ಬಸ್ಸಿನಲ್ಲೇ ಕುಸಿದು ಬಿದ್ದ ಮಹಿಳೆ ಸಾವು: ಮೃತರ ಗುರುತು ಪತ್ತೆಗೆ ಪೊಲೀಸರ ಮೊರೆ

ಮಂಜೇಶ್ವರ:ಮಂಗಳೂರು-ಕಾಸರಗೋಡು ಕೆಎಸ್ಸಾರ್ಟೀಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಮಹಿಳೆಯೊಬ್ಬರು ಚಲಿಸುವ ಬಸ್ಸಿನಲ್ಲೇ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ​ಮಂಗಳೂರಿನಿಂದ ಹೊರಟಿದ್ದ ಸಾರಿಗೆ ಬಸ್ಸನ್ನು ಇವರು ಕೈಕಂಬ ಎಂಬಲ್ಲಿ ಹತ್ತಿದ್ದರು. ಕಾಸರಗೋಡಿಗೆ ಟಿಕೆಟ್ ಪಡೆದಿದ್ದ ಇವರು, ಬಸ್ ಕುಂಬಳೆ ತಲುಪುವಷ್ಟರಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಹಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿ ಇವರನ್ನು ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ​ಮೃತ ಮಹಿಳೆಯ ಬಳಿ ಯಾವುದೇ…

Read More

ಕುಂಬಳೆ ಪೆರಾಲ್‌ನಲ್ಲಿ ಕಾಣಿಸಿಕೊಂಡ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡುವ ಫ್ಲಕ್ಸ್ ಬೋರ್ಡ್

ವಿಧಾನಸಭಾ ಚುನಾವಣೆ ದಿನಾಂಕ ಹತ್ತಿರ ಬಂದಂತೆ ಮಂಜೇಶ್ವರದಲ್ಲಿ ಹೊಸ ತಿರುವು , ವಿವಾದಗಳು ಸಮಸ್ಯೆಗಳು ಹೊರಬರುತ್ತಿದೆ.ಯುಡಿಎಫ್‌ನ ಶಕ್ತಿ ಕೇಂದ್ರವೆಂದು ಕರೆಯಲ್ಪಡುವ ಕುಂಬಳೆ ಗ್ರಾಮ ಪಂಚಾಯತ್‌ನ ಪೆರಾಲ್‌ನಲ್ಲಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡುವ ಫ್ಲಕ್ಸ್ ಬೋರ್ಡ್ ಕಾಣಿಸಿಕೊಂಡಿದೆ. ಫ್ಲಕ್ಸ್ ಬೋರ್ಡ್ ನ್ನು ಕಳೆದ ದಿನ ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ ವಾರ್ಡ್ ವಿಭಾಗದಲ್ಲಿ ಪೆರಾಲ್ ವಾರ್ಡ್‌ನಿಂದ ಸುಮಾರು 70 ಮನೆಗಳನ್ನು ಬೇರ್ಪಡಿಸಿರುವುದನ್ನು ವಿರೋಧಿಸಿ ಫ್ಲಕ್ಸ್ ಬೋರ್ಡ್‌ ಮೂಲಕ ಚುನಾವಣೆಯನ್ನು ಬಹಿಷ್ಕರಿಸಲು ಕರೆ…

Read More

ಬದಿಯಡ್ಕ–ಕುಂಬಳೆ ರಸ್ತೆಯಲ್ಲಿ ಕೋಳಿ ತ್ಯಾಜ್ಯ ಕಸ: ಸಾರ್ವಜನಿಕರಿಗೆ ತೀವ್ರ ತೊಂದರೆ

ಬದಿಯಡ್ಕ ಕುಂಬಳೆ ರಸ್ತೆ ಹಾದುಹೋಗುವ ನೈಫ್ ಜಂಕ್ಷನ್‌ ಬಸ್ ಸ್ಟಾಪ್ ಬಳಿ, ಕೋಳಿ ತ್ಯಾಜ್ಯ ಸೇರಿದಂತೆ ದುರ್ವಾಸನೆ ಬೀರುವ ಕಸವನ್ನು ರಸ್ತೆಬದಿಯಲ್ಲಿ ಸುರಿಯಲಾಗಿದ್ದು, ಪ್ರಯಾಣಿಕರು ಮತ್ತು ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭಯ ಸ್ಥಳೀಯರಲ್ಲಿದೆ. ಸಾಮಾಜಿಕ ಕಾರ್ಯಕರ್ತರಾದ ಹ್ಯಾರಿಸ್ ಬಿಡಿಕೆ, ರಫೀಕ್ ಆರ್‌ಕೆ, ಮುಹಮ್ಮದ್ ಅಲಿ ಪೆರ್ಡಾಲ ಹಾಗೂ ಅಶ್ರಫ್ ಲಿಟಲ್ ಡ್ರೀಮ್ಸ್ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Read More

ಮಂಜೇಶ್ವರದಲ್ಲಿ ಯುಡಿಎಫ್ ಪಂಚಾಯತ್ ಸಮಾವೇಶಗಳು ಪೂರ್ಣ

ಮಂಜೇಶ್ವರದ ಚುನಾವಣಾ ಗೆಲುವಿಗಾಗಿ ಆಯೋಜಿಸಲಾದ ಪಂಚಾಯತ್ ಸಮಾವೇಶಗಳು ಪೂರ್ಣಗೊಂಡಿವೆ. ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರ ಚುನಾವಣೆಯ ಗೆಲುವಿಗಾಗಿ ಆಯೋಜಿಸಲಾದ ಪಂಚಾಯತ್ ಸಮಾವೇಶಗಳು ಪೂರ್ಣಗೊಂಡಿವೆ.ಇದರೊಂದಿಗೆ, ಪ್ರಚಾರವು ಎರಡನೇ ಹಂತವನ್ನು ತಲುಪಿದೆ. ಮಂಜೇಶ್ವರ ಪಂಚಾಯತ್ ಸಮಾವೇಶವನ್ನು ಕರ್ನಾಟಕ ಗೇರು ನಿಗಮದ ಅಧ್ಯಕ್ಷರಾದ ಶ್ರೀಮತಿ ಮಮತಾ ಗಟ್ಟಿ ಉದ್ಘಾಟಿಸಿದರು.ಯುಡಿಎಫ್ ಪಂಚಾಯತ್ ಅಧ್ಯಕ್ಷ ಹಝಿಜ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.ಸಂಚಾಲಕ ಹನೀಫ್ ಪಡಿ0ಜಾರ್ ಸ್ವಾಗತಿಸಿದರು. ಮಂಜುನಾಥ ಆಳ್ವ, ಹಝಿಜ್ ಮೇರಿಕೆ, ಸೋಮ ಶೇಖರ್, ಡಿಎಂಕೆ ಮುಹಮ್ಮದ್, ಲಕ್ಷ್ಮಣ್ ಪ್ರಭು, ಟಿ.ಎ. ಮೂಸಾ, ಎಂ.ಅಬ್ಬಾಸ್,…

Read More

​ಮರಳು ಮಾಫಿಯಾಗಳಿಗೆ ಪೊಲೀಸರ ‘ಸಿಂಹಸ್ವಪ್ನ’: ಗಡಿಪಾರು ಮತ್ತು ಜೈಲು ಶಿಕ್ಷೆಯ ಎಚ್ಚರಿಕೆ

​ಮಂಜೇಶ್ವರ: ಅನಧಿಕೃತ ಮರಳು ಸಾಗಾಟ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕುಂಬಳೆ ಪೊಲೀಸರು ಯುದ್ಧ ಘೋಷಿಸಿದ್ದು, ಕಠಿಣ ‘ಕಾಪಾ’ ಕಾಯ್ದೆಯಡಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಪಾಚಾಣಿ, ಉಳುವಾರು ಸೇರಿದಂತೆ ವಿವಿಧ ಹೊಳೆಗಳಿಂದ ಅವಿರತವಾಗಿ ನಡೆಯುತ್ತಿರುವ ಮರಳು ಲೂಟಿಯನ್ನು ತಡೆಯಲು ಇನ್ಸ್‌ಪೆಕ್ಟರ್ ಬೈಜು ಕೆ. ಥೋಮಸ್ ನೇತೃತ್ವದ ತಂಡ ಈ ಮುನ್ನೆಚ್ಚರಿಕೆ ನೀಡಿದೆ. ​ದಂಧೆಕೋರರನ್ನು ಕೇವಲ ಬಂಧಿಸುವುದಷ್ಟೇ ಅಲ್ಲದೆ, ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು. ಒಂದು ವೇಳೆ ಗಡಿಪಾರು ಆದೇಶ ಉಲ್ಲಂಘಿಸಿದರೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲು…

Read More

ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಕನಿಲ: ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಏಪ್ರಿಲ್ 18ರಿಂದ 23ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ಏಪ್ರಿಲ್ 26ರಿಂದ ಮೇ 3ರವರೆಗೆ ಭರಣಿ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಇಂದು ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು. ಅಸ್ತ್ರ ಗ್ರೂಪ್ ಮಾಲಕ, ನಿರ್ಮಾಪಕ ಹಾಗೂ ನಟ ಲಂಚುಲಾಲ್ ಕೆ.ಎಸ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ಕುದುರು, ಜೀರ್ಣೋದ್ಧಾರ ಸಮಿತಿಯ…

Read More

ಉದ್ಯಾವರದಲ್ಲಿ ಜೈ ವೀರ ಮಾರುತಿ ವ್ಯಾಯಾಮಶಾಲೆಯ 31ನೇ ಭಜನೋತ್ಸವ

ಉದ್ಯಾವರ: ಶ್ರೀ ಅರಸು ಮಂಜಿಷ್ಣಾರ್ ಕೃಪಾ ಜೈ ವೀರ ಮಾರುತಿ ವ್ಯಾಯಾಮಶಾಲೆಯ ವತಿಯಿಂದ 31ನೇ ವಾರ್ಷಿಕ ಭಜನೋತ್ಸವವು ಮಾರ್ಚ್ 28 ಮತ್ತು 29ರಂದು ಭಕ್ತಿಭಾವದಿಂದ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.ಮಾರ್ಚ್ 28ರಂದು ಸಂಜೆ 6:40ಕ್ಕೆ ಶ್ರೀ ಶಂಭು ನಂಬೂದಿರಿ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಭಕ್ತಿಗೀತೆಗಳೊಂದಿಗೆ ಭಜನೆ ನಡೆಯಲಿದೆ. ಮಾರ್ಚ್ 29ರಂದು ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತರಿಗೆ ಪ್ರಸಾದ…

Read More

ಮಲಯಾಳಂ ಭಾಷಾ ಮಸೂದೆ ತಿದ್ದುಪಡಿಗೆ ಆಗ್ರಹ: ಕಾಸರಗೋಡಿನಲ್ಲಿ ದುಂಡುಮೇಜಿನ ಪರಿಷತ್ತು

ಕಾಸರಗೋಡು: ಮಲಯಾಳಂ ಭಾಷಾ ಮಸೂದೆ–2025ರಲ್ಲಿ ಕನ್ನಡ ಭಾಷಾ ಅಲ್ಪಸಂಖ್ಯಾತರನ್ನು ಒಳಗೊಳ್ಳುವಂತೆ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಮಾರ್ಚ್ 28ರಂದು ದುಂಡುಮೇಜಿನ ಪರಿಷತ್ತು ನಡೆಯಲಿದೆ. ಕೇರಳ ಸರ್ಕಾರದ ಮಲಯಾಳಂ ಭಾಷಾ ಮಸೂದೆಗೆ ಸಂಬಂಧಿಸಿದಂತೆ ಕನ್ನಡಿಗರ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಕಾಸರಗೋಡು ಭಾಗದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಒಗ್ಗೂಡಿ ಮನವಿಯನ್ನು ಸಿದ್ಧಪಡಿಸಿ, ಸಹಿ ಸಂಗ್ರಹ ಅಭಿಯಾನ ಆರಂಭಿಸಲು ತೀರ್ಮಾನಿಸಲಾಗಿದೆ. ಮುಂದಿನ ಕೇರಳ ವಿಧಾನಸಭಾ ಚುನಾವಣೆಯ ಬಳಿಕ ಆಯ್ಕೆಯಾಗುವ…

Read More

ಕಾಸರಗೋಡಿನಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ: ಮಾರ್ಚ್ 28ರಂದು ಮಕ್ಕಳ ಕಲರವ

ಕಾಸರಗೋಡು: ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುತ್ತಾ ಬಂದಿರುವ ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾರ್ಚ್ 28ರಂದು ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯೋತ್ಸವ ಜರಗಲಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ನೇತೃತ್ವದಲ್ಲಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಈ ಉತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಸಂಜೆ 4 ಗಂಟೆಗೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಸಚಿನ್…

Read More

ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ; ಹೋಟೆಲ್ ಕಾರ್ಮಿಕ ಸಾವು

​ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಹೊಸಂಗಡಿ ಎಕ್ಸಿಟ್ ಪಾಯಿಂಟ್ ಬಳಿ ಗುರುವಾರ ಮಧ್ಯಾಹ್ನ ಟಿಪ್ಪರ್ ಲಾರಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಉಪ್ಪಳ ನಯಾಬಜಾರ್‌ನ ಯು.ಕೆ. ಫ್ಲಾಟ್ ನಿವಾಸಿ ಇಮಾನುಲ್ಲಾ (19) ಸಾವನ್ನಪ್ಪಿದ ದುರ್ದೈವಿ.ಮೃತ ಯುವಕ ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವನಾಗಿದ್ದು, ಸ್ಥಳೀಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಹೊಸಂಗಡಿ ಜಂಕ್ಷನ್ ಬಳಿ ಚಲಿಸುತ್ತಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಬೈಕ್ ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಮಾನುಲ್ಲಾ ಅವರನ್ನು ತಕ್ಷಣ…

Read More
error: Content is protected !!