ಕುಂಜತ್ತೂರು ಶಿವ ಶಕ್ತಿ ಸೀತಾರಾಮ ಭಜನಾ ಮಂದಿರದ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಯಶಸ್ವಿ

ಕುಂಜತ್ತೂರು ಶಿವ ಶಕ್ತಿ ಸೀತಾರಾಮ ಭಜನಾ ಮಂದಿರದಲ್ಲಿ ನಡೆದ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಧಾರ್ಮಿಕ ಸಂಪ್ರದಾಯಗಳು ಸಮಾಜದ ಏಕತೆ ಹಾಗೂ ನೈತಿಕ ಮೌಲ್ಯಗಳನ್ನು ಬಲಪಡಿಸುವ ಶಕ್ತಿ ಹೊಂದಿವೆ ಎಂದು ಅವರು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ವಿಜಯ್ ಕುಮಾರ್ ರೈ, ಆದರ್ಶ ಬಿ.ಎಂ., ಜಯರಾಮ್, ಹರೀಶ್ ಶೆಟ್ಟಿ ಮಾಡ ಸೇರಿದಂತೆ ಹಲವರು ಉಪಸ್ಥಿತರಿದ್ಧರು .ಸ್ಥಳೀಯ ಭಕ್ತರು ಹಾಗೂ ಗಣ್ಯರು…

Read More

ಎ.ಯು.ಪಿ ಶಾಲೆ ಆನೆಕಲ್ಲಿನಲ್ಲಿ ಸಂಭ್ರಮದ ಶಾಲಾ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ.

ಎ.ಯು.ಪಿ ಶಾಲೆ ಆನೆಕಲ್ಲಿನಲ್ಲಿ ತಾರೀಕು 17/02/2026 ಮಂಗಳವಾರದಂದು ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಶಾಲಾ ಪ್ರಬಂಧಕ ಪ್ರತಿನಿಧಿ ಶ್ರೀ ಮುರಳಿ ಶ್ಯಾಮ್ ಧ್ವಜಾರೋಹಣ ನೆರವೇರಿಸಿ ಕೊಟ್ಟರು. ಮಧ್ಯಾಹ್ನ ನಂತರ 3:00ಗೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ರಾಮಣ್ಣ ನಾಯ್ಕ್ ದೀಪ ಪ್ರಜ್ವಲನೆಯ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಬಾಲ್ಯಕಾಲದ ನೆನಪುಗಳನ್ನು ಮೆಲುಕು ಹಾಕಿ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ…

Read More

ನಗರ ಮಧ್ಯದಲ್ಲಿ ಉಪ್ಪಳ ಟೆಲಿಫೋನ್ ಎಕ್ಸ್‌ಚೇಂಜ್‌ಗೆ ಭೀತಿ ಉಂಟುಮಾಡುತ್ತಿರುವ ಗೂಡಂಗಡಿಗಳು – ಕಾನೂನುಬಾಹಿರ ಅಂಗಡಿಗಳ ವಿರುದ್ಧ ಪ್ರತಿಭಟನೆ

ಉಪ್ಪಳ: ನಗರ ಮಧ್ಯದಲ್ಲಿರುವ ಟೆಲಿಫೋನ್ ಎಕ್ಸ್‌ಚೇಂಜ್ ಮುಂಭಾಗದ ಗೂಡಂಗಡಿಗಳು ಸಂಚಾರ ದಟ್ಟಣೆ ಉಂಟುಮಾಡುತ್ತಿರುವುದಾಗಿ ದೂರು ವ್ಯಕ್ತವಾಗಿದೆ. ಉಪಕರಣಗಳು ಮತ್ತು ಜನರೇಟರ್‌ಗಳು ಸೇರಿದಂತೆ ಗೋಡೆಗೆ ಅಂಟಿಕೊಂಡೇ ಇವು ಸ್ಥಾಪಿಸಲ್ಪಟ್ಟಿವೆ.ಅತ್ಯಂತ ಭದ್ರತೆ ಅಗತ್ಯವಿರುವ ಪ್ರದೇಶದಲ್ಲೇ ಇಂತಹ ಗೂಡಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಸಣ್ಣ ಬೆಂಕಿ ಕಣವೂ ಉಂಟಾದರೆ ದೊಡ್ಡ ದುರಂತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ.ತಟ್ಟುಕಡೆಗಳ ಸುತ್ತಮುತ್ತ ಜನರು ಗುಂಪುಗೂಡುವುದು ಎಕ್ಸ್‌ಚೇಂಜ್ ಕಾರ್ಯಾಚರಣೆಗೆ ಗಂಭೀರ ಅಡ್ಡಿಪಡಿಸುತ್ತಿದೆ. ಜೊತೆಗೆ ಲಹರಿ ವ್ಯಾಪಾರವೂ ಗೂಡಂಗಡಿಗಳನ್ನು ಕೇಂದ್ರವಾಗಿಸಿಕೊಂಡು ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇಂತಹ…

Read More

ಕಾಲಾವಧಿ ಭೂತ ಬಲಿ ಉತ್ಸವ: ಭಕ್ತರ ಸಂಭ್ರಮಕ್ಕೆ ಸಜ್ಜಾಗಿರುವ ದೇವಾಲಯ

ಕಾಸರಗೋಡು, ಫೆಬ್ರವರಿ 21: ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ದೇಲಂತಬೆಟ್ಟುವಿನಲ್ಲಿ ವಾರ್ಷಿಕ ಕಾಲಾವಧಿ ಭೂತ ಬಲಿ ಉತ್ಸವ**ವು ಫೆಬ್ರವರಿ 22 ಮತ್ತು 23, 2026 ರಂದು ಭಕ್ತಿಭಾವದಿಂದ ನಡೆಯಲಿದೆ. ದೇವಾಲಯದ ವತಿಯಿಂದ ಪ್ರಕಟವಾದ ಕಾರ್ಯಕ್ರಮ ವೇಳಾಪಟ್ಟಿಯ ಪ್ರಕಾರ, ಫೆಬ್ರವರಿ 22ರಂದು ಬೆಳಿಗ್ಗೆ ವಿಶೇಷ ಪೂಜೆ, ಮಧ್ಯಾಹ್ನ ಮಹಾಪೂಜೆ ಹಾಗೂ ರಾತ್ರಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 23ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಉತ್ಸವದ ಅಂಗವಾಗಿ ಭಜನಾ ಕಾರ್ಯಕ್ರಮ, ವಿಶೇಷ ಪೂಜೆ,…

Read More

ಬರಹ ಮತ್ತು ಓದು, ಸಾರ್ವಜನಿಕ ಸೇವೆ ಜೊತೆಗೆ ವ್ಯವಹಾರ – ಇಬ್ರಾಹೀಂ ಮುಂಡ್ಯತ್ತಡ್ಕ ಮಾದರಿ ವ್ಯಕ್ತಿತ್ವ

ಕಾಸರಗೋಡು: ಒಬ್ಬ ಸಾರ್ವಜನಿಕ ಕಾರ್ಯಕರ್ತನು ರಾಜಕೀಯ ಮತ್ತು ವ್ಯವಹಾರವನ್ನು ಸಮನ್ವಯಗೊಳಿಸಿ ಮುಂದುವರಿಯುವುದು ಸಾಮಾನ್ಯ. ಆದರೆ ಸಾರ್ವಜನಿಕ ಸೇವೆ, ವ್ಯವಹಾರ, ಬರವಣಿಗೆ ಮತ್ತು ಓದು – ಈ ಎಲ್ಲವೂ ಒಬ್ಬ ವ್ಯಕ್ತಿಯಲ್ಲಿ ಒಂದೇ ವೇಳೆ ಒಂದಾಗುವುದು ಅಪರೂಪ. ಅಂತಹ ಮಾದರಿ ವ್ಯಕ್ತಿತ್ವವೇ ಮುಸ್ಲಿಂ ಲೀಗ್ ನಾಯಕ ಹಾಗೂ ಸಾರ್ವಜನಿಕ ಕಾರ್ಯಕರ್ತ ಇಬ್ರಾಹೀಂ ಮುಂಡ್ಯತ್ತಡ್ಕ . ವಿದ್ಯಾರ್ಥಿ ದಶೆಯಿಂದಲೇ ಪತ್ರಿಕೆಗಳು, ಮಾಸಪತ್ರಿಕೆಗಳು ಹಾಗೂ ವಿವಿಧ ಆನೂಕಾಲಿಕಗಳಲ್ಲಿ ಬರೆಯಲು ಆರಂಭಿಸಿದ್ದ ಅವರು, ಮಧ್ಯದಲ್ಲಿ ವಿದೇಶ ಪ್ರವಾಸಿಯಾಗಿದ್ದರೂ ನಂತರ ಸ್ವದೇಶಕ್ಕೆ ಮರಳಿ ವ್ಯವಹಾರ…

Read More

​ ಕಾರು-ಬಸ್ಸು ಮುಖಾಮುಖಿ ಡಿಕ್ಕಿ: ಮಾಜಿ ಪ್ರವಾಸಿಯ ದಾರುಣ ಅಂತ್ಯ : ಪುತ್ರ ಗಂಭೀರ

ಮಂಜೇಶ್ವರ: ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ತಾಳದ ನೆಲ್ಲಿಕಟ್ಟೆ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಪ್ರವಾಸಿಗೆ ದಾರುಣ ಅಂತ್ಯ.ನೆಲ್ಲಿಕಟ್ಟೆ ನಿವಾಸಿ ಶಂಸುದ್ದೀನ್ ಪೈಕ (68) ಸಾವನ್ನಪ್ಪಿದ ದುರ್ದೈವಿ. ಅವರ ಪುತ್ರ ಸಲ್ಮಾನ್ ಫಾರಿಸ್ (22) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ​ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಶಂಸುದ್ದೀನ್ ಅವರು ತಮ್ಮ ಮಗನೊಂದಿಗೆ ಕಾರಿನಲ್ಲಿ ಕಾಸರಗೋಡು ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿರುವ ಮಧ್ಯೆ ಕಾಸರಗೋಡು ಡಿಪೋದಿಂದ…

Read More

ಡಾ. ನಾಗರತ್ನ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ 2026

ಕಾಸರಗೋಡು: ಸಮಾಜ ಸೇವಕಿ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಮಹಿಳಾ ಸೇವಾ ಟ್ರಸ್ಟ್‌ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ನಾಗರತ್ನ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ 2026ಕ್ಕೆ ಆಯ್ಕೆ ಮಾಡಲಾಗಿದೆ. ಕಾಸರಗೋಡಿನ ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಯಾದ ಈ ಸನ್ಮಾನವನ್ನು Dr. Vaman Rao Bekal ಮತ್ತು ಸಂದ್ಯಾ ರಾಣಿ ಟೀಚರ್ ಅವರ ಸಾರತ್ಯದಲ್ಲಿ ನೀಡಲಾಗುತ್ತಿದೆ. ಕನ್ನಡ ಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆಯ ಅಂಗವಾಗಿ 22.02.2026 ರಂದು ಕನ್ನಡ…

Read More

​ಅಪ್ಪನ ನೆನಪಿನ ‘ಎಂ-80’ ಮೋಪೆಡ್‌ಗೆ ಮಗನ ಮದುವೆಯಲ್ಲಿ ರಾಜಮರ್ಯಾದೆ

​ಮಂಜೇಶ್ವರ: ಮದುವೆ ಸಮಾರಂಭಗಳಲ್ಲಿ ದುಬಾರಿ ಕಾರುಗಳು, ಅದ್ದೂರಿ ಅಲಂಕಾರಗಳು ಇರುವುದು ಸಾಮಾನ್ಯ. ಆದರೆ ಪೆರ್ಲದ ಬಜಕೂಡ್ಲು ಪರ್ಪಕರಿಯದಲ್ಲಿ ನಡೆದ ನವೀನ್ ರೈ ಅವರ ವಿವಾಹದ ಸನ್ಮಾನ ಕೂಟದಲ್ಲಿ ಎಲ್ಲರ ಗಮನ ಸೆಳೆದದ್ದು ಒಂದು ಹಳೆಯ ಕಾಲದ ‘ಬಜಾಜ್ ಎಂ-80’ ಮೋಪೆಡ್! ​ಕೇರಳ ತೋಟಗಾರಿಕಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದ ದಿವಂಗತ ಅಮ್ಮು ರೈ ಅವರ ನೆಚ್ಚಿನ ವಾಹನವಿದು. ಅಪ್ಪನ ಅಗಲಿಕೆಯ ನಂತರವೂ ಅವರ ಸ್ಮರಣಾರ್ಥವಾಗಿ ಮಕ್ಕಳು ಈ ವಾಹನವನ್ನು ಅತ್ಯಂತ ಜತನದಿಂದ ಕಾಯ್ದಿರಿಸಿದ್ದರು. ಅಪ್ಪನ ಮೇಲಿನ ಅಪಾರ ಪ್ರೀತಿ…

Read More

ಉಚಿತ ಕಣ್ಣು ತಪಾಸಣಾ ಶಿಬಿರ ಫೆ.22ರಂದು

ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದಲ್ಲಿ ಕಾಸರಗೋಡಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಹಕಾರದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ಫೆ.22ರಂದು ಬೆಳಗ್ಗೆ 10ರಿಂದ ಕನ್ನಡ ಭವನದಲ್ಲಿ ನಡೆಯಲಿದೆ. ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಬಿರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ನಗರ ಸಭಾ ಕೌನ್ಸಿಲರ್ ಆಗಿರುವ ಶ್ರುತಿ ಅಶೋಕನಗರ, ಶಾರದಾ ಜೆ. ಪಿ. ನಗರ, ಸುಧಾರಾಣಿ ಶರತ್ ಅಣಂಗೂರು, ನೇತಾಜಿ ರೆಸಿಡೆನ್ಸಿ ವಲಯ ಅಧ್ಯಕ್ಷ…

Read More

ಮಂಜೇಶ್ವರದಲ್ಲಿ ತೀಯಾ ಸಮುದಾಯ ಒಗ್ಗಟ್ಟಿಗೆ ಮಹತ್ವದ ಸಭೆ

ಮಂಜೇಶ್ವರ :ಸುಮಾರು ಹದಿನೆಂಟು ಶ್ರೀ ಭಗವತಿ ಕ್ಷೇತ್ರದ ತೀಯಾ ಸಮುದಾಯವನ್ನು ಒಗ್ಗಟ್ಟು ಮಾಡುವ ಅಂಗವಾಗಿ ಬಂದಿಯೋಡು ಅಡ್ಕ ಶ್ರೀ ಭಗವತಿ ಕ್ಷೇತ್ರದ ಕೃಷ್ಣ ಕಾರ್ನೋರ್ ಅವರನ್ನು ತೀಯಾ ವೆಲ್ಫೇರ್ ಸೊಸೈಟಿ ಸದಸ್ಯರು ತೀಯಾ ಸಮುದಾಯಕ್ಕೆ ಕೇರಳ ಸರಕಾರದ ಸವಲತ್ತುಗಳನ್ನು ಪಡೆಯುವ ಬಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದರು ಈ ಸಂದರ್ಭದಲ್ಲಿ ತೀಯಾ ಕ್ಷೆಮಾಸಭಾ ಅಧ್ಯಕ್ಷರಾದ ರವಿ ಕುಲ್ನಗರೆ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ತೀಯಾ ವೆಲ್ಫೇರ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ನಾಗೇಶ್ ಕುಂಬುಳೆ ತೀಯಾ…

Read More
error: Content is protected !!