ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಜನತೆಯ ಅಗ್ರಹ -ಆದರ್ಶ ಬಿ ಎಂ

ಪೈವಳಿಕೆ : ಬಿಜೆಪಿ ಈ ಬಾರಿಯ ಸ್ಥಳೀಯಾಡಳಿತ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾದಿಸಲಿದೆ, ಅ ಮೂಲಕ ಪೈವಳಿಕೆ, ಮೀoಜ, ವರ್ಕಾಡಿ, ಮಂಜೇಶ್ವರ ಪಂಚಾಯತ್ ಗಳ ಆಡಳಿತ ಚುಕ್ಕಾಣಿ ಹಿಡಿಯಲ್ಲಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಬಿಜೆಪಿ ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳಾದ ವಿಜಯ್ ಕುಮಾರ ರೈ, ಮಣಿಕಂಠ ರೈ, ಯವರ ಚುನಾವಣಾ ವಾಹನ ಪ್ರಚಾರಣ ಜಾಥಾ ಉದ್ಘಾಟಿಸಿ ಮಾತನಾಡಿದರು. ಶಬರಿಮಲೆಗೆ ಅಪಚಾರ ಮಾಡಿದ ಎಡರಂಗಕ್ಕೆ vote ಇಲ್ಲ, ರೇಪ್ ಕೇಸ್…

Read More

ಗೆಲ್ಲಿಸಿದರೆ ಅಭಿವೃದ್ಧಿ ಮಾಡಿ ತೋರಿಸುತ್ತೇವೆ -ವಿಜಯ್ ರೈ.

ದೇಶದಲ್ಲಿ ಮೋದಿ ಪ್ರಧಾನಿ ಅದ ಬಳಿಕ ಉಂಟಾಗಿರುವ ಅಭಿವೃದ್ಧಿ ಯನ್ನು ಗ್ರಾಮ ಗ್ರಾಮಗಳಲ್ಲಿ ಮಾಡಿ ತೋರಿಸುತ್ತೇವೆ. ಗ್ರಾಮ ಬ್ಲಾಕ್ ಜಿಲ್ಲಾ ಪಂಚಾಯತ್ ಗಳಲ್ಲಿ ಬಿಜೆಪಿ ಅಭ್ಯರ್ಥಿ ಗಳನ್ನು ಗೆಲ್ಲಿಸಿ ಎಂದು ಬಿಜೆಪಿ ವರ್ಕಾಡಿ ಜಿಲ್ಲಾ ಡಿವಿಶನ್ ಅಭ್ಯರ್ಥಿ ವಿಜಯ್ ರೈ ಮಜೀರ್ ಪಲ್ಲ ದಲ್ಲಿ ಜರಗಿದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್ ಮದೂ ಕಾರ್ಯಕ್ರಮ ಉದ್ಘಾಟಿಸಿದರು.ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಸಲೀಲ್ ಮಾಸ್ಟರ್, ನಾರಾಯಣ ನಾವುಡ, ಸದಾಶಿವ ಚೇರಲ್, ವಲ್ಸರಾಜ್,…

Read More

ಕೇರಳ ಕಲೋತ್ಸವದ ಪ್ರಶಸ್ತಿ ವಿತರಣೆಯಲ್ಲಿ ಸಂಘಟಕರಿಂದ ಸ್ಪರ್ಧಾಳುಗಳಿಗೆ ಅವಮಾನ: ಭಾರೀ ವಿವಾದ

ಮಂಜೇಶ್ವರ : ಕೇರಳ ಕಲೋತ್ಸವದ ಅಂಗವಾಗಿ ಮಂಜೇಶ್ವರದಲ್ಲಿ ಆಯೋಜಿಸಲಾದ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಲೋತ್ಸವದಲ್ಲಿ ಭಾಗವಹಿಸಿ ವಿಜೇತರಾಗಿದ್ದ ಮಕ್ಕಳಿಗೆ ಹಾಗೂ ಯುವಕರಿಗೆ ನೀಡಲಾದ ಪ್ರಮಾಣಪತ್ರ ಮತ್ತು ಟ್ರೋಫಿಗಳ ಗುಣಮಟ್ಟ ಸಂಬಂಧಿಸಿದಂತೆ ಹಲವು ಗಂಭೀರ ದೂರುಗಳು ಕೇಳಿ ಬಂದಿದೆ.ಈ ಕಾರ್ಯಕ್ರಮಕ್ಕೆ ಪಂಚಾಯತ್ ಫಂಡ್‍ನಿಂದ ರೂ. 1,50,000 ಬಜೆಟ್ ಮಂಜೂರಾಗಿದ್ದರೂ, ವಿತರಿಸಲಾದ ಪ್ರಶಸ್ತಿಗಳ ಗುಣಮಟ್ಟ ಮತ್ತು ಅವುಗಳ ಪೂರ್ಣತೆಯ ಕೊರತೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಜೇತರಿಗೆ ವಿತರಿಸಲಾದ ಪ್ರಮಾಣಪತ್ರಗಳಲ್ಲಿ ಸ್ಪರ್ಧಾಳುವಿನ ಹೆಸರು ದಾಖಲಿಸದೇ ಇರುವುದು ಬಾರೀ…

Read More

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 70 ನೇ ಪರಿನಿರ್ವಾಣ ದಿನಾಚರಣೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 70 ನೇ ಪರಿನಿರ್ವಾಣ ದಿನಾಚರಣೆಯನ್ನು ಡಾ.ಬಿ.ಆರ್. ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾ ವೇದಿಕೆ ಮಂಗಲ್ಪಾಡಿಯಲ್ಲಿ ಆಚರಿಸಲಾಯಿತು. ವೇದಿಕೆಯ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ದೀಪ ಬೆಳಗಿಸಿದರು. ಕಾರ್ಯದರ್ಶಿ ಶ್ರೀ ಹರೀಶ್ ಕುಮಾರ್‌ ಸ್ವಾಗತಿಸಿ,ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದರು. ಕೋಶಾಧಿಕಾರಿ ಶ್ರೀ ವಿಜಯ ಕುಮಾರ್ ಎಸ್. ಕೆ.ಧನ್ಯವಾದ ಸಮರ್ಪಿಸಿದರು.ಇತ್ತೀಚೆಗೆ ನಿಧನರಾದ ವೇದಿಕೆಯ ಹಿರಿಯ ಸದಸ್ಯರಾದ ಶ್ರೀ ದಿ.ರಾಮ ಮತ್ತು ಶ್ರೀ ದಿ.ಗಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಶ್ರೀ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Read More

ಮೀಯಪದವು : ಎಡರಂಗ ಚುನಾವಣಾ ಪ್ರಚಾರ ಸಭೆ

ತ್ರಿತಲ ಪಂಚಾಯತ್ ಚುನಾವಣೆಯ ಪ್ರಚಾರದ ಭಾಗವಾಗಿ ಎಲ್ ಡಿ ಎಫ್ ಮೀoಜ ಪಂಚಾಯತ್ ಚುನಾವಣಾ ಸಮಿತಿಯ ನೇತೃತ್ವದಲ್ಲಿ ಮೀಯಪದವಿನಲ್ಲಿ ಬಹಿರಂಗ ಸಭೆ ನಡೆಯಿತು. ಸಭೆಯನ್ನು ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಕಾಂ : ಸಿ ಎಚ್ ಕುಂಞoಬು ಎಂಎಲ್ಎ ಉದ್ಘಾಟಿಸಿದರು. ಗಂಗಾಧರ ಕೊಡ್ದೆ ಅಧ್ಯಕ್ಷತೆ ವಹಿಸಿದರು. ಮಾಜಿ ಶಾಸಕರಾದ ಸಿ ಪಿ ಐ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ : ಕುಮಾರನ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ : ಎಂ ಸುಮತಿ, ಎಲ್…

Read More

ಪೀಸ್ ಕ್ರಿಯೇಟಿವ್ ಕುಂಜತ್ತೂರು ಹಾಗೂ ಹೊಸಂಗಡಿ ಶಾಲೆಗಳಲ್ಲಿ ಅದ್ದೂರಿಯಾಗಿ ನಡೆದ ಶಾಲಾ ವಾರ್ಷಿಕ ಕ್ರೀಡೋತ್ಸವ

ಮಂಜೇಶ್ವರ: ಪೀಸ್ ಕ್ರಿಯೇಟಿವ್ ಕುಂಜತ್ತೂರು ಹಾಗೂ ಹೊಸಂಗಡಿ ಶಾಲೆಗಳಲ್ಲಿ ಅದ್ದೂರಿಯಾಗಿ ಶಾಲಾ ವಾರ್ಷಿಕ ಕ್ರೀಡೋತ್ಸವವನ್ನು ಆಯೋಜಿಸಲಾಗಿದ್ದು, ಶಾಲಾ ಪರಿಸರವು ಹಬ್ಬದ ಸಂಭ್ರಮದಿಂದ ಕಂಗೊಳಿಸಿತು. ಬೆಳಗಿನ ನಸುಕುದಿಂದಲೇ ವಿದ್ಯಾರ್ಥಿಗಳ ಹರ್ಷೋದ್ಗಾರ, ಬಣ್ಣಬಣ್ಣದ ಧ್ವಜಗಳು ಮತ್ತು ಕ್ರೀಡಾಂಗಣದ ಸಜ್ಜು ಎಲ್ಲರ ಗಮನ ಸೆಳೆಯುವಂತಿತ್ತು. ಶಾಲಾ ಚೇಯರ್ಮ್ಯಾನ್ ಹಾಜಿ ಅಬ್ದುಲ್ ರಹ್ಮಾನ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಶಾಲಾ ಪ್ರಾಂಶುಪಾಲ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ಶುಭಾರಂಭವು ಭವ್ಯ ಮೆರವಣಿಗೆಯಿಂದ ಜರುಗಿತು. ವಿದ್ಯಾರ್ಥಿಗಳು ತಮ್ಮ ತಮ್ಮ ಹೌಸ್‌ಗಳ ವಿಶಿಷ್ಟ ವೇಷಭೂಷಣ ಮತ್ತು…

Read More

ನಾಗರಕಟ್ಟೆ ಯಲ್ಲಿನ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ, ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕಕ್ಕೆ ಪ್ರಾರ್ಥನಾ ಮಂಟಪ ಲೋಕಾರ್ಪಣೆ … !

ಕಾಸರಗೋಡು ಕೋಟೆಯ ಪೂರ್ವ ಭಾಗದಲ್ಲಿ ಸ್ಥಿತಿ ಗೊಂಡಿರುವ ನಾಗರಕಟ್ಟೆ ಯಲ್ಲಿನ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ, ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕಕ್ಕೆ ಪ್ರಾರ್ಥನಾ ಮಂಟಪ ನಿರ್ಮಿಸಿ ಸಮರ್ಪಿಸಲಾಯಿತು. ಕನ್ನಡ ಭವನದ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್, ಸನತ್ ಕುಮಾರ್ ಬಿ. ಇ. ಕಾರ್ತಿಕ್ ಕಾಸರಗೋಡು ಬಿ. ಇ. ಇವರ ಆರ್ಥಿಕ ವಿನಿಯೋಗದಲ್ಲಿ ಪ್ರಾರ್ಥನಾ ಮಂಟಪ ಅತೀ ಸುಂದರ, ಭವ್ಯವಾಗಿ ಮೂಡಿ ಬಂದಿದೆ. ಎಡನೀರು ಮಠ ಅದೀಶರಾದ ಶ್ರೀ ಶ್ರೀ…

Read More

ಐತಿಹಾಸಿಕ ಬಾಯಾರ್ ಜಾರಂ ಮಕ್ಕಂ ಉರೂಸ್ ಹಬ್ಬ ಆರಂಭ

ಮಂಜೇಶ್ವರ: ಐತಿಹಾಸಿಕ ಬಾಯಾರ್ ಜಾರಂ ಮಕ್ಕಂ ಉರೂಸ್ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ಉರೂಸ್ ಸಮಿತಿ,ಗೌರವಾನ್ವಿತ. ಮೋನು ಹಾಜಿ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ್ಯ. ಸೈಯದ್ ಶಮೀಮ್ ತಂಗಳ್ ಧ್ವಜಾರೋಹಣ ನೆರವೇರಿಸಿದರು. ಜಮಾತ್ ಸಮಿತಿ ಅಧ್ಯಕ್ಷರು. ಗೌರವಾನ್ವಿತ. ಅಲಿ ಹಾಜಿ, ಕಾರ್ಯದರ್ಶಿ.. ಮುಹಮ್ಮದ್ ಹಾಜಿ, ಕಾದರ್ ಹಾಜಿ, ಜಮಾತ್ ಮುತಾರಿಸ್.ಶುಹೈಬ್ ಇರ್ಫಾನಿ,ಆದಂ ದಾರಿಮಿ ರಝಾಕ್ ಮಿಸ್ಬಾಹಿ, ಸಿರಾಜುದ್ದೀನ್ ಫೈಝಿ, ಚೇರಲ್ ಮಜೀದ್ ದಾರಿಮಿ, ರಝಾಕ್ ಇರ್ಫಾನಿ ಮತ್ತಿತರರು ಉಪಸ್ಥಿತರಿದ್ದರು.ಡಿಸೆಂಬರ್ 4 ರಿಂದ 15 ರವರೆಗೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪ್ರಸಿದ್ಧ ಭಾಷಣಕಾರರು…

Read More

ಶ್ರೀ ಅಯ್ಯಪ್ಪ ಸ್ವಾಮೀ ಕುಣಿತ ಭಜನಾ ತಂಡ ಬಾಯಿಕಟ್ಟೆ. ನೂತನ ಕುಣಿತ ಭಜನೆಯ ಭಕ್ತಿ ವಿಡಿಯೋ ಆಲ್ಬಮ್ ಸ್ವರ್ಣ ಸನ್ನಿಧಿ -(ಈ ಪುಣ್ಯ ಮಲೆ) ಟೈಟಲ್ ಹಾಗೂ ಟ್ರೈಲರ್ ಬಿಡುಗಡೆ

ಶ್ರೀ ಅಯ್ಯಪ್ಪ ಸ್ವಾಮೀ ಕುಣಿತ ಭಜನಾ ತಂಡ ಬಾಯಿಕಟ್ಟೆ ಪೈವಳಿಕೆ ಇವರ ನೂತನ ಕುಣಿತ ಭಜನೆಯ ಭಕ್ತಿ ವಿಡಿಯೋ ಆಲ್ಬಮ್ ಶೆಟ್ಟಿ ಅಜಯ್ ರಾಜ್ ಅವರ ಸಾಹಿತ್ಯ ಹಾಗೂ ರಾಗಸಂಯೋಜನೆಯಲ್ಲಿ ಸಂದೀಪ್ ಆರ್ ಬಲ್ಲಾಳ್ ಸಂಗೀತ ನೀಡಿರುವ ವಾಣಿ ಮಧ್ವ ,ಪ್ರಾಪ್ತಿ ಆರ್ ಶೆಟ್ಟಿ ಹಾಡಿರುವ ,ರಕ್ಷಿತ್ ಎಸ್.ಎನ್.ಸಿ ಛಾಯಾಗ್ರಹಣ ಮಾಡಿರುವ ಉದಯ ಬೇಕೂರು ,ಮನೋಹರ್ ವಾದ್ಯಪಡ್ಪು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಸ್ವರ್ಣ ಸನ್ನಿಧಿ -(ಈ ಪುಣ್ಯ ಮಲೆ) ಟೈಟಲ್ ಹಾಗೂ ಟ್ರೈಲರ್ ಬಾಯಿಕಟ್ಟೆ ಅಯ್ಯಪ್ಪ…

Read More

ಅಂಗಡಿಯ ಶಟರ್ ಬೀಗ ಮುರಿದು ನಗದು ಹಾಗೂ ಸಾಮಾಗ್ರಿ ಕಳವು

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ನಲ್ಲಿ ಕಾರ್ಯಾಚರಿಸುತ್ತಿರುವ ಅಶ್ರಫ್ ಎಂಬವರ ಮಾಲಕತ್ವದಲ್ಲಿರುವ ಭಾರತ್ ಸೂಪರ್ ಮಾರ್ಕೆಟ್ ಅಂಗಡಿಯ ಶಟರ್ ಬೀಗ ಮುರಿದು ಒಳನುಗ್ಗಿದ ಕಳ್ಳರು ಡ್ರವರಿನೊಳಗಿರಿಸಿದ್ದ 35000 ರೂಪಾಯಿ ನಗದು ಹಾಗೂ ಸುಮಾರು 10 ಸಾವಿರ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ.ಬುಧವಾರ ಬೆಳಿಗ್ಗೆ ಮಾಲಕ ಅಶ್ರಫ್ ಅಂಗಡಿಗೆ ತಲುಪಿದಾಗ ಕಳವಾಗಿರುವುದು ಗಮನಕ್ಕೆ ಬಂದಿದೆ. ಮಂಗಳವಾರ ರಾತ್ರಿ ಕಳವು ನಡೆದಿದೆ.ಇದರ ಸಮೀಪದಲ್ಲಿರುವ ಮೊಬೈಲ್ ಅಂಗಡಿ ಹಾಗೂ ತರಕಾರಿ ಅಂಗಡಿಯ ಬೀಗ ಮುರಿದು ಕಳವಿಗೆ ಯತ್ನ ನಡೆದಿದೆ. ಘಟನಾ…

Read More
error: Content is protected !!