ಮಂಜೇಶ್ವರ ಗ್ರಾಮ ಪಂಚಾಯತ್ ಎರಡನೇ ವಾರ್ಡ್‌ನಲ್ಲಿ ಯುಡಿಎಫ್ ಅಭ್ಯರ್ಥಿ ಇಲ್ಯಾಸ್ ತೂಮಿನಾಡು ಭರ್ಜರಿ ಗೆಲುವು

ಮಂಜೇಶ್ವರ:  ಸ್ಥಳೀಯಾಡಳಿತಕ್ಕೆ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಸಮಾಜ ಸೇವಕ ಹಾಗೂ ಯುಡಿಎಫ್ ಅಭ್ಯರ್ಥಿ ಇಲ್ಯಾಸ್ ತೂಮಿನಾಡು ಅವರು ಅತ್ಯಧಿಕ ಬಹುಮತದಿಂದ ವಿಜಯ ಸಾಧಿಸಿದ್ದಾರೆ. ಚುನಾವಣಾ ಅವಧಿಯಲ್ಲಿ ಎದುರಾಳಿಗಳಿಂದ ನಡೆದ ಅಪಪ್ರಚಾರಗಳನ್ನೆಲ್ಲಾ ಜನತೆಯ ಸ್ಪಷ್ಟ ತೀರ್ಪಿನ ಮೂಲಕ ಮಣಿಸಿ ಅವರು ಗಮನಾರ್ಹ ಗೆಲುವು ದಾಖಲಿಸಿದ್ದಾರೆ.ಗೆಲುವಿನ ನಂತರ ಮಾತನಾಡಿದ ಇಲ್ಯಾಸ್ ತೂಮಿನಾಡು ಅವರು, “ಇದು ನನ್ನ ವೈಯಕ್ತಿಕ ಗೆಲುವಲ್ಲ. ಇದು ನನ್ನ ಗ್ರಾಮದ ಜನತೆಯ ಗೆಲುವು. ನನ್ನ ಮೇಲೆ ನಂಬಿಕೆ ಇಟ್ಟು ಮತ…

Read More

ಮೂರು ತಿಂಗಳ ಹಸುಗೂಸಿನ ತಾಯಿಯೊಬ್ಬಳು ಗಂಡನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ

ಮಂಜೇಶ್ವರ : ಮೂರು ತಿಂಗಳ ಹಸುಗೂಸಿನ ತಾಯಿಯೊಬ್ಬಳು ಗಂಡನ ಮನೆಯಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉಪ್ಪಳ ಸೋಂಕಾಲ ಕೊಡಂಗೆ ರಸ್ತೆ ನಿವಾಸಿ ಮೊಯ್ದಿನ್ ಸವಾದ್‌ ಎಂಬವರ ಪತ್ನಿ ಫಾತಿಮತ್ ನಬೀನಾ (25) ಸಾವನ್ನಪ್ಪಿದ ದುರ್ದೈವಿ. ಈಕೆ ಮಲಗುವ ಕಿಟಿಕಿಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂದು ವ್ಯಕ್ತವಾಗಿಲ್ಲ. ಪ್ರಕರಣ ದಾಖಲಿಸಿ ಮಂಜೇಶ್ವರ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.

Read More

ತ್ರಿಸ್ತರ ಚುನಾವಣೆ ಜಿಲ್ಲೆಯಲ್ಲಿ 74.89ಶೇ. ಮತದಾನ

ಮಂಜೇಶ್ವರ : ನಿನ್ನೆ ನಡೆದ ತ್ರಿಸ್ತರ ಚುನಾವಣೆಯಲ್ಲಿ ಮತದಾರರು ಬಿರುಸಿನಿಂದ ಮತದಾನಗೃದಿದ್ದಾರೆ, ಸಂಜೆ 6ಗಂಟೆಯ ತನಕ ಜಿಲ್ಲೆಯಲ್ಲಿ 74.89ಶೇ. ಮತದಾನ ನಡೆದಿದೆ. ಅನೇಕ ಮತಗಟ್ಟೆಗಳಲ್ಲಿ ಮತಯಂತ್ರಗಳ ತೊಂದರೆಯಿಂದಾಗಿ ಮತ್ತು ಮತದಾರರ ಸರದಿ ಸಾಲುಗಳಿದ್ದ ಕಾರಣ 6ಗಂಟೆ ದಾಟಿಯೂ ಮತದಾನ ಮುಂದುವರಿದಿದೆ. ಕೆಲವೊಂದು ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದ್ದರೂ ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.ಜಿಲ್ಲೆಯಲ್ಲಿ ಪ್ರಸಕ್ತ ವರದಿಯಂತೆ 814997 ಮಂದಿ ಮತದಾನ ಗೈದರು. ಈಪೈಕಿ 366957 ಪುರುಷರು ಮತ್ತು 448038…

Read More

ಶ್ರೀ ಅಯ್ಯಪ್ಪ ಭಜನಾ ಮಂದಿರ, ಬಾಳ್ಳೂರು – ವಾರ್ಷಿಕ ಮಹೋತ್ಸವ

ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳ್ಳೂರಿನ ವಾರ್ಷಿಕ ಮಹೋತ್ಸವವು 13-12-2025 (ಶನಿವಾರ) ರಿಂದ 14-12-2025 (ಆದಿತ್ಯವಾರ)ದ ವರೆಗೆ ದಡ್ಡಂಗಡಿ ವೇದಮೂರ್ತಿ ಬಾಲಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ, ಕೊಂಡೆವೂರು ಮಠ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜರಗಲಿದೆ. ಈ ಸಂದರ್ಭದಲ್ಲಿ 13ನೇ ವರ್ಷದ ಏಕಾಹ ಭಜನೆ, 36ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಯಕ್ಷಗಾನ ಬಯಲಾಟ ಸೇರಿದಂತೆ ವಿವಿಧ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Read More

ಭಯದ ವಾತಾವರಣ ಸೃಷ್ಟಿಸಿದ ನಾಗರಾಹಾವು: ಸೆರೆ ಹಿಡಿದು ಮಾನವೀಯತೆ ಮೆರೆದ ಉರಗ ತಜ್ಞ ರಾಜು ಕಿದೂರು

ಕುಂಬ್ಳೆ : ಎರಡು ದಿನಗಳಿಂದ ಬಂಬ್ರಾಣ ಬತ್ತೆರಿ ನಿವಾಸಿ ನಾರಾಯಣ ಅವರ ಮನೆ ಅಂಗಳದಲ್ಲಿ ಸುತ್ತಾಡುತ್ತಿದ್ದ ನಾಗರ ಹಾವೊಂದು ಮನೆ ಮಂದಿಗೆ ಭಯದ ವಾತಾವರಣ ಸೃಷ್ಟಿಸಿತ್ತು. ಇದೀಗ ಕೊನೆಗೂ ಇಂದು ಮುಂಜಾನೆ 7 ಗಂಟೆಯ ಸುಮಾರಿಗೆ ಹೊಲಿ ಫ್ಯಾಮಿಲಿ ಶಾಲಾ ಅಧ್ಯಾಪಕರು ಹಾಗೂ ನುರಿತ ಉರಗ ತಜ್ಞರಾದ ರಾಜು ಕಿದುರ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೂ ಮನೆ ಹಾಗೂ ಊರ ಮಂದಿ ನಿಟ್ಟುಸಿರು ಬಿಡುವಂತಾಗಿದೆ. ಈ ಸಂಧರ್ಭದಲ್ಲಿ ಉರಗ ತಜ್ಞರಾದ ರಾಜು…

Read More

ಸ್ಥಳೀಯಾಡಳಿತ ಚುನಾವಣೆಯ ಎರಡನೇ ಹಂತದ ಮತದಾನ ಕಾಸರಗೋಡು ಸಹಿತ ಅತ್ಯುತ್ತರ ಕೇರಳದ ಏಳು ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆ ಆರಂಭ

ಮಂಜೇಶ್ವರ : ಸ್ಥಳೀಯಾಡಳಿತ ಚುನಾವಣೆಯ ಎರಡನೇ ಹಂತದ ಮತದಾನ ಕಾಸರಗೋಡು ಸಹಿತ ಅತ್ಯುತ್ತರ ಕೇರಳದ ಏಳು ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಮೊದಲ, ಎರಡೂವರೆ ತಾಸಿನಲ್ಲಿ ಶೇ. 17 ಮತದಾನವಾಗಿದ್ದು, ಅಹಿತಕರ ಘಟನೆ ವರದಿಯಾಗಿಲ್ಲ.ಕೇರಳದ ಅತ್ಯುತ್ತರ ಕೇರಳದಿಂದ ಆರಂಭವಾಗುವ ಮೊದಲ ವಾರ್ಡ್ ಕಣ್ಣತೀರ್ಥ ಮರಿಯಾಶ್ರಮ ಶಾಲೆಯಲ್ಲಿ ಬೆಳಿಗ್ಗಿನಿಂದಲೇ ಉತ್ತಮ ರೀತಿಯಲ್ಲಿ ಮತದಾನ ಆರಂಭಗೊಂಡಿದ್ದು ಮಂಜೇಶ್ವರ ಗ್ರಾಮ ಪಂಚಾಯತಿನ ಕುಂಜತ್ತೂರು, ಉದ್ಯಾವರ, ಮಂಜೇಶ್ವರ ಸೇರಿದಂತೆ ಎಲ್ಲಾ 24 ವಾರ್ಡ್ ಗಳಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.ಕೆಲವೆಡೆ…

Read More

ರಾಮಗುಡ್ಡೆಯ ವಿಷ್ಣು ಚಾಮುಂಡೇಶ್ವರಿ ದೇವಾಲಯದಲ್ಲಿ ಒತ್ತೆಕೋಲ ಸೇವೆ

ಕಾಸರಗೋಡು: ದೈವಾರಾಧನೆಯು ತುಳುನಾಡು, ಉತ್ತರ ಮಲಬಾರ್ ಭಾಗದಲ್ಲಿ ಕಂಡು ಬರುವ ಅಪರೂಪದ ಅಚರಣೆಯಾಗಿದೆ . ದೈವರಾಧನೆಗಳು ವಿಶೇಷ ಸ್ಥಾನವನ್ನು ಅಲಂಕರಿಸಿದೆ . ಎಲ್ಲಾ ದೈವಾರಾಧನೆಗಿಂತಲೂ ವಿಶಿಷ್ಟವಾಗಿ ಕಂಡು ಬರುವ ದೈವಾರಾಧನೆಯೆಂದರೆ ಅದು ವಿಷ್ಣು ಮೂರ್ತಿಯ ಒತ್ತೆಕೋಲ ಸೇವೆ. ಉತ್ತರ ಕೇರಳ ಮತ್ತು ತುಳುನಾಡಿನ ಭಾಗದಲ್ಲಿ ಭೂತಾರಾಧನೆಗಳು ಹೆಚ್ಚೇ ನಡೆಯುತ್ತದೆ . ಆದ್ರೆ ಒತ್ತೆಕೋಲ ಸೇವೆಯು ಎಲ್ಲೆಡೆ ಕಂಡು ಬರುವುದು ತುಂಬಾನೇ ವಿರಳ.ತುಳುನಾಡಿನ ಕೆಲವೇ ಕಡೆಗಳಲ್ಲಿ ಈ ಆಚರಣೆಯನ್ನು ನಡೆಸುವ ಕ್ರಮವಿದೆ. ಕೇರಳ ಗಡಿ ಹಂಚಿಕೊಂಡಿರುವ ಪುತ್ತೂರು ,…

Read More

ಗುರುವಿನ ಅನುಗ್ರಹ ಮೂಲದಿಂದ ಮಾತ್ರ ವ್ಯಕ್ತಿ ಸಂಪೂರ್ಣನಾಗುತ್ತಾನೆ :ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ

ಕಾಸರಗೋಡು :ಗುರುವಿನ ಅನುಗ್ರಹ ಪ್ರಾಪ್ತಿಯಾದರೆ ಮಾತ್ರ ವ್ಯಕ್ತಿ ಜೀವನದಲ್ಲಿ ಪರಮೋನ್ನತ ಸ್ಥಾನ ಮಾನಗಳು ವ್ಯಕ್ತಿಯ ಪಾಲಿಗೆ ಬಂದರೂ ಅದು ವಿಜಯಪತಕ್ಕೆ ಬಂದು ವ್ಯಕ್ತಿ ವಿರಾಜಮಾನನಾಗುತ್ತಾನೆ. “ಗುರುನೆಲೆಇಲ್ಲದಿದ್ದರೆ ಯಾವ ನೆಲೆಯೂ ಇಲ್ಲ. ಗುರುಮೂಲದಿಂದಲೇ ನಮಗೆ ದೈವತ್ವದ, ಧರ್ಮದ ಸೂತ್ರ ತಿಳಿಯುವುದು. ಅಂತಹ ಒಂದು ಗುರುವಿಗೆ ಪ್ರಾರ್ಥನೆ ಹಾಗೂ ಧ್ಯಾನ, ಭಜನೆ ಯನ್ನು ಮಾಡಲು ಅವಕಾಶವಾಗುವ ನಿಟ್ಟಿನಲ್ಲಿ ರಾಮಕ್ಷತ್ರಿಯ ಸಮಾಜದ ಗುರುಗಳಾದ ಶ್ರೀ ಭಿಕ್ಷು ಸ್ವಾಮೀಜಿ ಗಳ ಮಂದಿರದಲ್ಲಿ ಪ್ರಾರ್ಥನ ಮಂದಿರ ಅತೀ ಸುಂದರವಾಗಿ ನಿರ್ಮಿಸಿ ಅರ್ಪಿಸಿದ ಕನ್ನಡ ಭವನದ…

Read More

ಕಾಸರಗೋಡು ಸ್ಥಳೀಯಾಡಳಿತ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಮಂಜೇಶ್ವರ: ಜಿಲ್ಲೆಯಲ್ಲಿ ಡಿ.11ರಂದು ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಗೆ ಸಿದ್ದತೆ ಪೂರ್ಣಗೊಂಡಿದೆ ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇನ್ಸಾಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಮಂಗಳವಾರ ಸಂಜೆ ತೆರೆಬೀಳಲಿದೆ. ಮಂಗಳವಾರದಂದು ಬೆಳಗ್ಗಿನಿಂದ ಎಲ್ಲೆಡೆ ಅಬ್ಬರದ ಪ್ರಚಾರ ಕಂಡು ಬಂತು. ಎಲ್ಲೆಡೆ ವಾಹನಗಳಲ್ಲಿ ಧ್ವನಿ ವರ್ಧಕಗಳನ್ನು ಕಟ್ಟಿ ಸುಮಧುರ ಹಾಡಿನೊಂದಿಗೆ ಅಭ್ಯರ್ಥಿಗಳ ಪರ ಪ್ರಚಾರ ಕಂಡು ಬಂತು. ಜಿಲ್ಲಾ ಪಂಚಾಯತ್‌ನ 18 ಡಿವಿಜನ್, 38 ಗ್ರಾಮ ಪಂಚಾಯತ್, ಮೂರು ನಗರಸಭೆ ಹಾಗೂ ಆರು ಬ್ಲಾಕ್…

Read More

ಕುಂಜತ್ತೂರಿನಲ್ಲಿ ಆಂಜನೇಯ ಅಲ್ಯೂಮಿನಿಯಂ ಹಾಗೂ ಹಾರ್ಡ್ವೇರ್ ಶುಭಾರಂಭ

ಕುಂಜತ್ತೂರಿನಲ್ಲಿ ಇಂದು ಆಂಜನೇಯ ಕಣ್ವ ತೀರ್ಥ ಸಂಸ್ಥೆಯ ಸಕ್ರಿಯ ಸದ್ಯಸರಾದ ಗಣೇಶ್ ಹಾಗೂ ಸೂರಜ್ ಅವರ ಮಾಲಕತ್ವದ ಆಂಜನೇಯ ಅಲ್ಯೂಮಿನಿಯಂ ಹಾಗೂ ಹಾರ್ಡ್ವೇರ್ ಶುಭಾರಂಭಗೊಂಡಿತು. ಮಳಿಗೆಯನ್ನು ಶ್ರೀ ಸುಳಿಜನಾರ್ಧನ ದೇವಸ್ಥಾನ ಕಣ್ವತೀರ್ಥ ಅರ್ಚಕರಾದ ಶ್ರೀ ಮರಿ ಭಟ್ ಅವರು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ರಾಜ ಬೆಳ್ಚಪಾಡ ಮಾಡ, ಶ್ರೀ ತಿಮೀರಿ ಬೆಳ್ಚಪಾಡ, ಶ್ರೀ ಭಗವತಿ ಕ್ಷೇತ್ರ ಉದ್ಯಾವರ ಮಾಡದ ಅಚ್ಚಮಾರರು, ಗುರಿಕಾರರು ಆಚಾರ್ಯಪಟ್ಟವರು ದಿವ್ಯ ಉಪಸ್ಥಿತರಿದ್ದರು. ರಾಜಕೀಯ ನೇತಾರಾರಾದ ಶ್ರೀ ಹರಿಶ್ಚಂದ್ರ ಮಂಜೇಶ್ವರ,…

Read More
error: Content is protected !!