ಹೊಸಂಗಡಿ ಲಾಡ್ಜ್ ಬೆದರಿಕೆ ಪ್ರಕರಣ: ಮುಖ್ಯ ಸಂಚುಗಾರ ಅಬೂಬಕ್ಕರ್ ಬಂಧನ

​ಮಂಜೇಶ್ವರ: ಹೊಸಂಗಡಿಯ ಲಾಡ್ಜ್ ಒಂದರಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತನನ್ನು ಬೆದರಿಸಿ, ನಗ್ನಚಿತ್ರಗಳನ್ನು ತೆಗೆದು ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣದ ಮುಖ್ಯ ಸಂಚುಗಾರನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ನಿವಾಸಿ ಪಿ.ಎಂ. ಅಬೂಬಕ್ಕರ್ (40) ಬಂಧಿತ ಆರೋಪಿ. ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ವಿಶೇಷ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದೆ.​ಈ ಪ್ರಕರಣದಲ್ಲಿ ಅಬೂಬಕ್ಕರ್ ಐದನೇ ಆರೋಪಿಯಾಗಿದ್ದಾನೆ. ​​ 2026ರ ಜನವರಿಯಲ್ಲಿ ಹೊಸಂಗಡಿ ಪೇಟೆಯ ಲಾಡ್ಜ್ ಒಂದರ ರೂಮ್ ನಂಬರ್ 206ರಲ್ಲಿ ಈ ಘಟನೆ ನಡೆದಿತ್ತು.​ ರೂಮಿನಲ್ಲಿದ್ದ ಯುವತಿ ಮತ್ತು…

Read More

ಕುಂಬಳೆಯಲ್ಲಿ ಟ್ರಾಫಿಕ್ ನಿರ್ಧಾರ ಜಾರಿಗೆ ವಿಳಂಬ: ವ್ಯಾಪಾರಿಗಳಿಂದ ಪ್ರತಿಭಟನೆ ಎಚ್ಚರಿಕೆ

ಕುಂಬಳೆ, ಮೇ 7: ಕುಂಬಳೆ ಪಟ್ಟಣದಲ್ಲಿ ಜಾರಿಗೆ ತರಲಾಗಿದ್ದ ಟ್ರಾಫಿಕ್ ವ್ಯವಸ್ಥೆಯ ನಿರ್ಧಾರ ಅನುಷ್ಠಾನವಾಗದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹಾಗೂ ಪ್ರಯಾಣಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಹಿಂದಿನ ಪಂಚಾಯತ್ ಆಡಳಿತ ಸಮಿತಿ 2025ರ ಅಕ್ಟೋಬರ್ 23ರಂದು ಕೈಗೊಂಡ ನಿರ್ಧಾರದಂತೆ, ಪೇರಾಲ್ ಕಣ್ಣೂರು, ಸೀತಾಂಗೋಳಿ, ಪೆರ್ಲ, ಸುಳ್ಯ, ಬದಿಯಡ್ಕ ಮತ್ತು ಮುಳ್ಳೇರಿಯಾ ಭಾಗಗಳಿಗೆ ತೆರಳುವ ಬಸ್‌ಗಳು ಪ್ರಯಾಣಿಕರ ಅನುಕೂಲಕ್ಕಾಗಿ ಹಳೆಯ ಬಸ್ ನಿಲ್ದಾಣದಲ್ಲಿ ಐದು ನಿಮಿಷ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಳಿಸುವ ವ್ಯವಸ್ಥೆ ಜಾರಿಗೊಳಿಸಲು ಸೂಚಿಸಲಾಗಿತ್ತು. ಆದರೆ ಇದುವರೆಗೆ ಈ ನಿರ್ಧಾರ ಜಾರಿಯಾಗದ…

Read More

ಒಡುವಾರ್ ಅಮಾನತುಲ್ ಇಸ್ಲಾಂ ಮದ್ರಸ ವಾರ್ಷಿಕೋತ್ಸವ ಮೇ 9ರಿಂದ ಪ್ರಾರಂಭ

ಕುಂಬಳೆ, ಮೇ 7: ಅಮಾನತುಲ್ ಇಸ್ಲಾಂ ಮದ್ರಸ ವತಿಯಿಂದ ವಾರ್ಷಿಕೋತ್ಸವ, ಧಾರ್ಮಿಕ ಜ್ಞಾನ ಸಮ್ಮೇಳನ ಹಾಗೂ ಇಸ್ಲಾಮಿಕ್ ಕಥಾಪ್ರಸಂಗ ಕಾರ್ಯಕ್ರಮವು ಮೇ 9ರಿಂದ 13ರವರೆಗೆ ಬದರ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಮೇ 9ರಂದು ಸಂಜೆ 7 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಉದ್ಘಾಟಿಸಲಿದ್ದು, ಡಾ. ಫಾರೂಖ್ ನಯೀಮಿ ಹಿಜ್ರ ಎಕ್ಸ್‌ಪೆಡಿಷನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮೇ 10 ಮತ್ತು 11ರಂದು ಖ್ಯಾತ ಕಥಾಪ್ರಸಂಗಕಾರ ಸುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಹಾಗೂ…

Read More

ಎ.ಕೆ.ಎಂ. ಅಶ್ರಫ್‌ಗೆ ಸಚಿವ ಸ್ಥಾನ ಸಾಧ್ಯತೆ: ಕಾಸರಗೋಡಿಗೆ ಮತ್ತೆ ಸಚಿವ ಪ್ರಾತಿನಿಧ್ಯ?

ಮಂಜೇಶ್ವರ, ಮೇ 7: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ 29,252 ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸಿರುವ ಎ.ಕೆ.ಎಂ. ಅಶ್ರಫ್ ಅವರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ಐದು ವರ್ಷಗಳಿಂದ ಕಾಸರಗೋಡು ಜಿಲ್ಲೆಗೆ ಸಚಿವ ಪ್ರಾತಿನಿಧ್ಯ ಇಲ್ಲದ ಹಿನ್ನೆಲೆಯಲ್ಲಿ, ಈ ಕೊರತೆಯನ್ನು ನೀಗಿಸುವ ಬಗ್ಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯ ಸಮಿತಿ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 2016-21ರ ಅವಧಿಯಲ್ಲಿ ಇ. ಚಂದ್ರಶೇಖರನ್ ಕಂದಾಯ ಸಚಿವರಾಗಿದ್ದ ಬಳಿಕ ಜಿಲ್ಲೆಗೆ ಸಚಿವ…

Read More

ಕೇರಳದಲ್ಲೇ ವಿಶಿಷ್ಟ ಆಚರಣೆ: ಚಿತ್ತಾರಿ ಕ್ಷೇತ್ರದಲ್ಲಿ ಪಂಚ ಉತ್ಸವ ಮೂರ್ತಿಗಳ ಬಲಿ ನರ್ತನ

ಕಾಸರಗೋಡು: ಉತ್ತರ ಕೇರಳವು ಧಾರ್ಮಿಕ ಆಚಾರ ವಿಚಾರಗಳಿಗೆ ಪ್ರಸಿದ್ದಿಯನ್ನು ಪಡೆದ ತಾಣವಾಗಿದೆ . ಕೇರಳದಲ್ಲಿ ಮತ್ಯಾವುದೇ ಕ್ಷೇತ್ರದಲ್ಲಿ ಕಾಣ ಸಿಗದ ಪಂಚದೇವರ ಉತ್ಸವ ಮೂರ್ತಿಗಳ ಭೂತ ಬಲಿಯು ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ವಾರಿಕಾಟಪ್ಪನ್ ಮಹಿಷಮರ್ಧಿನಿ ಕ್ಷೇತ್ರದಲ್ಲಿ ನಾವು ಕಾಣುತ್ತೇವೆ . ಪುರಾಣ ಪ್ರಸಿದ್ಧ ಕ್ಷೇತ್ರವನ್ನು ಬ್ರಹ್ಮಶ್ರೀ ಬಾರಿಕ್ಕಾಡುತ್ತಾಯರ ದಿವ್ಯ ಅನುಪಸ್ಥಿಯಲ್ಲಿ ಕ್ಷೇತ್ರ ಕಾರ್ಯಗಳು ನಡೆಯುತ್ತದೆ . ಶ್ರೀ ಮಹಾ ಗಣಪತಿ , ಶ್ರೀ ಧರ್ಮಶಾಸ್ತ್ರ , ಶ್ರೀ ಮಹಾ ವಿಷ್ಣು , ಶ್ರೀ ಮಹಿಷಾಮರ್ಧಿನಿ…

Read More

ಬಿಜೆಪಿ ಕಾರ್ಯಕರ್ತರ ಮಧ್ಯೆ ಗೊಂದಲ ಸೃಷ್ಟಿಸಲು ಯತ್ನ : ಎಂ. ಎಲ್. ಅಶ್ವಿನಿ

​ಕಾಸರಗೋಡು: ಚುನಾವಣಾ ಫಲಿತಾಂಶ ಹೊರಬಂದ ನಂತರ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಬಿಜೆಪಿ ಕಾರ್ಯಕರ್ತರ ಮಧ್ಯೆ ಗೊಂದಲ ಮೂಡಿಸಲು ಮತ್ತು ಅವರನ್ನು ಪ್ರಚೋದಿಸಿ ನಾಡಿನ ಸಾಮುದಾಯಿಕ ಸೌಹಾರ್ದತೆಯನ್ನು ಹಾಳುಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ. ಎಲ್. ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ. ​ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಹೊಂದಿದ್ದ ಕರ್ನಾಟಕದ ಶಾಸಕರ ನೇತೃತ್ವದಲ್ಲಿ ಈ ಬಾರಿ ಅತ್ಯುತ್ತಮ ಚುನಾವಣಾ ಕಾರ್ಯ ಚಟುವಟಿಕೆಗಳು ನಡೆದಿವೆ. ಮಂಜೇಶ್ವರದಲ್ಲಿ ಬಿಜೆಪಿ ಇತಿಹಾಸದಲ್ಲೇ ಅತಿ ಹೆಚ್ಚಿನ…

Read More

ಇಂಧನ ದರ ಏರಿಕೆ ವಿರೋಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಹೋಟೆಲ್ ಬಂದ್ ಮುಷ್ಕರ ಯಶಸ್ವಿ

ಮಂಜೇಶ್ವರ :ವಾಣಿಜ್ಯ ಬಳಕೆಯ ಇಂಧನ ದರವನ್ನು ಸತತವಾಗಿ ಏರಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಕರೆ ನೀಡಿದ್ದ 24 ಗಂಟೆಗಳ ರಾಜ್ಯವ್ಯಾಪಿ ಹೋಟೆಲ್ ಬಂದ್ ಮುಷ್ಕರ ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು ಜಿಲ್ಲೆಯಾದ್ಯಂತ ಹೋಟೆಲ್, ಬೇಕರಿ ಹಾಗೂ ಗೂಡಂಗಡಿಗಳು ಮುಚ್ಚಿದ್ದವು. ​ಪ್ರತಿಭಟನೆಯ ಅಂಗವಾಗಿ ಜಿಲ್ಲಾ ಘಟಕದ ವತಿಯಿಂದ ನಗರದ ಹೊಸ ಬಸ್ ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ನಡೆಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಮುಷ್ಕರಕ್ಕೆ ಚಾಲನೆ ನೀಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ…

Read More

ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಪೂರಕವಾಗಿದೆ: ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ

ಕುಂಬಳೆ: ಸೀನಿಯರ್ ಟೀಚರ್ಸ್ ಆಯೋಜಿಸಿದ ಕ್ರಿಕೆಟ್ ಸೀನಿಯರ್ ಟೀಚರ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟ ಇತ್ತೀಚೆಗೆ ಕುಂಬಳೆ ಶೇಡಿಕಾವು ಮೈದಾನದಲ್ಲಿ ಜರುಗಿತು. ನಿವೃತ್ತ ದೈಹಿಕ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ ಕ್ರೀಡಾ ಕೂಟ ಉದ್ವಾಟಿಸಿ ಮಾತನಾಡಿ ‘ದೈಹಿಕ ಆರೋಗ್ಯದ ಕ್ಷಮತೆಯನ್ನು ಹೆಚ್ಚಿಸುವ ಈ ಅಧ್ಯಾಪಕರ ಪಂದ್ಯಾಟವು ಪ್ರಶಂಸನೀಯವಾಗಿದೆ. ಕ್ರಿಯಾತ್ಮಕ ಕಲಿಕೆಯ ಜೊತೆ ಜೊತೆಗೆ ಮಕ್ಕಳ ಜೊತೆ ಬೆರೆಯುವ ಅಧ್ಯಾಪಕರೆಲ್ಲರು ಒಂದು ಕಡೆ ಒಟ್ಟು ಸೇರಿ ಕ್ರೀಡೆಯಲ್ಲಿ ಭಾಗವಹಿಸುವುದು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಇದು ಪೂರಕವಾಗಿದೆ’ ಎಂದು ನುಡಿದರು….

Read More

ಟಿ. ವಿಮಲ ವಿ. ಪೈ ಮೆಮೋರಿಯಲ್ ಎಸ್.ಎ.ಟಿ ಶಾಲಾ ಶತಮಾನೋತ್ಸವ ಕಟ್ಟಡ ಲೋಕಾರ್ಪಣೆ

ಮಂಜೇಶ್ವರ/ಕಾಸರಗೋಡು: ಶ್ರೀಮತ್ ಅನಂತೆಶ್ವರ ದೇವಳದ ಶಾಲೆಗಳ ವತಿಯಿಂದ ಮಂಜೇಶ್ವರದಲ್ಲಿ ಟಿ. ವಿಮಲ ವಿ. ಪೈ ಅವರ ಸವಿನೆನಪಿನಲ್ಲಿ ನಿರ್ಮಿಸಲಾದ ಮೆಮೋರಿಯಲ್ ಎಸ್.ಎ.ಟಿ ಶಾಲೆಯ ಶತಮಾನೋತ್ಸವ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮವು ಮೇ 3, 2026ರ ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ನೆರವೇರಿತು. ಶಾಲೆಯ ಹಳೆ ವಿದ್ಯಾರ್ಥಿಯೂ ಟಿ . ವಿ . ಮೋಹನ್ ದಾಸ್ ಪೈ ಅವರ ತಾಯಿಯವಾರದ ಟಿ. ವಿಮಲ ವಿ. ಪೈ ಅವರ ಸವಿನೆನಪಿನಲ್ಲಿ ನಿರ್ಮಿಸಲಾದ ಶಾಲಾ ಕಟ್ಟಡವನ್ನು ಶಿಕ್ಷಣಪ್ರೇಮಿ ಟಿ . ವಿ ….

Read More

ಮಂಜೇಶ್ವರದಲ್ಲಿ ಎಲ್‌ಡಿಎಫ್–ಯುಡಿಎಫ್ ರಹಸ್ಯ ಒಪ್ಪಂದ ಆರೋಪ: ಕೆ. ಸುರೇಂದ್ರನ್ ಟೀಕೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಪರಸ್ಪರ ಸಹಾಯ ಮಾಡಿಕೊಂಡಿವೆ ಎಂದು ಕೆ. ಸುರೇಂದ್ರನ್ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು ಕ್ಷೇತ್ರದಲ್ಲಿ ಎಲ್‌ಡಿಎಫ್ ಪಡೆದ ಮತಗಳಲ್ಲಿ ಭಾರಿ ಕುಸಿತ ಕಂಡಿದೆ. ಸುಮಾರು 20,000ಕ್ಕೂ ಹೆಚ್ಚು ಮತಗಳು ಕಳೆದ ಬಾರಿಗಿಂತ ಕಡಿಮೆಯಾಗಿದ್ದು, ಇದು ಯುಡಿಎಫ್‌ಗೆ ಲಾಭ ಮಾಡಿಕೊಡುವ ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಅವರು ಟೀಕಿಸಿದರು. ​ ಮಂಡಲದಲ್ಲಿ ವ್ಯವಸ್ಥಿತವಾಗಿ ಸಾಮುದಾಯಿಕ ಏಕೀಕರಣವನ್ನು ಸೃಷ್ಟಿಸಲಾಗಿದೆ. ಮತಗಳನ್ನು ಕ್ರೋಢೀಕರಿಸಲು ಯೋಜಿತವಾಗಿ ಈ ಪ್ರಯತ್ನ…

Read More
error: Content is protected !!