ಯುವಕನನ್ನು ಅಪಹರಿಸಿ ಕೊಲೆಗೈದುಶವವನ್ನು ಉಪೇಕ್ಷಿಸಿದ ಪ್ರಕರಣ – 10 ನೇ ಆರೋಪಿಯನ್ನು ಬಂಧಿಸಿದ ಪೊಲೀಸ್

ಮಂಜೇಶ್ವರ: ಕೊಲ್ಲಿ ಉದ್ಯೋಗಿ ಯುವಕನನ್ನುಅಪಹರಣಗೈದು ಹಿಗ್ಗಾ ಮಗ್ಗಾ ಥಳಿಸಿ ಕೊಲೆಗೈದ ಬಳಿಕ ಶವವನ್ನು ಕಾರಿನಲ್ಲಿ ಕೊಂಡೊಯ್ದು ಖಾಸಗಿ ಆಸ್ಪತ್ರೆಯಲ್ಲಿ ಉಪೇಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಡನ್ನು ನಡುಗಿಸಿದ ಈ ಪ್ರಕರಣದ 10ನೇ ಆರೋಪಿಯಾದ ಮಂಜೇಶ್ವರ ಆಚೆಕೆರೆಯ ಅಶರ್ ಅಲಿ (27) ಎಂಬಾತನನ್ನು ಕಾಸರಗೋಡು ಕ್ರೈಂಬ್ರಾಂಚ್ ತಂಡ ಬಂಧಿಸಿದೆ. ಕೊಲ್ಲಿ ರಾಷ್ಟ್ರದಿಂದ ಊರಿಗೆ ಮರಳುತ್ತಿದ್ದ ವೇಳೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಈತ ನನ್ನು ಬಂಧಿಸಲಾಗಿದೆ. ಕಾಸರಗೋಡಿಗೆ ತಲುಪಿಸಿದ ಆರೋಪಿಯನ್ನು ಸಮಗ್ರ ವಾಗಿ ತನಿಖೆಗೊಳಪಡಿಸಿದ ಬಳಿಕ…

Read More

ಹೊಸಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಮಂತ್ರಣ ಪತ್ರಿಕೆ ಬಿಡುಗಡೆ .

ಮಂಜೇಶ್ವರದ ಹೊಸಂಗಡಿಯ 45 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಇತ್ತೀಚೆಗೆ ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು.ಮಂಜೇಶ್ವರ ಸರ್ವಿಸ್ ಕೊ_ಓಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ನಿರ್ದೇಶಕರಾದ ಸಿ.ಎಚ್. ಗಣೇಶ್ ಬಿಡುಗಡೆಗೊಳಿಸಿದರು. ಪದ್ಮನಾಭ ಕಡಪ್ಪರ ,ಹರೀಶ್ ಮಾಡ , ನ್ಯಾಯವಾದಿ ನವೀನ್ ರಾಜ್,ದಿನಕರ ಹೊಸಂಗಡಿ,ಆದರ್ಶ್ ಬಿ ಎಂ , ಅವಿನಾಶ್ ಮಂಜೇಶ್ವರ ,ಭಾಸ್ಕರ ಮಂಜೇಶ್ವರ ,ರತನ್ ಹೊಸಂಗಡಿ ,ಚಿನ್ಮಯಾನಂದ ಹೊಸಂಗಡಿ ಮುಂತಾದವರು ಉಪಸ್ಥಿತರಿದ್ದರು. ಆಗಸ್ಟ್ 27 ರಿಂದ 30 ರ ತನಕ ವಿವಿಧ…

Read More

ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ” ನಾಗರ ಪಂಚಮಿ ” ಆಚರಣೆ

ಮಂಜೇಶ್ವರ : ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ” ನಾಗರ ಪಂಚಮಿ ” ಸಂಭ್ರಮ ದಿಂದ ಆಚರಿಸಲಾಯಿತು . ಪ್ರಾತಃ ಕಾಲ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಶ್ರೀ ದೇವರಿಗೆ ವಾಸುಕೀ ಪೂಜೆ , ದೇವಳದ ಮುಂಭಾಗದಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ಶ್ರೀ ನಾಗದೇವರ ಶೀಲಾ ಪ್ರತಿಮೆಗಳಿಗೆ ಪಂಚಾಮೃತ , ಕ್ಷೀರಾಭಿಷೇಕ , ಶಿಯಾಳಾಭಿಷೇಕ ಗಳು ಭಜಕರ ಸಮ್ಮುಖದಲ್ಲಿ ನೆರವೇರಿತು . ದೇಶ ವಿದೇಶಗಳಿಂದ ಸಹಸ್ರಾರು ಭಜಕರು ಪಾಲ್ಗೊಂಡು ಪುನೀತರಾದರು

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಾಸರಗೋಡು .ಸ್ವಾಸ್ತ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಾಸರಗೋಡು ತಾಲೂಕು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕಾಸರಗೋಡು ವಲಯದ ಅಡ್ಕತ್ತಬೈಲು ಕಾರ್ಯ ಕ್ಷೇತ್ರದಲ್ಲಿ BEMHS ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ ಸ್ವಾಸ್ತ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ನಿನ್ನೆ BEMHS ಶಾಲೆಯಲ್ಲಿ ನಡೆಯಿತ್ತು . ಕಾಸರಗೋಡು ತಾಲೂಕಿನ ಭಜನಾ ಪರಿಷತ್ ಅಧಕ್ಷರಾದ ಶ್ರೀ ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಉದ್ಘಾಟಿಸಿದರು . ಮಕ್ಕಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಹಾಗೂ…

Read More

ಮಂಜೇಶ್ವರ ಕ್ವಾಟರ್ಸ್ನಲ್ಲಿ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ : ಮಂಜೇಶ್ವರ ಕಡಂಬಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಕೆ ಎ ಅಬ್ದುಲ್ಲ ಮಾಲಕತ್ವದ ಕೆ ಎ ಬೋರ್ಡ್ ಪ್ಲೈವುಡ್ ಕಾರ್ಖಾನೆಯಲ್ಲಿ ನೌಕರನಾಗಿರುವ ಬಿಹಾರ ಮೂಲದ ಯುವಕನೊಬ್ಬ ಅಲ್ಲೇ ಸಮೀಪವಿರುವ ಕ್ವಾರ್ಟರ್ಸ್ ನಲ್ಲಿ ಸೋಮವಾರ ಸಂಜೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಿಹಾರ ನಿವಾಸಿ ಸೂರಜ್ ಸಾವನ್ನಪ್ಪಿದ ಯುವಕನಾಗಿದ್ದಾನೆ. ಈತ 8 ತಿಂಗಳು ಮೊದಲು ಬಿಹಾರದಿಂದ ಕೆಲಸಕ್ಕಾಗಿ ಬಂದಿದ್ದಾನೆನ್ನಲಾಗಿದೆ. ಜೊತೆಯಾಗಿದ್ದ ಈತನ ಭಾವ ಸೂರಜ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡ ಮೊದಲ ವ್ಯಕ್ತಿಯಾಗಿದ್ದಾನೆ. ಬಳಿಕ ಈತನೇ ಸೂರಜ್…

Read More

ಕಾರ್ಯಕರ್ತರ ಶ್ರಮ ಗೆಲುವಿನ ಸೂತ್ರ-ಆದರ್ಶ ಬಿ ಎಂ

ಕಾರ್ಯಕರ್ತರು ಗಳ ಶ್ರಮ ಹಾಗೂ ಸಿದ್ದಂತಗಳ ಮೇಲಿನ ನಂಬಿಕೆ ಗೆಲುವಿನ ಸೂತ್ರ.. ಗೆಲುವು ಪರಿಶ್ರಮಕ್ಕೆ ಮಾತ್ರ ದೊರೆಯುತ್ತದೆ ಎಂದುಬಿಜೆಪಿ ಪೈವಳಿಕೆ ಪೆರ್ವೋಡಿ ವಾರ್ಡ್ ಸಮ್ಮೇಳನ ಉದ್ಘಾಟಿಸಿ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಸಂಘಟನಾ ಚಟುವಟಿಕೆ, ಹಾಗೂ ಪಕ್ಷದ ಕಾರ್ಯಕ್ರಮ ಗಳ ವಿವರ ನೀಡಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಪಂಚಾಯತ್ ಸಮಿತಿ ಅಧ್ಯಕ್ಷರಾದ ಸತ್ಯ ಶಂಕರ್ ಭಟ್ ಪ್ರವೀಣ್ ರೈ ಪಟ್ಲ, ಸುಬ್ರಮಣ್ಯ ಭಟ್, ಗಣೇಶ ಪೆರ್ವೋಡಿ, ಚಂದ್ರವತಿ ಶೆಟ್ಟಿ, ಕಮಲ,…

Read More

ಉಪ್ಪಳ ಶಾರದಾ ನಗರದಲ್ಲಿ ಭೀಕರ ಕಡಲ್ಕೊರೆತ .ಹಲವಾರು ಮನೆಗಳು ಅತಂತ್ರ .ಕಡಲ್ಕೊರೆತ ಪ್ರದೇಶಕ್ಕೆ ಕೆ ಆರ್ ಜಯಾನಂದ ನಿಯೋಗ ಭೇಟಿ.ತುರ್ತು ಪರಿಹಾರಕ್ಕೆ ಆಗ್ರಹ

ಉಪ್ಪಳ : ಭೀಕರ ಕಡಲ್ಕೊರೆತದಿಂದ ಉಪ್ಪಳ ಪರಿಸರದ ಶಾರದಾನಗರದಿಂದ ಹನುಮಾನ್ ನಗರ, ಐಲ ಕಡಪ್ಪರ, ಪೆರಿಂಗಡಿ ವರೆಗಿನ 5ಕಿ.ಮೀ ಪ್ರದೇಶದ ಕಡಲ ತಡೆಗೋಡೆ ಸಹಿತ ಪುಲಿಮುಟ್ಟು ಸಮುದ್ರ ಕೊಚ್ಚಿ ಕೊಂಡೊಯ್ದು ಸುಮಾರು 400 ಕೂಟುಂಬಗಳ ಬದುಕಿನ ಭವಿಷ್ಯವೇ ಅತಂತ್ರ ಸ್ಥಿತಿಯಲ್ಲಿದೆ. ಇಡೀ ಪ್ರದೇಶವನ್ನು ಕಢಲುಆಕ್ರಮಿಸಿ, ರೌದ್ರ ತೆರೆಗಳೊಂದಿಗೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಜನರು ಭೀತಿಯೊಂದಿಗೆ ಬದುಕುತ್ತಿದ್ದಾರೆ. ಈ ಪ್ರದೇಶಗಳಿಗೆ ಆದಿತ್ಯವಾರ ಸಂಜೆ ಸಿಪಿಎಂ ಸೆಕ್ರೇಟರಿಯೇಟ್ ಸದಸ್ಯ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ. ಆರ್. ಜಯಾನಂದ ನೇತೃತ್ವದ ನಿಯೋಗ…

Read More

ಕಾವ್ಯದ ಮಾತು ಧ್ವನಿಯಾಗಬೇಕು- ಡಾ ಪುರುಷೋತ್ತಮ ಬಿಳಿಮಲೆ

ಭಾವನೆಗಳಿಗೆ ಅನುಗುಣವಾಗಿ ಭಾಷೆಯನ್ನು ಹೊಸತುಗೊಳಿಸಿ. ಕಾಲದ ಓಗಕ್ಕೆ ಅನುಗುಣವಾಗಿ ಬರವಣಿಗೆಗಳು ಬದಲಾಗಬೇಕು. ಕವನಗಳು ಓದುವಾಗ ಪ್ರಶ್ನೆಗಳು ಮೂಡಬೇಕು.ಕಾವ್ಯದ ಮಾತು ಧ್ವನಿ ಯಾಗಬೇಕು. ಪ್ರತಿಯೊಬ್ಬರೂ ತಮ್ಮದೇ ಆದ ಭಾಷೆಯನ್ನು ಅನುಸರಿಸಿದಾಗ ಆಶಯಗಳು ಪ್ರತಿಧ್ವನಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ರಂಗಮಂಡಲ ಹಾಗೂ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಸಮಿತಿ ಆಶ್ರಯದಲ್ಲಿ ನಡೆದ ಕಾವ್ಯ ಸಂಸ್ಕೃತಿ ಯಾನ ಜನರೆಡೆಗೆ ಕಾವ್ಯ ಹನ್ನೊಂದನೆಯ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದ ಸರ್ವಾಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ…

Read More

ಧರ್ಮಸ್ಥಳ ಹತ್ಯಾ ಪ್ರಕರಣ. ಸಮಗ್ರ ತನಿಖೆಗೆ ವಿಮನ್ ಇಂಡ್ಯಾ ಮೂಮೆಂಟ್ ಆಗ್ರಹ

ಮಂಜೇಶ್ವರ: ಕರ್ನಾಟಕದ ಧರ್ಮಸ್ಥಳದಲ್ಲಿ ಮಲಯಾಳಿಗಳು ಸೇರಿದಂತೆ ನೂರಾರು ಮಹಿಳೆಯರ ಹತ್ಯೆಯಾಗಿರುವ ಬಗ್ಗೆ ಶುಚೀಕರಣ ಕಾರ್ಮಿಕರೊಬ್ಬರು ಬಹಿರಂಗಪಡಿಸಿದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ವಿಮನ್ ಇಂಡ್ಯಾ ಮೂಮೆಂಟ್ ರಾಜ್ಯ ಖಜಾಂಚಿ ಮಂಜುಷಾ ಮಾವಿಲಾಡಂ ಆಗ್ರಹಿಸಿದರು. ಧರ್ಮಸ್ಥಳದ ಶುಚೀಕರಣ ಕಾರ್ಮಿಕರೊಬ್ಬರು ಹೇಳುವಂತೆ ಬಾಲಕಿಯರು ಹಾಗೂ ಯುವತಿಯರು ಸೇರಿದಂತೆ 450 ಕ್ಕೂ ಹೆಚ್ಚು ಮಂದಿಯನ್ನು ಕೆಲವು ಜನರ ಸೂಚನೆಯ ಮೇರೆಗೆ ಸಮಾಧಿ ಮಾಡಲಾಗಿದೆ ಎಂದು ಬಹಿರಂಗಪಡಿಸಿರುವುದು ಆಘಾತಕಾರಿ ಸಂಗತಿ . ಕಳೆದ ಕೆಲವು ವರ್ಷಗಳಲ್ಲಿ…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೀತಾಂಗೋಳಿ ಕಾರ್ಯ ಕ್ಷೇತ್ರದ ಒಕ್ಕೂಟ ಸಭೆಯು ಭಾನುವಾರ ಸೀತಾಂಗೋಳಿ ಸಮೀಪದ ಪೆರಡಾನಮೂಲೆ ಕಮ್ಯುನಿಟಿ ಹಾಲ್’ನಲ್ಲಿ ನಡೆಯಿತು . ಒಕ್ಕೂಟದ ಅಧಕ್ಷರಾದ ಶ್ರೀಮತಿ ಸುಕೇಶಿನಿ ದೀಪ ಬೆಳಗಿಸಿ ಉದ್ಘಾಟಿಸಿದರು . ಈ ಒಕ್ಕೂಟ ಸಭೆಯಲ್ಲಿ ವಲಯದ ಮೇಲ್ವಿಚಾರಕರದ ಶ್ರೀ ಗೋಪಾಲಕೃಷ್ಣ , ಕೃಷಿ ಮೇಲ್ವಿಚಾರಕರದ ಶ್ರೀ ಜಯರಾಮ , ಸೀತಾಂಗೋಳಿ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಸರಿತಾ ಸೀತಾಂಗೋಳಿ , ಹಾಗೂ ಒಕ್ಕೂಟದ ಜೊತೆ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಪೆರಡಾನಮೂಲೆ ,…

Read More
error: Content is protected !!