ಹಿಂದೂ ಸಮಾಜೋತ್ಸವ ಬೈಕ್ ರ್ಯಾಲಿಗೆ ತಡೆ ಕೋರಿ ಸಿಪಿಐಎಂ ಮನವಿ.ಸಾಮಾಜಿಕ ಸಾಮರಸ್ಯ ಭಂಗದ ಆತಂಕ; ಜಿಲ್ಲಾ ಪೊಲೀಸ್ ವರಿಷ್ಟರಿಗೆ ಅರ್ಜಿ ಸಲ್ಲಿಕೆ
ಕಾಸರಗೋಡು: ವಿದ್ಯಾನಗರದಲ್ಲಿ ಮಾ. 1ರಂದು ಆಯೋಜಿಸಲಾದ ಹಿಂದೂ ಸಮಾಜೋತ್ಸವದಂಗವಾದ ಬೈಕ್ Rally ಗೆ ಅನುಮತಿ ನಿಷೇಧಿಸುವಂತೆ ಒತ್ತಾಯಿಸಿ ಸಿಪಿಐಎಂ ಕಾಸರಗೋಡು ಏರಿಯಾ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಟರಿಗೆ ಮನವಿ ಸಲ್ಲಿಸಿದೆ. ಅನ್ಯಮತೀಯರು ಮತ್ತು ಅನ್ಯ ರಾಜಕೀಯ ಬೆಂಬಲಿಗರ ಬಾಹುಳ್ಯ ಉಳ್ಳ ಪ್ರದೇಶದಲ್ಲಿ ಬೈಕ್ ಮೆರವಣಿಗೆ ನಡೆಸಿ, ಸಂಘರ್ಷ ಸೃಷ್ಟಿಸಿ ನಾಡಿನ ಸಾಮಾಜಿಕ ಸಾಮರಸ್ಯತೆಯ ಐಕ್ಯತೆಯನ್ನು ಶಿಥಿಲಗೊಳಿಸಲು ಗೂಢ ಸಂಚಿನೊಂದಿಗೆ ಬೈಕ್ ಮೆರವಣಿಗೆ ಏರ್ಪಡಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟರಿಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಲಾಗಿದೆ. ಹಿಂದೂ ಸಮಾಜೋತ್ಸವದಂಗವಾಗಿ ಏರ್ಪಡಿಸಿದ…