ಮಂಜೇಶ್ವರದ ಎಡನೀರು ಬಯರಮೂಲೆ ಮಕ್ಕಾಕೋಡನ್ ತರವಾಡ್‌ನಲ್ಲಿ ಕಳ್ಳತನ: ಲಕ್ಷಾಂತರ ಮೌಲ್ಯದ ಚಿನ್ನ–ಬೆಳ್ಳಿ , ನಗದು ಕಳವು

ಮಂಜೇಶ್ವರ: ಎಡನೀರು ಬಯರಮೂಲೆ ಮಕ್ಕಾಕೋಡನ್ ತರವಾಡ್‌ನಲ್ಲಿ ಕಳ್ಳರು ಬಾಗಿಲಿನ ಬೀಗ ಒಡೆದು ಒಳನುಗ್ಗಿ ದೈವಕ್ಕೆ ಅರ್ಪಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ಕಳವುಗೈದಿದ್ದಾರೆ. ಸುಮಾರು 1.70 ಲಕ್ಷ ರೂ. ಮೌಲ್ಯದ ಚಿನ್ನ, 2 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ನಾಣ್ಯಗಳು, ಜೊತೆಗೆ 3,360 ರೂ. ನಗದು ಕಳ್ಳತನವಾಗಿದೆ. ಅಲ್ಲದೆ ಮೂರು ಕಾಣಿಕೆ ಹುಂಡಿಗಳನ್ನು ಒಡೆದು ಅದರಲ್ಲಿದ್ದ ಹಣವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ತರವಾಡಿನ ಸದಸ್ಯ ಬಿ. ಬಾಲಕೃಷ್ಣ ಅವರ ದೂರಿನ…

Read More

ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರಿನಲ್ಲಿ ದ್ವಿದಿನ ಸಹವಾಸ ಶಿಬಿರ

ಕಳತ್ತೂರು: ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರಿನಲ್ಲಿ ಹೊಂಗಿರಣ ದ್ವಿದಿನ ಸಹವಾಸ ಶಿಬಿರವು ಜರಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಬಳೆ ಗ್ರಾಮ ಪಂಚಾಯತ್ ಸದಸ್ಯರಾದ ಸುಕೇಶ್ ಭಂಡಾರಿ ಯವರು ನೆರವೇರಿಸಿದರು. ಪಿಟಿಎ ಅಧ್ಯಕ್ಷರಾದ ವಸಂತ ಚೂರಿತಡ್ಕ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಗಣೇಶ್ ರಾವ್, ಎಂಪಿಟಿಎ ಅಧ್ಯಕ್ಷೆ ಸುಧಾ ಟೀಚರ್,ಉಪಾಧ್ಯಕ್ಷರಾದ ಸುರೇಶ್ ಕೆಮ್ಮಣ್ಣು, ಶಶಿಕಲಾ ,ಶಾಲಾ ಹಿರಿಯ ಶಿಕ್ಷಕಿ ಭಾರತಿ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಯರಾದ ಬಾಲಕೃಷ್ಣ ಆಚಾರ್ಯ ಸ್ವಾಗತಿಸಿ,ಶಿಕ್ಷಕ ಪುಷ್ಪರಾಜ್ ಶೆಟ್ಟಿ ವಂದಿಸಿದರು.ಉಮೇಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.

Read More

ಕಾಸರಗೋಡು ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಇಮೇಲ್ ಮೂಲಕ ಸಂದೇಶ, ಬಾಂಬ್ ಸ್ಕ್ಯಾಡ್ ಶೋಧ

ಕಾಸರಗೋಡು: ವಿದ್ಯಾನಗರದಲ್ಲಿರುವ ಕಾಸರಗೋಡು ನ್ಯಾಯಾಲಯ ಸಮುಚ್ಛಯಕ್ಕೆ ಗುರುವಾರ ಬೆಳಿಗ್ಗೆ ಇಮೇಲ್ ಸಂದೇಶದ ಮೂಲಕ ಯಾರೋ ಬಾಂಬ್ ಬೆದರಿಕೆಯೊಡ್ದಿದ್ದಾರೆ.ಈ ಬಗ್ಗೆ ಆಧಿಸಿದ ಮಾಹಿತಿಯಂತೆ ವಿದ್ಯಾನಗರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಆರಂಭಿಸಿದ್ದಾರೆ. ಶೋಧ ಕಾರ್ಯಾಚರಣೆಗಾಗಿ ಬಾಂಬ್ ಸ್ಕ್ಯಾಡ್ ಮತ್ತು ಶ್ವಾನದಳವನ್ನು ಉಪಯೋಗಿಸಲಾಗಿದೆ. ನ್ಯಾಯಾಲಯದೊಳಗೆ ರಿಮೋಟ್ ಕಂಟ್ರೋಲ್ ಚಾಲಿತ ಐಇಡಿ ಬಾಂಬ್ ಇರಿಸಲಾಗಿದೆ ಎಂದೂ, ಗುರುವಾರ ಮಧ್ಯಾಹ್ನ 1ರಿಂದ 2 ಗಂಟೆಯೊಳಗಾಗಿ ಅದು ಸ್ಪೋಟಗೊಳ್ಳುವುದಾಗಿ ಇಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ವಿಷಯ ಗಮನ ಬಂದ ನ್ಯಾಯಾಲಯದ ಅಧಿಕಾರಿಗಳು ತಕ್ಷಣ…

Read More

ನಾಡು ಹೊರಗಟ್ಟಿದ್ದ ಕಾಪಾ ಆರೋಪಿ ಮಂಜೇಶ್ವರಕ್ಕೆ ಮರಳಿದ ಪ್ರಕರಣ: ಮರುಬಂಧನ

ಮಂಜೇಶ್ವರ: ಕಾಪಾ ಕಾಯ್ದೆಯಡಿ ಬಂಧಿಸಿ ನಾಡು ಹೊರಗಟ್ಟಲಾಗಿದ್ದ ಪ್ರಕರಣದ ಆರೋಪಿ ಮತ್ತೆ ಪ್ರದೇಶಕ್ಕೆ ಮರಳಿದ್ದಾನೆ. ಪೊಲೀಸರು ಅವನನ್ನು ಮರುಬಂಧಿಸಿ ಜೈಲಿಗಟ್ಟಿದ್ದಾರೆ.ಪಾವೂರು ನಿವಾಸಿ ಅಬ್ದುಲ್ ಬಶೀರ್ (38) ಎಂಬಾತನನ್ನು ಮಂಜೇಶ್ವರಂ ಪೊಲೀಸರು ಬಂಧಿಸಿ ನ್ಯಾಯಾಲಯದ ಆದೇಶದಂತೆ ಜೈಲಿಗೆ ರವಾನಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಶೀರ್‌ಗೆ ಕಾಪಾ ಕಾಯ್ದೆಯಡಿ ಕಾಸರಗೋಡು ಜಿಲ್ಲೆಗೆ ಮೂರು ತಿಂಗಳು ಪ್ರವೇಶಿಸಬಾರದು ಎಂದು ಪೊಲೀಸರು ನಾಡು ಹೊರಗಟ್ಟಿದ್ದರು.ಆದರೆ ಇತ್ತೀಚೆಗೆ ರಾತ್ರಿ ಸಮಯದಲ್ಲಿ ಪೊಲೀಸರು ನಡೆಸಿದ ತಪಾಸಣೆಯ ವೇಳೆ ಪಾವೂರಿನಲ್ಲಿ ಬಶೀರ್ ಪತ್ತೆಯಾಗಿದ್ದು, ತಕ್ಷಣವೇ ಅವನನ್ನು ವಶಕ್ಕೆ…

Read More

ಉಪ್ಪಳ: ಪರಂಬಳ ಕಯ್ಯಾರುವಿನಲ್ಲಿ ದುರ್ಗಾ ಶಕ್ತಿ ಕುಣಿತ ಭಜನಾ ತಂಡದ ಭಜನಾ ತರಬೇತಿ ಕಮ್ಮಟ ಸಮಾರೋಪ

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮಂಜೇಶ್ವರ ತಾಲೂಕು ಇದರ ಸಹಯೋಗದಲ್ಲಿ ನಡೆದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭವು ಪರಂಬಳ ಕಯ್ಯಾರು ಶ್ರೀ ಭಾರತ ಮಾತ ಸೇವಾ ಟ್ರಸ್ಟಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು .ಸಭೆಯ ಅಧ್ಯಕ್ಷತೆ ಯನ್ನು ಶ್ರೀ ಸುರೇಶ್ ಶೆಟ್ಟಿ ಹೇರೂರು ಅಧ್ಯಕ್ಷರು ಭಜನಾ ತರಬೇತಿ ಕಮ್ಮಟ ಸಮಿತಿ ಪರಂಬಳ ಕಯ್ಯಾರು ಇವರು ವಹಿಸಿದರು . ಧಾರ್ಮಿಕ…

Read More

ಮಂಜೇಶ್ವರ: ನಾಲ್ಕು ದಶಕಗಳಿಂದ ಹಾವುಗಳ ರಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ‘ಸ್ನೇಕ್ ಸುರೇಶ್’

ಮಂಜೇಶ್ವರ ತಾಲೂಕಿನ ಕುಂಬಳೆ ಕಂಚಿಕಟ್ಟೆ ನಿವಾಸಿ ಸುರೇಶ್, ಕಳೆದ ನಾಲ್ಕು ದಶಕಗಳಿಂದ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ಅಪರೂಪದ ಸೇವೆ ಸಲ್ಲಿಸುತ್ತಿದ್ದಾರೆ. ಸ್ನೇಕ್ ಸುರೇಶ್ ಎಂದೇ ಜನಪ್ರಿಯರಾಗಿರುವ ಇವರು, ಇದುವರೆಗೆ ಸುಮಾರು ಮೂರುವರೆ ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ದಾಖಲೆಯೊಂದನ್ನು ನಿರ್ಮಿಸಿದ್ದಾರೆ.ಈವರೆಗೆ ಹಿಡಿದ ಹಾವುಗಳ ಪೈಕಿ ನಾಗರಹಾವುಗಳೇ ಅಧಿಕ ಎಂದು ಸುರೇಶ್ ತಿಳಿಸುತ್ತಾರೆ. ವಿಶೇಷವಾಗಿ ಕುಂಬಳೆ–ಬದಿಯಡ್ಕ ಪರಿಸರದಲ್ಲಿ ನಾಗರಹಾವುಗಳ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ನಿಖರ ಕಾರಣವೇನು ಎಂಬುದು ನನಗೂ ತಿಳಿದಿಲ್ಲ ಎಂದು ಅವರು ಹೇಳುವ…

Read More

ಕಾಸರಗೋಡು ಗಡಿನಾಡು ಕನ್ನಡಿಗರ ಸಮಸ್ಯೆ ಹಾಗೂ ಮಲಯಾಳಂ ಭಾಷಾ ಬಿಲ್–2025 ವಿರೋಧಿಸಿ ಕೇರಳ ರಾಜ್ಯಪಾಲರ ಭೇಟಿ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು ಕರ್ನಾಟಕ ಸರ್ಕಾರದ ಪ್ರಾಧಿಕಾರವಾಗಿದ್ದು, ರಾಜ್ಯದ ಹೊರಗಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರದ ಹಿತಾಸಕ್ತಿಯಿಂದ, ಗಮನಿಸುವುದಾದರೆ ಇತ್ತೀಚೆಗೆ ಕೇರಳ ವಿಧಾನಸಭೆಯಲ್ಲಿ “ಮಲಯಾಳಂ ಭಾಷಾ ಬಿಲ್-2025” ಎಂಬ ಬಿಲ್ಲನ್ನು ಅಂಗೀಕರಿಸಿದೆ. ಈಗಾಗಲೇ ಇಂತಹ ಬಿಲ್ಲನ್ನು 2017 ರಲ್ಲಿ ಭಾರತದ ಮಾನ್ಯ ರಾಜ್ಯಪತಿಗಳು ಈಗಾಗಲೇ ತಿರಸ್ಕರಿಸಿದ್ದಾರೆ. ಕೇರಳ ಸರ್ಕಾರದಿಂದ ಪ್ರಸ್ತಾಪಿತ ಬಿಲ್ಲು ಸಂಪೂರ್ಣ ಅಸಂವಿಧಾನಿಕವಾಗಿದೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹಳ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿರುವ…

Read More

ತಲಪಾಡಿಯಲ್ಲಿ ಬಸ್‌ಗೆ ಕಲ್ಲೆಸೆದ ಪ್ರಕರಣ: ಕೇಸು ದಾಖಲಾದ ಬಳಿಕ ಪ್ರಯಾಣಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ : ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕನೊಬ್ಬ ಮನೋವ್ಯಥೆಯಿಂದ ಬಸ್‌ಗೆ ಕಲ್ಲೆಸೆದು ಪೊಲೀಸರು ಕೇಸು ದಾಖಲಿಸಿದ ಬಳಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಯಾಣಿಕನಾದ ಉಪ್ಪಳದಲ್ಲಿ ವಾಸವಾಗಿರುವ ಅಬ್ದುಲ್ ಹಮೀದ್ ಎಂಬಾತನು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆ ಮಾರ್ಗವಾಗಿ ಬಂದ ನಾಲ್ಕು ಸಾರಿಗೆ ಬಸ್ಸುಗಳು ನಿಲುಗಡೆ ನೀಡದೆ ತೆರಳಿದ ಕಾರಣ ಅಸಮಾಧಾನಗೊಂಡಿದ್ದಾನೆ ಎನ್ನಲಾಗಿದೆ. ಕೊನೆಯದಾಗಿ ಬಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗೂ ನಿಲುಗಡೆ ನೀಡದ ಹಿನ್ನೆಲೆಯಲ್ಲಿ ಅಬ್ದುಲ್ ಹಮೀದ್ ಕಲ್ಲೆಸೆದಿದ್ದು,…

Read More

ಪ್ರಾಧ್ಯಾಪಕರು , ಕವಿ, ಸಾಹಿತಿಗಳು, ಲೇಖಕರು, ರಾಜ್ಯ -ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತರಾದ ಪ್ರೋ. ಪ್ರವೀಣ ವಿ. ಕುಲಕರ್ಣಿ ಗೆ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ 2026 ಪ್ರಧಾನ .. !

ಕಾಸರಗೋಡು:ರಾಜ್ಯ -ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತರಾದ ಪ್ರೋ. ಪ್ರವೀಣ ವಿ. ಕುಲಕರ್ಣಿ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಇದೇ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಸಾಹಿತಿ, ಗಝಲ್ ಕವಿ ಶ್ರೇಷ್ಠ, ಜನಪ್ರಿಯ ವೈದ್ಯ ಡಾ. ಸುರೇಶ್ ನೆಗಳಗುಳಿ ರೀಗೆ ಕನ್ನಡ ಭವನದ ಶ್ರೇಷ್ಠ ಪ್ರಶಸ್ತಿಯಾದ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ … !

ಕಾಸರಗೋಡು:ಜನಪ್ರಿಯ ವೈದ್ಯ, ಗಝಲ್ ಕವಿ ಶ್ರೇಷ್ಠ, ಸಾಹಿತಿ, ಸಂಘಟಕ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತ ಡಾ ಸುರೇಶ್ ನೆಗಳಗುಳಿ ಇವರಿಗೆಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ 18.01.2026 ರಂದು ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ, ಡಾ. ನೆಗಳಗುಳಿ ಯವರೀಗೆ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2026.ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ…

Read More
error: Content is protected !!