ಮರಳು ಮಾಫಿಯಾಗಳ ನೀಡುತಿದ್ದ ಕಂತು ಕಂತು ನೋಟುಗಳಿಗಾಗಿ ನಿಯಮವನ್ನು ಗಾಳಿಗೆ ತೂರಿದ ಆ(ರಕ್ಷ)ಕರು
ಮರಳು ಮಾಫಿಯಾಗಳೊಂದಿಗೆ ಪೊಲೀಸರ ನಂಟಿನ ವಿಷಯದಲ್ಲಿ ಎಳೆ ಎಳೆಯಾಗಿ ಒಂದೊಂದು ಮಾಹಿತಿ ಬಹಿರಂಗಗೊಳ್ಳುತ್ತಿದೆ. ಆರಂಭದಲ್ಲಿ ಕುಂಬಳೆ ಠಾಣೆಯ ಎಸ್ಸೈ ಯನ್ನು ಬಲೆಗೆ ಹಾಕುವ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಕೆಲವೊಂದು ಪೊಲೀಸರ ಒಡನಾಟದೊಂದಿಗೆ ಮರಳು ಮಾಫಿಯಾಗಳು ಸಂಪಾದಿಸಿದ್ದು ಕೋಟಿಗಟ್ಟಲೆ. ಶ್ರಿಜೇಶ್ ಕುಂಬಳೆ ಎಸ್ಸೈ ಆಗಿ ಅಧಿಕಾರ ವಹಿಸಿದ್ದು ಒಂದೂವರೆ ವರ್ಷಕ್ಕೆ ಮೊದಲು. ಮರಳು ಮಾಫಿಯಾ ಹಾಗೂ ಮಾದಕ ದಂಧೆಕೋರರಿಗೆ ಸಿಂಹ ಸ್ವಪ್ನವಾಗಿದ್ದ ಶ್ರಿಜೇಶ್ ಮುಖ ನೋಡದೆ ಯಾವುದೇ ರಾಜಕೀಯ ಪುಡಾರಿಗಳ ಒತ್ತಾಸೆಗೂ ಬಗ್ಗದೆ ಕಟ್ಟು ನಿಟ್ಟಿನ ಕ್ರಮ ತೆಗದುಕೊಳ್ಳುವ…