ಕುಂಬಳೆ ಟೋಲ್ ಪ್ಲಾಝ: ರಹಸ್ಯ ಆರಂಭಕ್ಕೆ ವಿರೋಧ, ಹೋರಾಟ ತೀವ್ರಗೊಳ್ಳುವ ಸೂಚನೆ

ಮಂಜೇಶ್ವರ : ಸೋಮವಾರದಿಂದ ಟೋಲ್ ಪ್ಲಾಝ ಕಾರ್ಯರಂಭಗೊಳ್ಳುವುದೆಂಬ ರಹಸ್ಯ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ಕ್ರಿಯಾ ಸಮಿತಿ ಕಾರ್ಯಕರ್ತರು ಕುಂಬಳೆ ಗ್ರಾ. ಪಂ. ಕಚೇರಿಯಲ್ಲಿ ತುರ್ತು ಸಭೆ ಸೇರಿದರು. ಬಳಿಕ ಟೋಲ್ ಪ್ಲಾಝ ಇರುವಲ್ಲಿಗೆ ತೆರಳಿ ಸೋಮವಾರ ಕಾರ್ಯಾರಂಭಗೊಂಡರೆ ಯಾವುದೇ ಬೆಲೆತೆತ್ತಾದರೂ ತಡೆದು ಪ್ರತಿಭಟಿಸುವುದಾಗಿ ಮುನ್ನೆಚ್ಚರಿಕೆ ನೀಡಿದರು. ಕುಂಬಳೆ ಗ್ರಾ. ಪಂ. ಅಧ್ಯಕ್ಷ ವಿ. ಪಿ. ಅಬ್ದುಲ್ ಖಾದ‌ರ್, ಕಾಸರಗೋಡು ಬ್ಲಾಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಅಝೀಝ್ ಕಳತ್ತೂರು,…

Read More

ಅಪ್ರಾಪ್ತ–ಯುವ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಳ: ಮಂಜೇಶ್ವರದಲ್ಲಿ ಮತ್ತೊಂದು ದಾರುಣ ಘಟನೆ

ಮಂಜೇಶ್ವರ: ಜಿಲ್ಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದೆ. ಕುಂಬಳೆ ಸಮೀಪದ ಮೃಮೂನ ನಗರದಲ್ಲಿ ಪದವಿ ವಿದ್ಯಾರ್ಥಿಯೊಬ್ಬ ಮಲಗುವ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿದ್ದಾನೆ. ಸೀತಾಂಗೋಳಿ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಕುಂಬಳೆ ಮೃಮೂನ ನಗರ ದ ಹುಸೈನಾ‌ರ್ ಎಂಬವರ ಪುತ್ರ ಅಬ್ದುಲ್ ಅನ್ಸಾರ್ ಯಾನೆ ಅಜ್ಜು (19) ಸಾವನ್ನಪ್ಪಿದ ವಿದ್ಯಾರ್ಥಿ.ಕುಟುಂಬ ಮನೆಯಿಂದ ಹೊರಗೆ ತೆರಳಿದ ಸಂದರ್ಭ ಮನೆಯಲ್ಲಿ ಒಬ್ಬನೇ ಇದ್ದ ವೇಳೆ ಈತ ಈ ಕೃತ್ಯ ಎಸಗಿದ್ದಾನೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಸರಗೋಡು…

Read More

ಕಾಸರಗೋಡಿನಲ್ಲಿ ಮಲೆಯಾಳ ಮಸೂದೆಗೆ ವಿರೋಧ: ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಆಗ್ರಹ

ಕಾಸರಗೋಡು: ಜಿಲ್ಲೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳ ವಿಧಾನಸಭೆ ಇತ್ತೀಚೆಗೆ ಅಂಗೀಕರಿಸಿದ ಮಲೆಯಾಳ ಭಾಷಾ ಕಲಿಕೆ ಕಡ್ಡಾಯ ಮಸೂದೆ, ಕಾಸರಗೋಡಿನ ಕನ್ನಡಿಗರಲ್ಲಿ ಆತಂಕ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷಿಕರನ್ನು ಮಸೂದೆಯ ವ್ಯಾಪ್ತಿಯಿಂದ ಹೊರತಾಗಿಸಬೇಕು ಎಂದು ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ಹಾಗೂ ನ್ಯಾಯವಾದಿ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿಲ್ಲೆಯ ಕನ್ನಡಿಗರಿಗೆ ತಮ್ಮ ತಾಯ್ನುಡಿಯಲ್ಲೇ ಶಿಕ್ಷಣ ಪಡೆಯುವ ಹಕ್ಕು ಸಿಗಬೇಕು….

Read More

‘ಮಲೆಯಾಳಿ ಭಾಷಾ ಮಸೂದೆ-2025’ ಜಾರಿಗೆ ಬಂದರೆ ಕನ್ನಡ ಅಸ್ತಿತ್ವಕ್ಕೆ ಕೊಡಲಿ ಏಟು … !

ಗಡಿನಾಡ ಕನ್ನಡಿಗರು ಮತ್ತು ನೆರೆಯ ಕನ್ನಡ ರಾಜ್ಯ ಕರುನಾಡು ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ‘ಮಲೆಯಾಳಿ ಭಾಷಾ ಮಸೂದೆ-2025’ ನ್ನು ಜಾರಿಗೊಳಿಸುವುದನ್ನು ಒಗ್ಗಟ್ಟಾಗಿ ವಿರೋಧಿಸದಿದ್ದರೆ ಕನ್ನಡ ಭಾಷೆಯ ಅಸ್ತಿತ್ವಕ್ಕೆ ದೊಡ್ಡ ಕಂಟಕವೇ ಎದುರಾಗಲಿದೆ . ಕನ್ನಡ ನೆಲವಾಗಿದ್ದ ಕಾಸರಗೋಡು ದುರಂತವಾಗಿ ಕೇರಳಕ್ಕೆ ಸೇರಿದ್ದು , ಇಲ್ಲಿನ ಕನ್ನಡಿಗರು ದಿನ ನಿತ್ಯ ಕಾನೂನು ವೃತ್ತಿಗೆ ಸಮಂಧಿಸಿ ಹತ್ತಾರು ಸಮಸ್ಯೆಯನ್ನು ಎದುರಿಸುತ್ತಿರುವುದು, ನಿನ್ನೆ ಮೊನ್ನೆಯ ಮಾತೇನು ಅಲ್ಲ . ಇದೀಗ ಇಲ್ಲಿನ ಕನ್ನಡ ಶಾಲೆಗಳ ಅಸ್ತಿತ್ವವನ್ನೇ ಬುಡ ಮೇಲು ಮಾಡುವ ಕ್ರಮವನ್ನು…

Read More

ಸಾಹಿತಿ, ಶ್ರೇಷ್ಠ ಸಂಘಟಕ ಶ್ರೀ ಇರಾ ನೇಮು ಪೂಜಾರಿ ಯವರೀಗೆ ಕನ್ನಡ ಭವನದ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ 2026.ಕ್ಕೆ ಆಯ್ಕೆ

ಸಾಹಿತಿ, ಕವಿಯಾಗಿ, ಜನಮೆಚ್ಚಿದ ಸಂಘಟಕರಾಗಿ, ಕೃತಿ ಕರ್ತ ರಾಗಿ ಕನ್ನಡದ ಕಾಯಕವೇ ಉಸಿರಾಗಿರುವ ಮಂಗಳೂರಿನ ಶ್ರೀ ಇರಾ ನೇಮು ಪೂಜಾರಿಯವರೀಗೆ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ 18.01.2026ಭಾನುವಾರ ದಂದು ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ ವೇದಿಕೆಯಲ್ಲಿ ನಡೆಯಲಿರುವ “ನಾಡು -ನುಡಿ ಹಬ್ಬ “ಕಾರ್ಯಕ್ರಮ ದಲ್ಲಿ ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಯಾದ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ 2026.ನೀಡಿ ಗೌರವಿಸಲಿದೆಯೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ…

Read More

ಮಲಯಾಳಂ ಕಡ್ಡಾಯ ಭಾಷಾ ಮಸೂದೆ ಚರ್ಚೆಯಲ್ಲಿ ಭಾಗವಹಿಸದ ಮಂಜೇಶ್ವರ ಶಾಸಕರ ಬೇಜವಾಬ್ದಾರಿ ತನ ಖಂಡನಿಯ-ಆದರ್ಶ ಬಿ ಎಂ

ಮಂಜೇಶ್ವರ:ಮಲಯಾಳಂ ಕಡ್ಡಾಯ ಭಾಷಾ ಮಸೂದೆ ಜಾರಿ ಮಾಡಲು ಹೊರಟಿರುವ ಎಡರಂಗ ಸರಕಾರದ ನೀತಿ ಭಾಷಾ ಅಲ್ಪಸಂಖ್ಯಾಕರ ಮೇಲಿನ ದಬ್ಬಾಳಿಕೆ ಮಾತ್ರವಲ್ಲ ಗಡಿನಾಡು ಭಾಷಾ ಅಲ್ಪಸಂಖ್ಯಾಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯು ಆಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.ಮಲಯಾಳಂ ಕಡ್ಡಾಯ ಮಸೂದೆ ಚರ್ಚೆ ದಿನ ಅಧಿವೇಶನದಲ್ಲಿ ಭಾಗವಹಿಸದ ಮಂಜೇಶ್ವರ ಶಾಸಕರ ನಡೆ ಬೇಜವಾಬ್ದಾರಿತನದ ಪರಮಾವಾದಿ ಇದು ಖಂಡನಿಯ..ಮಾತ್ರವಲ್ಲ ಕನ್ನಡ ವಿರೋಧಿ ನೀತಿ ಕೂಡ ಆಗಿದೆ ಎಂದು ಆದರ್ಶ ಬಿ ಎಂ ಶಾಸಕರ ನಡೆಯನ್ನು…

Read More

ಪ್ರಸಿದ್ಧ ನಿರೂಪಕಿ, ಮಾಧ್ಯಮ ಕ್ಷೇತ್ರದ ಮಿನುಗುತಾರೆ, ಬಹುಮುಖ ಪ್ರತಿಭೆ ಡಾ. ಪ್ರಿಯಾ ಹರೀಶ್ ರೀಗೆ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ಕ್ಕೆ ಆಯ್ಕೆ.

ಪ್ರಸಿದ್ಧ ನಿರೂಪಕಿ, ಮಾಧ್ಯಮ ಕ್ಷೇತ್ರದ ಮಿನುಗುತಾರೆ, ಬಹುಮುಖ ಪ್ರತಿಭೆ ಡಾ. ಪ್ರಿಯಾ ಹರೀಶ್ ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.”ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಮಂಜೇಶ್ವರ ಒಳಪೇಟೆ: ರೈಲ್ವೇ ನಿಲ್ದಾಣ ಮಾರ್ಗದಲ್ಲಿ ಶೌಚಾಲಯದ ಕೊಳಕು ನೀರು ಹರಿದು ದುರ್ಗಂಧ; ಸಾಂಕ್ರಾಮಿಕ ರೋಗ ಭೀತಿ

ಮಂಜೇಶ್ವರ : ಮಂಜೇಶ್ವರ ಒಳ ಪೇಟೆಯ ರೈಲ್ವೇ ನಿಲ್ದಾಣಕ್ಕೆ ಸಾಗುವ ಹಾಗೂ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುವ ಶೆಡ್ ಪಕ್ಕದಲ್ಲೇ ವಾಣಿಜ್ಯ ವಸತಿ ಸಮುಚ್ಚಯಗಳಿಂದ ಹರಿದು ಬರುತ್ತಿರುವ ಶೌಚಾಲಯದ ಕೊಳಕು ನೀರು ಕಟ್ಟಿ ನಿಂತಿದ್ದು ಇದರ ದುರ್ಗಂಧದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡ ಬೇಕಾದ ದುಸ್ಥಿತಿ ಎದುರಾಗಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ. ಇಲ್ಲಿಗೆ ಸಮೀಪವೇ ಇರುವ ವಾಣಿಜ್ಯ ವಸತಿ ಸಮುಚ್ಚಯಗಳಲ್ಲಿ ಕೊಳಕು ನೀರು ಶೇಖರಣೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸದೆ ಬೇಕಾಬಿಟ್ಟಿಯಾಗಿ ಈ ದುರ್ಗಂಧದ ನೀರನ್ನು ಸಾರ್ವಜನಿಕ ಸ್ಥಳಕ್ಕೆ…

Read More

ಪೈವಳಿಕೆ: ಯುಡಿಎಫ್ ಆಡಳಿತದ ಪಂಚಾಯತಿನಲ್ಲಿ ಬಿಜೆಪಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪದವಿ ದಾನ

ಪೈವಳಿಕೆ: ಪೈವಳಿಕೆ ಗ್ರಾ. ಪಂ. ನ ಸ್ಥಾಯೀ ಸಮಿತಿ ಅಧ್ಯಕ್ಷರುಗಳ ಆಯ್ಕೆಯಲ್ಲಿ ಮುಸ್ಲಿಂ ಲೀಗ್, ಕಾಂಗ್ರೆಸ್ ಪ್ರತಿನಿಧಿಗಳು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಆರಿಸುವ ಮೂಲಕ ಕೋ. ಲಿ. ಬಿ ಮೖತ್ರಿ ಬಹಿರಂಗವಾಗಿ ಬೆಳಕಿಗೆ ಬಂದಿದೆ ಎಂದು ಸಿಪಿಐಎಂ ಆರೋಪಿಸಿದೆ.ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಯುಡಿಎಫ್-9, ಎಡರಂಗ-6, ಬಿಜೆಪಿ-5ಹಾಗೂ 1ಪಕ್ಷೇತರ ಎಂಬಂತೆ ಪೖವಳಿಕೆಯಲ್ಲಿ ಬಲಾಬಲವಿದೆ. ಇದರಂತೆ ಯುಡಿಎಫ್ ಆಡಳಿತ ನಡೆಸುವ ಪಂಚಾಯತಿನಲ್ಲಿ ಎರಡು ಪ್ರಮುಖ ಸ್ಥಾಯೀ ಸಮಿತಿ ಅಧ್ಯಕ್ಷ ಹುದ್ದೆಗಳನ್ನು ಬಿಜೆಪಿಗೆ ಯುಡಿಎಫ್ ದಾನ ಮಾಡಿದ್ದು, ಇದು…

Read More

ಉತ್ತರ ಕನ್ನಡ ಜಿಲ್ಲೆಯ ಭಾವಕವಿ ಲೇಖಕ, ಗಾಯಕ ಉಮೇಶ್ ಮುಂಡಳ್ಳಿ, ರೀಗೆ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ಗೆ ಆಯ್ಕೆ.

ಉತ್ತರ ಕನ್ನಡ ಜಿಲ್ಲೆಯ ಭಾವಕವಿ ಲೇಖಕ, ಗಾಯಕ ಉಮೇಶ್ ಮುಂಡಳ್ಳಿ ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.”ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More
error: Content is protected !!