ಗಾಂಜಾ ಮಾರಾಟ ಪ್ರಕರಣ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಗಾಂಜಾ ಮಾರಾಟ ಪ್ರಕರಣದಲ್ಲಿ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಪೊಲೀಸ್ ಠಾಣಾ ಅ.ಕ್ರ 328/2016, ಕಲಂ :8(c) ಜೊತೆಗೆ 20(b) NDPS Act ಪ್ರಕರಣ ಹಾಗೂ LPC NO : 11/2024 ರಲ್ಲಿ ಸುಮಾರು 10 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಉತ್ತರ ಪ್ರದೇಶದ ನಸೀಮ್ ಎಂಬಾತನನ್ನು ಸುಳ್ಯ ಠಾಣಾ ಸಿಬ್ಬಂದಿಗಳಾದ Hc 359-ರಮೇಶ್ ಎಲ್, Hc 368-ರಾಜು…

Read More

ಒಳಮೀಸಲಾತಿ ರೋಸ್ಟರ್ ವಿರೋಧಿಸಿ ಮಾರ್ಚ್ 24ರಂದು ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆ

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ರೋಸ್ಟರ್ ಹಂಚಿಕೆ ವಿರುದ್ಧ ಭೋವಿ ಹಾಗೂ ಇತರೆ ಸಮುದಾಯಗಳ ವತಿಯಿಂದ ಮಾರ್ಚ್ 24ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಸಮಾಜದ ಯುವ ಮುಖಂಡ ಪವನ್ ಕುಮಾರ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರತಿಭಟನೆಯಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಬಂಜಾರ, ಭೋವಿ, ಕೊರಮ, ಕೊರಚ, ಚರ್ಮಕಾರ ಹಾಗೂ ಸೂಕ್ಷ್ಮ…

Read More

ತೊಕ್ಕೊಟ್ಟುವಿನಲ್ಲಿ ಉಚಿತ ಕೈತೋಟ, ತಾರಸಿ ತೋಟ ತರಬೇತಿ ಹಾಗೂ ಬೀಜ ವಿತರಣೆ ಕಾರ್ಯಕ್ರಮ

ಉಳ್ಳಾಲ: ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಕೈತೋಟ ಮತ್ತು ತಾರಸಿ ತೋಟ ತರಬೇತಿ ಕಾರ್ಯಕ್ರಮ ತೊಕ್ಕೊಟ್ಟುವಿನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ, ಫುಡ್ ಚೈನ್ ಕ್ಯಾಂಪೇನ್, ಶಿವಾಜಿ ಫ್ರೆಂಡ್ಸ್ ಸರ್ಕಲ್, ಸ್ವಾಮಿ ಕೊರಗಜ್ಜ ಸೇವಾ ಸಮಿತಿ ತೊಕ್ಕೊಟ್ಟು, ರಿಚಲ್ ಸರ್ವಿಸಸ್ ಹಾಗೂ ಮಂಗಳೂರು ಆಟೋ ರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ತೊಕ್ಕೊಟ್ಟು ಇವುಗಳು ಸಹಭಾಗಿತ್ವ ನೀಡಿದವು. ಈ ಸಂದರ್ಭದಲ್ಲಿ ತರಕಾರಿ ಬೀಜ ಮತ್ತು…

Read More

ಮಾಂಸದ ಕೋಳಿಗಳ ಸಾಕಾಣಿಕೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು

ಕೋಳಿ ಮನೆಗಳಲ್ಲಿ ದಿನದ 24 ಗಂಟೆಗಳ ಕಾಲ ತಂಪಾದ ಮತ್ತು ಶುಚಿಯಾದ ನೀರನ್ನು ಒದಗಿಸಬೇಕು. ಒಂದು ಗಂಟೆ ನೀರು ಇಲ್ಲದಿದ್ದರೆ ಕೋಳಿಗಳು ಸಾವನ್ನಪ್ಪಬಹುದು. ಚೆನ್ನಾಗಿ ಗಾಳಿಯಾಡಲು ಅನುಕೂಲವಾಗುವಂತೆ ಎಲ್ಲಾ ತಡೆಗಳನ್ನು ತೆಗೆಯಬೇಕು. ಕೋಳಿ ಮನೆ ಮಾಡಿನ ಮೇಲ್ಭಾಗಕ್ಕೆ ಸುಣ್ಣ ಬಳಿಯಬೇಕು ಆಥವಾ ಹುಲ್ಲು ಅಡಿಕೆಗರಿ, ತೆಂಗಿನ ಗರಿಗಳಿಂದ ಹೊದಿಸಬೇಕು. ಅನುಕೂಲವಿದ್ದರೆ ಕೋಳಿ ಮನೆಯ ಮಾಡಿನ ಮೇಲೆ ಸ್ಪ್ರಿಂಕ್ಲರ್ನಲ್ಲಿ ನೀರು ಸಿಂಪಡಿಸಬೇಕು. ಕೋಳಿ ಮನೆಯ ಒಳಗೆ ಫ್ಯಾನ್ ಅಥವಾ ಫಾಗಸ್ರ್ಗಳನ್ನು ಅಳವಡಿಸಬೇಕು. ವಿಟಮಿನ್ ಸಿ ಮತ್ತು ಇತರೆ ಎಲೆಕ್ಟ್ರೋಲೈಟ್‍ಗಳನ್ನು…

Read More

ಬೇಸಿಗೆ ಉಷ್ಣತೆಗೆ ಜಾನುವಾರುಗಳ ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ ಅಗತ್ಯ

ಮಂಗಳೂರು: ಬೇಸಿಗೆ ಕಾಲದಲ್ಲಿ ಉಷ್ಣತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಆರೋಗ್ಯ ಕಾಪಾಡಲು ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಾವಶ್ಯಕ ಎಂದು ಪಶುಪಾಲನಾ ತಜ್ಞರು ಸೂಚಿಸಿದ್ದಾರೆ. ಉಷ್ಣತೆಯ ಪರಿಣಾಮ ಕಡಿಮೆಗೊಳಿಸಲು ದನಗಳನ್ನು ಬೆಳಿಗ್ಗೆ ಅಥವಾ ಸಂಜೆ ವೇಳೆಯಲ್ಲಿ ಮಾತ್ರ ಮೇಯಲು ಹೊರಗಡೆ ಬಿಡಬೇಕು. ವಿಶೇಷವಾಗಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಜಾನುವಾರುಗಳನ್ನು ಹೊರಗೆ ಬಿಡುವುದನ್ನು ತಪ್ಪಿಸಬೇಕು. ದಿನಪೂರ್ತಿ ತಂಪಾದ ನೀರನ್ನು ಸಮರ್ಪಕವಾಗಿ ನೀಡಬೇಕು. ನೀರಿನ ಕೊರತೆ ಕಂಡುಬಂದಲ್ಲಿ ಸ್ಥಳೀಯ ಸಂಸ್ಥೆಗಳ ಸಹಾಯ ಪಡೆಯುವುದು ಅಗತ್ಯ. ಜಾನುವಾರುಗಳನ್ನು ಸದಾ ನೆರಳಿನಲ್ಲೇ…

Read More

ಮಂಗಳೂರು ಬಂದರಿಗೆ ರಷ್ಯಾ ತೈಲ ಟ್ಯಾಂಕರ್, ಅಮೆರಿಕ ಅನಿಲ ನೌಕೆ ಆಗಮನ

ಮಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಮಂಗಳೂರಿನ ನವ ಮಂಗಳೂರು ಬಂದರಿಗೆ ರಷ್ಯಾದ ತೈಲ ಟ್ಯಾಂಕರ್ ಹಾಗೂ ಅಮೆರಿಕದ ಅನಿಲ ಸಾಗಣೆ ನೌಕೆ ಆಗಮಿಸಿರುವುದು ಗಮನ ಸೆಳೆಯುತ್ತಿದೆ. ರಷ್ಯಾದ “ಆಕ್ವಾ ಟೈಟಾನ್” (Aqua Titan) ಹೆಸರಿನ ಬೃಹತ್ ತೈಲ ಸಾಗಣೆ ಹಡಗು ಭಾನುವಾರ ಮಂಗಳೂರು ತಲುಪಿದೆ. ಮೂಲತಃ ಚೀನಾಕ್ಕೆ ತೆರಳಬೇಕಿದ್ದ ಈ ಹಡಗು ದಕ್ಷಿಣ ಚೀನಾ ಸಮುದ್ರದಲ್ಲಿ ಸಂಚರಿಸುತ್ತಿದ್ದ ವೇಳೆ ಕಳೆದ ವಾರದ ಆರಂಭದಲ್ಲಿ ಯು-ಟರ್ನ್ ಪಡೆದು ಭಾರತದತ್ತ ಮುಖ ಮಾಡಿತ್ತು ಎಂದು ತಿಳಿದುಬಂದಿದೆ. ಇದರ ಜೊತೆಗೆ…

Read More

ಮಾರ್ಚ್ 26ರಿಂದ 28ರವರೆಗೆ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ 26ರಿಂದ 28ರವರೆಗೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿದಿನ ಸಮ್ಮೇಳನಕ್ಕೆ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಚಿದಂಬರ ಬೈಕಂಪಾಡಿ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಸಾಹಿತ್ಯೋತ್ಸವದ ಅಂಗವಾಗಿ ಅಮ್ಮೆಂಬಳ ಬಾಳಪ್ಪ ದ್ವಾರದ ಉದ್ಘಾಟನೆ ನಡೆಯಲಿದ್ದು, “ತಂತ್ರಜ್ಞಾನ–ಸಾಹಿತ್ಯ–ಸಹಬಾಳ್ವೆ”…

Read More

ಸಿದ್ದಾಪುರದಲ್ಲಿ ವಿಶ್ವ ಜಲದಿನಾಚರಣೆ: ಗಂಗಾಪೂಜೆ, ಗೋಪೂಜೆ ಮೂಲಕ ಜಲ ಸಂರಕ್ಷಣೆಗೆ ಕರೆ

ಸಿದ್ದಾಪುರ: ಗ್ರಾಮ ವಿಕಾಸ ಸಮಿತಿ, ಸಿದ್ದಾಪುರ ಹಾಗೂ ಪರ್ಯಾವರಣ ಗತಿವಿಧಿ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದ ಇತಿಹಾಸ ಪ್ರಸಿದ್ಧ ಕಾಶಿಕಲ್ಲು ಕೆರೆ ವಠಾರದಲ್ಲಿ ವಿಶ್ವ ಜಲದಿನಾಚರಣೆ ಅಂಗವಾಗಿ ಗಂಗಾಪೂಜೆ, ಗೋಪೂಜೆ ಮತ್ತು ಭೂಮಿ ಸುಪೋಷಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಮಂಗಳೂರು ವಿಭಾಗದ ಗ್ರಾಮ ವಿಕಾಸ ಪರ್ಯಾವರಣ ವಿಭಾಗ ಪ್ರಮುಖರಾದ ಶ್ರೀಮತಿ ರಮಿತಾ ಸೂರ್ಯವಂಶಿ ಹಾಗೂ ಸಿದ್ದಾಪುರ ತಾಲೂಕು ಪರ್ಯಾವರಣ ಗತಿವಿಧಿ ಪ್ರಮುಖರಾದ ಆರ್ಗೋಡು ಶ್ರೀಕಾಂತ್ ಶೆಣೈ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಮಿತಾ ಸೂರ್ಯವಂಶಿ…

Read More

ಮಂಗಳೂರಿನಲ್ಲಿ ಚೆಮ್ಮಣೂರು ಇಂಟರ್‌ನ್ಯಾಷನಲ್ ಜುವೆಲ್ಲರ್ಸ್ ನೂತನ ಶೋರೂಮ್ ಉದ್ಘಾಟನೆ

ಮಂಗಳೂರು: ಚೆಮ್ಮಣೂರು ಇಂಟರ್‌ನ್ಯಾಷನಲ್ ಜುವೆಲ್ಲರ್ಸ್‌ನ ನೂತನ ಶೋರೂಮ್ ಉದ್ಘಾಟನಾ ಕಾರ್ಯಕ್ರಮವು ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪದಲ್ಲಿರುವ ಶೋರೂಮ್‌ನಲ್ಲಿ ಸಂಜೆ 5 ಗಂಟೆಗೆ ಮಂಗಳೂರು ನಗರದಲ್ಲಿ ಭಾನುವಾರ, ಮಾರ್ಚ್ 22ರಂದು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಡಿಯೋ ಮೂಲಕ ಅಭಿನಂದನೆ ಸಲ್ಲಿಸಿದರು . ಮುಖ್ಯ ಅತಿಥಿಯಾಗಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ, ಭಾಗವಹಿಸಿದರು. ವಿಶೇಷ ಅತಿಥಿಯಾಗಿ 812 ಕಿಮೀ ಓಟದ ವಿಶಿಷ್ಟ ವಿಶ್ವ ದಾಖಲೆ ಹಾಗೂ ಗಿನ್ನೆಸ್ ದಾಖಲೆ ಸಾಧಿಸಿರುವ ಚೆಮ್ಮಣೂರು ಮಾಲೀಕ…

Read More

ಹೆಜಮಾಡಿ ಟೋಲ್ ಬಳಿ ಟಯರ್ ಅಂಗಡಿಯಲ್ಲಿ ಬೆಂಕಿ ಅವಘಡ: ತಪ್ಪಿದ ಭಾರೀ ದುರಂತ

ಉಡುಪಿ: ಹೆಜಮಾಡಿ ಟೋಲ್ ಸಮೀಪದ ಟಯರ್ ಪಂಕ್ಚರ್ ಅಂಗಡಿಯಲ್ಲಿ ಭಾನುವಾರ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ ಆತಂಕದ ವಾತಾವರಣ ನಿರ್ಮಾಣವಾಯಿತು. ಅಗ್ನಿ ಅವಘಡದ ಪರಿಣಾಮ ಬಾನೆತ್ತರಕ್ಕೆ ಹೊಗೆ ಆವರಿಸಿಕೊಂಡಿದ್ದು, ಸುತ್ತಮುತ್ತಲಿನ ಗಿಡಮರಗಳು ಬೆಂಕಿಗಾಹುತಿಯಾದವು. ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ಎಚ್ಚೆತ್ತು ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಸ್ಥಳೀಯರ ಸಮಯಪ್ರಜ್ಞೆಯಿಂದ ಹತ್ತಿರದ ಅಂಗಡಿಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿದ್ದು, ಭಾರೀ ಅನಾಹುತದಿಂದ ಪಾರುಗೊಂಡಂತಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಹೆಚ್ಚಿನ…

Read More
error: Content is protected !!