ಕಣ್ಣೂರಿನ ಎಟ್ಟಿಕುಳಂನಲ್ಲಿ ಸೆಪ್ಟೆಂಬರ್ 23 ರಿಂದ 25ರ ತನಕ ತಾಜುಲ್ ಉಲಮಾ 12ನೇ ಉರೂಸ್.

ಮಂಗಳೂರು: ಮದನಿ ದರ್ಗಾ ಶರೀಫನ್ನು ಕೇಂದ್ರೀಕರಿಸಿ ಕರ್ನಾಟಕದಲ್ಲಿ ಸುಮಾರು 70 ವರ್ಷಗಳ ಕಾಲ ಧಾರ್ಮಿಕ ನೇತೃತ್ವ ವಹಿಸಿದ, ಕನ್ನಡ ನಾಡಿನ ಸಹಸ್ರಾರು ಉಲಮಾಗಳ ಪ್ರೀತಿಯ ಗುರುವರ್ಯರೂ, ವಿದ್ವತ್ತು, ಆರಾಧನೆಗಳಲ್ಲಿ ಶತಮಾನ ಕಂಡ ಅತಿ ಶ್ರೇಷ್ಠರೂ ಆದ ಉಳ್ಳಾಲ ತಂಙಳ್, ಎಂದೇ ಖ್ಯಾತರಾಗಿದ್ದ ಶೈಖುನಾ ತಾಜುಲ್ ಉಲಮಾ ಸಯ್ಯದ್ ಅಬ್ದುರ್ರಹಮಾನ್ ಅಲ್ ಬುಖಾರಿ(ಖ.ಸಿ)ರವರ 12ನೇ ಉರೂಸ್ ಸಮಾರಂಭವುಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕುಳಂನಲ್ಲಿ ಸೆಪ್ಟೆಂಬರ್ 23,24,25 ದಿನಾಂಕಗಳಲ್ಲಿ ನಡೆಯಲಿದೆ ಎಂದು ಮದನೀಸ್ ಕೇಂದ್ರ ಸಮಿತಿಯ ಕಾರ್ಯದರ್ಶಿಯಾದ ಬಶೀರ್ ಮದನಿ ಕೂಳೂರು…

Read More

ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಳೆದ ಪ್ರಕರಣ.ಆರೋಪಿಗೆ ಮೂರು ವರ್ಷ ಕಠಿಣ ಸಜೆ ಹಾಗೂ ದಂಡ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕೊಯ್ಯೂರಿನಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಳೆದ ಪ್ರಕರಣದ‌ ಆರೋಪಿ ಉಮೇಶ್ ಗೌಡ ಎಂಬುವವರಿಗೆ ಬೆಳ್ತಂಗಡಿ ನ್ಯಾಯಾಲಯವು ಮೂರು ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿದೆ. 2024 ಡಿಸೆಂಬರ್ 9ರಂದು ಕೊಯ್ಯೂರು ಗ್ರಾಮದ ಪಾಂಬೇಲು ಎಂಬಲ್ಲಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಆರೋಪಿ ಉಮೇಶ್ ಗೌಡ ಚಿನ್ನದ ಸರವನ್ನು ಎಳೆದು ತುಂಡರಿಸಿ ಸರದೊಂದಿಗೆ ತಪ್ಪಿಸಿಕೊಂಡಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು. ಆರೋಪಿಯನ್ನು ‌ಅದೇ…

Read More

ಕ್ರಿಶ್ಚಿಯನ್ ಬ್ರಾಹ್ಮಣ ಎಂದರೆ ಯಾವ ಜಾತಿ ಹೇಳಿ ಎಂಬ ಶಾಸಕ ಡಾ ಭರತ್ ಶೆಟ್ಟಿ ಪ್ರಶ್ನೆಗೆ ಉತ್ತರ ಹೇಳಲಾಗದೇ ತೊದಲಿದ ಮಂಗಳೂರು ಜಿಲ್ಲಾಧಿಕಾರಿ …. !

ಮಂಗಳೂರು: ಕ್ರಿಶ್ಚಿಯನ್ ಬ್ರಾಹ್ಮಣ ಎಂದರೆ ಯಾವ ಜಾತಿ ಹೇಳಿ ಎಂದು ಮಂಗಳೂರು ನಗರ ಶಾಸಕ ಡಾ ಭರತ್ ಶೆಟ್ಟಿ ಪ್ರಶ್ನೆಗೆ ಡಿಸಿ ಉತ್ತರ ಹೇಳಲಾಗದೇ ತೊದಲಿದ್ದಾರೆ. ಈ ವಿಡಿಯೋವನ್ನು ಖುದ್ದು ಭರತ್ ಶೆಟ್ಟಿ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ . ಜಾತಿಗಣತಿ ಬಗ್ಗೆ ನಗರದಲ್ಲಿ ಸಭೆಯಲ್ಲಿ ಸ್ಪೀಕರ್ ಯುಟಿ ಖಾದ‌ರ್, ಮಂಗಳೂರು ಡಿಸಿ ಸೇರಿದಂತೆ ಜನಪ್ರತಿನಿಧಿಗಳು, ನಾಗರಿಕರು ಸೇರಿದ್ದರು. ಈ ವೇಳೆ ಸಭೆಯಲ್ಲಿ ಡಾ ಭರತ್ ಶೆಟ್ಟಿ ಜಾತಿ ಕಾಲಂನಲ್ಲಿ ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಕುರುಬ ಎಂದೆಲ್ಲಾ…

Read More

ರಾಜ್ಯದಲ್ಲಿರುವ ಮರಾಠ ಸಮುದಾಯ ಬಾಂಧವರು ಜಾತಿಯನ್ನು ಮರಾಠವೆಂದು ಕೊಡಿ ; ಮುಖಂಡ ಸುರೇಶ್ ರಾವ್

ಮಂಗಳೂರು: ರಾಜ್ಯದಲ್ಲಿ ಹಿಂದುಳಿದ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ತೀರ್ಮಾನಿಸಿದ್ದು ರಾಜ್ಯದಲ್ಲಿರುವ ಮರಾಠ ಸಮುದಾಯ ಬಾಂಧವರು ಧರ್ಮವನ್ನು ಹಿಂದು ಎಂದು, ಜಾತಿಯನ್ನು ಮರಾಠವೆಂದು , ಉಪ ಜಾತಿಯನ್ನು ಕುಣುಬಿ ಎಂದು , ಮಾತೃ ಭಾಷೆಯನ್ನು ಮರಾಠಿ ಎಂದು ಸಮೀಕ್ಷೆಗೆ ಬರುವಾಗ ನಮೂದಿಸಬೇಕೆಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ರಾವ್ ಕೋರಿಕೊಂಡರು. ಅವರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ,…

Read More

ಜನಗಣತಿ ಸಮೀಕ್ಷೆಯಲ್ಲಿ ಬೆಲ್ಚಡ ಮತ್ತು ಮಲಯಾಳಿ ಬಿಲ್ಲವ ಸಮಾಜದವರು ‘ತೀಯಾ’ ಜಾತಿಯೆಂದು ನಮೂದಿಸಿ : ತಿಯಾ ಸಮಾಜ್ ನ ಅಧ್ಯಕ್ಷ ಸದಾಶಿವ ಉಳ್ಳಾಲ್

ಮಂಗಳೂರು: ಕರ್ನಾಟಕ ರಾಜ್ಯ ಸರಕಾರದಿಂದ ಇದೇ ತಿಂಗಳ 22 ರಿಂದ ಅಕ್ಟೋಬರ್ 7 ರ ವರೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಜ್ಯಾತೀಯ ಜನಗಣತಿ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ . ಈ ಸಮಯದಲ್ಲಿ ಪ್ರತಿ ಮನೆಮನೆಗೆ ಆಶಾ ಕಾರ್ಯಕರ್ತರು, ಶಿಕ್ಷಕರು ಭೇಟಿ ನೀಡಿ ಜಾತಿ ಪಂಗಡಗಳನ್ನು ಕೇಳುವಾಗ ನಾವು ತೀಯಾ ಎಂದು ಮಾತ್ರ ಜಾತಿ ನಮೂದಿಸುವ ಕಾಲಂ ಸಂಖ್ಯೆ 9 ರಲ್ಲಿ ನಮೂದಿಸಬೇಕು ಎಂದು ಭಾರತೀಯ ತಿಯಾ ಸಮಾಜ್ ನ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ತಿಳಿಸಿದರು. ಅವರು ನಗರದ…

Read More

ಬಂಟರು ಮತ್ತು ನಾಡವರು ಪ್ರತ್ಯೇಕ ಜಾತಿಗಳಲ್ಲ ಒಂದೇ; ಮಾಲಾಡಿ ಅಜಿತ್ ಕುಮಾರ್

ಮಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಿದ್ದತೆಯನ್ನು ನಡೆಸುತ್ತಿದ್ದು, ಈ ಸಮೀಕ್ಷೆಯಲ್ಲಿ ಒಂದೇ ಜಾತಿಯಾಗಿರುವ ಬಂಟರುಯಾನೆ ನಾಡವರನ್ನು ಬಂಟರು ಮತ್ತು ನಾಡವರೆಂದು ಪ್ರತ್ಯೇಕ ಜಾತಿಗಳೆಂದು ಗುರುತ್ತಿಸಲಾಗಿದೆ , ನಾವು ಇದನ್ನು ಲಿಖಿತವಾಗಿ ಆಕ್ಷೇಪ ವ್ಯಕ್ತಪಡಿಸಿ ಈಗಾಗಲೇ ಸ್ವೀಕರ್ ಮತ್ತು ಸರಕಾರದದ ಗಮನಕ್ಕೆ ತಂದಿದ್ದೇವೆ . ನಾಡವರು ಮತ್ತು ಬಂಟರು ಅನಾದಿ ಕಾಲದಿಂದಲೂ ಒಂದೇ ಆಗಿರುವ ಕಾರಣ ಪ್ರತ್ಯೇಕವಾಗಿ ಗಣತಿಯಲ್ಲಿ ಜಾತಿಯನ್ನು ನಮೂದು ಮಾಡಬಾರದೆಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ…

Read More

ಗ್ರಾಂಡ್ ರಾವ್ಸ್ ಚೆಸ್ಸ್ ಕಾರ್ನರ್ ವತಿಯಿಂದ ಅಂತರಾಷ್ಟ್ರೀಯ ಫಿಡೆ ರೇಟೆಡ್ ಚೆಸ್ ಫೆಸ್ಟಿವಲ್ ಪಂದ್ಯಕೂಟ

ಮಂಗಳೂರು:ಗ್ರಾಂಡ್ ರಾವ್ಸ್ ಚೆಸ್ಸ್ ಕಾರ್ನರ್ ವತಿಯಿಂದ ಅಂತರಾಷ್ಟ್ರೀಯ ಫಿಡೆ ರೇಟೆಡ್ ಚೆಸ್ ಫೆಸ್ಟಿವಲ್ ಪಂದ್ಯಕೂಟವು ಸೆಪ್ಟೆಂಬರ್ 25 ರಿಂದ 30 ರ ತನಕ ಮಂಗಳೂರಿನ ಶಾರದಾ ವಿದ್ಯಾಲಯದ ಭುವರಹ ಅಟ್ರಿಯಂ ನಲ್ಲಿ ನಡೆಯಲಿದೆ ಎಂದು ಆರ್.ಸಿ.ಸಿ ಸಂಸ್ಥೆಯ ಸಲಹೆಗಾರರು ಹಾಗೂ ಸಂಘಟಕರೂ ಆಗಿರುವ ಡಾ ಶುಭಾನಂದ್ ರಾವ್ ತಿಳಿಸಿದರು. ಅವರು ಪತ್ರಿಕಾಭವನದಲ್ಲಿ ನಡೆದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಆರ್ ಸಿ ಸಿ ಯನ್ನು 2012 ರಲ್ಲಿ ಐ ಎಂ ಶರಣ್ ರಾವ್ ಮತ್ತು ಡ ಬ್ಲ್ಯೂ…

Read More

ಸೆಪ್ಟೆಂಬರ್ -23 ರಂದು ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ 2025

ಮಂಗಳೂರು: ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಳೆದ ಹಲವು ವರ್ಷಗಳಿಂದ ತಲಪಾಡಿ ಪರಿಸರದಲ್ಲಿ ಸಾರ್ವಜನಿಕ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ತಿಂಗಳಿಗೆ ಕನಿಷ್ಠ ಎರಡರಂತೆ ಆರೋಗ್ಯ ಅರಿವು ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು ಇದೇ ತಿಂಗಳ ತಾರೀಕು 23 ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ ೨೦೨೫ ನ್ನು ಕಾಲೇಜಿನಲ್ಲಿ ಆಯೋಜಿಸಿದೆ ಎಂದು ಶಾರದಾ ಸಮೂಹ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಬಿ ಪುರಾಣಿಕ್ ತಿಳಿಸಿದರು. ಪತ್ರಿಕಾ…

Read More

ಸೆಪ್ಟೆಂಬರ್ ೨೧ ರಂದು ಸಂಘನಿಕೇತನ ಪ್ರತಾಪ ನಗರದಲ್ಲಿ-“ಯೋಗ ಏಕಾಹ 2025”

ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನವು ಪ್ರತಾಪನಗರದ ಕೇಶವ ಸ್ಮೃತಿ ಸಂವರ್ಧನ ಸಮಿತಿಯೊಂದಿಗೆ ಜಂಟಿಯಾಗಿ ಒಂದು ದಿನದ ಯೋಗಾಸನ ಪ್ರದರ್ಶನದ ಯೋಗೋತ್ಸವ “ಯೋಗ ಏಕಾಹ 2025” ಕಾರ್ಯಕ್ರಮವನ್ನು ಸೆಪ್ಟೆಂಬರ್ ೨೧ ರಂದು ಸಂಘನಿಕೇತನ ಪ್ರತಾಪ ನಗರದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಧನಂಜಯ ಕೆ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 10 ಪ್ರತಿಷ್ಠಿತ ಯೋಗಾಭ್ಯಾಸವನ್ನು ಕಲಿಸುವ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳಲಿದೆ . ಪ್ರತೀ…

Read More

ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317ಡಿ ವತಿಯಿಂದ ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ

ಮಂಗಳೂರು: ಲಯನ್ಸ್‌ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ಇದರ ಆಶ್ರಯದಲ್ಲಿ “ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ ನೆಪ್ಟೆಂಬರ್ 21 ರಂದು ಭಾನುವಾರ ಬೆಳಿಗೆ, 8.30 ಕ್ಕೆ, ಕುದ್ಮಲ್ ರಂಗರಾವ್ ಪುರಭವನ ಮಂಗಳೂರಿನಲ್ಲಿ ನಡೆಯಲಿದೆ ಎಂದು ಲಯನ್ ರಾಜೇಶ್ ಶೆಟ್ಟಿ ಶಬರಿ ತಿಳಿಸಿದರು. ಅವರು ನಗರದ ಲಯನ್ ಅಶೋಕದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಲಯನ್ಸ್ ಜಿಲ್ಲಾ ನಾಂಸ್ಕೃತಿಕ ಸ್ಪರ್ಧೆಯಲ್ಲಿ ಸುಮಾರು 25 ತಂಡಗಳು ಭಾಗವಹಿನಲಿದ್ದು, ನೆಟ್ಟಿಂಗ್ ಸೇರಿ ಒಂದು ತಂಡಕ್ಕೆ 20 ನಿಮಿಷಗಳ ಕಾಲಾವಧಿ…

Read More
error: Content is protected !!