ಜೈ ತುಳುನಾಡು ಕಾಸರಗೋಡು ಘಟಕದಿಂದ ಮರೆಯದ ಆಟಿ ಕಾರ್ಯಕ್ರಮ 27 ರಂದು

ಮಂಜೇಶ್ವರ : ಜೈ ತುಳುನಾಡುವಿನ ಕಾಸರಗೋಡು ಘಟಕದ ಆಶ್ರಯದಲ್ಲಿ ಮರೆಯದ ಆಟಿ ಮತ್ತು ಭಾಷಣ ಮತ್ತು ಪಾರ್ದನ ಸ್ಪರ್ಧೆ ಜುಲೈ 27 ರಂದು ಭಾನುವಾರ ಕಾಸರಗೋಡು ಕರಂದಕ್ಕಾಡ್ ಬಿಲ್ಲವ ಸೇವಾ ಸಂಘದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಬಿಲ್ಲವ ಸೇವಾ ಸಂಘ ಕಾಸರಗೋಡು ಇದರ ಅಧ್ಯಕ್ಷ ರಘು ಕೆ ಮೀಪುಗುರಿ ಉಧ್ಘಾಟಿಸಲಿದ್ದಾರೆ. ಬೆಳಗ್ಗೆ 10 30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜೈ ತುಳುನಾಡು ಕಾಸರಗೋಡು ಘಟಕದ ಅಧ್ಯಕ್ಷೆ ಶ್ರೀಮತಿ ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಅಧ್ಯಕ್ಷತೆ ವಹಿಸಲಿದ್ದಾರೆ.ಸಾಹಿತಿ ಮತ್ತು ಜೈ…

Read More

ಮಂಜೇಶ್ವರ ಸರಕಾರಿ ಆಸ್ಪತ್ರೆಯ ಶೋಚನೀಯಾವಸ್ತೆ .ಎಸ್ ಡಿ ಪಿ ಐ ಪ್ರತಿಭಟನೆ

ಮಂಜೇಶ್ವರ: ಮಂಜೇಶ್ವರ ಸಿ.ಎಚ್‌.ಸಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಔಷಧಿಗಳ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಅಗತ್ಯ ಚಿಕಿತ್ಸಾ ಸೌಲಭ್ಯಗಳು ಒದಗಿಸಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ಮಂಜೇಶ್ವರ ಗ್ರಾಮಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಆಸ್ಪತ್ರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರು ಹಾಗೂ ಔಷಧಿಗಳು ಲಭ್ಯವಿಲ್ಲದಿರುವುದು ಆರೋಗ್ಯದ ದೃಷ್ಟಿಯಿಂದ ಗಂಭೀರ ಸಮಸ್ಯೆ ಉಂಟಾಗುವುದಾಗಿ ಪ್ರತಿಭಟನಾ ನಿರತರು ಆರೋಪಿಸಿದರು. ಮಂಜೇಶ್ವರ ಉಪನೋಂದಣಿ ಕಚೇರಿ ಪರಿಸರದಿಂದ ಆರಂಭಗೊಂಡ ಮೆರವಣಿಗೆಯನ್ನು ಪೊಲೀಸರು ಆಸ್ಪತ್ರೆ…

Read More

ಅಂಚೆ ಕಚೇರಿ ನೇಮಕಾತಿ, ಅರ್ಜಿದಾರರ ಸಮಸ್ಯೆಗಳನ್ನು ಬಗೆಹರಿಸಬೇಕು : ಯೂತ್ ಕಾಂಗ್ರೆಸ್

ಮಂಜೇಶ್ವರ : ಅಂಚೆ ಕಚೇರಿಯ ನೇಮಕಾತಿ ಸಂಬಂಧಿಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಭಾಷಾ ಅಲ್ಪಸಂಖ್ಯಾತ ಉದ್ಯೋಗರ್ಥಿಗಳು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕನ್ನಡ ಮಾಧ್ಯಮ ಕಲಿತ ಉದ್ಯೋಗಾರ್ಥಿಗಳು ಅರ್ಜಿ ಸಲ್ಲಿಸುವಾಗ ಭಾಷೆ ಮಲಯಾಳಂನ ಬದಲು ಕಲಿತ ಭಾಷೆಯಾದ ಕನ್ನಡ ಆಯ್ಕೆ ಮಾಡುವಾಗ ರಾಜ್ಯ ಕೇರಳದ ಬದಲು ಕರ್ನಾಟಕ ರಾಜ್ಯ ಎಂದು ತೋರಿಸುತ್ತದೆ, ಇದು ಕನ್ನಡ ಉದ್ಯೋಗಾರ್ಥಿಗಳ ಒಂದು ಸಮಸ್ಯೆ ಮಾತ್ರವಲ್ಲದೆ ಕೇರಳದ ಕಾಸರಗೋಡಿನ ಗಡಿ ಪ್ರದೇಶದ ಕನ್ನಡಿಗರು ಅಂಚೆ ಕಚೇರಿಯಲ್ಲಿ ಉದ್ಯೋಗ ಪಡೆಯುವುದಕ್ಕೆ ವಂಚಿತರಾಗಿದ್ದಾರೆ. ಅಂಚೆ…

Read More

ಚೆರ್ಕಳ : ಬೈಕ್ ಗಳು ಡಿಕ್ಕಿ : ಓರ್ವ ಮೃತ್ಯು

ಕಾಸರಗೋಡು: ಚೆರ್ಕಳ ಬಳಿಯ ಪೊವ್ವಲ್ ನಲ್ಲಿ ಬೈಕುಗಳು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಫಘಾತದಲ್ಲಿ ಓರ್ವ ಮೃತಪಟ್ಟಿದ್ದಾರೆ. ಪೊವ್ವಲ್ ನಿವಾಸಿ ಕಬೀರ್(42) ಮೃತಪಟ್ಟವರು. ಇಂದು (ಸೋಮವಾರ) ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಕಬೀರ್ ಅವರು ಪೊವ್ವಲ್ ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜು ಬಳಿ ನೂತನ ಮನೆ ನಿರ್ಮಿಸಿದ್ದು ಅದರ ನಿನ್ನೆ (ಆದಿತ್ಯವಾರ) ಗೃಹಪ್ರವೇಶ ನಡೆದಿತ್ತು. ಇಂದು ಬೆಳಗ್ಗೆ ಅವರು ಮನೆಯಿಂದ ಬೋವಿಕಾನ ಭಾಗಕ್ಕೆ ಹೊರಟಾಗ ಅವರ ಬೈಕು ಮುಳ್ಳೇರಿಯ ಭಾಗದಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ಡಿಕ್ಕಿ…

Read More

ಚಿಕೂನ್ ಗುನ್ಯಕ್ಕೆ 10 ವರ್ಷದ ಬಾಲಕಿ ಬಲಿ

ಕಾಸರಗೋಡು: ಚಿಕೂನ್ ಗುನ್ಯ ರೋಗ ಬಾಧಿತಳಾದ 10 ವರ್ಷ ಪ್ರಾಯದ ಬಾಲಕಿ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪಾಣತ್ತೂರು ನಿವಾಸಿ ಗೌತಂ ಶರ್ಮ ಎಂಬವರ ಪುತ್ರಿ ಶಿವಾನಿ ಶರ್ಮ ಮೃತಪಟ್ಟ ಬಾಲಕಿ. ನಿನ್ನೆ (ಆದಿತ್ಯವಾರ) ಮುಂಜಾನೆ ಪೆರಿಯಾರಂ ಮೆಡಿಕಲ್‌ ಕಾಲೇಜಿನಲ್ಲಿ ಆಕೆ ಕೊನೆಯುಸಿರೆಳೆದಳು. ಕಳೆದ ಕೆಲವು ತಿಂಗಳುಗಳಿಂದ ಶಿವಾನಿ ಲಿವರ್ ಸಂಬಂಧ ರೋಗದಿಂದ ಬಳಲುತ್ತಿದ್ದರೆನ್ನಲಾಗಿದೆ. ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಶನಿವಾರದಂದು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಬಾಲಕಿಯ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಪೆರಿಯಾರಂ…

Read More

272 .16 ಲೀಟರ್ ವಿದೇಶಿ ಮದ್ಯ ವಶ ಪಡಿಸಿದ ಅಬಕಾರಿ ಇಲಾಖೆ ಪರಾರಿಯಾದ ಆರೋಪಿಗಳು

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 272.16 ಲೀಟರ್ ಕರ್ನಾಟಕ ನಿರ್ಮಿತ ವಿದೇಶ ಮದ್ಯವನ್ನು ಕಾಸರಗೋಡು ಚೌಕಿ, ಸಿಪಿ.ಸಿ.ಆ‌ರ್.ಐ. ಪರಿಸರದಿಂದ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಕ್ಸೆಸ್ ಎನ್ಫೋರ್ಸ್ ಮೆಂಟ್ & ಆಂಟಿ ನರ್ಕೋಟಿಕ್ ಸ್ಪೆಶಲ್ ತಂಡ ಹಾಗೂ ಎಕ್ಸೆಸ್ ಸರ್ಕಲ್ ಆಫೀಸ್ ತಂಡದ ನೇತೃತ್ವದಲ್ಲಿ ಕುಂಬಳೆ ಆರಿಕ್ಕಾಡಿ ಬಳಿ ವಾಹನ ತಪಾಸಣೆ ನಡೆಸುವ ವೇಳೆ ಕಾರೊಂದು ನಿಲ್ಲಿಸದೆ ಪರಾರಿಯಾಗಿತ್ತು. ಈ ಕಾರನ್ನು ಬೆನ್ನಟ್ಟಿ ಚೌಕಿ ಪರಿಸರದಿಂದ ಹಿಡಿದಾಗ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ವಶಪಡಿಸಲಾಗಿದೆ. ಕಾರಿನಲ್ಲಿದ್ದವರು ಓಡಿ ಪರಾರಿಯಾದರು. ಅಸಿಸ್ಟೆಂಟ್…

Read More

ಸಾರ್ವಜನಿಕ ಶಿಕ್ಷಣವನ್ನು ಅಧ:ಪತನಗೊಳಿಸಿದ ಎಡರಂಗ ಸರಕಾರದ ವಿರುದ್ಧ ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಡಿಡಿಇ ಕಚೇರಿ ಮುಂದೆ ಮಾರ್ಚ್ ಮತ್ತು ಧರಣಿ

ಸಾರ್ವಜನಿಕ ಶಿಕ್ಷಣವನ್ನು ಅಧ:ಪತನಗೊಳಿಸಿದ ಎಡರಂಗ ಸರಕಾರದ ವಿರುದ್ಧ ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಡಿಡಿಇ ಕಚೇರಿ ಮುಂದೆ ಮಾರ್ಚ್ ಮತ್ತು ಧರಣಿಯನ್ನು ಶನಿವಾರ ನಡೆಸಿತು.ಧರಣಿಯನ್ನು ದೇಶೀಯ ಅಧ್ಯಾಪಕ ಪರಿಷತ್ ನ ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ಕೆ ರಾಜೇಶ್ ಉದ್ಘಾಟಿಸಿ ಸರಕಾರ ಅಧ್ಯಾಪಕ ವರ್ಗವನ್ನು ಕಡೆಗಣಿಸುತ್ತಿದೆ. ನ್ಯಾಯವಾಗಿ ಸಿಗಬೇಕಾದ ಸವಲತ್ತುಗಳನ್ನು ಕೊಡದೆ ಶೋಷಣೆ ಮಾಡುತ್ತಿದೆ. ಅಧ್ಯಾಪಕರ ಬದುಕಿಗೆ ಭದ್ರತೆಯೇ ಇಲ್ಲದಾಗಿದೆ. ಸಾರ್ವಜನಿಕ ಶಿಕ್ಷಣ ರಂಗವನ್ನು ಅಧಃಪತನಗೊಳಿಸಿದ ಎಡರಂಗ ಸರಕಾರದ ಕಾರ್ಯವೈಖರಿಯ ವಿರುದ್ಧ ಹೋರಾಡುವ ಸಂದರ್ಭ ಒದಗಿ ಬಂದಿದೆ ಎಂದರು.ಸಾರ್ವಜನಿಕ…

Read More

ಕುಂಜತ್ತೂರು ಎಲ್.ಪಿ. ಶಾಲೆಯ ಸಮೀಪದಲ್ಲಿ ಹೈವೋಲ್ಟೇಜ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪನೆ . ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಮಂಜೇಶ್ವರ: ಕೇರಳ-ಕರ್ನಾಟಕ ಗಡಿ ಪ್ರದೇಶದ ಕುಂಜತ್ತೂರು ಸರ್ಕಾರಿ ಎಲ್.ಪಿ. ಶಾಲೆಯ ಪ್ರವೇಶ ದ್ವಾರದ ಸಮೀಪದಲ್ಲಿ ಸ್ಥಾಪಿಸಲಾದ ಹೈವೋಲ್ಟೇಜ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಶಾಲೆಗೆ ಆಗಮಿಸುವ ನೂರಾರು ಮಕ್ಕಳ ಪ್ರಾಣಭದ್ರತೆಗೆ ಇದು ಅಪಾಯಕಾರಿಯಾಗಿರುವುದಾಗಿ ಪೋಷಕರು ಹಾಗೂ ಊರವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಶಾಲೆಯ ಕಟ್ಟಡಕ್ಕೆ ಸಮೀಪದಲ್ಲಿಯೇ ಈ ಟ್ರಾನ್ಸ್‌ಫಾರ್ಮರ್ ಸ್ಥಾಪನೆಯಾಗಿದ್ದು, ಯಾವುದೇ ಸಮಯದಲ್ಲಾದರೂ ವಿದ್ಯುತ್ ದುರಂತವು ದೈಹಿಕ ಹಾನಿಗೆ ಕಾರಣವಾಗಬಹುದೆಂಬ ಭೀತಿ ಎದುರಾಗಿದೆ. ಶಾಲಾ ಸಮಯದಲ್ಲಿ ಮಕ್ಕಳು ಆಟವಾಡುವಾಗ ಅಥವಾ ಗುಂಪುಗಳಾಗಿ ಸಂಚರಿಸುವಾಗ ಇದೀಗ ಸ್ಥಾಪನೆಯಾಗಿರುವ…

Read More

ಮಂಜೇಶ್ವರ ಪಂಚಾಯತ್ ಅಧ್ಯಕ್ಷೆಯ ಜನವಿರೋಧಿ ನೀತಿ ವಿರುದ್ಧ ಮುಸ್ಲಿಂ ಲೀಗ್ ಧರಣಿ

ಮಂಜೇಶ್ವರ : ಮಂಜೇಶ್ವರ ಪಂಚಾಯತ್ ಬೋರ್ಡ್ ಅಧ್ಯಕ್ಷೆ ಯ ಜನವಿರೋಧಿ ನೀತಿ ವಿರುದ್ಧ ಮಂಜೇಶ್ವರ ಪಂಚಾಯತ್ ಮುಸ್ಲಿಂ ಲೀಗ್ ಸಮಿತಿಯ ನೇತೃತ್ವದಲ್ಲಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಯಿತು. ಆಸ್ತಿಗಾರಿಕೆ (ಕಟ್ಟಡ ತೆರಿಗೆ) ಹೆಸರಿನಲ್ಲಿ ತೆಗೆದುಕೊಂಡಿರುವ RR ಕ್ರಮವನ್ನು ಹಿಂತೆಗೆದುಕೊಳ್ಳಬೇಕು, ರಸ್ತೆಗಳ ಇಕ್ಕೆಡೆಗಳಲ್ಲಿ ಗುಬ್ಬೆದ್ದು ನಾರುತ್ತಿರುವ ತ್ಯಾಜ್ಯಗಳನ್ನು ಕೂಡಲೇ ತೆರವುಗೊಳಿಸಬೇಕು, ಬೀದಿ ನಾಯಿಗಳ ಅಟ್ಟಹಾಸಕ್ಕೆ ಪರಿಹಾರ ಕಂಡುಹಿಡಿಯಬೇಕು, ಕಲ್ಯಾಣ ಪಿಂಚಣಿ ಅರ್ಜಿಗಳನ್ನು ವಿಳಂಬವಿಲ್ಲದೆ ಪರಿಶೀಲಿಸಿ ತೀರ್ಮಾನಿಸಬೇಕು, ಪಂಚಾಯತ್ ಅಧ್ಯಕ್ಷರ ಸಾರ್ವಜನಿಕರೊಡನೆ ಇರುವ ವರ್ತನೆ ಸುಧಾರಿಸಬೇಕು ಎಂಬೀ…

Read More

ಕುಂಬಳೆ ಗ್ರಾಮ ಪಂಚಾಯತ್ ಆಡಳಿತ ಪಕ್ಷದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮೇ 26 ರಂದು ಮತಕ್ಕೆ

ಕುಂಬಳೆ ಭ್ರಷ್ಟಾಚಾರ ಹಗರಣದ ಆರೋಪವನ್ನು ಎದುರಿಸುತ್ತಿರುವ ಕುಂಬಳೆ ಗ್ರಾಮ ಪಂಚಾಯತ್ ನ ಮುಸ್ಲಿಂ ಲೀಗ್ ಆಡಳಿತ ಸಮಿತಿಯನ್ನು ಪ್ರಶ್ನಿಸಿ ವಿರೋಧ ಪಕ್ಷ ಬಿಜೆಪಿ ನೀಡಿದ ಅವಿಶ್ವಾಸ ಗೊತ್ತುವಳಿ ಮೇ 26 ರಂದು ನಿರ್ಧಾರವಾಗಲಿದೆ.ಚುನಾವಣಾಧಿಕಾರಿಯಾದ ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಜೋನ್ ಎ ಡಿಕ್ರೂಸ್ ರವರಿಗೆ ಬಿಜೆಪಿ ಇತ್ತೀಚಿಗೆ ಅವಿಶ್ವಾಸ ಗೊತ್ತುವಳಿಯ ನೋಟೀಸು ನೀಡಿತ್ತು.ಕುಂಬಳೆ ಪಂಚಾಯತ್ ನಲ್ಲಿ ಕಳೆದ ನಾಲ್ಕು ವರೆ ವರ್ಷಗಳಿಂದ ನಡೆದ ಭ್ರಷ್ಟಾಚಾರದ ತನಿಖೆ ಯಾಗಬೇಕು .ಸರಕಾರಿ ಆಡಳಿತ ಯಂತ್ರ ದುರುಪಯೋಗ ,ಸರಕಾರಿ ಸೊತ್ತು ಕಬಳಿಸಿದವರಿಗೆ ಕಾನೂನಾತ್ಮಕ…

Read More
error: Content is protected !!