ಕಾಸರಗೋಡು ಜಿಲ್ಲೆಯ ವಿವಿದೆಡೆ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೇಂದ್ರ ಸಚಿವ ಗಡ್ಕರಿಗೆ ಮನವಿ ಸಲ್ಲಿಸಿದ ಬಿಜೆಪಿ.
ಹಲವಾರು ಕಡೆ ಪಾದಚಾರಿಗಳಿಗೆ ರಸ್ತೆ ದಾಟಲು ಅನಾನುಕೂಲವಾಗುವುದನ್ನು ಮನಗಂಡು ಕಾಸರಗೋಡಿನ ಅಡ್ಕತ್ತಬೈಲ್,ಮಂಜೇಶ್ವರ ಭಾಗದ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಳಿ, ಕನಿಲ ಶ್ರೀ ಭಗವತಿ ಕ್ಷೇತ್ರದ ಬಳಿ, ಹಾಗೂ ಬಂಗ್ರಮಂಜೇಶ್ವರದಲ್ಲಿ ಫೂಟ್ ಓವರ್ ಬ್ರಿಡ್ಜ್(Foot over Bridge ) ನಿರ್ಮಿಸಲು ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ದೆಹಲಿಗೆ ತೆರಳಿ ಮನವಿಯನ್ನು ಸಲ್ಲಿಸಿದ ಬಿಜೆಪಿ Kozhikode Megala ಉಪಾಧ್ಯಕ್ಷ ವಿಜಯ್ ರೈ, ಈ ಸಂದರ್ಭದಲ್ಲಿ ಮಂಗಳೂರಿನ ಸಂಸದರಾದ ಬ್ರಿಜೇಶ್ ಚೌಟ ಜೊತೆಯಲ್ಲಿದ್ದರು .