“ಕೊರಗಜ್ಜ ಸರ್ಕಲ್ ವಿವಾದಕ್ಕೆ ಹೆಚ್ಚು ಮಹತ್ವ ಬೇಡ” : ಯು.ಟಿ. ಖಾದರ್
ಮಂಗಳೂರು: ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ಸರ್ಕಲ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದ ವಿಚಾರಕ್ಕೆ ಸಂಬಂಧಿಸಿ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, “ಒಬ್ಬರಿಬ್ಬರ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, “ವಿರೋಧ ವ್ಯಕ್ತಪಡಿಸುತ್ತಿರುವವರು ಸ್ಥಳೀಯರಲ್ಲ. ಹೊರಗಿನಿಂದ ಬಂದು ನೆಲೆಸಿರುವ ಕೆಲವರು ಹಾಗೂ ಕೆಲವು ಸಂಘಟನೆಗಳಿಗೆ ಸಂಬಂಧಪಟ್ಟವರು ಈ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಊರಿನ ಜನರು ಅದಕ್ಕೆ ಮಹತ್ವ ನೀಡಲು ಸಿದ್ಧರಿಲ್ಲ” ಎಂದು ಹೇಳಿದರು.ಕುತ್ತಾರು, ಮದನಿ ನಗರ ಮತ್ತು ಸುಭಾಷ್ ನಗರ…