ಕಾಟಿಪಲ್ಲ ಗಣೇಶ್ಪುರ ದೇವಸ್ಥಾನದಲ್ಲಿ ಹೊಸ ಕನ್ನಡ ಚಿತ್ರದ ಮುಹೂರ್ತ ಪೂಜೆ
ಮಂಗಳೂರು: ಕಾಟಿಪಲ್ಲ ಗಣೇಶ್ಪುರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಸಿ.ಎಂ. ಉದಯ್ ಅವರ ಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರಲಿರುವ ಹೊಸ ಕನ್ನಡ ಚಲನಚಿತ್ರದ ಮುಹೂರ್ತ ಪೂಜೆ ನೆರವೇರಿತು. ಕಾರ್ಯಕ್ರಮದಲ್ಲಿ ತುಳು ಚಿತ್ರನಟ ಹಾಗೂ ರಂಗಭೂಮಿ ಕಲಾವಿದ ಭೋಜರಾಜ್ ವಾಮಂಜೂರು, ಕಾಂತರಾ ಖ್ಯಾತಿಯ ನವೀನ್ ಬೋಂದೆಲ್, ಸಿ.ಎಂ. ಉದಯ್ ಹಾಗೂ ಅವರ ಧರ್ಮಪತ್ನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಚಿತ್ರಕ್ಕೆ ಪ್ರಭು ದಾಸ್ ಪಿ.ಡಿ. ಸಂಗೀತ ನಿರ್ದೇಶನ ನೀಡಲಿದ್ದು, ನಿವಾಸ್ ನಾರಾಯಣ್…