ಮುತ್ತಿನ ಹಾರ

ಆ ದಿನ ಮನೆ ತುಂಬಾ ಜನ ಸೇರಿದ್ದರು, ಮಕ್ಕಳ ಆಟ ಒಂದು ಕಡೆಯಾದರೆ ಮಾತು ಚೆಲ್ಲಾಟವಾಡುತ್ತಿರುವ ಯುವಕರು ಇನ್ನೊಂದು ಕಡೆ , ಗಂಡಸರ ಓಡಾಟ ಹಾಗೂ ಹೆಂಗಸರ ಹರಟೆ ಜೋರು ನಡೆಯುತ್ತಿತ್ತು. ಆ ದಿನ ಮನೆಯಲ್ಲಿ ಲಕ್ಷ್ಮಿಯ ಸೀಮಂತ ಕಾರ್ಯಕ್ರಮ ಅದರಲ್ಲಿ ಎಲ್ಲರೂ ಸಂಭ್ರಮಿಸುತ್ತಿದ್ದರು . ಲಕ್ಷ್ಮಿಗೆ ಚೊಚ್ಚಲ ಬಸರು,ಸೀಮಂತದ ಪ್ರಯುಕ್ತ ಪೂಜೆ ಹವನ ಹಾಗೂ ಗರ್ಭಿಣಿಯಾದ ಲಕ್ಷ್ಮಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಎಲ್ಲರೂ ಕೊಡುತ್ತಿದ್ದರು . ಮಹಿಳೆಯರೆಲ್ಲ ಅವರವರ ಗರ್ಭಾವಸ್ಥೆಯ ಅನುಭವವನ್ನು ಹೇಳುತ್ತಾ ಲಕ್ಷ್ಮಿಗೆ ಧೈರ್ಯ…

Read More

ಹಸಿವನ್ನು ನೀಗಿಸುವ ತಂತ್ರ

ಒಬ್ಬ ಬಡ ಮಹಿಳೆ ಒಬ್ಬ ಋಷಿಯ ಬಳಿಗೆ ಹೋಗಿ, “ಸ್ವಾಮೀಜಿ! ದಯವಿಟ್ಟು ನನ್ನ ಮಕ್ಕಳು ರಾತ್ರಿಯಲ್ಲಿ ಹಸಿವಿನಿಂದ ಅಳುವುದನ್ನು ನಿಲ್ಲಿಸುವ ಒಂದು ಪವಿತ್ರ ಮಂತ್ರವನ್ನು ಬರೆದಿಡಿ” ಎಂದು ಹೇಳಿದಳು. ಕೆಲವು ಕ್ಷಣಗಳು ಆಕಾಶವನ್ನು ದಿಟ್ಟಿಸಿ ನೋಡಿದ ನಂತರ, ಋಷಿ ಎದ್ದು ತನ್ನ ಗುಡಿಸಲಿನೊಳಗೆ ಹೋದನು. ಅವನು ಹಳದಿ ಬಟ್ಟೆಯ ಮೇಲೆ ಮಂತ್ರವನ್ನು ಬರೆದು, ಅದನ್ನು ಲಾಕೆಟ್‌ನಂತೆ ಕಟ್ಟಿ, ಆ ಮಹಿಳೆಗೆ ಕೊಟ್ಟನು. ನಂತರ ಋಷಿ, “ಈ ಮಂತ್ರವನ್ನು ನಿಮ್ಮ ಮನೆಯಲ್ಲಿ ನೀವು ಪ್ರಾಮಾಣಿಕವಾಗಿ ಸಂಪಾದಿಸಿದ ಹಣವನ್ನು ಇಡುವ…

Read More

ಪ್ರಕೃತಿ ಮಾತೇ

ಏನೇ ನೋವು, ಸಂಕಟ, ಸಂತೋಷ ಇದ್ದರೂ ನಾವು ಹಂಚಿಕೊಳ್ಳುವುದು ಅಮ್ಮನಲ್ಲಿ, ಅವಳು ನಮ್ಮನ್ನು ಹೊತ್ತು ಹೆತ್ತು ಸಲಹಿರುತ್ತಾಳೆ, ನಮ್ಮ ಸರ್ವಾಂಗೀಣ ಬೆಳವಣಿಗೆ ಕಾರಣಳಾಗಿರುತ್ತಾಳೆ.ಅವಳಂತೆ ನಮ್ಮ ಮೊದಲ ಉಸಿರಿನಿಂದ ಕೊನೆಯ ಉಸಿರಿನ ವರೆಗೆ ನಮ್ಮ ಉಳಿವಿಕೆ, ಅಳಿವಿಕೆ,ಜೀವಂತಿಕೆಗೆ ಕಾರಣಳಾದವಳು ಪ್ರಕೃತಿ ಮಾತೆ. ಅಮ್ಮನಂತೆ ಅವಳ ಮಡಿಲಲ್ಲಿಯೂ ನಾವು ನಮ್ಮ ಕಷ್ಟಗಳನ್ನು ಮರೆಯುತ್ತೇವೆ. ಆ ದಿನ ಸುಂದರ ಪ್ರಕೃತಿಯನ್ನು ನೋಡಿ ನಾನು ಇಂತಹ ಯೋಚನೆಯಲ್ಲಿ ಕಳೆದುಹೋದೆ. ವಸಂತ ಪಂಚಮಿ ಕಳೆದು ಎರಡೋ ಮೂರೋ ದಿನಗಳು ಆಗಿದ್ದವು, ಆ ದಿನ ನಾನು…

Read More

ನಕ್ಕುಬಿಡಿ😂

ಮಗ ಹಠ ಮಾಡಿ ಚೀನಾ ಹುಡುಗಿಯನ್ನ ಮದುವೆ ಮಾಡಿಕೊಂಡು ಬಂದ. ಸೊಸೆ ಮಾಡುವ ಹೊಸ ಹೊಸ ರುಚಿಯಾದ ಅಡುಗೆ ಊಟ ಮಾಡ್ತ ಮಾಡ್ತ, ಅತ್ತೆ ಮಾವನ ಅಸಮಾಧಾನ ಕಡಿಮೆ ಆಗಿ, ಎಲ್ಲರೂ ಖುಷಿಯಾಗಿದ್ದರು. ಮನೆಯಲ್ಲಿ ಜಿರಳೆ, ನೊಣ ಎಲ್ಲ ಮಾಯವಾಗಿ “ಮನೆನ ಎಷ್ಟು ಸ್ವಚ್ಛವಾಗಿ ಇಟ್ಕೊಂಡಿದ್ದಾಳೆ ನಮ್ಮ ಸೊಸೆ ” ಅಂತ ಎಲ್ಲರಿಗೂ ಹೇಳಿ ಅತ್ತೆ ಮಾವನಿಗೆ ಖುಷಿಯೋ ಖುಷಿ….!!ಕಳ್ಳ ಬೆಕ್ಕು ಹಾಲು ಕುಡಿಯಲು ಬರುವುದು ಬಂದ್ ಆಯ್ತು. ಎಲ್ಲಾ ನಮ್ ಸೊಸೆ ಕಾಲ್ಗುಣ..! ಅವತ್ತು ಊಟ…

Read More

ನನಗಾಗಿ ನನ್ನವರು…..!

ಸೂರ್ಯ ಇಲ್ಲದಿದ್ದರೆ ಬೆಳಕು ಇಲ್ಲ..! ಚಂದ್ರ ಇಲ್ಲದಿದ್ದರೆ ಬೆಳದಿಂಗಳು ಇಲ್ಲ..! ಆದರೆ ತಮ್ಮ ಇಲ್ಲದಿದ್ದರೆ ನನ್ನ ಪಾಲಿಗೆ ದೇವರಿಲ್ಲ…..! ಐ ಲವ್ ಯು ತಮ್ಮ ಹೆತ್ತು ನನ್ನ ಬೆಳೆಸಿದ್ದು ಅಮ್ಮನಾದರೂ ಜೀವನದ ಪಾಠಗಳನ್ನು ಕಲಿಸಿದ್ದು ಅಪ್ಪ ಐ ಲವ್ ಯು ಅಪ್ಪ ಜೀವನದ ಪಾಠ ಕಲಿಸಿದ್ದು ಅಪ್ಪನಾದರೂ ಹೆತ್ತು ಬೆಳೆಸಿದ್ದು ಅಮ್ಮ ಐ ಲವ್ ಯು ಅಮ್ಮ ಬರಹ: ದಿಯಾ ಎಂ ವಿ 3ನೇ ತರಗತಿ ಆರ್ ಆರ್ ಎಂ ಜಿ ಯು ಪಿ ಎಸ್ ಕೀಕಾನ

Read More

ಕತ್ತೆಯ ಮಗುವಿಗಾಗಿ ಅರಮನೆಯಲ್ಲಿ ಹಬ್ಬ ( ಸತ್ಯ ತಿಳಿಯದೆ ಸಂತೋಷಪಟ್ಟ ರಾಜ ಮತ್ತು ಮಂತ್ರಿಗಳು)

ಬಟ್ಟೆ ಒಗೆಯುವವನ ಹೆಂಡತಿ ರಾಜನ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಒಂದು ದಿನ, ಅವಳು ತುಂಬಾ ಸಂತೋಷದಿಂದ ಕಾಣುತ್ತಿದ್ದಳು, ಆದ್ದರಿಂದ ರಾಣಿ ಕೇಳಿದಳು, “ಇಂದು ನೀನು ಏಕೆ ಇಷ್ಟೊಂದು ಸಂತೋಷವಾಗಿದ್ದೀರಿ?” ಬಟ್ಟೆ ಒಗೆಯುವವಳು ಉತ್ತರಿಸಿದಳು, “ಧನ್ನು” ಇಂದು ಜನಿಸಿದಳು.” ರಾಣಿ ಅವಳಿಗೆ ಸಿಹಿತಿಂಡಿಗಳ ಪೆಟ್ಟಿಗೆಯನ್ನು ನೀಡಿ, “ಧನ್ನುವಿನ ಜನನವನ್ನು ಆಚರಿಸಲು ಅದನ್ನು ತಿನ್ನು” ಎಂದಳು. ಅಷ್ಟರಲ್ಲಿ, ರಾಜನು ಕೋಣೆಗೆ ಪ್ರವೇಶಿಸಿದನು ಮತ್ತು ರಾಣಿ ಸಂತೋಷವಾಗಿರುವುದನ್ನು ನೋಡಿ, “ಇಂದು ನೀನು ಏಕೆ ಇಷ್ಟೊಂದು ಸಂತೋಷವಾಗಿದ್ದೀರಿ? ಏನಾದರೂ ವಿಶೇಷ ಕಾರಣವಿದೆಯೇ?” ಎಂದು…

Read More

ಅಜ್ಜಿ ಕಥೆ (ನೈಯಪ್ಪದ ಆಸೆ )

ಒಂದು ಊರಲ್ಲಿ ಒಬ್ಬ ಅಜ್ಜ ಅಜ್ಜಿ ವಾಸವಾಗಿದ್ದರು, ಅಜ್ಜ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದರು, ಒಂದು ದಿನ ಅಜ್ಜನಿಗೆ ನೈಯ್ಯಪ್ಪ ಮಾಡಿ ತಿನ್ನಬೇಕು ಅಂತ ಆಸೆ ಆಯಿತು, ಅದಕ್ಕೋಸ್ಕರ ಅಂಗಡಿಗೆ ಹೋಗಿ ಬೇಕಾದ ಸಾಮಾನುಗಳನ್ನು ತಂದು ಅಜ್ಜಿಯ ಕಯ್ಯಲ್ಲಿ ಕೊಟ್ಟರು, ನೀನು ನೆಯ್ಯಪ್ಪ ಮಾಡು ಅಷ್ಟರಲ್ಲಿ ನಾನು ಸ್ನಾನ ಮಾಡಿ ಬರುತ್ತೇನೆ ಅಂತ ಕೆರೆ ಕಡೆ ಹೋದರು, ಅಜ್ಜಿ ಅಕ್ಕಿ, ಬೆಲ್ಲವನ್ನು ನ್ನು ಅರೆದು ನೆಯ್ಯಪ್ಪ ಮಾಡಲು ಶುರುಮಾಡಿದಳು, ಮೊದಲಿಗೆ ಮಾಡಿದ ನೆಯ್ಯಪ್ಪ ದ ರುಚಿಯನ್ನು…

Read More

ನದಿಯಾಗಿ ಹರಿದು ಕಡಲು ಸೇರಲೇ ಇಲ್ಲ ನಮ್ಮೀ ಪ್ರೀತಿ

ನನ್ನ ನಿನ್ನ ಭೇಟಿ ಆಕಸ್ಮಿಕವೇ ಆದರೂ ಅದು ಸಂಬಂಧದಲ್ಲಿ ಕೊನೆಗೊಂಡಿದ್ದು ಮಾತ್ರ ವಿಪರ್ಯಾಸ. ಆಕಸ್ಮಿಕ ಭೇಟಿ ಮಾತಿನ ಮೂಲಕ ಮುಂದುವರಿದು, ಗೆಳೆತನ ಚಿಗುರೊಡೆಯಿತು. ಹೀಗೆ ನಮ್ಮ ನಡುವೆ ಬಾಂಧವ್ಯ ಬೆಳೆದದ್ದೇ ತಿಳಿಯಲಿಲ್ಲ. ಅಷ್ಟು ಬೇಗ ನಮ್ಮ ನಡುವೆ ಸಲುಗೆ ಹುಟ್ಟಿತು. ಆ ಮೊದಲ ಭೇಟಿಯ ಸವಿನೆನಪು ಮನಸ್ಸಿನಲ್ಲಿ ಇಂದಿಗೂ ಹಸಿರಾಗಿಯೇ ಉಳಿದಿದೆ. ಅಂದು ಮಳೆ ರಚ್ಚೆ ಹಿಡಿದಂತೆ ಸುರಿಯುತ್ತಿತ್ತು. ಮಳೆ ನಡುವೆಯೇ ಗಾಳಿ, ಚಳಿಯ ಮಧ್ಯೆಯೇ ನಿನ್ನ ಭೇಟಿ ಬೆಚ್ಚನೆಯ ಭಾವ ನೀಡಿತ್ತು. ನಮ್ಮ ನಡುವೆ ಮಾತು…

Read More

ಏಳ್ ಬೂಡುದ ಸತ್ಯ ಶ್ರೀ ವರ್ಣಾರ ಪಂಜುರ್ಲಿ ದೈವ 🙏

ಈ ದೈವವು ಬೆಳ್ಳಿ ಬಂಗಾರಕ್ಕೆ ಬಯಸಿದ ದೈವ 🙏 ಈ ದೈವಕ್ಕೆ ಆವರ ತೆಗೆದು ಕೊಳ್ಳುವವರೆಗೆ ಬಾಯಿ ಬರುವುದಿಲ್ಲ, ಅಬೂಬ ಅಬೂಬ ಅಂತ ಹೇಳುತ್ತದೆ, ಆವರದ ನಂತರ, ಪಟ್ಟದ ಆಯುಧ ಕೈಗೆತ್ತಿದ ಮೇಲೆ ಮಾತನಾಡುತ್ತದೆ 🙏 ಮಲಾರ್ ಬೂಡುವಿನಲ್ಲಿದ್ದ ಮಲಾರ ಪಂಜುರ್ಲಿ ದೈವವು ವರ್ಣಾರ ಬೂಡುಗೆ ದೃಷ್ಟಿ ಹಾಕುತ್ತದೆ ಅಲ್ಲಿಗೆ ಹೋಗಬೇಕೆಂದು ಜೋಗಿ ಪುರುಷನ ಒರುವಾಗುತ್ತದೆ 🙏 ವರ್ಣಾರ ಬೂಡುವಿನಲ್ಲಿ ಎತ್ತುಗಳು ಇಲ್ಲದ ಕಾರಣ, ಬೂಡು ಅರಸರು(ಬಳ್ಳಾಕ್ಲು )ವರ್ಣಾರ ಬೀಮು ಎಂಬವನನ್ನು ಸುಬ್ರಮಣ್ಯಕ್ಕೆ ಎತ್ತುಗಳನ್ನು ತರಲು ಕಳುಹಿಸುತ್ತಾರೆ…

Read More

ಪದಿನಾಜಿ ಅವತಾರದ ದೈವಶ್ರೀ ಕುಪ್ಪೆ ಪಂಜುರ್ಲಿ

ಬಡಕಾಯಿ ರಾಜ್ಯೋ, ಬಳ್ಳಾಲ್ ಗಂಗೆಡ್ , ಗಿರಿಟ್ ಗಿರಿಮುಟ್ಟು ಸ್ವಾಮಿ, ಗದ್ದಿಗೆಡ್ ಗದ್ದಿಗೆದ ಬಂಟೆ, ವರಾಹ ಮೂರ್ತಿ ದೈವ ಕುಪ್ಪೆ ಪಂಜುರ್ಲಿ 🙏 ಈ ದೈವಕ್ಕೆ ಹರಕೆ ಹೇಳಿದರೆ, ಕೋರ್ಟು ಕಚೇರಿ, ನ್ಯಾಯ ಕೂಟದ, ವಿಷಯಗಳು ಇದ್ದರೆ ಪರಿಹಾರ ಆಗುತ್ತದೆ ಎಂಬ ನಂಬಿಕೆ 🙏 ಕಾಡ್ ಕಪ್ಪಾನಗ, ಊರು ಬೊಲ್ಪಾನಗ, ಕಾಡ್ ಸೇರುವೆ ಪಂದ್ ಕಟ್ಟಿ ಕೋಲದಲ್ಲಿ ದೈವ ಮೊಗವನ್ನು ಕಲಚದೇ, ಸೂರ್ಯ ಉದಯಿಸುವ ಮುನ್ನ ದೈವ ನೇಮ ಬಿರಿಯುವುದು ಪದ್ಧತಿ 🙏 ಎಲ್ಲಾ ದೈವಗಳು ಒಂದೇ…

Read More
error: Content is protected !!