್

ಕುಂಬಳೆ: ಕುಂಬಳೆಯಲ್ಲಿ ಖಾಸಗಿ ಬಸ್ ಸಿಬ್ಬಂದಿ ಹಾಗೂ ಮರ್ಚೆಂಟ್ ಯೂತ್ ವಿಂಗ್ ಕಾರ್ಯಕರ್ತರ ನಡುವೆ ಟ್ರಾಫಿಕ್ ಪರಿಷ್ಕರಣೆ ವಿಚಾರವಾಗಿ ಉದ್ವಿಗ್ನತೆ ಉಂಟಾದ ಬೆನ್ನಲ್ಲೇ, ಮರ್ಚೆಂಟ್ ಯೂತ್ ವಿಂಗ್ ನಾಯಕರು ಹೊಸ ತಂತ್ರದೊಂದಿಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಯುಡಿಎಫ್ ಆಡಳಿತಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಸೂಚಿಸುತ್ತಿರುವ ಸಂದರ್ಭದಲ್ಲಿ, ಯುಡಿಎಫ್ ಚುನಾವಣಾ ಭರವಸೆಗಳಲ್ಲಿ ಒಂದಾದ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಗಮನದಲ್ಲಿಟ್ಟು, ಹೆಚ್ಚು ಮಹಿಳಾ ಪ್ರಯಾಣಿಕರಿರುವ ಕುಂಬಳೆ–ಸೀತಾಂಗೋಳಿ–ಬದಿಯಡ್ಕ–ಪೆರ್ಲ–ಮುಳ್ಳೇರಿಯಾ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿ…

Read More

ಉಪ್ಪಳದಲ್ಲಿ ಐವತ್ತು ಲಕ್ಷ ರೂಪಾಯಿ ದರೋಡೆ ಪ್ರಕರಣ: ಸೂತ್ರಧಾರ ಛತ್ತೀಸ್‌ಗಢದಲ್ಲಿ ಬಂಧನ

ಕಾಸರಗೋಡು ಜಿಲ್ಲೆಯ ಉಪ್ಪಳ ಪಟ್ಟಣದಲ್ಲಿ 2024ರ ಮಾರ್ಚ್ 27ರಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ನಡೆದ ಐವತ್ತು ಲಕ್ಷ ರೂಪಾಯಿ ದರೋಡೆ ಪ್ರಕರಣದ ಮುಖ್ಯ ಸೂತ್ರಧಾರನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ದಿಂಡಿಗಲ್ ರಾಮ್ಜಿ ನಗರ ನಿವಾಸಿಯಾದ ಅರುಮುಖನ್ ಅಲಿಯಾಸ್ ಕಿಟ್ಟು (55) ಬಂಧಿತ ಆರೋಪಿ. ಘಟನೆ ಬಳಿಕ ಛತ್ತೀಸ್‌ಗಢದಲ್ಲಿ ಅಡಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಜೇಶ್ವರ ಎಸ್‌ಐ ದಿನೇಶ್ ರಾಜನ್ ನೇತೃತ್ವದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಉಪ್ಪಳ ಪಟ್ಟಣದ ಆಕ್ಸಿಸ್ ಬ್ಯಾಂಕ್…

Read More

ಉಪ್ಪಳ ಪಟ್ಟಣದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ: ಹೊಸ ಉಚಿತ ಪಾರ್ಕಿಂಗ್ ವ್ಯವಸ್ಥೆ ಆರಂಭ

ಉಪ್ಪಳ ಪಟ್ಟಣದಲ್ಲಿ ತೀವ್ರಗೊಂಡಿದ್ದ ವಾಹನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಹೊಸ ಪಾರ್ಕಿಂಗ್ ಸೌಲಭ್ಯವನ್ನು ಆರಂಭಿಸಿದೆ.ಪ್ರಸ್ತುತ ಬಸ್ ನಿಲ್ದಾಣದ ಸಮೀಪದ ಮೇಲ್ಸೇತುವೆ ಕೆಳಭಾಗದಲ್ಲಿ ಬಹುತೇಕ ವಾಹನಗಳು ನಿಲ್ಲಿಸಲಾಗುತ್ತಿವೆ. ಆದರೆ ಅನೇಕ ವಾಹನಗಳು ಬೆಳಗ್ಗೆಯೇ ಬಂದು ರಾತ್ರಿ ಮಾತ್ರ ತೆರಳುತ್ತಿರುವುದರಿಂದ ವ್ಯಾಪಾರ ಸಂಸ್ಥೆಗಳ ಅಗತ್ಯಕ್ಕಾಗಿ ಬರುವ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸ್ಥಳ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಉಪ್ಪಳ ಬಸ್ ನಿಲ್ದಾಣದ ಸಮೀಪ ಮೀನು ಮಾರುಕಟ್ಟೆ…

Read More

ಸೀತಾಂಗೋಳಿಯಲ್ಲಿ ಹಗಲು ಹೊತ್ತಿನ ಹತ್ಯೆ ಆತಂಕ: ಗೂಂಡಾಗಿರಿ ತಡೆಗೆ ಕಠಿಣ ಕ್ರಮಕ್ಕೆ ಸ್ಥಳೀಯರ ಆಗ್ರಹ

ಕುಂಬಳೆ ಪಂಚಾಯತ್ ವ್ಯಾಪ್ತಿಯ ಸೀತಾಂಗೋಳಿಯಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣ ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದರೂ, ಸೀತಾಂಗೋಳಿ ಪ್ರದೇಶದಲ್ಲಿ ಸಂಜೆ ಬಳಿಕ ಗೂಂಡಾಗಳ ಅಟ್ಟಹಾಸ ಹೆಚ್ಚುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಸ್ಥಳೀಯರ ಪ್ರಕಾರ, ರಸ್ತೆ ಮೂಲಕ ಸಂಚರಿಸುವ ಬಸ್ಸುಗಳನ್ನೂ ಅಡ್ಡಗಟ್ಟಿ ನಿಲ್ಲಿಸಿದ ಘಟನೆಗಳು ಹಲವು ಬಾರಿ ನಡೆದಿದೆ. ಸೀತಾಂಗೋಳಿಯಲ್ಲಿ ಹೆಸರಿಗೆ ಮಾತ್ರ ಪೊಲೀಸ್ ಹೆಡ್ ಪೋಸ್ಟ್ ಇದ್ದು, ಅಲ್ಲಿ ಒಬ್ಬರು ಅಥವಾ ಇಬ್ಬರು ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿರುತ್ತಾರೆ ಎನ್ನಲಾಗಿದೆ….

Read More

ಪೊಸೋಟು ಹೊಳೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ : ಮಲತ್ಯಾಜ್ಯ ಸುರಿಯುತ್ತಿರುವ ದಂಧೆಗೆ ಸಾರ್ವಜನಿಕರ ಆಕ್ರೋಶ

​ಮಂಜೇಶ್ವರ: ಗಡಿ ಭಾಗದ ಮಂಜೇಶ್ವರದ ಪೊಸೋಟು ಹೊಳೆ ಇದೀಗ ಕಸದ ತೊಟ್ಟಿಯಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಆತಂಕ ಮೂಡಿಸಿದೆ. ಜನಸಂದಣಿ ಇಲ್ಲದ ಸಮಯ ನೋಡಿ ಸೇಪ್ಟಿ ಟ್ಯಾಂಕ್‌ಗಳಿಂದ ಸಂಗ್ರಹಿಸಿದ ಶೌಚಾಲಯ ಮಾಲಿನ್ಯ (ಮಲತ್ಯಾಜ್ಯ) ವನ್ನು ಟ್ಯಾಂಕರ್‌ಗಳ ಮೂಲಕ ತಂದು ನೇರವಾಗಿ ಹೊಳೆಗೆ ಸುರಿಯಲಾಗುತ್ತಿದೆ ಎಂಬ ಗಂಭೀರ ದೂರುಗಳು ಕೇಳಿಬಂದಿವೆ. ​ಕೇವಲ ಮಲತ್ಯಾಜ್ಯ ಮಾತ್ರವಲ್ಲದೆ, ಕೋಳಿ ಮತ್ತು ದನದ ಮಾಂಸದ ತ್ಯಾಜ್ಯಗಳನ್ನು ಕೂಡ ಇಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಇಡೀ ಪರಿಸರ ದುರ್ನಾತದಿಂದ ಕೂಡಿದ್ದು, ಈ ಭಾಗದ…

Read More

ಮಹಿಳಾ ಮೀಸಲಾತಿ ಮಸೂದೆ ವಿರೋಧದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯ: ಕೆ. ರಂಜಿತ್ ಆರೋಪ

ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಜನತೆ ತಮ್ಮ ಹಕ್ಕಿನ ಪ್ರತಿನಿಧಿತ್ವವನ್ನು ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಆರೋಪಿಸಿದರು. ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಹೊಸ ಬಸ್ ನಿಲ್ದಾಣದ ಬಳಿ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಸೂದೆ ಅಂಗೀಕಾರವಾಗಿದ್ದರೆ ಕೇರಳಕ್ಕೆ ಲೋಕಸಭೆಯಲ್ಲಿ 30 ಸ್ಥಾನಗಳು ದೊರೆಯಬಹುದಾಗಿತ್ತು. ಆದರೆ…

Read More

ಮಂಗಳೂರು ಇಂಟರ್ ಕಾಲೇಜ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ಮೇ 4ರಿಂದ

ಮಂಗಳೂರು: ಮಂಗಳೂರಿನ ಯುವಜನರ ಕ್ರೀಡಾ ಪ್ರತಿಭೆಯನ್ನು ಉತ್ತೇಜಿಸಲು ‘ಶ್ರೀ ಶಂಕರಾಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಕಿಲ್ಸ್’ ವತಿಯಿಂದ ‘ಮಂಗಳೂರು ಇಂಟರ್ ಕಾಲೇಜ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ ಚಾಂಪಿಯನ್‌ಶಿಪ್–2026’ ಅನ್ನು ಮೇ 4ರಿಂದ 9ರವರೆಗೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಿಇಓ ಹಾಗೂ ನಿರ್ದೇಶಕ ಭವಿಷ್ ಸುವರ್ಣ ತಿಳಿಸಿದ್ದಾರೆ. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರೀಡಾಕೂಟವು ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಆಶಯ ಮತ್ತು ನೇತೃತ್ವದಲ್ಲಿ ನಡೆಯಲಿದೆ. ಮಂಗಳೂರಿನ ವಿದ್ಯಾರ್ಥಿಗಳಲ್ಲಿ…

Read More

2030ರೊಳಗೆ ಕರ್ನಾಟಕವನ್ನು ಜೂಡೋ ಶಕ್ತಿಕೇಂದ್ರವನ್ನಾಗಿಸುವ ಗುರಿ: ಯತೀಶ್ ನಾರಾಯಣ್ ಬಂಗೇರ

ಮಂಗಳೂರು: “2030ರ ವೇಳೆಗೆ ಕರ್ನಾಟಕವನ್ನು ಭಾರತದ ಜೂಡೋ ಪ್ರಧಾನ ಕೇಂದ್ರವನ್ನಾಗಿ ರೂಪಿಸುವ ಗುರಿಯೊಂದಿಗೆ ‘ವಿಷನ್ 2030’ ನೀಲನಕ್ಷೆ ಆರಂಭಿಸಲಾಗಿದೆ” ಎಂದು ಕರ್ನಾಟಕ ಸ್ಟೇಟ್ ಜೂಡೋ ಸ್ಪೋರ್ಟ್ಸ್ ಅಸೊಸಿಯೇಶನ್ ಪ್ರಮುಖರಾದ ಯತೀಶ್ ನಾರಾಯಣ್ ಬಂಗೇರ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಸೇರಿದಂತೆ ರಾಜ್ಯದ ಜೂಡೋ ಕ್ರೀಡೆಯ ಗತವೈಭವವನ್ನು ಮರುಸ್ಥಾಪಿಸಲು ಈ ದೂರದೃಷ್ಟಿಯ ಯೋಜನೆ ರೂಪಿಸಲಾಗಿದೆ ಎಂದರು. 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಭಾರತದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರಕ್ಕೆ ಗರಿಷ್ಠ ಪದಕಗಳನ್ನು ತಂದುಕೊಡುವ…

Read More
error: Content is protected !!